ನೋಡ್ತಿರೋರು

ಕವನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಫೆಬ್ರವರಿ 2, 2011

ಮುಖ್ಯಮಂತ್ರಿಯೂ ಮತ್ತು ನಲ್ವತ್ತು ಜನ.................


ಭಾಗ ೧
ಭಾರತದ ಇತಿಹಾಸದಲ್ಲೇ ಕಾಣದಷ್ಟು ಕರಾಳ ದಿನ ೨೨ನೇ ಜನವರಿ ೨೦೧೧, ಆಡಳಿತ ಪಕ್ಷವೇ ಬಂದ್ ಕರೆ ನೀಡಿದ್ದು, ದೇಶದಲ್ಲಿ ಇದೇ ಮೊದಲು, ಒಂದೊಮ್ಮೆ ತುರ್ತು ಪರಿಸ್ಥಿತಿ ಎದುರಿಸಿದ್ದ ಭಾರತ ಸರ್ಕಾರ, ಕೆಲವೇ ದಿನಗಳಲ್ಲೇ ತನ್ನ ಸರಿ ದಾರಿಯನ್ನು ಕಂಡುಕೊಂಡು ಮುಂದೆ ಇಂತಹ ಪರಿಸ್ಥಿತಿ ಬಂದೊದಗದಂತೆ ನೋಡಿಕೊಳ್ಳುತ್ತಲೇ ಬಂದಿದೆ. ಇಂತಹ ಭವ್ಯ ಭಾರತದ ಸುದೀರ್ಘ ೬೦ ವರ್ಷಗಳ ಇತಿಹಾಸದಲ್ಲಿ ಇಂದು ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಬಂದ್ ಆಗುವುದಕ್ಕೆ ಕಾರಣವಾದರೂ ಏನು ? ಒಬ್ಬ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಹೊತ್ತ ವ್ಯಕ್ತಿಗೆ ಮತ್ತೊಬ್ಬ ಮಹೋನ್ನತ ಜವಾಬ್ದಾರಿ ಹೊತ್ತ ವ್ಯಕ್ತಿಯು ರಾಜ್ಯಕ್ಕೆ ಮಾಡಿದ ಮೋಸವನ್ನು ಸಾಬೀತುಪಡಿಸಲು ಅವಕಾಶ ನೀಡಿದ್ದು, ಅದು ತಪ್ಪೇ ? ಹಾಗಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ತಪ್ಪೇ ಮಾಡಲಾರನೇ ? ಕೇವಲ ಜನ ಸಾಮಾನ್ಯರು ಮಾತ್ರ ತಪ್ಪು ಮಾಡುವರೇ ? ಅವರಿಗೆ ಮಾತ್ರ ಶಿಕ್ಷೆಯೇ ?

ಆದದ್ದೇನು ………?

ಕರ್ನಾಟಕದ ಇಂದಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಅಖಂಡ ರಾಜಕೀಯ ಇತಿಹಾಸದಲ್ಲಿ ಸುಮಾರು ವರ್ಷ ವಿರೋಧ ಪಕ್ಷದಲ್ಲೇ ಉತ್ತಮ ಕೆಲಸಮಾಡಿ ಜನಮನ್ನಣೆ ಪಡೆದವರು, ಅಲ್ಲಿ ಯಡಿಯೂರಪ್ಪನವರ ಕೆಲಸಕ್ಕಿಂತ ಕರ್ನಾಟಕದ ಜನತೆಗೆ ಒಂದೇ ಪಕ್ಷ ಅಥವಾ ಆಡಳಿತದ ಚುಕ್ಕಾಣಿ ಹಿಡಿದು ಅಭಿವೃದ್ದಿಯ ಮಂತ್ರವನ್ನಷ್ಟೆ ಜಪಿಸಿ, ಜನರ ಆಕಾಂಕ್ಷೆಗಳಿಗೆ ಮನ್ನಣೆ ನೀಡದೇ ಇದ್ದದ್ದು, ಮತ್ತು ಬಿಜೆಪಿಯ ಮೇಲೆ ಹುಟ್ಟಿದ ಅನುಕಂಪ ೨೦೦೭-೨೦೦೮ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ದೊರೆತ ಮೊದಲ ಸಲದ ಆಡಳಿತ ಅವಕಾಶದಲ್ಲಿ ಮೊದಲು ನೂರಷ್ಟು ಗೊಂದಲಗಳು, ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪನ ಪಟಾಲಂಗಳು ತಮ್ಮ ತಮ್ಮ ನಾಯಕರಿಗೆ ಮುಖ್ಯಮಂತ್ರಿಯ ಪಟ್ಟವನ್ನು ಅಲಂಕರಿಸಲು ಸಾಕಷ್ಟು ಶ್ರಮವನ್ನು ನಡೆಸಿದರು. ಬಿಜೆಪಿ ಹ್ಯೆಕಮಾಂಡಿನ ಕೃಪಾಕಟಾಕ್ಷದಿಂದ ಯಡಿಯೂರಪ್ಪನವರಿಗೆ ಆ ಪದವಿ ಒಲಿದದ್ದು ಈಗ ಇತಿಹಾಸ.
ಜನರ ಬೆಂಬಲ, ಮತ್ತು ಹೊಸದನ್ನು ನಿರೀಕ್ಷಿಸುತ್ತಿದ್ದ ಕರ್ನಾಟಕಕ್ಕೆ ಯಡಿಯೂರಪ್ಪನವರ ಮೇಲೆ ಅಪರಿಮಿತ ವಿಶ್ವಾಸ ಮತ್ತು ಅನುಕಂಪದ ಬೆಂಬಲವಿತ್ತು. ಜನ ಯಡಿಯೂರಪ್ಪ ಮುಖ್ಯಮಂತ್ರಿಯವರೆಂದು ಘೋಷಿಸಿದ ಮೇಲೆ ಜನರ ನಂಬಿಕೆಯೂ ಹೆಚ್ಚಿತ್ತು. ಆದರೆ ಆದದ್ದೇನು ? ಬಿಜೆಪಿಯ ಶಾಸಕರಲ್ಲೇ ಆದ ಒಳಜಗಳ, ತಮ್ಮತಮ್ಮಲ್ಲೇ ಒಬ್ಬೊಬ್ಬರ ಬಗ್ಗೆ ಕತ್ತಿ ಮಸೆಯುತ್ತಾ, ಪ್ರತಿ ಕ್ಷಣದಲ್ಲೂ ಸ್ವಹಿತಾಸಕ್ತಿಯ ಬಗ್ಗೆಯೇ ಯೋಚಿಸುತ, ರೆಡ್ಡಿ-ಯಡ್ಡಿ ಜಗಳವಂತಲೇ ಬಿಂಬಿಸುತ, ಖಾಸಗಿ ಟಿವಿ ಚಾನೆಲ್ಗಳಲ್ಲಿ ಭರಪೂರ ರಸದೌತಣವನ್ನೇ ಉಣಬಡಿಸಿ ಕಡೆಗೆ ಹ್ಯೆಕಮಾಂಡ್ ಮಧ್ಯಸ್ತಿಕೆಯಲ್ಲಿ ಆ ಕ್ಷಣದ ಸುಖಾಂತ್ಯವನ್ನು ಕಂಡಂತಾಗಿತ್ತು.
ಅಲ್ಲಿಯವರೆಗೂ ಬಿಜೆಪಿಯ ಪ್ರತಿ ಸಚಿವರು ನಾವು ಒಗ್ಗಟ್ಟಾಗಿದ್ದೇವೆ. ಎಂತಲೇ ಪ್ರಚಾರಪಡಿಸುವಲ್ಲೇ ಹ್ಯೆರಾಣಾಗಿದ್ದರು. ಹಾಗೂ ಹೀಗೂ ಕುಂಟು ಕುದುರೆ ನಡೆಯುತ್ತಿತ್ತು. ಮತ್ತೊಂದು ಒಂಬತ್ತು ತಿಂಗಳಷ್ಟೆ, ರೇಣುಕಾಚಾರ್ಯ ಹಿಂಬಾಗಿಲಿಂದ ಸಚಿವರಾಗಿದ್ದರೂ, ಮತ್ತೇನೋ ಮರೆತಂತೆ ಕೆಲವು ಸಚಿವರ ಒಟ್ಟುಗೂಡಿಸಿ, ಯಡಿಯೂರಪ್ಪನವರು ನನ್ನ ತಂದೆ ಸಮಾನ ಎನ್ನುತ್ತಲೇ ಕೇರಳ, ಗೋವಾ, ಚೆನ್ನ್ಯೆ ರೆಸಾರ್ಟುಗಳಲ್ಲಿ ವಾಸ್ತವ್ಯ ಹೂಡುತ್ತಾ ಇಡೀ ಸರ್ಕಾರವೇ ಬೀಳುಸುವ ಯತ್ನದಲ್ಲಿ ಫಲಪ್ರದವಾಗುವಂತೆ ಕಂಡು ಬಂದರೂ ಕಡೆಯ ಘಳಿಗೆಯಲ್ಲಿ ತನ್ನ ಬೆಂಬಲಿಗ ಸಚಿವರಿಗೆ ಮುಂದೆ ಹೋಗುವಂತೆ ಪ್ರೋತ್ಸಾಹಿಸಿ ಹಿಂದುಳಿದದ್ದು ಸಮಾನ ಮನಸ್ಕ ಸಚಿವರಿಗಂತೂ ಭಾರಿ ಭ್ರಮರನಿರಸವಾಯಿತು. ಮತ್ತೆ ಯಡಿಯೂರಪ್ಪನವ ಬೆಂಬಲಕ್ಕೆ ನಿಂತದ್ದು, ಸಮಾನ ಮನಸ್ಕ ಸಚಿವರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಅದುವರೆಗೂ ಎಲ್ಲವೂ ಸರಿಯಿದೆ ಎಂಬ ಭಾವನೆಯಿಂದಲೇ, ತನ್ನ ಸ್ವಹಿತಾಸಕ್ತಿಯ ಬಗ್ಗೆ ಯೋಚಿಸಿ ನಾಗರಬಾವಿಯ ಜಮೀನೊಂದನ್ನು ಡಿನೋಟಿಫ್ಯೆ ಮಾಡಿದ್ದೇ ಬಂತು, ವಿರೋಧ ಪಕ್ಷಗಳು ಅದಕ್ಕಾಗಿಯೇ ಕಾಯುತ್ತಿರುವಂತೆ, ಒಕ್ಕಲೊರಗಿನಲ್ಲಿ ರಾಜೀನಾಮೆ ನೀಡಬೇಕು, ಇಲ್ಲದಿದ್ದಿರೆ ನಾವು ಹೋರಾಟವನ್ನು ಬಿಡೆವು, ಎಂದು ರಾಜ್ಯಪಾಲರ ಬಳಿ ಮನವಿಯನ್ನು ಮೇಲಿಂದ ಮೇಲೆ ನೀಡುತ್ತಾ, ಮುಖ್ಯಮಂತ್ರಿಯ ಅಷ್ಟು ಬೇನಾಮಿ ಆಸ್ತಿ ವಿವರ, ನಕಲಿ ಕಂಪೆನಿಯ ಹೆಸರಿನಲ್ಲಿ ಮಾಡಿಕೊಂಡ ಸ್ಯೆಟುಗಳು, ಮಗ ವಿಜಯೆಂದ್ರ, ಮತ್ತೊಬ್ಬ ಸಂಸದ ಮಗ ರಾಘವೇಂದ್ರ, ಹಾಗೂ ಯಡಿಯೂರಪ್ಪನ ಅಳಿಯ ಅವರ ಬಂಧು ಬಾಂಧವರ ಅಷ್ಟು ಚರ-ಸ್ಥಿರ ಆಸ್ತಿಗಳ ಪಟ್ಟಿಯನ್ನೇ ವಕೀಲರ ಗುಂಪೊಂದು ರಾಜ್ಯಪಾಲರ ಮುಂದೆ ಈ ವಿವರಗಳನ್ನು ನೀಡಿ ಕ್ರಮ ಕ್ಯೆಗೊಳ್ಳಲೇಬೇಕು ಎಂಬ ಒತ್ತಾಯಿಸಿದರು, ಅಲ್ಲಿಯವರೆಗೂ ಅಳುತ್ತಾ, ಕರ್ನಾಟಕದ ಜನತೆಯಲ್ಲಿ ಕರುಣೆಯನ್ನು ಗಿಟ್ಟಿಸಿಕೊಂಡ ಮೆಚ್ಚಿನ ಮುಖ್ಯಮಂತ್ರಿ ಇಡೀ ಕರ್ನಾಟಕದ ಜನರ ಪಾಲಿಗೆ ಭಸ್ಮಾಸುರನಂತೆಯೇ ಕಂಡಿದ್ದು ಮಾತ್ರ ಶೋಚನೀಯ. ಕರ್ನಾಟಕದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಎಂದಿಗೂ ಮುಖ್ಯಮಂತ್ರಿಯ ಮೇಲೆ ನೇರ ಹೊಣೆಗೇಡಿತನದ ಆರೋಪ ಬಂದಿರಲಿಲ್ಲ. (ಬಹುಶಃ ಅಲ್ಲಿಯವರೆಗೂ ವಿಷಯವನ್ನು ಮುಂದುವರೆಸಲೂ ಬಿಡಲಿಲ್ಲವೇನೋ ?)

ಮುಂದೆ ಹೇಗೋ ? ಮಾಧ್ಯಮಗಳ, ಪರಿಣಿತರ ಅಭಿಪ್ರಾಯದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯಪಾಲರ ನಡುವಿನ ಸಂಘರ್ಷ, ಮಂತ್ರಿಮಂಡಲದಲ್ಲಿನ ಭಿನ್ನತೆ, ಜೊತೆಗೊಂದಿಷ್ಟು ಹುಂಬತನ ಇವೆಲ್ಲ ಕರ್ನಾಟಕದ ಜನತೆಗೆ ಬೇಕಿತ್ತೆ ? ಇಂತಹ ನಾಯಕ, ಎನ್ನುವ ಮಟ್ಟಿಗೆ ಜನ ಬೇಸತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಪವಾಡ ಸದೃಶ್ಯವಾಗಿ ಈ ಎಲ್ಲಾ ಆರೋಪಗಳಿಂದ ಪಾರಾಗುವ ಸಾಧ್ಯತೆಗಳು ಇಲ್ಲ. ಹಾಗಂತ ರಾಜೀನಾಮೆಯ ಯೋಚನೆಯೂ ಸದ್ಯಕ್ಕಿಲ್ಲ. ತಮ್ಮ ಮೇಲಿನ ಆರೋಪಗಳು ನಿರಾಧಾರವಷ್ಟೆ, ಎಂದು ಹೇಳುತಾ, ಕಾಂಗ್ರೆಸ್ಸ್ ಮತ್ತು ಜನತಾದಳದವರು ಮಾಡಿರಬಹುದಾದ ಹಗರಣಗಳನ್ನು ಹುಡುಕುತ ಕೂತಿದ್ದಾರೆ. ಈ ರಾಜಕೀಯ ದೊಂಬರಾಟದಲ್ಲಿ ಯಾರು ಯಾರಿಗಿಂತ ಹೆಚ್ಚು ಮತ್ತು ಕಡಿಮೆ ಎಂಬುದು ಜನತೆಗೂ ತಿಳಿಯುತ್ತಿಲ್ಲ.

ಸೋಮವಾರ, ಆಗಸ್ಟ್ 16, 2010

ಬದಲಾಗಬೇಕು......,, ಇನ್ನು ಬದಲಾಗಲೇಬೇಕು

ಬದಲಾಗಬೇಕು.......
ಇನ್ನು ಬದಲಾಗಬೇಕು......,,
ಇನ್ನು ಬದಲಾಗಲೇಬೇಕು.........

ಉಳಿಗಾಲವಿಲ್ಲ, ಬದಲಾಗದಿದ್ದೊಡೆ,
ಉಳಿಯಲೇಬೇಕು, ಬರಗಾಲವಿದ್ದೊಡೆ,
ಬಂದಿಹುದು ಬರಗಾಲ ನಾಯಕನಿಲ್ಲದೆ,
ಬಂದಿಹುದು ಬರಗಾಲ ಹಿಡಿತವಿಲ್ಲದೆ,
ಬಂದಿಹುದು ಬರಗಾಲ ನೀತಿನಿಯಮಾವಳಿಯ ಪಾಲಿಸದೆ,
ಬಂದಿಹುದು ಬರಗಾಲ ನ್ಯಾಯ ನೀತಿಗೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಅಧಿಕಾರ ಗದ್ದುಗೆ,
ಗದ್ದುಗೆ ಬೇಕು...... ಮೂರು ವರ್ಷಗಳಿಗೆ,
ಗದ್ದುಗೆ ಬೇಕು.... ಇನ್ನಷ್ಟು ಅಕ್ರಮಗಳಿಗೆ,
ಗದ್ದುಗೆ ಬೇಕು, ಗಣಿ ಹಗರಣಗಳಿಗೆ,
ಗದ್ದುಗೆ ಬೇಕು, ಅಭಿವೃದ್ಧಿಯ ಮಂತ್ರಕೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಗೋಹತ್ಯೆ ತಡೆದೊಡೆ,
ಗೋಹತ್ಯೆ ತಡೆಯೋಕೆ....... ಕ್ಯೆಕತ್ತಿರಿಸುವುದಕೆ,
ಗೋಹತ್ಯೆ ತಡೆಯೋಕೆ........ ಕ್ಯೆಎತ್ತೋಕೆ,
ಗೋಹತ್ಯೆಯೊಂದೇ ಇರೋದು ತಡೆಯೋಕೆ,
ಪ್ರಾಣಿ ಹಿಂಸೆ ನಿಲ್ಲಿಸಲಿ ಸಾಧ್ಯವಿದ್ದೊಡೆ,


ಬದಲಾಗಬೇಕು ಮಂತ್ರಿ ಕುತಂತ್ರಿಗಳೆಲ್ಲ,
ಬರಗಾಲಕ್ಕಲ್ಲ, ಗದ್ದುಗೆಯ ಹಂಬಲಕ್ಕಲ್ಲ,
ಗೋಹತ್ಯೆಗೊಂದೆ ಬೇಕಿಲ್ಲ,
ಜನರ ನಾಡಿಮಿಡಿತವ ಅರಿಯಲು,
ಎಲ್ಲರ ಬೇಕು-ಬೇಡಗಳ ತಿಳಿಯಲು..
ಬದಲಾಗಬೇಕು ಮುಖ್ಯಮಂತ್ರಿಗಳೇ
ಯಕ್ಷಿತ್: ನೀವು ಹೇಳಿದ ಮಾತಿಗೆ......
ಆಗದಿದ್ದರೆ ಬದಲಾಗಲೇಬೇಕು ..........ಮುಖ್ಯಮಂತ್ರಿ,

ಶನಿವಾರ, ನವೆಂಬರ್ 7, 2009

ಚಂದಿರ(ಕಾಂತೆ)

ಚಂದಿರನ ಕಾಂತಿಯನು,

ಚಿರನಗೆಯು ಕದಿಯುವುದೆ ?

ಚಂದ್ರಿಕೆಯ ಚಂಚಲತೆಗೆ,

ಚಿಂತೆಯ ಮಾತೇಕೆ ?


ಚಂದಿರ ನೀ ಎಂದಿಗೂ

ಸುಂದರ.........

ಹಾಗೆ ಚಂದ್ರಿಕೆಯೂ

ಅತಿ ಮಧುರ........

ಮಂಗಳವಾರ, ಸೆಪ್ಟೆಂಬರ್ 8, 2009

ಹನಿಗವನ

ಅವಳ ಮೇಲೊಂದು ಪ್ರೇಮಕವನ
ಬರೆಯುವ ಹೊತ್ತಿಗೆ
ಮುಗಿಸಿದ್ದು ಖಂಡಕಾವ್ಯ.

ಅವಳ ಮೇಲನ ಪ್ರೀತಿಯ
ಅಪ್ಪಿಕೊಳ್ಳುವದರೊಳಗೆ
ಆಕೆ ಆರಿಸಿಯಾಗಿತ್ತು
ಮತ್ತೊಬ್ಬ ಇನಿಯ.

ಮಳೆಯ ಅಬ್ಬರಕ್ಕೆ
ಕೊಡೆಯಾಗಿದ್ದೆ ನಾ ಮೇಲಿನಿಂದ
ಜಾರಿ ಹೋಗಿದ್ದಳಾಗಲೇ
ಬಿಡಿಸಲಾಗದ ತೋಳ ತೆಕ್ಕೆಯಿಂದ.

ಚಿನ್ನದಂತಹ ಹುಡುಗ
ಎಂದು ಆಗಾಗ ಹೇಳುವಾಗಲೇ, ನಾ
ತಿಳಿದುಕೊಳ್ಳಬೇಕಿತ್ತು ನಾ ಅಲ್ಲ
ಬೇಕಿರುವುದು ಅವಳಿಗೆ ಚಿನ್ನ.

ಮುಂಗಾರುಮಳೆಯಂತಿದ್ದ
ಪ್ರೀತಿಯ ಓಘ.
ಬರುಬರುತ್ತಾ ಆದದ್ದು ಮಾತ್ರ
ಸ್ಯೆಕ್ಲೋನ್ ವೇಗ.

ಮಂಗಳವಾರ, ಆಗಸ್ಟ್ 18, 2009

ಪ್ರೀತಿ "ಹಾಲುಬಾಯಿ-ಹಾಗಲಕಾಯಿ".....????


ನೀನೊಮ್ಮೆ ಹಾಲುಬಾಯಿ, ಮಗದೊಮ್ಮೆ ಹಾಗಲಕಾಯಿ,

ಸಿಹಿಹೂರಣ ನಡೆದು ನೀ ನನ್ನೊಡನೆ ಬರುವಾಗ,
ಸಿಗದಾಯಿತೆ ಕಾರಣ ನೀ ದೂರ ಸರಿದಾಗ,

ಸಿಂಗಾರರದ ಸೊಬಗು ನೀ ನನ್ನೊಡಲಲಿರಲು
ಬೆಂಗಾಡಿನ ಬದುಕು ನೀ ನನ್ನಗಲಲು,

ಪ್ರೀತಿ ನೀನೊಮ್ಮೆ ಹಾಲುಬಾಯಿ, ಮಗದೊಮ್ಮೆ ಹಾಗಲಕಾಯಿ.

ಶುಕ್ರವಾರ, ಆಗಸ್ಟ್ 14, 2009

ಗೆಳೆಯನ ಮಾರಾಟ

ಮ್ಯೆಸೂರು, ಬೆಂಗಳೂರು, ಕೊಚ್ಚಿನ್ನು,
ತ್ರಿವೆಂಡ್ರಂ, ತಿರುಚನಾಪಳ್ಳಿ, ಮಡಿಕೇರಿ,
ಮಂಗಳೂರು, ಹುಣಸೂರು, ಚಾಮರಾಜನಗರ,
ಎಲ್ಲೆಲ್ಲಿ ಹುಡುಕಿದ್ದು, ಬಿಕರಿಗೆ ಕೊಳ್ಳುವವರ,
ಸಿಗಲಿಲ್ಲ ಯಾರೂ ಕೊಳ್ಳಲು ಈ ವರ,

ಸೇಲ್ ಆಗೋದೆ ಇಲ್ಲಾ ಈ ಗಾಡಿ,
ಅಂತ ಹೇಳ್ತಾಯಿದ್ರು ಅವರ ಡ್ಯಾಡಿ,
ಕೊಟ್ಟಿದ್ದು ಎಷ್ಟೊ ಡಿಸ್ಕೌಂಟ್ ಆಫರ್ಸ್,
ಬರಲಿಲ್ಲ ಯಾರೂ ಮೆಚ್ಚುಕೊಂಡು ಈ ಫೇಸ್,

ಚಿಂತೆಶುರುವಾಯಿತು ಅವರ ಮಮ್ಮಿ ಡ್ಯಾಡಿಗೆ,
ಯೋಚನೆಯಿಟ್ಟಿತು, ತಂಗಿ ಭಾವನಿಗೆ,
ಹೇಗೆ ಮಾಡೋದು ಬಿಕರಿ,
ಕೇಳಲು ಹೊರಟರು ಯಾರಿಗಾದ್ರೂ ಬೇಕಾ..............ರೀ.

ಬಂದಿತೊಂದು ಚೆಂದದ ಹುಡುಗಿ,
ವ್ಯೆದ್ಯಕೀಯದ ಹಿನ್ನಲೆಯ ಬೆಡಗಿ,
ಒಳ್ಳೆ ಜೋಡಿ, ಹುಡುಕಿದರೂ ನೋಡೀ,
ಕೊಟ್ಟಿದ್ದು ಎರಡು ಲಕ್ಷದ ಸೋಡಿ,

ಮಾರಾಟವಾಯ್ತು ಆ ವೇಸ್ಟ್ ಬಾಡಿ,
ಮದುವೆಗೆ ಬರೋದು ಮರೀಬ್ಯಾಡಿ.


(ನನ್ನ ಗೆಳೆಯನ ಮೂರು ವರ್ಷಗಳ ಹುಡುಗಿ ಹುಡುಕಾಟ ಕಡೆಗೂ ನಿಂತಿದೆ, ಆ ಖುಷಿಯಲ್ಲಿ ಅವನು ಶಿಖರ ಮುಟ್ಟಿದ್ದಾನೆ, ಪಾಪ :)
ಮುಂದೇನೋ........???? )

ಶುಕ್ರವಾರ, ಜೂನ್ 26, 2009

ಮನದ ಕದತೆರೆದಾಗ

ನಂಬಿ ನೀ ಬಂದಿಹೆಯಲ್ಲ
ಮನದ ಕಾರ್ಮೋಡದ ಬಾಗಿಲ ಸರಿಸಲು,
ಬಿಡದೀ ಮನವ ನೀ ಎಲ್ಲ
ಆವರಿಸಿರುವೆ
ಜಗದ ಕಣ್ಣೊಟಕೆ ಸತಿ-ಪತಿಯರಾಗಲು
ಬಂಧನವೊಂದು ಕುರುಹು!

ಬಿಟ್ಟು ಬಂದಿಹೆ ಗೊತ್ತು
ತಂದೆ ತಾಯಿಯರ ಕ್ಯೆತುತ್ತು
ಸೋದರ ಸೋದರಿಯರ
ಒಲವಿನ ತಾಕತ್ತು
ಚಿಂತೆ ಬೇಡ ಹೃದಯೇಶ್ವರಿ
ನೀ ಎನ್ನ ಮನದ ರಾಜೇಶ್ವರಿ!

ಯಜಮಾನನಾಗುವುದಕ್ಕಿಂತ ನಿನಗೆ
ಗೆಳೆಯನಾಗುವೆ ಜೊತೆವರೆಗೆ
ಹೆಜ್ಜೆ ಹೆಜ್ಜೆಗಳು ಜೊತೆಜೊತೆಗೆ
ನೋವಿನ ಮಜ್ಜೆಗೂ
ಸಾವಿನ ಸಜ್ಜೆಗೂ
ಜೊತೆಯಾಗಿ ಸಾಗೋಣ
ಇದು ನನ್ನ ಪ್ರಮಾಣ!

ನಿನಗೋಸ್ಕರ ನಾ ಏಳು ಸಮುದ್ರವ ದಾಟುವುದಿಲ್ಲ
ಚಂದ್ರಮನನ್ನು ತೆಕ್ಕೆಗೆ ತರುವುದಿಲ್ಲ
ಸುಖಾಸುಮ್ಮನೆ ಹೊಗಳುತಿಲ್ಲ
ಒಂದಿಷ್ಟು ನೆಮ್ಮದಿ, ಅರೆಪಾವು ಸೌಖ್ಯ
ಬರಿಸಲಾಗದ ಪ್ರೀತಿ, ಖಂಡಿತಾ ನಾ
ಕೊಡದೇ ಇರುವುದಿಲ್ಲ
ಕಾಯುತಿರುವೆ ತಿಳಿಸುವೆಯಾ !

ಜೇಡರಬಲೆ

ಜೇನಾಗಿ ಹೋದೆಯಾ.....
ನನ್ನವಳೆ ಜೇನಾಗಿ ಹೋದೆಯಾ....
ಜಾನು ಎಂದು ಕರೆದಾಗ ನಾ
ನೀ ಜೇನಾಗಿ ಹೋದೆಯಾ...

ಹೋಗುವ ಮುಂಚೆ ಮರೆತೆ ನನ್ನನೇ
ನೂಕಿ ಹೋಗಿರುವೆ ಜೇಡರ ಬಲೆಯೊಳಗೆ
ಸೆಣಸಾಡುತಿರುವೆ ಇನ್ನೂ ಬರಲಾರದೆ ಹೊರಗೆ,
ಇರಲಾರದೆ ಒಳಗೆ,

ಜೇನಾಗಿ ಹೋದೆಯಾ.......
ಮನದಿನಿಯೆ ಜೇನಾಗಿ ಹೋದೆಯಾ.....
ಕಾದಿರುವುದು ಸಾಕಿನ್ನು ಒಳಗೆ,
ಇರಲಾರೆ ಇನ್ನೊಂದು ಗಳಿಗೆ,
ಹೋದೆ ನೀ ಮರೆತು ನನ್ನಯ ಬೇಗೆ,
ಹೇಳಲಿ ಹೇಳು ಈ ಸಂಕಟ ಯಾರು ಯಾರಿಗೆ ?

ಇರಲಾರದೆ ಒಂದಿಷ್ಟು ನಗೆ ನನ್ನವಳೆ
ಬಿಡಿಸು ಬಾ, ನಾನಿರುವೇ ಈಗಲೂ ನೀ ಹೆಣೆದ ಜೇಡರಬಲೆಯೊಳಗೆ

ಹುಡುಗಿ ಪ್ರೀತಿಸುತ್ತಾಳೆ.....

ಶ್ರೀಮಂತ ಸೊಕ್ಕಿರುವ ಪ್ರೀತಿಯನ್ನು
ಸಿರಿವಂತ ಗುಣವಿರುವ ಒತ್ತಾಸೆನನ್ನು
ಕಣ್ಣೀರನ್ನು ಪನ್ನೀರನ್ನಾಗಿಸುವ ಪರಿಕೀಯನಾದರೂ ಅವನು

ಹುಡುಗಿ ಪ್ರೀತಿಸುತ್ತಾಳೆ.....

ಹೊಂಡದಲೂ ಕೊಂಡಯ್ಯುವ ಸುಜುಕಿಯಷ್ಟು ಸರಾಗದ ಮನಸನ್ನು
ಸಾಪ್ಟವೇರನಾಗಿಲ್ಲದಿದ್ದರೇನು ಸಾಪ್ಟ್ ಆದ ಗುಣವನ್ನು
ಸುಖಾಸುಮ್ಮನೆ ಅಭಿನಂದಿಸುವವನನ್ನು

ಹುಡುಗಿ ಪ್ರೀತಿಸುತ್ತಾಳೆ.....

ಟಿವಿಯಿಲ್ಲದಿದ್ದರೂ ಪ್ರೀತಿಯ ಠೀವಿಯ ಅರಿತವನನ್ನು
ಫ್ರಿಜಿಲ್ಲದಿದ್ದರೂ ತಣ್ಣಗಿನ ನಗುವನ್ನು
ಮೊಬ್ಯೆಲಿನಲ್ಲದಿದ್ದರೂ ಮೊಂಬತ್ತಿಯಂತೆ ಬಾಳಾಗುವವನನ್ನು

ಹುಡುಗಿ ಪ್ರೀತಿಸುತ್ತಾಳೆ....

ಡೌರಿ(Dowry)ಯೇ ಪಡೆಯದ ಮದುಮಗನನ್ನು
ಪ್ರೀತಿಯ ಪರಾಕಾಷ್ಟೆಗೆ ಕೊಂಡೊಯ್ಯುವ ಮೃದುತನವನ್ನು
ಪೀಸಿಲ್ಲದೆ ನೇವರಿಸುವ ಅವಳಿರುವತೆಯನ್ನುಯಾವತ್ತಿನ ಹುಡುಗಿಯರೂ ಪ್ರೀತಿಸುವುದು ಹೀಗೆ
ಅರಿತವಿಲ್ಲ ಪ್ರೀತಿಯ ಇನ್ನೊಂದು ಬೇಗೆ

ನೆನಪಾಗುವವಳು

ನೆನಪಾಗುವಳ ಪದೇ ಪದೇ

ಅದೇ ಪದಗಳ ಮೆಲುಕು ಹಾಕುವಾಗ

ನಗೆಬೀರುತ ನನ್ನೆಡೆಗೆ

ಬರುವಾಗ, ನಾನಾಗಿದ್ದೆ

ಪ್ರಪಂಚವನ್ನೇ ಗೆದ್ದೆನೆಂಬ ಭಾಸದಲ್ಲಿ



ಪ್ರೀತಿಯ ಮಧುರತೆಯ ಕಡಲಿನಲಿ

ಮುಳುಗಿ ನಲಿದಾಡಿದೆ,

ನಾಲ್ಕು ವರುಷಗಳ ಹೋರಾಟ ಸರಿಸಮ

ಯಾರಿಗೆ ಯಾರೆಂದು ?

ಅದೇ ಮೇ ೧೩ರ ೨೦೦೫ರಂದು



ವಿಪರ್ಯಾಸ..........,

ಇಂದಿಗೆ ವರುಷ ನನ್ನವಳ ತೊರೆದು ಹೋದ ನಿಮಿಷ

ಅದು ೧೧.೧೩ ಎ.ಎಂ. ಮೇ ೧೩ ೨೦೦೮



ಸೋತು ಗೆದ್ದನೆಂಬ ಭಾವ ನನ್ನಲ್ಲಿ

ಪ್ರೀತಿಗೆ ಸೋತು ನೀತಿಯಲಿ ಜಯ ಸಿಕ್ಕಿದ್ದು

ಗೆದ್ದೆನೆಂಬ ಭಾವ ಅವಳಲ್ಲಿ

ಹೇಗೋ ಏನೋ ...........

ತಿಳಿಯದಾಯಿತು ಅವಳು ಹೇಗಿದ್ದಾಳೋ ಏನೋ Sad

ಇಂದಿಗೂ

ನೆನಪುಗಳ ಸರಮಾಲೆಯಲಿ

ನನ್ನವಳ ಪ್ರತಿಬಿಂಬ ಕಾಣುವ ತವಕ.

ಪರಾಗ ಸ್ಪರ್ಷ ನಿನಗೋ............ ನನಗೋ.......... ?

ಸುಂದರ ತೋಟದಲ್ಲಿ ಉಲ್ಲಾಸದಿಂದ
ಅರಳಿರುವ ಗುಲಾಬಿಯೇ..........
ನಿನ್ನ್ ಸುತ್ತ ತಿರುಗುವ
ಪತಂಗ ನಾನು..................
ಆ ಸೊಬಗಿನ ಸುವಾಸನೆಗೆ ಸೋತು
ನಿನ್ನಲ್ಲಿಗೆ ಜಿಗಿದು ನಲಿದು ಬಂದಿರುವೆ ನಾನು,
ಪರಾಗದ ರುಚಿ ಸವಿಯುವ ನೆಪದಲಿ,
ನಿನ್ನ ಆಲಂಗಿಸಿ ಚುಂಬಿಸಿ
ಆನಂದಿಸುತಿರುವೆ ನಾನು.......
ಸುಖ ಆ ದುಂಬಿಗಲ್ಲವೋ
ಈ ಕವಿಗೆ...........

ರಾಜಕೀಯ

ರಾಮನ ರಾಜ್ಯದ ಕನಸು ತೋರಿ,
ಜನತೆಯ ಕೋಮುಗಲಭೆಗೆ ತೂರಿ,
ಕೀಟಲೆಯ ಮಾಡುತ,
ಯಡವಟ್ಟು ಮಾಡುವುದೇ ರಾಜಕೀಯ

ಚುನಾವಣೆ

ಬಂದಿತದೋ ಚುನಾವಣೆ
ಪಕ್ಷಗಳ ಹಣಾಹಣೆ
ಒಲಿಯುವುದಾರಿಗೋ ಆ ಮಣೆ.......... ???

ಆಶ್ವಾಸನೆಗಳ ಬೊಗಳೆ,
ಅವರೇನು ಶ್ವಾನಗಳೆ,
ಬಿಡಲು ಸುಮ್ಮನೆ ಬೊಗಳೆ
ಅಥವಾ............. ?
ಮತದಾರರೇನು ಕುರಿಗಳೇ
ಎಲ್ಲದಕ್ಕೂ ಆಡಿಸಲು ತಲೆ.........

ಅಲೆಮಾರಿ

ಅಲೆಮಾರಿಯಂತೆ ನಾನು
ನನ್ನವಳು ನನಗಿಂತಲೂ ಹಟಮಾರಿ,
ಕಣ್ಣಿನ ಕಾಂತಿಯಲೇ ಕಂಪಾದವಳು,
ನನ್ನ ಕಂಡೊಡನೆ ಕೆಂಪಾದವಳು,
ಕುಡಿ ನೋಟದ ಸಿಹಿ ನಗೆಯಲಿ,
ನನ್ನನೇ ಮರೆಸುವಳು ಕ್ಷಣ
ಅದರ ಸವಿಯ ಪಡೆಯುವುದಕೇ ನಾನಾದೆ "ಅಲೆಮಾರಿ"
ಇಂದಿಗೂ ನೆಲೆಯೂರಿಲ್ಲ ಅವಳ ಕಣ್ಣ ರೆಪ್ಪೆಯಡಿ.

ತಾತ್ಸಾರ

ಕರಗದ ಹಸಿ ಬೆಣ್ಣೆಯಂತೆ
ಈ ಪ್ರೀತಿ, ಅದಕೆ ಅಂತೆ,
ಜಿಡ್ಡಿದ್ದರೂ ಅಂಟುವುದಿಲ್ಲ ಕ್ಯೆಗೆ,
ಬಿಸಿಯಿದ್ದರೂ ನಿಲ್ಲದಿರುವುದು ಹೇಗೆ,
ಚಳಿಯಿದ್ದರೂ ಕರಗುವುದಂತೆ ಹಾಗೆ,

ಆದರೂ ಪ್ರೀತಿಯೆಂಬ ಬಾಣಲಗೆ,
ಹಾಕಿದರೆ, ಉರಿಬೆಂಕಿಗೆ ಕಾಣದಾಗುವುದು,
ಹಾಗೆಂದರೆ ಹೋಗುವುದೆಲ್ಲಿಗೆ ?
ತಾತ್ಸಾರದ ಮಡಿಲಿಗೆ.

ಆರ್ಥಿಕ ಹಿಂಜರಿತ ಕೇರಳ ರಾಜ್ಯಕ್ಕೆ ಯಾಕಿಲ್ಲ


     ಓ ಹೆಣ್ಣೇ .........
 ಹಲುಬದಿರೀ ಈಕೆಯ ಸಿರಿ ಸೊಬಗಿಗೆ
 ಕುದಿಯದಿರೀ ಈಕೆಯ ಸಂಪತ್ತಿಗೆ
 ಮದುವೆಯಂತೆ ಈ ನಾರಿಗೆ
 ಇಂತಹ ಸೌಭಾಗ್ಯ ಇನ್ನಾರಿಗೆ

 ನೋಡಿದರೆ ಈ ಹುಡುಗಿ ಚಿನ್ನದ ಗಣಿ
 ಇರಬಹುದು ಇವರಪ್ಪ ದೊಡ್ಡ ಧನಿ
 ಕಣ್ಣು ಮಂಜಾದರೆ ನಾನಲ್ಲ ಇದಕೆ ಹೊಣೆ
 ನಾನಂತೂ ತೆಗೆದಿಲ್ಲ ಈ ಚಿತ್ರ ನನ್ನಾಣೆ
 ಕಣ್ಣುಜ್ಜಿ ನೋಡಿ ಎರಡೆರಡು ಬಾರಿ ನೋಡುತಿರಲು ನಾರಿ ಕರುಬದಿದ್ದರೆ ಸರಿ ಏರಿಸಿಹರೂ ಚಿನ್ನವ ೫ ಕೇಜಿಗೂ ಮೇಲ್ಪಟ್ಟು ಅದೇನು ಮೆರವಣಿಗೆ ಅವಳ ತೂಕವನ್ನೂ ಬಿಟ್ಟು

 ನಿಧಾನ ಗೆಳಯರೇ  ನೋಡುವಾಗ ಅವಳನ್ನ
 ವ್ಯವಧಾನವಿರಲಿ ಕದಿಯುವುದಿದ್ದರೆ ಆ ಚಿನ್ನ
 ಹೆಂಗಸರೇ ಕೇಳದಿರೀ ಇವೆಲ್ಲ ನಿಮ್ಮಾವರನ್ನ
 ಗಂಡಸರೇ ತಿಳಿಸದಿರೀ ನಿಮ್ಮಾಕೆಗೆ ಇದನ್ನ


 ಅರವಿಂದ್  

ನೋಡದೆ ಸೆಳದವಳು

ನನ್ನ ಹುಡುಗಿ

ನೋಡದೆ ಸೆಳೆದಳು ಕಣ್ಣಂಚಿನಲ್ಲೇ
ಮಾತಾಡದೆ ಬಂದಳು ಮೌನದಲ್ಲೇ
ನಲಿಯುತಾ ನಗುತಾ ಬರುವ
ನಗುವಲ್ಲೇ ನನ್ನ ಸೆಳೆಯುವ
ಹುಡುಗಿ ನೀ ಬರೀ ಚೂಟಿಯಲ್ಲ
ಘಾಟಿ ಹುಡುಗಿ,

ವಿಪರ್ಯಾಸ

ಮನಸ ಸಳೆದ ನಲ್ಲೆ
ನಿನ್ನ ವರಿಸಲು ನಾ
ಬಂದಿರಬೇಕಿತ್ತು ನಾ ಮೊದಲು ಭೂಮಿಗೆ

ಕನಸ ಕದ್ದ ಕೋಮಲೆ
ನನಗಾಗಿ ನೀ ಇದ್ದೆಯೆಂದಾಗಲೇ
ಗೊತ್ತಿದ್ದರೆ ನೀ ಬರಬೇಕಿತ್ತು ಇಳೆಗೆ
ಒಂದ್ಯೆದು ವರ್ಷ ಆದಮೇಲೆ
ಛೆ ಈಗ ಎಲ್ಲವೂ ಗೋಜು ಗೋಜಲೆ

ಇನಿದನಿ ರೂಪವಾದಾಗ


ಕುಹೂ ಕುಹೂ ಎಂದೆನಿಸುತಾ
ಕೂಗಳತೆಯ ದೂರದಲ್ಲಿದ್ದರೂ
ಕಾಣದ ಇನಿದನಿಯೇ
ಏನಾಯಿತು ನಿನಗೆ
ಕಾಣದಂತೆ ನೀನು ಕೇಳುಸುತಿರುವೆ ದನಿಯನು ?

ಕುಹೂ ಕುಹೂ ಎಂದೆನಿಸುತಾ
ಕಣ್ಣಳತೆಯ ಮೀರಿ ನೋಡಿತಾ
ನಿಂತಿರುವೆ ಇನಿದನಿಯೇ
ಏನಾಯಿತು ನಿನಗೆ
ಕೇಳಿಸಿದರೂ ನೀನು ಕಾಯಿಸುತಿರುವೆ ಯಾರನು ?

ಕುಹೂ ಕುಹೂ ಎಂದೆನಿಸುತಾ
ಮನದ ಎಲ್ಲೆ ಮೀರಿ ನಗುತಾ
ಕುಳಿತಿರವೆ ಇನಿದನಿಯೇ
ಏನಾಯಿತು ನಿನಗೆ
ಮನಸಿದ್ದರೂ ಅರಿಯರಲಾರೆಯಾ ನನ್ನನು ?

ಕುಹೂ ಕುಹೂ ಎಂದೆನಿಸುತಾ
ಜಗದ ಎಲ್ಲರ ಕರೆಯುತಾ
ಕರೆಯುತಿರುವೇ ಇನಿದನಿಯೇ
ಏನಾಯಿತು ನಿನಗೆ
ಜಗತ್ತಿಗೆ ನನ ಪ್ರೀತಿ ಕೇಳಿಸಿದರು ಕಾಣದಾಯ್ತೇ ಮನವನು ?

ಕುಹೂ ಕುಹೂ ಎಂದೆನಿಸುತಾ
ಮನಗೆದ್ದಯಲ್ಲೇ ನಲಿಯುತಾ
ಕರೆಯಿತಿರುವೇ ಇನಿದನಿಯೇ
ಏನಾಯಿತು ನಿನಗೆ
ಮನವ ಕದ್ದು ಕೊಂಡೊಯ್ದದ್ದೆಲ್ಲಿಗೆ ನನ್ನ ಪಾಡೇನು ?

ಸಮಯದ ಸಿಪಾಯಿ


ಎಲೆಲೆ ಸಮಯದ ಸಿಪಾಯಿ
ನೀನ್ಯಾಕೆ ಆಗಲಿಲ್ಲ ಸೋಮಾರಿ
ನಮಗ್ಯಾಕೆ ಆದೆ ನೀ ಮಾರಿ

ಅಮ್ಮ ಮರೆತು ಮಲಗಿದರು
ನೀನಾಗುವೆ ನಮಗೆ ಮಲತಾಯಿ
ಗಂಟೆ ಆರಾದರೆ ಸಾಕು
ನಿನ್ನ ಶಬ್ದದ ಸದ್ದು ಸಾಕು.... ಸಾಕು.....

ದಿನವೂ ಹೋಗಬೇಕು ಶಾಲೆಗೆ
ಒಮ್ಮೆಯೂ ಮ್ಯೆಮರೆವ ಹಾಗಿಲ್ಲ ಚಳಿಗೆ
ತಡವಾಗಿ ಹೋದರೆ ಶಾಲೆಗೆ
ಮೇಸ್ಟರ ಕೋಪ ನೆತ್ತಿಗೆ

ಯಾಕೆ ನೀ ಹೀಗೆ.......
ಎಲೆಲೆ ಸಮಯದ ಸಿಪಾಯಿ
ನೀನ್ಯಾಕೆ ಆಗಲಿಲ್ಲ ಸೋಮಾರಿ..................... :)

ಬೇಗುದಿ

ತಂಪಾಗಿದ್ದ ಮನದಲ್ಲಿ
ತಂಪೆರೆಯ ಬಂದವಳೇ
ಅಷ್ಟಕ್ಕೆ ಬಿಟ್ಟಿದ್ದರೆ ಚೆನ್ನಿತ್ತು ಚೆಲುವೆ
ಮನದ ಹೂದೋಟದಲಿ
ಗುಲಾಬಿ ಅರಳಿಸುವಷ್ಟು ಪ್ರೀತಿನೀಡಿ
ಮನದ ಅಂತರಗವ ನಿನ್ನಾಟಕೆ ಹೂಡಿ
ಹೋಗುವ ಇರಾದೆಯೇಕಿತ್ತು ಒಲವೆ

ಹೇಳದೆ ಹೋಗಿರುವೆ ನೀನಿಂದು
ತಿಳಿಸದೆ ಬಂದ ನೀನಂದು
ಕೇಳಿದೆನೇನು ನಾನು ಯಾರೆಂದು ಮನವೆ
ಚಿಂತೆಯ ಚಿತೆಯಲ್ಲಿ ಬೇಯುತ್ತಿದ್ದವನಿಗೆ
ಶಾಂತಿಯ ಪನ್ನೀರಾದೆ
ಚಿತೆಯಲ್ಲಿ ಬಿದ್ದಿರುವೆ ಎಂದಾಗಾ
ಚಿಂತೆಯೂ ಇಲ್ಲದೆ ಹಾಗೇಗೆ ಹೋದೆ
ವಿಷಾದದ ಬೇಗುದಿಯ ಆರಿಸಿಹೋಗಲಾರೆಯಾ ನಲ್ಲೆ ............