ನೋಡ್ತಿರೋರು

ಶುಕ್ರವಾರ, ಜೂನ್ 26, 2009

ಬೇಗುದಿ

ತಂಪಾಗಿದ್ದ ಮನದಲ್ಲಿ
ತಂಪೆರೆಯ ಬಂದವಳೇ
ಅಷ್ಟಕ್ಕೆ ಬಿಟ್ಟಿದ್ದರೆ ಚೆನ್ನಿತ್ತು ಚೆಲುವೆ
ಮನದ ಹೂದೋಟದಲಿ
ಗುಲಾಬಿ ಅರಳಿಸುವಷ್ಟು ಪ್ರೀತಿನೀಡಿ
ಮನದ ಅಂತರಗವ ನಿನ್ನಾಟಕೆ ಹೂಡಿ
ಹೋಗುವ ಇರಾದೆಯೇಕಿತ್ತು ಒಲವೆ

ಹೇಳದೆ ಹೋಗಿರುವೆ ನೀನಿಂದು
ತಿಳಿಸದೆ ಬಂದ ನೀನಂದು
ಕೇಳಿದೆನೇನು ನಾನು ಯಾರೆಂದು ಮನವೆ
ಚಿಂತೆಯ ಚಿತೆಯಲ್ಲಿ ಬೇಯುತ್ತಿದ್ದವನಿಗೆ
ಶಾಂತಿಯ ಪನ್ನೀರಾದೆ
ಚಿತೆಯಲ್ಲಿ ಬಿದ್ದಿರುವೆ ಎಂದಾಗಾ
ಚಿಂತೆಯೂ ಇಲ್ಲದೆ ಹಾಗೇಗೆ ಹೋದೆ
ವಿಷಾದದ ಬೇಗುದಿಯ ಆರಿಸಿಹೋಗಲಾರೆಯಾ ನಲ್ಲೆ ............

ಕಾಮೆಂಟ್‌ಗಳಿಲ್ಲ: