ನೋಡ್ತಿರೋರು

ಗುರುವಾರ, ಜೂನ್ 19, 2014

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು! ಓದಿ ಆನಂದಿಸಿ!

 
 ತ್ರಿವೇಣಿಯವರ ಕಾದಂಬರಿಗಳು
ಉಷಾ ನವರತ್ನರಾಮ್ ಕಾದಂಬರಿಗಳು

ಸೋಮವಾರ, ಜೂನ್ 2, 2014

ರಂಗೋಲಿ....... ಚಿತ್ತ ಚಿತ್ತಾರಗಳ ನಡುವೆ - ಸಂಚಿಕೆ ೨


ಬಹಳ ದಿನಗಳಾಗಿತ್ತು.. ತಲೆಗೆ ಹಾಗೂ ಬರವಣಿಗೆಗೆ ಕೆಲಸ ಕೊಟ್ಟು :-) . ನೆನಪುಗಳು ಅಳಿಸಿಹೋಗುವ ಮೊದಲು ಬರೆದುಬಿಡೋಣ.., ಸುನಂದಳ ಬದುಕು ನೆನಪಲ್ಲೇ ಕಳೆದುಹೋಗಬಾರದೆಂಬ ಧಾವಂತ  ರಂಗೋಲಿ ಚಿತ್ತ ಚಿತ್ತಾರಗಳ ನಡುವೆಯ ಸರಣಿಯನ್ನು ಮುಂದುವೆರಿಸುತ್ತಿದ್ದೇನೆ..

 ಹಿಂದಿನ ಸರಣಿ

 
ಮುಂದಿನ ಕೆಲವೇ ದಿನಗಳಲ್ಲಿ ನನ್ನ ಮಾನಸಿಕ ಆರೋಗ್ಯ ದ್ಯೆಹಿಕ ಆರೋಗ್ಯ ಎಲ್ಲವೂ ಕ್ಷೀಣಿಸುತ್ತು.... ನಿರ್ದಯಿಗಳ ಮುಂದೆ ನಾನು ಅದಿನ್ನೆಂತಹ ಬೇಡಿಕೆಯಿಟ್ಟರೂ... ಅವರ ಬೇಡಿಕೆಗಳ ಮುಂದೆ ನನ್ನದೆಲ್ಲವೂ ಗೌಣವಾಗಿತ್ತು. ಸ್ವಲ್ಪ ದಿನಗಳ ನಂತರ ನನಗೂ ಇವೆಲ್ಲ ರೂಢಿಯಾಗಿ ಹೋಗಿತ್ತು. ಅದೇ ಸಮಯಕ್ಕೆ ಸೌಭಾಗ್ಯಮ್ಮನಿಗೆ ಆರೋಗ್ಯ ಕ್ಯೆಕೊಟ್ಟಿತ್ತು. ಏಳುವುದಕ್ಕೂ ಆಗದ ಸಂಧರ್ಬದಲ್ಲೂ ಆಕೆಯ ವ್ಯವಹಾರ ನಡೆಯುತ್ತಲೇ ಇತ್ತು. ಒಂದು ದಿನ ಬಹುಶಃ ಆಗಸ್ಟಿನಲ್ಲಿರಬಹುದು... ಆಕೆಯ ದೇಹದ ಬಲಭಾಗ ಪೂರ್ತಿ ಪಾಶ್ವವಾಯು ಉಂಟಾಗಿ ಮಲಗಿದ ಜಾಗದಿಂದೇಳಲು ಆಗದೆ, ಆಕೆಯ ಎಲ್ಲ ಕೆಲ್ಸಗಳು ಅಲ್ಲೇ ನಡೆಯುತ್ತಿತ್ತು. ಆ ಸಮಯಕ್ಕೆ ಇವಳೊಂದಿಗಿನ ವ್ಯವಹಾರಿಗಳಾಗಲಿ, ಇವಳೇ ಸಾಕು ಬೆಳೆಸಿದ ಜನರಾಗಲಿ ಯಾರೊಬ್ಬರೂ ಇವಳ ಸಹಾಯಕ್ಕೆ ಬರಲಿಲ್ಲ. ಕ್ರಮೇಣ ವ್ಯವಹಾರವೂ ನಿಂತಿತು.