ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಜೂನ್ ೨೫ರ ೨೦೦೯ ರಂದು ಲೋಕಸಭೆಯಲ್ಲಿ ಅಸ್ತಿತ್ವಕ್ಕೆ ಬಂದ ಗುರುತಿನ ಚೀಟಿ ವಿತರಣಾ ಯೋಜನೆ, ಮುಂದಿನ ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಗುರುತಿನ ಚೀಟಿಯನ್ನು ನೀಡುವ ಯೋಜನೆ ಹಮ್ಮಿಕೊಂಡಿತು. ಈ ಯೋಜನೆಗೆ ಇನ್ಫೋಸಿಸ್ ಸಂಸ್ಥೆಯ ಪ್ರಧಾನರಾದ ನಂದನ್ ನಿಲಕೇಣಿಯವರನ್ನು ಯೋಜನೆಯ ಮುಖ್ಯಸ್ಥರನ್ನಾಗಿ ಗುರುತಿಸಿ ಪ್ರತಿ ನಾಗರೀಕನಿಗೂ ಗುರುತಿನ ಚೀಟಿಯನ್ನು ಕ್ರಮಬದ್ಧವಾಗಿ ನೀಡುವ ಜವಾಬ್ದಾರಿಯನ್ನು ನೀಡಿತು. ಸರ್ಕಾರ ಯೋಜನೆಗೆ ಅಂಗೀಕಾರ ನೀಡಿದ್ದು, ಶಿಸ್ತು ಮತ್ತು ಬದ್ದತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಬ್ಯೆಯೋಮೆಟ್ರಿಕ್ ಆಧಾರದಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಉತ್ಸುಕವಾಗಿದೆ.
ನೋಡ್ತಿರೋರು
ಪ್ರಚಲಿತ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಪ್ರಚಲಿತ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಶುಕ್ರವಾರ, ಆಗಸ್ಟ್ 6, 2010
ಗುರುತಿನ ಚೀಟಿ ಪ್ರಾಧಿಕಾರ UIDAI
ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಜೂನ್ ೨೫ರ ೨೦೦೯ ರಂದು ಲೋಕಸಭೆಯಲ್ಲಿ ಅಸ್ತಿತ್ವಕ್ಕೆ ಬಂದ ಗುರುತಿನ ಚೀಟಿ ವಿತರಣಾ ಯೋಜನೆ, ಮುಂದಿನ ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಗುರುತಿನ ಚೀಟಿಯನ್ನು ನೀಡುವ ಯೋಜನೆ ಹಮ್ಮಿಕೊಂಡಿತು. ಈ ಯೋಜನೆಗೆ ಇನ್ಫೋಸಿಸ್ ಸಂಸ್ಥೆಯ ಪ್ರಧಾನರಾದ ನಂದನ್ ನಿಲಕೇಣಿಯವರನ್ನು ಯೋಜನೆಯ ಮುಖ್ಯಸ್ಥರನ್ನಾಗಿ ಗುರುತಿಸಿ ಪ್ರತಿ ನಾಗರೀಕನಿಗೂ ಗುರುತಿನ ಚೀಟಿಯನ್ನು ಕ್ರಮಬದ್ಧವಾಗಿ ನೀಡುವ ಜವಾಬ್ದಾರಿಯನ್ನು ನೀಡಿತು. ಸರ್ಕಾರ ಯೋಜನೆಗೆ ಅಂಗೀಕಾರ ನೀಡಿದ್ದು, ಶಿಸ್ತು ಮತ್ತು ಬದ್ದತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಬ್ಯೆಯೋಮೆಟ್ರಿಕ್ ಆಧಾರದಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಉತ್ಸುಕವಾಗಿದೆ.
ಗುರುವಾರ, ಆಗಸ್ಟ್ 5, 2010
ರಕ್ತದಾನ - ಮಹಾದಾನ
ಶುಕ್ರವಾರ, ಜೂನ್ 4, 2010
ಗೋವಿನ ಹಾಡು -ಧರಣಿ ಮಂಡಲ ಮಧ್ಯದೊಳಗೆ
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಲಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ
ಕೊಳಲ್ನುದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗುರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು
ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು.
ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು
ಮೊರೆದು ರೋಷದಿ ಗುಡುಗುತ ಹುಲಿ
ಭೋರಿಡುತ ಚಂಗನೆ ಜಿಗಿದು
ನೆಗೆಯಲು ಚೆದರಿ ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿತಾ ಬರುತಿರೆ
ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನ ಹುಲಿರಾಯನು
ಮೇಲೆ ಬಿದ್ದು ನಿನ್ನಲೀಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಕ್ರೂರವ್ಯಾಘ್ರನು ಕೂಗಲು,
ಒಂದು ಬಿನ್ನಹ ಹುಲಿಯೇ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ
ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು
ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂಡ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ
ಅರ ಮೊಲೆಯನು ಕುಡಿಯಲಮ್ಮ
ಅರ ಬಳಿಯಲಿ ಮಲಗಲಮ್ಮ
ಅರ ಸೇರಿ ಬದುಕಲಮ್ಮ
ಆರು ನನಗೆ ಹಿತವರು
ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೋಡ ಹುಟ್ಟಗಳಿರ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು
ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು
ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡ ವ್ಯಾಗ್ರನೆ ನಿನಿದೆಲ್ಲವ
ನುಂಡು ಸಂತಸದಿಂದಿರು
ಪುಣ್ಯಕೋಟಿಯ ಮತ ಕೇಳಿ
ಕಣ್ಣನಿರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು
ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು
ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತನು
ಮುನ್ನ ತದಿಂತೆಂಡಿತು
ಎನ್ನ ವಂಶದ ಗೋವ್ಗಲೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.
ವಸಂತ್ ಶೆಟ್ಟಿ ಹಾಗೂ ಅನಿಲ್ ರಮೇಶರ ಸಹಕಾರದಲ್ಲಿ :-)
ಅರವಿಂದ್
ಮೆರೆಯುತಿಹ ಕರ್ನಾಟ ದೇಶದೊಲಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ
ಕೊಳಲ್ನುದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗುರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು
ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು.
ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು
ಮೊರೆದು ರೋಷದಿ ಗುಡುಗುತ ಹುಲಿ
ಭೋರಿಡುತ ಚಂಗನೆ ಜಿಗಿದು
ನೆಗೆಯಲು ಚೆದರಿ ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿತಾ ಬರುತಿರೆ
ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನ ಹುಲಿರಾಯನು
ಮೇಲೆ ಬಿದ್ದು ನಿನ್ನಲೀಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಕ್ರೂರವ್ಯಾಘ್ರನು ಕೂಗಲು,
ಒಂದು ಬಿನ್ನಹ ಹುಲಿಯೇ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ
ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು
ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು
ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂಡ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ
ಅರ ಮೊಲೆಯನು ಕುಡಿಯಲಮ್ಮ
ಅರ ಬಳಿಯಲಿ ಮಲಗಲಮ್ಮ
ಅರ ಸೇರಿ ಬದುಕಲಮ್ಮ
ಆರು ನನಗೆ ಹಿತವರು
ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೋಡ ಹುಟ್ಟಗಳಿರ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು
ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು
ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು
ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡ ವ್ಯಾಗ್ರನೆ ನಿನಿದೆಲ್ಲವ
ನುಂಡು ಸಂತಸದಿಂದಿರು
ಪುಣ್ಯಕೋಟಿಯ ಮತ ಕೇಳಿ
ಕಣ್ಣನಿರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು
ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು
ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತನು
ಮುನ್ನ ತದಿಂತೆಂಡಿತು
ಎನ್ನ ವಂಶದ ಗೋವ್ಗಲೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.
ವಸಂತ್ ಶೆಟ್ಟಿ ಹಾಗೂ ಅನಿಲ್ ರಮೇಶರ ಸಹಕಾರದಲ್ಲಿ :-)
ಅರವಿಂದ್
ಬುಧವಾರ, ಜನವರಿ 6, 2010
ಶುಕ್ರವಾರ, ಜೂನ್ 26, 2009
ಪ್ರೀತಿಯೆಂದರೇನು? ಭಾಗ ೧
ಪ್ರೀತಿಯೆಂದರೆ ಹೀಗೆ ಅಂತಾ ಯಾರೂ ಹೇಳೋಕೆ ಆಗೋಲ್ಲಾರೀ, ಆದ್ರೂ ಒಬ್ಬೊಬ್ಬರು ಹೇಳೋ ವ್ಯಾಖ್ಯಾನಗಳು ಒಂದೊಂದು ರೀತಿ,
ಪ್ರೀತಿಯೆಂದರೆ ಏನೆಂದು ಹೇಳುವುದು.......................
ಅದೊಂದು ಚಡಪಡಿಕೆ, ಅದೊಂದು ಕೌತುಕತೆ, ಅದೊಂದು ವಿಷಾದತೆ, ಅದೊಂದು ಸ್ವಾಯತ್ತತೆ, ಅದೊಂದು ಸಮನ್ವಯತೆ, ಅದೊಂದು ಕಕ್ಕುಲತೆ, ಅದೊಂದು ವ್ಯಾಕುಲತೆ, ಅದೊಂದು ಸಾಮೀಪ್ಯತೆ, ಅದೊಂದು ಸಂಪನ್ನತೆ, ಅದೊಂದು ಪ್ರಸನ್ನತೆ, ಅದೊಂದು ಸಮಾನತೆ,
ಅದೊಂದು ಚಿಂತೆ, ಅದೊಂದು ಸಂತೆ, ಅದೊಂದು ಗೊಂದಲತೆ, ಅದೊಂದು ಗೌಜುಗತೆ, ಎಲ್ಲಕ್ಕೂ ಮೀರಿದ ಎಲ್ಲವೂ ಮಿರಿ ಮಿರಿ ಮಿಂಚಿನಂತೆ ಮಾಡುವ ಮಾಯಾದೀಪ, ಯಾರ ಕ್ಯೆಗೂ ಸಿಕ್ಕದ ಒಂದು ಸುಭದ್ರ ಭಾವನೆ, ಹಾಗೇ ಒಂದಿಷ್ಟು ಆತಂಕ, ಎಲ್ಲೋ ಏನೋ ಹುಡುಕುತಿರುವವ ಧಾವಂತ, ಎಲ್ಲವೂ ಇದೆ ಈ ಎರಡಕ್ಷರದ ಪ್ರೀತಿಯಲ್ಲಿ.
ಹೇಳಲು ಪದಗಳಿಲ್ಲ,
ಹೇಳುತಿರಲು ನಿಲ್ಲೋಲ್ಲ,
ಹೇಳಿಕೆಗೆ ಮರಗೋಲ್ಲ,
ಹೇಳಿದರೂ ಕೇಳೋಲ್ಲ......................
ಕೇಳಿದರೂ ತಿಳಿಸೋಲ್ಲ,
ಕೇಳಿಸಿದರೂ ಹೇಳೊಲ್ಲ,
ಕೇಳಿಕೆಗೆ ಕಿವಿಗೊಡದೆ
ಪ್ರೀತಿ ಎಂದಷ್ಟೆ ಹೇಳಿ..............................
ಹೃದಯಕ್ಕೆ ಲಗ್ಗೆ ಇಡುವ ವಿಶಾಲ ಅರ್ಥದ ದಿವಿನಾದ ಪದ.
ಪ್ರೀತಿ. . . .
ನಮ್ಮ ಜೀವನದಲ್ಲಿ ಪ್ರೀತಿಗೆ ಯಾಕೆ ಎಷ್ಟು ಮಹತ್ವ ಕೊಡುತ್ತೇವೆ ಎಂದು ನನ್ನ ಅನುಭವವನ್ನು ಹಂಚಿಕೊಳ್ಳುತ್ತೆನೆ.
೧. ಚಿಕ್ಕಂದಿನಿಂದಲೂ ನಮ್ಮನ್ನು ಯಾರು ಸರಿಯಾಗಿ ಗುರುತಿಸದಿದ್ದರೆ,
೨. ಸಿಗಬೇಕಾದ ಪ್ರೀತಿ, ಮಮತೆ, ವಾತ್ಸಲ್ಯ ಸಿಗದಿದ್ದರೆ,
೩. ನಮ್ಮ ಅಂತರಂಗದ ಭಾವನೆಗಳನ್ನು ಇನ್ನೋಬ್ಬರಲ್ಲಿ ಹಂಚಿಕೊಳ್ಳಲು,
೪. ನಮ್ಮ ಪ್ರತಿ ಯೋಚನೆಗಳು, ಯೋಜನೆಗಳು ಅವಳನ್ನು ಸಂತೋಷಗೊಳಿಸಲು.
೫. ಆಕೆಯ ಬಗ್ಗೆ ನಮಗಿರುವ ಮೌನ ಪ್ರೀತಿ,
೬. ಅವಳ ಬಗ್ಗೆ ನಾವುಗಳು ಕಟ್ಟಿದ್ದ ಕನಸಿನ ಗೋಪುರಕ್ಕೆ ಧಕ್ಕೆ ಬಂದಾಗ.
೭. ಎಲ್ಲವೂ ಅವಳಿಗಾಗೆ ಅನ್ನುವ ಭಾವನೆ, ಜೊತೆಗಿನ ನಿಷ್ಕಲ್ಮಶ ಒಲವು.
ಪ್ರೀತಿಯೆಂದರೇನು ? ಭಾಗ ೨
ಪ್ರೀತಿಯೆಂದರೆ ಅದು ಸುಮ್ಮನೆ ಆಕರ್ಷಣೆಯಲ್ಲ, ಅದಕ್ಕೆ ಇಂತದೇ ಎಂಬ ಭಾವವಿಲ್ಲ, ನಾವು ಒಬ್ಬ ವ್ಯಕ್ತಿಯನ್ನು ಇಷ್ಟಪಡೋದು ಮೊದಲನೆಯದಾಗಿ ಆಕರ್ಷಣೆಯಿಂದಲ್ಲ, ಅವರ ಮಾತಿನಲ್ಲಿರುವ ಸತ್ಯದಿಂದ, ಮತ್ತು ಪ್ರಾಮಾಣಿಕತೆಯಿಂದ, ಇಲ್ಲಿ ಗಂಡ ಹೆಂಡತಿ, ಗೆಳೆಯ ಗೆಳತಿ, ತಂದೆ ತಾಯಿ, ಬಂಧು ಬಾಂಧವರನ್ನೂ ಮೀರಿ ಮತ್ತೊಂದು ಸೆಳೆತವಿದೆ, ಅದೇ ಸ್ನೇಹ ಅದರ ಮಟ್ಟಿಗೆ ಹೇಳುವುದಾದರೆ ನೀವು ನಿಮ್ಮ ಹುಟ್ಟಿನ ನಂತರ ತಂದೆ ತಾಯಿ, ಅಣ್ಣ-ತಂಗಿ, ಅಕ್ಕ-ತಮ್ಮ, ಬಂದು ಬಳಗದವರೆಲ್ಲರೂ ಆಯ್ಕೆಗಳೇ ಇಲ್ಲದೇ ನಿಮ್ಮವರು ಎಂದು ಹೇಳಬೇಕಾಗುತ್ತದೆ, ಆದ್ರೆ ಸ್ನೇಹಿತನ ಆಯ್ಕೆ ಮಾತ್ರ ನಿಮ್ಮ ಯೋಚನೆಗೆ, ನಿಮ್ಮ ಭಾವ ಸ್ಪಂದನೆಗೆ, ಮನಸಿನ ಉದ್ವೇಗಕ್ಕೆ ಜೊತೆಯಾಗಿ ಹೆಜ್ಜೆಯಾಗುವ ಒಂದು ಮನಸ್ಸು ಮಾತ್ರ.
ನಿಮ್ಮ ಆಯ್ಕೆಆ ಮನಸ್ಸಿಗೆ ಮಾತ್ರವೇ ಹೊರತು ಅದರ ಹಿಂದಿರುವ ಮತ್ಯಾವುದೋ ಮಾತುಗಳಿಗಲ್ಲ, ಉದಾ : ನೀವು ಆಸ್ಪತ್ರೆಯಲ್ಲಿ ಕೆಲಸ ಮಾಡ್ತೀದ್ದಿರಾದ್ದರಾ ಎಂದುಕೊಳ್ಳೋಣ. ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಡಾಕ್ಟರ್, ಹಾಗೂ ಟ್ರಿಟ್ಮೆಂಟ್ ಎಲ್ಲಾ ಇದೆಯನ್ನಿ, ಆದರೂ ಮತ್ತ್ಯಾವುದೋ ಹೆಚ್ಚಿನ ಚಿಕಿತ್ಸೆಗಾಗಿ ನೀವು ಬೇರೆ ಆಸ್ಪತ್ರೆಗೆ ಆ ರೋಗಿಯನ್ನು ಕಳುಹಿಸೋದಿಲ್ವೆ, ಹಾಗೆ ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳಿದ್ದರೂ ಹೃದಯಾಘಾತಕ್ಕೆ ಅಥವಾ ಮತ್ಯಾವುದೋ ಮಾರಣಾಂತಿಕ ಖಾಯಿಲೆಗೆ ಬೇರೆ ಆಸ್ಪತ್ರೆಗೆ ರೋಗಿಯನ್ನು ಸೇರಿಕೊಳ್ಳಲು ನೀವೆ ಹೇಳುತ್ತೀರಿ, ಹಾಗೆಯೇ ಡಾಕ್ಟರ್ಗಳ ವಿಷಯವಾಗಿ ಬಂದರೆ ಎಲ್ಲಾ ಡಾಕ್ಟರ್ಗಳು ಯಾಕೆ ನಾವು ಇಂಥದರಲ್ಲಿ ಪರಿಣಿತರು ಅಂತಾ ಹೇಳುತ್ತಾ ಬೋರ್ಡ್ ಹಾಕಿಕೊಳ್ಳುತ್ತಾರೆ ಹೇಳಿ, ಬರುವವರಿಗೆ ನಾವು ಇಂತದರಲ್ಲಿ ಪರಿಣಿತರಷ್ಟೆ, ಇನ್ನುಳಿದ ವಿಷಯಗಳ ಬಗ್ಗೆ ಅಲ್ಪವಾದ ಜ್ಣಾನವಿದೆ ಹಾಗೂ ಆ ಉಳಿದ ವಿಶೇಷ ಚಿಕಿತ್ಸೆಗಾಗಿ ಮತ್ತೊಬ್ಬ ಡಾಕ್ಟರರ ಅಗತ್ಯವಿದ್ದರೆ ಅವರ ವಿಳಾಸ ಕೊಡುತ್ತೇವೆಯೆಂದೋ ಅಥವಾ ನೀವೆ ಆ ಡಾಕ್ಟರರ ವಿಳಾಸವನ್ನು ಪತ್ತೆ ಹಚ್ಚಿ ಹೋಗುವುದಿಲ್ಲವೆ ಹಾಗೆ ? ಇದು ಕೂಡ
ಒಬ್ಬ ಪರ ಸ್ತೀ ಅಥವಾ ಪರಪುರಷರ ಸಂವಾದ ಬರೀ ಅನ್ಯೆತಿಕತೆಗೆ ಹೋಲಿಸುವುದಾದರೆ ಕೆಲವು ಇಲ್ಲಿ ಪ್ರಕಟಿಸಬಾರದ ಎಷ್ಟೋ ವಿಚಾರಗಳು ಬಗ್ಗೆ ನನಗೆ ಜಿಗುಪ್ಸೆ ಹುಟ್ಟುತ್ತದೆ, ಅಂತದ್ದನ್ನೇ ಸಮಾಜ ಸುಲಭವಾಗಿ ಒಪ್ಪಿ ಅದಕ್ಕೆ ತನ್ನದೇ ರೀತಿಯಲ್ಲಿ ಅರ್ಥಕೊಡುವಾಗ ಇನ್ನು ಒಂದು ನಿಷ್ಕಲ್ಮಶ ಸಂಬಂಧದಲ್ಲಿ ಅನ್ಯೆತಿಕತೆ ಡಂಬಾಚಾರಿಗಳ ಕುರುಡು ನಂಬಿಕೆಯಷ್ಟೆ.
ಎಷ್ಟೊ ಮದುವೆಯಾದ ಹುಡುಗರೂ ಹುಡುಗೀಯರೂ ಹೇಳುವುದ ನೀವು ಕೇಳಿರಬೇಕು, ನನ್ನ ಗಂಡ ನನಗೆ ಸರಿಯಾದ ಜೋಡಿಯಲ್ಲ ಅಥವಾ ನನ್ನ ಹೆಂಡತಿ ನನಗೆ ತಕ್ಕುದಾದವಳಲ್ಲ ಅಂತಾ ಹೇಳ್ತಿರ್ತಾರೆ, ಅಂದರೆ ಅದು ಹಣಕಾಸು, ಮರ್ಯಾದೆ, ಅಥವಾ ಅಂತಸ್ತಿಗೆ ಸರಿಸಮವಲ್ಲ ಅಂತ ಅಲ್ಲ ಮನಸ್ಸಿನ ಭಾವನೆಗಳ ಹೊರಹೊಮ್ಮುವಿಕೆಗೆ ಒಂದು ಚಡಪಡಿಕೆಗೆ ಸಿಗಬೇಕಾದ ವೇದಿಕೆ ಅವಳಲ್ಲ ಅಥವಾ ಅವನಲ್ಲ ಎಂಬುದಿಷ್ಟೆ. ನಿಮ್ಮ ಮನಸ್ಸಿನಲ್ಲಿ ಏಳುವ ರಾಗಲಹರಿಗೆ ಒಂದು ಆಯಾಮಬೇಕಷ್ಟೆ, ಅದಕ್ಕೆ ಪುರುಷ ಸ್ತ್ರೀ ಎಂಬ ಭೇಧವಿಲ್ಲ, ಅದಕ್ಕೆ ಹೆಚ್ಚಾಗಿ ವಯಸ್ಸಿನ ಮಿತಿಯಿಲ್ಲ, ಹಣ್ಣು ಹಣ್ಣು ಮುದುಕರಿಗೂ ಮುದುಕಿಯರಿಗೂ ನನಗೊಂದು ಸಂಗಾತಿಯ ಸಾಮೀಪ್ಯ ಬೇಕೆನ್ನುವುದು, ಅನ್ಯೆತಿಕತೆಯಲ್ಲ, ಅವರ ಮನಸ್ಸಿನ ಉದ್ವೇಗಕ್ಕೆ ಸಿಗಬೇಕಾದ ಒಂದು ವೇದಿಕೆ.
ನಿಮ್ಮ ಆಯ್ಕೆಆ ಮನಸ್ಸಿಗೆ ಮಾತ್ರವೇ ಹೊರತು ಅದರ ಹಿಂದಿರುವ ಮತ್ಯಾವುದೋ ಮಾತುಗಳಿಗಲ್ಲ, ಉದಾ : ನೀವು ಆಸ್ಪತ್ರೆಯಲ್ಲಿ ಕೆಲಸ ಮಾಡ್ತೀದ್ದಿರಾದ್ದರಾ ಎಂದುಕೊಳ್ಳೋಣ. ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಡಾಕ್ಟರ್, ಹಾಗೂ ಟ್ರಿಟ್ಮೆಂಟ್ ಎಲ್ಲಾ ಇದೆಯನ್ನಿ, ಆದರೂ ಮತ್ತ್ಯಾವುದೋ ಹೆಚ್ಚಿನ ಚಿಕಿತ್ಸೆಗಾಗಿ ನೀವು ಬೇರೆ ಆಸ್ಪತ್ರೆಗೆ ಆ ರೋಗಿಯನ್ನು ಕಳುಹಿಸೋದಿಲ್ವೆ, ಹಾಗೆ ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳಿದ್ದರೂ ಹೃದಯಾಘಾತಕ್ಕೆ ಅಥವಾ ಮತ್ಯಾವುದೋ ಮಾರಣಾಂತಿಕ ಖಾಯಿಲೆಗೆ ಬೇರೆ ಆಸ್ಪತ್ರೆಗೆ ರೋಗಿಯನ್ನು ಸೇರಿಕೊಳ್ಳಲು ನೀವೆ ಹೇಳುತ್ತೀರಿ, ಹಾಗೆಯೇ ಡಾಕ್ಟರ್ಗಳ ವಿಷಯವಾಗಿ ಬಂದರೆ ಎಲ್ಲಾ ಡಾಕ್ಟರ್ಗಳು ಯಾಕೆ ನಾವು ಇಂಥದರಲ್ಲಿ ಪರಿಣಿತರು ಅಂತಾ ಹೇಳುತ್ತಾ ಬೋರ್ಡ್ ಹಾಕಿಕೊಳ್ಳುತ್ತಾರೆ ಹೇಳಿ, ಬರುವವರಿಗೆ ನಾವು ಇಂತದರಲ್ಲಿ ಪರಿಣಿತರಷ್ಟೆ, ಇನ್ನುಳಿದ ವಿಷಯಗಳ ಬಗ್ಗೆ ಅಲ್ಪವಾದ ಜ್ಣಾನವಿದೆ ಹಾಗೂ ಆ ಉಳಿದ ವಿಶೇಷ ಚಿಕಿತ್ಸೆಗಾಗಿ ಮತ್ತೊಬ್ಬ ಡಾಕ್ಟರರ ಅಗತ್ಯವಿದ್ದರೆ ಅವರ ವಿಳಾಸ ಕೊಡುತ್ತೇವೆಯೆಂದೋ ಅಥವಾ ನೀವೆ ಆ ಡಾಕ್ಟರರ ವಿಳಾಸವನ್ನು ಪತ್ತೆ ಹಚ್ಚಿ ಹೋಗುವುದಿಲ್ಲವೆ ಹಾಗೆ ? ಇದು ಕೂಡ
ಒಬ್ಬ ಪರ ಸ್ತೀ ಅಥವಾ ಪರಪುರಷರ ಸಂವಾದ ಬರೀ ಅನ್ಯೆತಿಕತೆಗೆ ಹೋಲಿಸುವುದಾದರೆ ಕೆಲವು ಇಲ್ಲಿ ಪ್ರಕಟಿಸಬಾರದ ಎಷ್ಟೋ ವಿಚಾರಗಳು ಬಗ್ಗೆ ನನಗೆ ಜಿಗುಪ್ಸೆ ಹುಟ್ಟುತ್ತದೆ, ಅಂತದ್ದನ್ನೇ ಸಮಾಜ ಸುಲಭವಾಗಿ ಒಪ್ಪಿ ಅದಕ್ಕೆ ತನ್ನದೇ ರೀತಿಯಲ್ಲಿ ಅರ್ಥಕೊಡುವಾಗ ಇನ್ನು ಒಂದು ನಿಷ್ಕಲ್ಮಶ ಸಂಬಂಧದಲ್ಲಿ ಅನ್ಯೆತಿಕತೆ ಡಂಬಾಚಾರಿಗಳ ಕುರುಡು ನಂಬಿಕೆಯಷ್ಟೆ.
ಎಷ್ಟೊ ಮದುವೆಯಾದ ಹುಡುಗರೂ ಹುಡುಗೀಯರೂ ಹೇಳುವುದ ನೀವು ಕೇಳಿರಬೇಕು, ನನ್ನ ಗಂಡ ನನಗೆ ಸರಿಯಾದ ಜೋಡಿಯಲ್ಲ ಅಥವಾ ನನ್ನ ಹೆಂಡತಿ ನನಗೆ ತಕ್ಕುದಾದವಳಲ್ಲ ಅಂತಾ ಹೇಳ್ತಿರ್ತಾರೆ, ಅಂದರೆ ಅದು ಹಣಕಾಸು, ಮರ್ಯಾದೆ, ಅಥವಾ ಅಂತಸ್ತಿಗೆ ಸರಿಸಮವಲ್ಲ ಅಂತ ಅಲ್ಲ ಮನಸ್ಸಿನ ಭಾವನೆಗಳ ಹೊರಹೊಮ್ಮುವಿಕೆಗೆ ಒಂದು ಚಡಪಡಿಕೆಗೆ ಸಿಗಬೇಕಾದ ವೇದಿಕೆ ಅವಳಲ್ಲ ಅಥವಾ ಅವನಲ್ಲ ಎಂಬುದಿಷ್ಟೆ. ನಿಮ್ಮ ಮನಸ್ಸಿನಲ್ಲಿ ಏಳುವ ರಾಗಲಹರಿಗೆ ಒಂದು ಆಯಾಮಬೇಕಷ್ಟೆ, ಅದಕ್ಕೆ ಪುರುಷ ಸ್ತ್ರೀ ಎಂಬ ಭೇಧವಿಲ್ಲ, ಅದಕ್ಕೆ ಹೆಚ್ಚಾಗಿ ವಯಸ್ಸಿನ ಮಿತಿಯಿಲ್ಲ, ಹಣ್ಣು ಹಣ್ಣು ಮುದುಕರಿಗೂ ಮುದುಕಿಯರಿಗೂ ನನಗೊಂದು ಸಂಗಾತಿಯ ಸಾಮೀಪ್ಯ ಬೇಕೆನ್ನುವುದು, ಅನ್ಯೆತಿಕತೆಯಲ್ಲ, ಅವರ ಮನಸ್ಸಿನ ಉದ್ವೇಗಕ್ಕೆ ಸಿಗಬೇಕಾದ ಒಂದು ವೇದಿಕೆ.
ನಂಬಿಕೆ Vs ಮೂಢನಂಬಿಕೆ - ಸೂರ್ಯಗ್ರಹಣ
ಇದೇ ತಿಂಗಳ ೨೬ನೇ ಜನವರಿ ೨೦೦೯ ನಮ್ಮ ದೇಶದಲ್ಲೆಲ್ಲರೂ ಗಣರಾಜ್ಯೋತ್ಸವವನ್ನು ಆಚರಿಸುತ್ತಾರೆ, ಆದರೆ ಬಾನಿನಲ್ಲಿ ಸೂರ್ಯಗ್ರಹಣ ಅದೇ ದಿನ ಬೆಳಿಗ್ಗೆ ಬಹುಶಃ ೭.೦೭ ನಿಮಿಶದಿಂದ ೯.೪೬ ನಿಮಿಶದವರೆಗೆ ಇರುತ್ತದೆ ಎಂದು ನಾಸಾ ಅಭಿಪ್ರಾಯಪಟ್ಟಿದ್ದಾರೆ.
ಸೂರ್ಯಗ್ರಹಣ ಆಗುವುದರ ಬಗ್ಗೆ ಅಥವಾ ಅದು ಗಣರಾಜ್ಯೋತ್ಸವದಂದೇ ಬೆಳ್ಳಂ ಬೆಳಿಗ್ಗೆ ಬರುವ ಬಗ್ಗೆ ಮಾತಲ್ಲಾ, ಆಸ್ತಿಕವಾದದ ಪ್ರಕಾರ ಸೂರ್ಯಗ್ರಹಣದಲ್ಲಿ ನಮ್ಮ ಹಿಂದೂಗಳ ಜನ್ಮರಾಶಿಗಳಾದ ವೃಶಭ, ಸಿಂಹ,ಮಿಥುನ,ಮೇಷ, ಕರ್ಕ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆಂದು ಎಲ್ಲಾ ಬೀದಿಗಳ ದೇವಸ್ಥಾನಗಳು ಶಾಂತಿಹೋಮ, ಯಾಗ ಮುಂತಾದ ರೆವಿನ್ಯೂ ಕಾರ್ಯಕ್ರಮಗಳ ಪಟ್ಟಿಯನ್ನೇ ಸಿದ್ದಪಡಿಸಿಟ್ಟಿರುವನ್ನು ಕಾಣಬಹುದು, ಆಕಾಶಕಾಯಗಳಲ್ಲಿ ನಡೆಯುವ ಪ್ರಕ್ರಿಯೆಗಳು ಮಾನವನ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತವೆ, ಅಲ್ಲವೇ ? ಅದರಲ್ಲೂ ಮೇಲೆ ಹೇಳುವ ೫ ರಾಶಿಗಳಲ್ಲಿ ಕೋಟ್ಯಾಂತರ ಜನ (ಜ್ಯೋತಿಷ್ಯದ ಪ್ರಕಾರ) ಇರಬಹುದು. ಹಾಗೆ ಪ್ರತಿ ಪ್ರದೇಶದಲ್ಲಿ (೧ ಕಿ.ಮೀ)ಇರುವ ದೇವಸ್ಥಾನಗಳ ಸರಾಸರಿ ಸಂಖ್ಯೆ ೫ ಎಂದು ತೆಗೆದುಕೊಂಡರು ಅದೇ ಪ್ರದೇಶದಲ್ಲಿ ಮೇಲಿನ ರಾಶಿಯ ಜನರು ಸುಮಾರು ೫೦೦೦ ಜನ ಸಿಗಬಹುದು, ಪ್ರತಿ ಶಾಂತಿಹೋಮಕ್ಕೆ ಸರಾಸರಿ ೨೫೦ ರೂಪಾಯಿಯನ್ನು ತೆಗೆದುಕೊಂಡು ಲೆಕ್ಕ ಹಾಕಿದರೂ ಇಂಥ ಮತ್ತೊಂದು ದೇವಸ್ಥಾನವನ್ನು ಕಟ್ಟಲಡ್ಡಿಯಿಲ್ಲ.
ಇಲ್ಲಿ ಪ್ರಾಣಿ ಪಕ್ಷಿಗಳ ಮೇಲೆ ಆಗದ ಪರಿಣಾಮ ಮನುಷ್ಯನಿಗೆ ಮಾತ್ರವೇ ಹೇಗೆ ಸಾಧ್ಯ ? ಹಾಗೊಂದು ವೇಳೆ ನಮ್ಮ ಆಸ್ಥಿಕ ಮಹಾಶಯರು ಪ್ರಾಣಿ ಪಕ್ಷಿಗಳ ಮೇಲು ಅದರ ಪರಿಣಾಮ ಆಗುತ್ತದೆ ಎನ್ನುವುದಾದರೆ ಅವುಗಳ ಜನ್ಮ ಸಮಯದಲ್ಲಿ ಯಾವ ನಕ್ಷತ್ರ, ಯಾವ ರಾಶಿಯಲ್ಲಿ ಜನನವೆಂದು ದತ್ತಾಂಶವನ್ನೇನಾದರೂ ಇಟ್ಟಿದ್ದಾರೆನು ? ಹಾಗಿದ್ದೂ ಆಸ್ಥಿಕವಾದದ ಕೆಲವು ಪ್ರಶ್ನೆಗಳು ಅಸ್ಥಿತ್ವವನ್ನೇ ಉಳಿಸಿಕೊಳ್ಳದೆ ನೀಡುವ ನೆಪಗಳಿಗೆ ಯಾವ ಆಧಾರವಿದೆ. ಸೂರ್ಯಗ್ರಹಣದ ಪರಿಣಾಮ ಆ ಸಮಯದಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗೆ ವಸ್ತುಗಳ ಮೇಲೆ ಅಥವಾ ಮನುಷ್ಯನ ಚರ್ಮದ ಮೇಲೆ ಉಂಟಾಗುವ ಚರ್ಮರೋಗಕ್ಕೆ ದಾರಿಯಾಗಬಹುದು ಅಷ್ಟೆ. ಹಾಗೇ ಉಂಟಾಗುವ ರಾಸಾಯನಿಕ ಪ್ರಕ್ರಿಯೆಯು ಆಸ್ಥಿಕವಾದದಲ್ಲೇ ಯೋಚಿಸುವುದಾದರೆ ಬರೇ ವೃಶಭ, ಸಿಂಹ,ಮಿಥುನ,ಮೇಷ, ಕರ್ಕ ರಾಶಿಗಳ ಮೇಲೆ ಮಾತ್ರವೇನು? ಅದರ ಅಫಘಾತ ಹುಡುಕಿಕೊಂಡು ಹೋಗಿ ಇದೇ ರಾಶಿಯಲ್ಲಿ ಹುಟ್ಟಿದ ಜನರಿಗೆ ಮಾತ್ರವೇ ಹೇಗೆ ?
ಒಂದು ಒಳಿತು ಕೆಡಕು ಎನ್ನುವುದೇ ಆದರೆ ಅದು ಎಲ್ಲರಿಗೂ ಪರಿಣಾಮವೇ ಅಲ್ಲವೇ ? ಉದಾ : ಒಂದು ಮನೆಯಲ್ಲಿ ನಡುರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಹತ್ತುಕೊಂಡಿರುತ್ತದೆ, ಆಗ ಅದರ ಮುನ್ಸೂಚನೆಯನ್ನು ಯಾರು ಮೊದಲು ಕಾಣುವರು ಅವರು ಇತರರನ್ನು ರಕ್ಷಿಸುತ್ತಾ ತಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಅಲ್ಲವೇ ? ಆ ಬೆಂಕಿಯೂ ಸಹ ಇವರನ್ನೇ ಸುಡಬೇಕು ಎಂದು ಯಾವ ಈರ್ಷೆಯನ್ನು ಇರಿಸಿಕೊಳ್ಳದೆ ಇರುತ್ತದಲ್ಲವೇ ? ಇವುಗಳು ಆಕಸ್ಮಿಕ ಅಫಘಾತಕ್ಕೆ ಉದಾಹರಣೆಯಾದರೆ ಇನ್ನೂ ರಾಶಿ ಫಲಗಳ ಬಗ್ಗೆ ಯೋಚಿಸಿದಾಗ ಎಷ್ಟೊ ವಿಚಾರಗಳು ಹಾಸ್ಯಸ್ಪದವಾಗಿ ಕಾಣುತ್ತಿರುತ್ತವೆ,
ನೀವು ರಾಶಿಫಲವನ್ನು ನಂಬುವವರಾದರೆ ಇವತ್ತು ಯಾವುದೋ ಪತ್ರಿಕೆಯಲ್ಲಿ ನಿಮ್ಮ ರಾಶಿಯಲ್ಲಿ ಧನಲಾಭ, ಸಹೋದರರಿಂದ ಕೇಡು, ವೃತ್ತಿಯಲ್ಲಿ ಕಿರಿಕಿರಿ ಎಂಬುದನ್ನು ನಿಮ್ಮ ರಾಶಿಗ ಕೊಟ್ಟಿರುವ ಗ್ರಹಫಲವೆಂದುಕೊಳ್ಳಿ. ಅದೇ ದಿನ ಮತ್ಯಾವುದೋ ಪತ್ರಿಕೆಯನ್ನು ತೆಗೆದು ಅೇ ರಾಶಿಯ ಬಗ್ಗೆ ಕಣ್ಣಾಡಿಸಿದರೆ ಅಲ್ಲಿ ಗೃಹದಲ್ಲಿ ನೆಮ್ಮದಿ, ಕೋರ್ಟು ಕಛೇರಿ ಕೆಲಸದಲ್ಲಿ ಪ್ರಗತಿ, ಮಿತಮೀರಿದ ಖರ್ಜು ಎಂದಿರುತ್ತದೆ, ಸಾಮಾನ್ಯವಾಗಿ ನೀವುಗಳು ನಂಬುವ ಎಸ್. ಕೆ. ಜ್ಯೆನ್, ಶಂಕರ ನಾರಾಯಣ್, ಸೋಮಯಾಜಿಲು, ಅಥವಾ ಇನ್ಯಾವುದೇ ಜ್ಯೋತಿಷ್ಯ ಶಾಸ್ತ್ರ ಪರಿಣಿತರು ಇದೇ ರಾಶಿ ಕುಂಡಲಿಗಳನ್ನು ತಮ್ಮ ಅನುಭವಕ್ಕೆ, ಅಥವಾ ತಮ್ಮ ಜ್ನಾನಾನುಸಾರವಾಗಿ ಹೇಳಿದರೂ ಕೊನೆಗವರು ಹೇಳುವ ಕೆಟ್ಟ ಪರಿಣಾಮಗಳು ಆಗಬಹುದು ಎನ್ನುವುದರ ಜೊತೆಗೆ ಒಂದಿಷ್ಟು ಹೋಮ ಹವನಗಳನ್ನು ಮತ್ಯಾವುದೋ ಶಾಂತಿ, ಸಂಸ್ಕಾರವನ್ನೋ ತಿಳಿಸುತ್ತಾರೆ, ಹಾಗಿದ್ದರೂ ನಾವೇನಾದ್ರೂ ಪ್ರಶ್ನಿಸಿದರೆ ಅದಕ್ಕೆ ಜ್ಯೋತಿಷ್ಯ ಶಾಸ್ತ್ರವು ಒಂದು ವಿಜ್ಣಾನ, ಅದು ಗಣಿತ ಹಾಗೂ ವಿಜ್ಣಾನದ ತಳಹದಿಯನ್ನೇ ನಂಬಿರುತ್ತದೆ ಎನ್ನುವ ಸಿದ್ದ ಉತ್ತರ ಸಿಕ್ಕಿರುತ್ತದೆ, ಹಾಗಾದರೆ ಜ್ಯೋತಿಷ್ಯ ವಿಜ್ಣಾನ ಹಾಗೂ ಗಣಿತಗಳ ತಳಹದಿಯೆಂದು ನಂಬೋಣ. ಅದರಲ್ಲಿ ನಮ್ಮ ಊಹೆಗೆ ನಿಲುಕದ ಎಷ್ಟೂ ಅವಘಡಗಳು ಸಂಭವಿಸುತ್ತದೆ ಎಂದು ನಂಬೋಣ. ಹಾಗಾದರೆ ಜ್ಯೋತಿಷ್ಯ ಹಾಗೂ ಭವಿಷ್ಯಗಳು ಬೇರೆ ಬೇರೆ ಎಂದಾಯಿತು.
ಜ್ಯೋತಿಷ್ಯ ಹಾಗೂ ಭವಿಷ್ಯ ಬೇರೆ ಬೇರೆಯಾದರೆ ಭವಿಷ್ಯಕ್ಕೆ ಯಾವುದೇ ತಳಹದಿ ಇಲ್ಲ ಎನ್ನುವುದು ಖಚಿತ. ಇಲ್ಲಿ ಜ್ಯೋತಿಷ್ಯ ಎಂದರೆ ಎಲ್ಲರೂ ತಮ್ಮ ತಮ್ಮ ಜನ್ಮ ನಕ್ಷತ್ರಕ್ಕೆ ಬರುವ ಕಂಟಕಗಳನ್ನು ಮುನ್ಸೂಚಿಸುವದೇ ಜ್ಯೋತಿಷ್ಯ ಎಂಬ ತಪ್ಪು ಕಲ್ಪನೆಯನ್ನೇ ನಂಬಿದ್ದಾರೆ, ಅಲ್ಲವೇ ? ಎಲ್ಲರ ಭವಿಷ್ಯವೂ ಒಂದೇ ತೆರನಾದವು ಎಂದು ಯಾರಾದರೂ ಹೇಳುವ ಧ್ಯೆರ್ಯ ಮಾಡಿಯಾರೇನು ? ಸಾಧ್ಯವಿಲ್ಲ, ಹಾಗಾದರೆ ಎಲ್ಲಾ ರಾಶಿಗಳಿಗೂ ಸೂರ್ಯಗ್ರಹಣವಾದರೆ ಏನು ಮಾಡಿಯಾರು ಹಾಗಾಗುವ ಸಂಧರ್ಬವೇನಾದರೂ ಇದ್ದೀಯೇನು ? ಮೇಲೆ ಹೇಳಿದಂತೆ ೨೬ರ ಜನವರಿಯಂದು ಕೇಡುಂಟಾಗುತ್ತದೆ ಎನ್ನುವ ಸ್ಲೋಗನ್ಗಳು ಬರೇ ಜನರು ಇಂಥ ಸಂಧರ್ಭಗಳ ಬಳಸಿಕೊಳ್ಳುವ ರೆವೆನ್ಯೂಗಳೆಂದೇ ಅರ್ಥ.
ಒಂದು ಕಾಲ ಒಬ್ಬ ಪ್ರಸಿದ್ದ ಪಂಚಾಂಗ ಕರ್ತೃ ಪಂಡಿತ ನಾಗರಾಜರವರು ( ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಪರಿಚಯವಿರಬಹುದು, ಸುಳ್ಯ ಸಮೀಪದವರು ಅವರ ಸವಿವರವನ್ನು ಮತ್ತೊಮ್ಮೆ ಬರೆಯುತ್ತೇನೆ) ಇಂದು ಏನು ಪ್ರತಿಪಾದಿಸುತ್ತಾರೆಂದು ಯಾರಾದರೂ ಕೇಳಿದರೆ ಎಂಥಹ ಜ್ಯೋತಿಷ್ಯ ಭವಿಷ್ಯವನ್ನು ಖಂಡ ತುಂಡವಾಗಿ ಹೀಗೆ ನಡೆಯುತ್ತದೆಂದು ಹೇಳುವವನು ಒಮ್ಮೆ ಮ್ಯೆಬೆವರು ಒರೆಸಿಕೊಳ್ಳುತ್ತಾನೆ. ಅವರ ಸವಾಲಿಗೆ ೧೫ ವರ್ಷಗಳಿಂದಲೂ ಯಾವೊಬ್ಬ ಭವಿಷ್ಯಗಾರನು ಇದುವರೆಗೂ ೧೦ರಲ್ಲಿ ಏಳಕ್ಕೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಫಲ ಜ್ಯೋತಿಷ್ಯ ಶುಧ್ದ ಸುಳ್ಳು, ಅದನ್ನು ನಂಬಿಕೊಂಡು ಯಾವುದಾದರೂ ಕೆಲಸಕ್ಕೆ ಕ್ಯೆಹಾಕೀರಾ ಜೋಕೆ. ಇನ್ನೂ ಸೂರ್ಯಗ್ರಹಣದಲ್ಲಿ ರಾಶಿಗಳ ಮೇಲೆ ಆಗುವ ಪರಿಣಾಮವಂತು ಶುದ್ದ ಮೂರ್ಖ ವಿಷಯಗಳು. ಹಾಗೇನಾದರೂ ಇದರಲ್ಲಿ ಮುಳುಗಿ ತೇಲುವ ಮನುಷ್ಯನಿಗೆ ಏನಾದರೂ ಹೇಳಲು ಹೋದರೆ ಅವನು ತನ್ನ ನೆಗೆಟಿವ್ಗಳನ್ನು ಒಪ್ಪಿಕೊಳ್ಳದೇ ಅದೇ ಭದ್ರಕೋಟೆಯಲ್ಲಿ ಇರಲು ಇಷ್ಟಪಡುತ್ತಾನೆಯೇ ಹೊರತು, ಹೊರಬಂದು ತನ್ನ ಅಸ್ತಿತ್ವ ನಿಜವಾಗಲೂ ಏನು ಎಂದು ಒಮ್ಮೆಯೂ ಯೋಚಿಸಲಾರ.
ಫಲ ಜ್ಯೋತಿಷ್ಯ ಹಾಗೂ ಸೂರ್ಯಗ್ರಹಣದಲ್ಲಿ ಆಗುವ ರಾಶಿದೋಷಗಳು ನಿಜವೆಂದು ಹೇಳುವವರು ಆಧಾರ ಸಹಿತ ನಿರೂಪಿಸಲಿ ಹಾಗೂ ಸಾಧ್ಯವಾದರೆ ಇದೇ ವಿಚಾರವಾಗಿ ನಾ ಅವರ ಜೊತೆ ಎದುರು ವಾದಕ್ಕೂ ಸಿದ್ದ
ನಿಮ್ಮ ಅಭಿಪ್ರಾಯಗಳು ಮೂಡಿಬರಲಿ
ಸೂರ್ಯಗ್ರಹಣ ಆಗುವುದರ ಬಗ್ಗೆ ಅಥವಾ ಅದು ಗಣರಾಜ್ಯೋತ್ಸವದಂದೇ ಬೆಳ್ಳಂ ಬೆಳಿಗ್ಗೆ ಬರುವ ಬಗ್ಗೆ ಮಾತಲ್ಲಾ, ಆಸ್ತಿಕವಾದದ ಪ್ರಕಾರ ಸೂರ್ಯಗ್ರಹಣದಲ್ಲಿ ನಮ್ಮ ಹಿಂದೂಗಳ ಜನ್ಮರಾಶಿಗಳಾದ ವೃಶಭ, ಸಿಂಹ,ಮಿಥುನ,ಮೇಷ, ಕರ್ಕ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆಂದು ಎಲ್ಲಾ ಬೀದಿಗಳ ದೇವಸ್ಥಾನಗಳು ಶಾಂತಿಹೋಮ, ಯಾಗ ಮುಂತಾದ ರೆವಿನ್ಯೂ ಕಾರ್ಯಕ್ರಮಗಳ ಪಟ್ಟಿಯನ್ನೇ ಸಿದ್ದಪಡಿಸಿಟ್ಟಿರುವನ್ನು ಕಾಣಬಹುದು, ಆಕಾಶಕಾಯಗಳಲ್ಲಿ ನಡೆಯುವ ಪ್ರಕ್ರಿಯೆಗಳು ಮಾನವನ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತವೆ, ಅಲ್ಲವೇ ? ಅದರಲ್ಲೂ ಮೇಲೆ ಹೇಳುವ ೫ ರಾಶಿಗಳಲ್ಲಿ ಕೋಟ್ಯಾಂತರ ಜನ (ಜ್ಯೋತಿಷ್ಯದ ಪ್ರಕಾರ) ಇರಬಹುದು. ಹಾಗೆ ಪ್ರತಿ ಪ್ರದೇಶದಲ್ಲಿ (೧ ಕಿ.ಮೀ)ಇರುವ ದೇವಸ್ಥಾನಗಳ ಸರಾಸರಿ ಸಂಖ್ಯೆ ೫ ಎಂದು ತೆಗೆದುಕೊಂಡರು ಅದೇ ಪ್ರದೇಶದಲ್ಲಿ ಮೇಲಿನ ರಾಶಿಯ ಜನರು ಸುಮಾರು ೫೦೦೦ ಜನ ಸಿಗಬಹುದು, ಪ್ರತಿ ಶಾಂತಿಹೋಮಕ್ಕೆ ಸರಾಸರಿ ೨೫೦ ರೂಪಾಯಿಯನ್ನು ತೆಗೆದುಕೊಂಡು ಲೆಕ್ಕ ಹಾಕಿದರೂ ಇಂಥ ಮತ್ತೊಂದು ದೇವಸ್ಥಾನವನ್ನು ಕಟ್ಟಲಡ್ಡಿಯಿಲ್ಲ.
ಇಲ್ಲಿ ಪ್ರಾಣಿ ಪಕ್ಷಿಗಳ ಮೇಲೆ ಆಗದ ಪರಿಣಾಮ ಮನುಷ್ಯನಿಗೆ ಮಾತ್ರವೇ ಹೇಗೆ ಸಾಧ್ಯ ? ಹಾಗೊಂದು ವೇಳೆ ನಮ್ಮ ಆಸ್ಥಿಕ ಮಹಾಶಯರು ಪ್ರಾಣಿ ಪಕ್ಷಿಗಳ ಮೇಲು ಅದರ ಪರಿಣಾಮ ಆಗುತ್ತದೆ ಎನ್ನುವುದಾದರೆ ಅವುಗಳ ಜನ್ಮ ಸಮಯದಲ್ಲಿ ಯಾವ ನಕ್ಷತ್ರ, ಯಾವ ರಾಶಿಯಲ್ಲಿ ಜನನವೆಂದು ದತ್ತಾಂಶವನ್ನೇನಾದರೂ ಇಟ್ಟಿದ್ದಾರೆನು ? ಹಾಗಿದ್ದೂ ಆಸ್ಥಿಕವಾದದ ಕೆಲವು ಪ್ರಶ್ನೆಗಳು ಅಸ್ಥಿತ್ವವನ್ನೇ ಉಳಿಸಿಕೊಳ್ಳದೆ ನೀಡುವ ನೆಪಗಳಿಗೆ ಯಾವ ಆಧಾರವಿದೆ. ಸೂರ್ಯಗ್ರಹಣದ ಪರಿಣಾಮ ಆ ಸಮಯದಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗೆ ವಸ್ತುಗಳ ಮೇಲೆ ಅಥವಾ ಮನುಷ್ಯನ ಚರ್ಮದ ಮೇಲೆ ಉಂಟಾಗುವ ಚರ್ಮರೋಗಕ್ಕೆ ದಾರಿಯಾಗಬಹುದು ಅಷ್ಟೆ. ಹಾಗೇ ಉಂಟಾಗುವ ರಾಸಾಯನಿಕ ಪ್ರಕ್ರಿಯೆಯು ಆಸ್ಥಿಕವಾದದಲ್ಲೇ ಯೋಚಿಸುವುದಾದರೆ ಬರೇ ವೃಶಭ, ಸಿಂಹ,ಮಿಥುನ,ಮೇಷ, ಕರ್ಕ ರಾಶಿಗಳ ಮೇಲೆ ಮಾತ್ರವೇನು? ಅದರ ಅಫಘಾತ ಹುಡುಕಿಕೊಂಡು ಹೋಗಿ ಇದೇ ರಾಶಿಯಲ್ಲಿ ಹುಟ್ಟಿದ ಜನರಿಗೆ ಮಾತ್ರವೇ ಹೇಗೆ ?
ಒಂದು ಒಳಿತು ಕೆಡಕು ಎನ್ನುವುದೇ ಆದರೆ ಅದು ಎಲ್ಲರಿಗೂ ಪರಿಣಾಮವೇ ಅಲ್ಲವೇ ? ಉದಾ : ಒಂದು ಮನೆಯಲ್ಲಿ ನಡುರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಹತ್ತುಕೊಂಡಿರುತ್ತದೆ, ಆಗ ಅದರ ಮುನ್ಸೂಚನೆಯನ್ನು ಯಾರು ಮೊದಲು ಕಾಣುವರು ಅವರು ಇತರರನ್ನು ರಕ್ಷಿಸುತ್ತಾ ತಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಅಲ್ಲವೇ ? ಆ ಬೆಂಕಿಯೂ ಸಹ ಇವರನ್ನೇ ಸುಡಬೇಕು ಎಂದು ಯಾವ ಈರ್ಷೆಯನ್ನು ಇರಿಸಿಕೊಳ್ಳದೆ ಇರುತ್ತದಲ್ಲವೇ ? ಇವುಗಳು ಆಕಸ್ಮಿಕ ಅಫಘಾತಕ್ಕೆ ಉದಾಹರಣೆಯಾದರೆ ಇನ್ನೂ ರಾಶಿ ಫಲಗಳ ಬಗ್ಗೆ ಯೋಚಿಸಿದಾಗ ಎಷ್ಟೊ ವಿಚಾರಗಳು ಹಾಸ್ಯಸ್ಪದವಾಗಿ ಕಾಣುತ್ತಿರುತ್ತವೆ,
ನೀವು ರಾಶಿಫಲವನ್ನು ನಂಬುವವರಾದರೆ ಇವತ್ತು ಯಾವುದೋ ಪತ್ರಿಕೆಯಲ್ಲಿ ನಿಮ್ಮ ರಾಶಿಯಲ್ಲಿ ಧನಲಾಭ, ಸಹೋದರರಿಂದ ಕೇಡು, ವೃತ್ತಿಯಲ್ಲಿ ಕಿರಿಕಿರಿ ಎಂಬುದನ್ನು ನಿಮ್ಮ ರಾಶಿಗ ಕೊಟ್ಟಿರುವ ಗ್ರಹಫಲವೆಂದುಕೊಳ್ಳಿ. ಅದೇ ದಿನ ಮತ್ಯಾವುದೋ ಪತ್ರಿಕೆಯನ್ನು ತೆಗೆದು ಅೇ ರಾಶಿಯ ಬಗ್ಗೆ ಕಣ್ಣಾಡಿಸಿದರೆ ಅಲ್ಲಿ ಗೃಹದಲ್ಲಿ ನೆಮ್ಮದಿ, ಕೋರ್ಟು ಕಛೇರಿ ಕೆಲಸದಲ್ಲಿ ಪ್ರಗತಿ, ಮಿತಮೀರಿದ ಖರ್ಜು ಎಂದಿರುತ್ತದೆ, ಸಾಮಾನ್ಯವಾಗಿ ನೀವುಗಳು ನಂಬುವ ಎಸ್. ಕೆ. ಜ್ಯೆನ್, ಶಂಕರ ನಾರಾಯಣ್, ಸೋಮಯಾಜಿಲು, ಅಥವಾ ಇನ್ಯಾವುದೇ ಜ್ಯೋತಿಷ್ಯ ಶಾಸ್ತ್ರ ಪರಿಣಿತರು ಇದೇ ರಾಶಿ ಕುಂಡಲಿಗಳನ್ನು ತಮ್ಮ ಅನುಭವಕ್ಕೆ, ಅಥವಾ ತಮ್ಮ ಜ್ನಾನಾನುಸಾರವಾಗಿ ಹೇಳಿದರೂ ಕೊನೆಗವರು ಹೇಳುವ ಕೆಟ್ಟ ಪರಿಣಾಮಗಳು ಆಗಬಹುದು ಎನ್ನುವುದರ ಜೊತೆಗೆ ಒಂದಿಷ್ಟು ಹೋಮ ಹವನಗಳನ್ನು ಮತ್ಯಾವುದೋ ಶಾಂತಿ, ಸಂಸ್ಕಾರವನ್ನೋ ತಿಳಿಸುತ್ತಾರೆ, ಹಾಗಿದ್ದರೂ ನಾವೇನಾದ್ರೂ ಪ್ರಶ್ನಿಸಿದರೆ ಅದಕ್ಕೆ ಜ್ಯೋತಿಷ್ಯ ಶಾಸ್ತ್ರವು ಒಂದು ವಿಜ್ಣಾನ, ಅದು ಗಣಿತ ಹಾಗೂ ವಿಜ್ಣಾನದ ತಳಹದಿಯನ್ನೇ ನಂಬಿರುತ್ತದೆ ಎನ್ನುವ ಸಿದ್ದ ಉತ್ತರ ಸಿಕ್ಕಿರುತ್ತದೆ, ಹಾಗಾದರೆ ಜ್ಯೋತಿಷ್ಯ ವಿಜ್ಣಾನ ಹಾಗೂ ಗಣಿತಗಳ ತಳಹದಿಯೆಂದು ನಂಬೋಣ. ಅದರಲ್ಲಿ ನಮ್ಮ ಊಹೆಗೆ ನಿಲುಕದ ಎಷ್ಟೂ ಅವಘಡಗಳು ಸಂಭವಿಸುತ್ತದೆ ಎಂದು ನಂಬೋಣ. ಹಾಗಾದರೆ ಜ್ಯೋತಿಷ್ಯ ಹಾಗೂ ಭವಿಷ್ಯಗಳು ಬೇರೆ ಬೇರೆ ಎಂದಾಯಿತು.
ಜ್ಯೋತಿಷ್ಯ ಹಾಗೂ ಭವಿಷ್ಯ ಬೇರೆ ಬೇರೆಯಾದರೆ ಭವಿಷ್ಯಕ್ಕೆ ಯಾವುದೇ ತಳಹದಿ ಇಲ್ಲ ಎನ್ನುವುದು ಖಚಿತ. ಇಲ್ಲಿ ಜ್ಯೋತಿಷ್ಯ ಎಂದರೆ ಎಲ್ಲರೂ ತಮ್ಮ ತಮ್ಮ ಜನ್ಮ ನಕ್ಷತ್ರಕ್ಕೆ ಬರುವ ಕಂಟಕಗಳನ್ನು ಮುನ್ಸೂಚಿಸುವದೇ ಜ್ಯೋತಿಷ್ಯ ಎಂಬ ತಪ್ಪು ಕಲ್ಪನೆಯನ್ನೇ ನಂಬಿದ್ದಾರೆ, ಅಲ್ಲವೇ ? ಎಲ್ಲರ ಭವಿಷ್ಯವೂ ಒಂದೇ ತೆರನಾದವು ಎಂದು ಯಾರಾದರೂ ಹೇಳುವ ಧ್ಯೆರ್ಯ ಮಾಡಿಯಾರೇನು ? ಸಾಧ್ಯವಿಲ್ಲ, ಹಾಗಾದರೆ ಎಲ್ಲಾ ರಾಶಿಗಳಿಗೂ ಸೂರ್ಯಗ್ರಹಣವಾದರೆ ಏನು ಮಾಡಿಯಾರು ಹಾಗಾಗುವ ಸಂಧರ್ಬವೇನಾದರೂ ಇದ್ದೀಯೇನು ? ಮೇಲೆ ಹೇಳಿದಂತೆ ೨೬ರ ಜನವರಿಯಂದು ಕೇಡುಂಟಾಗುತ್ತದೆ ಎನ್ನುವ ಸ್ಲೋಗನ್ಗಳು ಬರೇ ಜನರು ಇಂಥ ಸಂಧರ್ಭಗಳ ಬಳಸಿಕೊಳ್ಳುವ ರೆವೆನ್ಯೂಗಳೆಂದೇ ಅರ್ಥ.
ಒಂದು ಕಾಲ ಒಬ್ಬ ಪ್ರಸಿದ್ದ ಪಂಚಾಂಗ ಕರ್ತೃ ಪಂಡಿತ ನಾಗರಾಜರವರು ( ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಪರಿಚಯವಿರಬಹುದು, ಸುಳ್ಯ ಸಮೀಪದವರು ಅವರ ಸವಿವರವನ್ನು ಮತ್ತೊಮ್ಮೆ ಬರೆಯುತ್ತೇನೆ) ಇಂದು ಏನು ಪ್ರತಿಪಾದಿಸುತ್ತಾರೆಂದು ಯಾರಾದರೂ ಕೇಳಿದರೆ ಎಂಥಹ ಜ್ಯೋತಿಷ್ಯ ಭವಿಷ್ಯವನ್ನು ಖಂಡ ತುಂಡವಾಗಿ ಹೀಗೆ ನಡೆಯುತ್ತದೆಂದು ಹೇಳುವವನು ಒಮ್ಮೆ ಮ್ಯೆಬೆವರು ಒರೆಸಿಕೊಳ್ಳುತ್ತಾನೆ. ಅವರ ಸವಾಲಿಗೆ ೧೫ ವರ್ಷಗಳಿಂದಲೂ ಯಾವೊಬ್ಬ ಭವಿಷ್ಯಗಾರನು ಇದುವರೆಗೂ ೧೦ರಲ್ಲಿ ಏಳಕ್ಕೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಫಲ ಜ್ಯೋತಿಷ್ಯ ಶುಧ್ದ ಸುಳ್ಳು, ಅದನ್ನು ನಂಬಿಕೊಂಡು ಯಾವುದಾದರೂ ಕೆಲಸಕ್ಕೆ ಕ್ಯೆಹಾಕೀರಾ ಜೋಕೆ. ಇನ್ನೂ ಸೂರ್ಯಗ್ರಹಣದಲ್ಲಿ ರಾಶಿಗಳ ಮೇಲೆ ಆಗುವ ಪರಿಣಾಮವಂತು ಶುದ್ದ ಮೂರ್ಖ ವಿಷಯಗಳು. ಹಾಗೇನಾದರೂ ಇದರಲ್ಲಿ ಮುಳುಗಿ ತೇಲುವ ಮನುಷ್ಯನಿಗೆ ಏನಾದರೂ ಹೇಳಲು ಹೋದರೆ ಅವನು ತನ್ನ ನೆಗೆಟಿವ್ಗಳನ್ನು ಒಪ್ಪಿಕೊಳ್ಳದೇ ಅದೇ ಭದ್ರಕೋಟೆಯಲ್ಲಿ ಇರಲು ಇಷ್ಟಪಡುತ್ತಾನೆಯೇ ಹೊರತು, ಹೊರಬಂದು ತನ್ನ ಅಸ್ತಿತ್ವ ನಿಜವಾಗಲೂ ಏನು ಎಂದು ಒಮ್ಮೆಯೂ ಯೋಚಿಸಲಾರ.
ಫಲ ಜ್ಯೋತಿಷ್ಯ ಹಾಗೂ ಸೂರ್ಯಗ್ರಹಣದಲ್ಲಿ ಆಗುವ ರಾಶಿದೋಷಗಳು ನಿಜವೆಂದು ಹೇಳುವವರು ಆಧಾರ ಸಹಿತ ನಿರೂಪಿಸಲಿ ಹಾಗೂ ಸಾಧ್ಯವಾದರೆ ಇದೇ ವಿಚಾರವಾಗಿ ನಾ ಅವರ ಜೊತೆ ಎದುರು ವಾದಕ್ಕೂ ಸಿದ್ದ
ನಿಮ್ಮ ಅಭಿಪ್ರಾಯಗಳು ಮೂಡಿಬರಲಿ
ಒಂದು ಸುಂದರ ಪ್ರೇಮ ಪತ್ರ ಮತ್ತದರ ಒಕ್ಕಣೆಯ ಉತ್ತರ
ಒಬ್ಬ ತರುಣ ತನ್ನ ತರುಣಿಗೆ ಬರೆದ ಪ್ರೇಮಪತ್ರ ಪ್ರಶ್ನೆ ಹಾಗೂ ಉತ್ತರಗಳ ಸರಮಾಲೆ
ಆತ ಹೀಗೆ ಬರೆಯುತ್ತಾನೆ......
ನನ್ನ ಪ್ರೀತಿಯ ಅರುಂಧತಿ............
ದಯವಿಟ್ಟು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು, ಈ ಆಯ್ಕೆಗಳನ್ನು ಉಪಯೋಗಿಸಿ
(ಅ) ೧೦ ಅಂಕ
(ಆ) ೫ ಅಂಕ
(ಇ) ೩ ಅಂಕ
೧) ನೀನು ತರಗತಿಗೆ ಬಂದ ತಕ್ಷಣ ನಿನ್ನ ಕಣ್ಣುಗಳು ನನ್ನನ್ನೇ ಹುಡುಕುತ್ತವೆ, ಏಕೆಂದರೆ ….
(ಅ) ಪ್ರೀತಿ
(ಆ) ನೀನು ನನ್ನನ್ನು ನೋಡದೆ ಇರಲಾಗುವುದಿಲ್ಲ
(ಇ) ನಿಜವಾಗಲು ನೀ ಇದನ್ನೇ ಮಾಡುತ್ತಿದ್ದೀಯಾ
೨) ಯಾವಾಗಲಾದರೂ ಪ್ರಾಧ್ಯಾಪಕರು ಹಾಸ್ಯ ಮಾಡಿದಾಗ, ನೀನು ನಗುತ್ತಾ ನನ್ನ ಕಡೆಗೆ ತಿರುಗುತ್ತೀಯಾ, ಏಕೆಂದರೆ…….
(ಅ) ನೀನು ಯಾವಾಗಲೂ ನನ್ನನ್ನೇ ನೋಡುತ್ತಿರಲು ಇಚ್ಚಿಸುತ್ತೀಯಾ
(ಆ) ನೀನು ನನಗೆ ಹಾಸ್ಯಗಳು ಇಷ್ಟವೋ ಇಲ್ಲವೋ ಎಂದು ಪರೀಕ್ಷಿಸುತ್ತೀಯಾ
(ಇ) ನೀನು ನನ್ನ ನಗುವಿಗಿಗಾಗಿ ಹಾತೊರೆಯುತ್ತೀಯಾ
೩) ನೀನು ತರಗತಿಯಲ್ಲಿ ಹಾಡುವಾಗ, ನಾನು ತರಗತಿಗೆ ಬಂದರೆ ತಕ್ಷಣ ಹಾಡುವುದ ನಿಲ್ಲಿಸುತ್ತೀಯಾ, ಏಕೆಂದರೆ……….
(ಅ) ನೀನಗೆ ನನ್ನ ಮುಂದೆ ಹಾಡಲು ತುಂಬಾ ನಾಚಿಕೆ
(ಆ) ನನ್ನ ಆಗಮನದಿಂದ ಸ್ಪೂರ್ತಿಗಾಗಿ
(ಇ) ನೀನು ನನಗೆ ಹಾಡುಗಳು ಇಷ್ಟವಾಗುತ್ತವೋ ಇಲ್ಲವೋ ಎನ್ನುವ ಭಯದಿಂದ
೪) ನೀ ಮಗುವಾಗಿದ್ದಾಗ ತೆಗೆಸಿದ ಪೋಟೋಗಳನ್ನು ತೋರಿಸುವಾಗ, ನನಗೊಂದು ಕೊಡೆಂದು ಕೇಳಿದರೆ ನೀನು ಮುಚ್ಚಿಟ್ಟುಕೊಳ್ಳುತ್ತೀಯಾ. ಏಕೆಂದರೆ………
(ಅ) ನಿನಗೆ ನಾಚಿಕೆಯಾಗುತ್ತದೆ,
(ಆ) ನಿನಗೆ ಕಷ್ಟವಾಗುತ್ತದೆ
(ಇ) ನಿನಗೇನು ಗೊತ್ತಿಲ್ಲ
೫) ನಾವೆಲ್ಲರೂ ಪ್ರವಾಸ ಹೋಗಿದ್ದಾಗ, ನಾನು ಮತ್ತು ನನ್ನ ಗೆಳೆಯ ನಿನಗೆ ಬೆಟ್ಟ ಹತ್ತಲು ಸಹಾಯವಾಗಿ ಕ್ಯೆ ನೀಡಿದಾಗ, ನೀನು ನನ್ನ ಗೆಳೆಯನ ಕ್ಯೆ ಹಿಡಿಯುತ್ತೀಯಾ. ಏಕೆಂದರೆ
(ಅ) ನೀನು ನನಗೆ ದುಃಖ ಕೊಡಲು ಇಷ್ಟಪಡುತ್ತೀಯಾ.
(ಆ) ನೀನು ಬೆಟ್ಟವನ್ನು ಹತ್ತಿದ ಮೇಲೆ ನನ್ನ ಕ್ಯೆಬಿಡಲು ಇಷ್ಟಪಡುವುದಿಲ್ಲ
(ಇ) ನಿನಗೆ ಗೊತ್ತಿಲ್ಲ
೬) ನೀನು ನೆನ್ನೆ ನಿನ್ನ ಮನೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದೆ, ಆದರೆ ನೀನು ಬಸ್ಸ್ ಬಂದರೂ ಹತ್ತಲಿಲ್ಲ
(ಅ) ನೀನು ನನಗಾಗಿ ಕಾಯುತ್ತಿದ್ದೆ
(ಆ) ನೀನು ನನ್ನ ಕನಸನ್ನೇ ಕಾಣುತ್ತಿದ್ದೆ, ಆದ್ದರಿಂದ ಬಸ್ಸ್ ಬಂದಿದ್ದು ಗೊತ್ತಾಗಲಿಲ್ಲ
(ಇ) ಬಸ್ಸ್ ತುಂಬಾ ಜನ ಇದ್ದು, ನನ್ನೊಂದಿಗೆ ಬ್ಯೆಕ್ನಲ್ಲಿ ಹೋಗಲು
೭) ನೀನು ನಿನ್ನ ತಂದೆ-ತಾಯಿಗಳಿಗೆ ನನ್ನನ್ನು ಪರಿಚಯಿಸಿದೆ. ಏಕೆಂದರೆ……
(ಅ) ನಾನು ನಿಮ್ಮ ಮನೆಯ ಭಾವಿ ಅಳಿಯ
(ಆ) ನಿನಗೆ ನನ್ನ ವಿಷಯವಾಗಿ ನಿನ್ನ ತಂದೆ- ತಾಯಿಯ ಅಭಿಪ್ರಾಯ ಕೇಳಲು
(ಇ) ನೀನು ಕೇವಲ ನಿನ್ನ ತಂದೆ-ತಾಯಿಯನ್ನು ನನಗೆ ಪರಿಚಯಿಸಲು
(೮) ನಾನು ಗುಲಾಬಿ ಹೂ ಮುಡಿದ ಹುಡುಗಿಯರು ನನಗಿಷ್ಟ ಎಂದೆ, ಮಾರನೇ ದಿನ, ನಿನ್ನ ಮುಡಿಯಲ್ಲೂ ಗುಲಾಬಿ ಹೂ ಏರಿತ್ತು. ಏಕೆಂದರೆ…….
(ಅ) ನನ್ನ ಅಭಿನಂದನೆಗಾಗಿ
(ಆ) ನೀನು ಸಹ ಗುಲಾಬಿ ಹೂ ಇಷ್ಟಪಡುತ್ತೀಯಾ
(ಇ) ಆಕಸ್ಮಿಕವಾಗಿ ನಿನಗೆ ಗುಲಾಬಿ ಹೂ ಸಿಕ್ಕಿತ್ತು
(೯) ಆ ದಿನ, ನನ್ನ ಹುಟ್ಟುಹಬ್ಬಕ್ಕೆ ನೀನು ಸಹ ದೇವಸ್ಥಾನಕ್ಕೆ ೬ ಘಂಟೆಗೆಲ್ಲ ಬಂದಿದ್ದೆ. ಏಕೆಂದರೆ
(ಅ) ನಿನಗೆ ನನ್ನ ಜೊತೆಯಲ್ಲಿ ದೇವರಿಗೆ ಪ್ರಾರ್ಥನೆ ಮಾಡಬೇಕೆನಿಸಿತ್ತು
(ಆ) ಬೇರೆಯವರು ಶುಭಾಶಯ ತಿಳಿಸುವ ಮೊದಲು ನೀನು ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುವ ಸಲುವಾಗಿ
(ಇ) ನೀನು ಆಸ್ಥಿಕಳಾಗಿದ್ದುದ್ದರಿಂದ ದೇವಸ್ಥಾನದಲ್ಲಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು.
ಈ ಮೇಲಿನ ಪ್ರಶ್ನೆಗಳಿಗೆ ನೀನು ೪೦ಕ್ಕಿಂತ ಹೆಚ್ಚಿನ ನೀನು ಹೆಚ್ಚಾಗಿ ನನ್ನನು ಪ್ರೀತಿಸುತ್ತೀಯಾ. ನೀನು ೩೦ಕ್ಕಿಂತಾ ಹೆಚ್ಚು ಅಥವ ೪೦ಕ್ಕಿಂತಾ ಕಡಿಮೆ ಅಂಕಗಳಿಸಿದ್ದರೆ, ನನ್ನ ಮೇಲಿನ ಪ್ರೀತಿ ನಿನ್ನನ್ನು ಆಕರ್ಷಿಸುತ್ತಿದೆ, ಅಥವಾ ೩೦ಕ್ಕಿಂತಾ ಕಡಿಮೆ ಅಂಕಗಳಿಸಿದ್ದರೆ ನಾನು ಸಹ ನಿನ್ನನ್ನು ಪ್ರೀತಿಸುತ್ತೀನೋ ಇಲ್ಲವೋ ಗೊಂದಲದಲ್ಲಿದ್ದೀಯಾ . ನಿನ್ನ
ಉತ್ತರವನ್ನು ಬೇಗ ತಿಳಿಸು.
ಕಾಯುತಿರುವೆ ನಿನಗಾಗಿ ಅರವಿಂದ್
ಅರುಂಧತಿ ಉತ್ತರಿಸದ ರೀತಿ ಅದು ಪ್ರಶ್ನೆ ಹಾಗೂ ಉತ್ತರದ ರೂಪದಲ್ಲಿ
ಹಲೋ ಅರವಿಂದ್
ದಯವಿಟ್ಟು ಕೆಳಗಿನ ಪ್ರಶ್ನೆಗಳಿಗೆ ಹೌದು/ಇಲ್ಲಾ ಎಂದು ತಿಳಿಸು
೧) ಯಾರೇ ಆದರೂ ತರಗತಿಯ ಮೊದಲ ಬೆಂಚಿನಲ್ಲಿ ಕುಳಿತಿದ್ದರೆ, ತರಗತಿಗೆ ಬಂದಾಗ ಅವರನ್ನು ನೋಡುವುದು ಸಹಜ ?
(ಅ) ಹೌದು (ಆ) ಇಲ್ಲ
೨) ಒಂದು ಹುಡುಗಿ ನಗುತ್ತಾ ಯಾರನ್ನಾದರೂ ನೋಡಿದರೆ, ಅದೇ ಏನು ಪ್ರೀತಿ ?
(ಅ) ಹೌದು (ಆ) ಇಲ್ಲ
೩) ಯಾರದರೂ ಹಾಡುತ್ತಿದ್ದರೆ ತಕ್ಷಣಕ್ಕೆ ಕೆಲವು ಸಾಲುಗಳು ಮರೆತರೆ ಹಾಡುವುದನ್ನು ನಿಲ್ಲಿಸುತ್ತಾರೆ ಅಲ್ಲವೇ ?
(ಅ) ಹೌದು (ಆ) ಇಲ್ಲ
೪) ನಾನು ನನ್ನ ಗೆಳತಿಗೆ ನನ್ನ ಪೋಟೊಗಳನ್ನು ತೋರಿಸುತ್ತಿದ್ದಾಗ, ನೀನು ಮೂಗು ತೂರಿಸಿದೆ ?
(ಅ) ಹೌದು (ಆ) ಇಲ್ಲ
೫) ನಾನು ಬೇಕೆಂತಲೇ ಬೆಟ್ಟವನ್ನು ಹತ್ತುವಾಗ ನಿನ್ನ ಸಹಾಯ ಕೇಳಲಿಲ್ಲ, ಇನ್ನೂ ನಿನಗೆ ಅರ್ಥವಾಗಲಿಲ್ಲವೇ ?
(ಅ) ಹೌದು (ಆ) ಇಲ್ಲ
೬) ನಾನು ನನ್ನ ಗೆಳತಿ ಅಂಜಲಿಗಾಗಿ ಬಸ್ಸ್ ನಿಲ್ದಾಣದಲ್ಲಿ ಕಾಯಬಾರದೇ ?
(ಅ) ಹೌದು (ಆ) ಇಲ್ಲ
೭) ನಾನು ನಿನ್ನನ್ನು ನನ್ನ ತಂದೆ-ತಾಯಿಯರಿಗೆ ಗೆಳೆಯನೆಂದು ಪರಿಚಯಿಸಲೇಬಾರದೇ ?
(ಅ) ಹೌದು (ಆ) ಇಲ್ಲ
೮) ನೀನು ತಾವರೆ, ಹೂಕೋಸು, ಬಾಳೆಹಣ್ಣನ್ನು ಇಷ್ಟಪಡುತ್ತೀನಿ ಅಂದಿದ್ದೆ, ಹೌದಲ್ವೇ ?
(ಅ) ಹೌದು (ಆ) ಇಲ್ಲ
೯) ಅಯ್ಯೋ, ಅಂದು ನಿನ್ನ ಹುಟ್ಟುಹಬ್ಬವೇ ? ಆದ್ದರಿಂದ ನಿನ್ನನ್ನು ದೇವಸ್ಥಾನದಲ್ಲಿ ನಾ ನೋಡಿದೆ, ನಾನು ಪ್ರತಿದಿನ ದೇವಸ್ಥಾನಕ್ಕೆ ಅದೇ ಸಮಯಕ್ಕೆ ಹೋಗುತ್ತೇನೆ, ನಿನಗಿದು ಗೊತ್ತೆ ?
(ಅ) ಹೌದು (ಆ) ಇಲ್ಲ
ಈ ಮೇಲಿನೆ ಎಲ್ಲಾ ಪ್ರಶ್ನೆಗಳಿಗೆ ನಿನ್ನ ಉತ್ತರ ಹೌದು ಎನ್ನುವುದಾದರೆ "ನಾನು ನಿನ್ನನ್ನು ಪ್ರೀತಿಸುತ್ತಿಲ್ಲ, ಅಥವಾ ಎಲ್ಲ ಪ್ರಶ್ನೆಗಳು ನಿನ್ನ ಉತ್ತರ ಇಲ್ಲಾ ಎನ್ನುವುದಾದರೆ "ನಿನಗೆ ಪ್ರೀತಿಯ ಅರ್ಥವೇ ಗೊತ್ತಿಲ್ಲಾ"
(ಭಾಗಶ: ಎಲ್ಲವೂ ನಿಶೇಷವಾಗಿದೆ ಈಗ)
ಆತ ಹೀಗೆ ಬರೆಯುತ್ತಾನೆ......
ನನ್ನ ಪ್ರೀತಿಯ ಅರುಂಧತಿ............
ದಯವಿಟ್ಟು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು, ಈ ಆಯ್ಕೆಗಳನ್ನು ಉಪಯೋಗಿಸಿ
(ಅ) ೧೦ ಅಂಕ
(ಆ) ೫ ಅಂಕ
(ಇ) ೩ ಅಂಕ
೧) ನೀನು ತರಗತಿಗೆ ಬಂದ ತಕ್ಷಣ ನಿನ್ನ ಕಣ್ಣುಗಳು ನನ್ನನ್ನೇ ಹುಡುಕುತ್ತವೆ, ಏಕೆಂದರೆ ….
(ಅ) ಪ್ರೀತಿ
(ಆ) ನೀನು ನನ್ನನ್ನು ನೋಡದೆ ಇರಲಾಗುವುದಿಲ್ಲ
(ಇ) ನಿಜವಾಗಲು ನೀ ಇದನ್ನೇ ಮಾಡುತ್ತಿದ್ದೀಯಾ
೨) ಯಾವಾಗಲಾದರೂ ಪ್ರಾಧ್ಯಾಪಕರು ಹಾಸ್ಯ ಮಾಡಿದಾಗ, ನೀನು ನಗುತ್ತಾ ನನ್ನ ಕಡೆಗೆ ತಿರುಗುತ್ತೀಯಾ, ಏಕೆಂದರೆ…….
(ಅ) ನೀನು ಯಾವಾಗಲೂ ನನ್ನನ್ನೇ ನೋಡುತ್ತಿರಲು ಇಚ್ಚಿಸುತ್ತೀಯಾ
(ಆ) ನೀನು ನನಗೆ ಹಾಸ್ಯಗಳು ಇಷ್ಟವೋ ಇಲ್ಲವೋ ಎಂದು ಪರೀಕ್ಷಿಸುತ್ತೀಯಾ
(ಇ) ನೀನು ನನ್ನ ನಗುವಿಗಿಗಾಗಿ ಹಾತೊರೆಯುತ್ತೀಯಾ
೩) ನೀನು ತರಗತಿಯಲ್ಲಿ ಹಾಡುವಾಗ, ನಾನು ತರಗತಿಗೆ ಬಂದರೆ ತಕ್ಷಣ ಹಾಡುವುದ ನಿಲ್ಲಿಸುತ್ತೀಯಾ, ಏಕೆಂದರೆ……….
(ಅ) ನೀನಗೆ ನನ್ನ ಮುಂದೆ ಹಾಡಲು ತುಂಬಾ ನಾಚಿಕೆ
(ಆ) ನನ್ನ ಆಗಮನದಿಂದ ಸ್ಪೂರ್ತಿಗಾಗಿ
(ಇ) ನೀನು ನನಗೆ ಹಾಡುಗಳು ಇಷ್ಟವಾಗುತ್ತವೋ ಇಲ್ಲವೋ ಎನ್ನುವ ಭಯದಿಂದ
೪) ನೀ ಮಗುವಾಗಿದ್ದಾಗ ತೆಗೆಸಿದ ಪೋಟೋಗಳನ್ನು ತೋರಿಸುವಾಗ, ನನಗೊಂದು ಕೊಡೆಂದು ಕೇಳಿದರೆ ನೀನು ಮುಚ್ಚಿಟ್ಟುಕೊಳ್ಳುತ್ತೀಯಾ. ಏಕೆಂದರೆ………
(ಅ) ನಿನಗೆ ನಾಚಿಕೆಯಾಗುತ್ತದೆ,
(ಆ) ನಿನಗೆ ಕಷ್ಟವಾಗುತ್ತದೆ
(ಇ) ನಿನಗೇನು ಗೊತ್ತಿಲ್ಲ
೫) ನಾವೆಲ್ಲರೂ ಪ್ರವಾಸ ಹೋಗಿದ್ದಾಗ, ನಾನು ಮತ್ತು ನನ್ನ ಗೆಳೆಯ ನಿನಗೆ ಬೆಟ್ಟ ಹತ್ತಲು ಸಹಾಯವಾಗಿ ಕ್ಯೆ ನೀಡಿದಾಗ, ನೀನು ನನ್ನ ಗೆಳೆಯನ ಕ್ಯೆ ಹಿಡಿಯುತ್ತೀಯಾ. ಏಕೆಂದರೆ
(ಅ) ನೀನು ನನಗೆ ದುಃಖ ಕೊಡಲು ಇಷ್ಟಪಡುತ್ತೀಯಾ.
(ಆ) ನೀನು ಬೆಟ್ಟವನ್ನು ಹತ್ತಿದ ಮೇಲೆ ನನ್ನ ಕ್ಯೆಬಿಡಲು ಇಷ್ಟಪಡುವುದಿಲ್ಲ
(ಇ) ನಿನಗೆ ಗೊತ್ತಿಲ್ಲ
೬) ನೀನು ನೆನ್ನೆ ನಿನ್ನ ಮನೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದೆ, ಆದರೆ ನೀನು ಬಸ್ಸ್ ಬಂದರೂ ಹತ್ತಲಿಲ್ಲ
(ಅ) ನೀನು ನನಗಾಗಿ ಕಾಯುತ್ತಿದ್ದೆ
(ಆ) ನೀನು ನನ್ನ ಕನಸನ್ನೇ ಕಾಣುತ್ತಿದ್ದೆ, ಆದ್ದರಿಂದ ಬಸ್ಸ್ ಬಂದಿದ್ದು ಗೊತ್ತಾಗಲಿಲ್ಲ
(ಇ) ಬಸ್ಸ್ ತುಂಬಾ ಜನ ಇದ್ದು, ನನ್ನೊಂದಿಗೆ ಬ್ಯೆಕ್ನಲ್ಲಿ ಹೋಗಲು
೭) ನೀನು ನಿನ್ನ ತಂದೆ-ತಾಯಿಗಳಿಗೆ ನನ್ನನ್ನು ಪರಿಚಯಿಸಿದೆ. ಏಕೆಂದರೆ……
(ಅ) ನಾನು ನಿಮ್ಮ ಮನೆಯ ಭಾವಿ ಅಳಿಯ
(ಆ) ನಿನಗೆ ನನ್ನ ವಿಷಯವಾಗಿ ನಿನ್ನ ತಂದೆ- ತಾಯಿಯ ಅಭಿಪ್ರಾಯ ಕೇಳಲು
(ಇ) ನೀನು ಕೇವಲ ನಿನ್ನ ತಂದೆ-ತಾಯಿಯನ್ನು ನನಗೆ ಪರಿಚಯಿಸಲು
(೮) ನಾನು ಗುಲಾಬಿ ಹೂ ಮುಡಿದ ಹುಡುಗಿಯರು ನನಗಿಷ್ಟ ಎಂದೆ, ಮಾರನೇ ದಿನ, ನಿನ್ನ ಮುಡಿಯಲ್ಲೂ ಗುಲಾಬಿ ಹೂ ಏರಿತ್ತು. ಏಕೆಂದರೆ…….
(ಅ) ನನ್ನ ಅಭಿನಂದನೆಗಾಗಿ
(ಆ) ನೀನು ಸಹ ಗುಲಾಬಿ ಹೂ ಇಷ್ಟಪಡುತ್ತೀಯಾ
(ಇ) ಆಕಸ್ಮಿಕವಾಗಿ ನಿನಗೆ ಗುಲಾಬಿ ಹೂ ಸಿಕ್ಕಿತ್ತು
(೯) ಆ ದಿನ, ನನ್ನ ಹುಟ್ಟುಹಬ್ಬಕ್ಕೆ ನೀನು ಸಹ ದೇವಸ್ಥಾನಕ್ಕೆ ೬ ಘಂಟೆಗೆಲ್ಲ ಬಂದಿದ್ದೆ. ಏಕೆಂದರೆ
(ಅ) ನಿನಗೆ ನನ್ನ ಜೊತೆಯಲ್ಲಿ ದೇವರಿಗೆ ಪ್ರಾರ್ಥನೆ ಮಾಡಬೇಕೆನಿಸಿತ್ತು
(ಆ) ಬೇರೆಯವರು ಶುಭಾಶಯ ತಿಳಿಸುವ ಮೊದಲು ನೀನು ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುವ ಸಲುವಾಗಿ
(ಇ) ನೀನು ಆಸ್ಥಿಕಳಾಗಿದ್ದುದ್ದರಿಂದ ದೇವಸ್ಥಾನದಲ್ಲಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು.
ಈ ಮೇಲಿನ ಪ್ರಶ್ನೆಗಳಿಗೆ ನೀನು ೪೦ಕ್ಕಿಂತ ಹೆಚ್ಚಿನ ನೀನು ಹೆಚ್ಚಾಗಿ ನನ್ನನು ಪ್ರೀತಿಸುತ್ತೀಯಾ. ನೀನು ೩೦ಕ್ಕಿಂತಾ ಹೆಚ್ಚು ಅಥವ ೪೦ಕ್ಕಿಂತಾ ಕಡಿಮೆ ಅಂಕಗಳಿಸಿದ್ದರೆ, ನನ್ನ ಮೇಲಿನ ಪ್ರೀತಿ ನಿನ್ನನ್ನು ಆಕರ್ಷಿಸುತ್ತಿದೆ, ಅಥವಾ ೩೦ಕ್ಕಿಂತಾ ಕಡಿಮೆ ಅಂಕಗಳಿಸಿದ್ದರೆ ನಾನು ಸಹ ನಿನ್ನನ್ನು ಪ್ರೀತಿಸುತ್ತೀನೋ ಇಲ್ಲವೋ ಗೊಂದಲದಲ್ಲಿದ್ದೀಯಾ . ನಿನ್ನ
ಉತ್ತರವನ್ನು ಬೇಗ ತಿಳಿಸು.
ಕಾಯುತಿರುವೆ ನಿನಗಾಗಿ ಅರವಿಂದ್
ಅರುಂಧತಿ ಉತ್ತರಿಸದ ರೀತಿ ಅದು ಪ್ರಶ್ನೆ ಹಾಗೂ ಉತ್ತರದ ರೂಪದಲ್ಲಿ
ಹಲೋ ಅರವಿಂದ್
ದಯವಿಟ್ಟು ಕೆಳಗಿನ ಪ್ರಶ್ನೆಗಳಿಗೆ ಹೌದು/ಇಲ್ಲಾ ಎಂದು ತಿಳಿಸು
೧) ಯಾರೇ ಆದರೂ ತರಗತಿಯ ಮೊದಲ ಬೆಂಚಿನಲ್ಲಿ ಕುಳಿತಿದ್ದರೆ, ತರಗತಿಗೆ ಬಂದಾಗ ಅವರನ್ನು ನೋಡುವುದು ಸಹಜ ?
(ಅ) ಹೌದು (ಆ) ಇಲ್ಲ
೨) ಒಂದು ಹುಡುಗಿ ನಗುತ್ತಾ ಯಾರನ್ನಾದರೂ ನೋಡಿದರೆ, ಅದೇ ಏನು ಪ್ರೀತಿ ?
(ಅ) ಹೌದು (ಆ) ಇಲ್ಲ
೩) ಯಾರದರೂ ಹಾಡುತ್ತಿದ್ದರೆ ತಕ್ಷಣಕ್ಕೆ ಕೆಲವು ಸಾಲುಗಳು ಮರೆತರೆ ಹಾಡುವುದನ್ನು ನಿಲ್ಲಿಸುತ್ತಾರೆ ಅಲ್ಲವೇ ?
(ಅ) ಹೌದು (ಆ) ಇಲ್ಲ
೪) ನಾನು ನನ್ನ ಗೆಳತಿಗೆ ನನ್ನ ಪೋಟೊಗಳನ್ನು ತೋರಿಸುತ್ತಿದ್ದಾಗ, ನೀನು ಮೂಗು ತೂರಿಸಿದೆ ?
(ಅ) ಹೌದು (ಆ) ಇಲ್ಲ
೫) ನಾನು ಬೇಕೆಂತಲೇ ಬೆಟ್ಟವನ್ನು ಹತ್ತುವಾಗ ನಿನ್ನ ಸಹಾಯ ಕೇಳಲಿಲ್ಲ, ಇನ್ನೂ ನಿನಗೆ ಅರ್ಥವಾಗಲಿಲ್ಲವೇ ?
(ಅ) ಹೌದು (ಆ) ಇಲ್ಲ
೬) ನಾನು ನನ್ನ ಗೆಳತಿ ಅಂಜಲಿಗಾಗಿ ಬಸ್ಸ್ ನಿಲ್ದಾಣದಲ್ಲಿ ಕಾಯಬಾರದೇ ?
(ಅ) ಹೌದು (ಆ) ಇಲ್ಲ
೭) ನಾನು ನಿನ್ನನ್ನು ನನ್ನ ತಂದೆ-ತಾಯಿಯರಿಗೆ ಗೆಳೆಯನೆಂದು ಪರಿಚಯಿಸಲೇಬಾರದೇ ?
(ಅ) ಹೌದು (ಆ) ಇಲ್ಲ
೮) ನೀನು ತಾವರೆ, ಹೂಕೋಸು, ಬಾಳೆಹಣ್ಣನ್ನು ಇಷ್ಟಪಡುತ್ತೀನಿ ಅಂದಿದ್ದೆ, ಹೌದಲ್ವೇ ?
(ಅ) ಹೌದು (ಆ) ಇಲ್ಲ
೯) ಅಯ್ಯೋ, ಅಂದು ನಿನ್ನ ಹುಟ್ಟುಹಬ್ಬವೇ ? ಆದ್ದರಿಂದ ನಿನ್ನನ್ನು ದೇವಸ್ಥಾನದಲ್ಲಿ ನಾ ನೋಡಿದೆ, ನಾನು ಪ್ರತಿದಿನ ದೇವಸ್ಥಾನಕ್ಕೆ ಅದೇ ಸಮಯಕ್ಕೆ ಹೋಗುತ್ತೇನೆ, ನಿನಗಿದು ಗೊತ್ತೆ ?
(ಅ) ಹೌದು (ಆ) ಇಲ್ಲ
ಈ ಮೇಲಿನೆ ಎಲ್ಲಾ ಪ್ರಶ್ನೆಗಳಿಗೆ ನಿನ್ನ ಉತ್ತರ ಹೌದು ಎನ್ನುವುದಾದರೆ "ನಾನು ನಿನ್ನನ್ನು ಪ್ರೀತಿಸುತ್ತಿಲ್ಲ, ಅಥವಾ ಎಲ್ಲ ಪ್ರಶ್ನೆಗಳು ನಿನ್ನ ಉತ್ತರ ಇಲ್ಲಾ ಎನ್ನುವುದಾದರೆ "ನಿನಗೆ ಪ್ರೀತಿಯ ಅರ್ಥವೇ ಗೊತ್ತಿಲ್ಲಾ"
(ಭಾಗಶ: ಎಲ್ಲವೂ ನಿಶೇಷವಾಗಿದೆ ಈಗ)
ಪರಮವೀರ ಚಕ್ರ
ಇದು ಸಂಸ್ಕೃತದ ಪದ, ಭಾರತದ ಹೆಮ್ಮೆಯ ವೀರರಿಗೆ ನೀಡುವ ಈ ಬಿರುದು ಶುರುವಾದದ್ದು ೧೯೫೦ ರ ಜನವರಿ ೨೬ ರಂದು, ಭಾರತದ ರಾಷ್ಟ್ರಪತಿಗಳು ಸೇನೆಯಲ್ಲಿ ಮಹೋನ್ನತ ಕೆಲಸ ಮಾಡಿದ ಹೆಮ್ಮೆಯ ವೀರಪುತ್ರರಿಗೆ ನೀಡುವ ಗೌರವ, ಇದು ಇಂಗ್ಲೆಂಡಿನ ವಿಕ್ಟೋರಿಯಾ ಕ್ರಾಸ್, ಅಮೇರಿಕಾದ ಮೆಡಲ್ ಆಫ್ ಹಾನರ್, ಹಾಗೂ
ಫ್ರೆಂಚರ ಲಿಜನ್ ಆಫ್ ಹಾನರ್ ಬಿರುದಿಗೆ ಸಮನಾದದ್ದು, ಆದರೂ ಭಾರತದ ಪರಮವೀರ ಚಕ್ರ
ವಿಶೇಷ ಸ್ಥಾನ ಪಡೆದಿದೆ,
ಮೊದಲನೇ ಬಾರಿ ಈ ಬಿರುದು ನೀಡುವಾಗ ದೇಶದ ಸ್ವಾತಂತ್ರದ ದಿನದಿಂದ ದೇಶದ ರಕ್ಷಣೆಗೆ ಸೇವೆ ಸಲ್ಲಿಸಿದ ನಮ್ಮ ಎಲ್ಲಾ ರೀತಿಯ ಯೋಧರಿಗೆ ನೀಡುತ್ತ ಬರುತ್ತಿದೆ. ಹಾಗೂ ಮರಣೋತ್ತರ ಈ ಬಿರುದು ನಗದಿನ ಜೊತೆಗೆ ಪಾರಿತೋಷಕವನ್ನು ಒಳಗೊಂಡಿರುತ್ತದೆ
ಫ್ರೆಂಚರ ಲಿಜನ್ ಆಫ್ ಹಾನರ್ ಬಿರುದಿಗೆ ಸಮನಾದದ್ದು, ಆದರೂ ಭಾರತದ ಪರಮವೀರ ಚಕ್ರ
ವಿಶೇಷ ಸ್ಥಾನ ಪಡೆದಿದೆ,
ಮೊದಲನೇ ಬಾರಿ ಈ ಬಿರುದು ನೀಡುವಾಗ ದೇಶದ ಸ್ವಾತಂತ್ರದ ದಿನದಿಂದ ದೇಶದ ರಕ್ಷಣೆಗೆ ಸೇವೆ ಸಲ್ಲಿಸಿದ ನಮ್ಮ ಎಲ್ಲಾ ರೀತಿಯ ಯೋಧರಿಗೆ ನೀಡುತ್ತ ಬರುತ್ತಿದೆ. ಹಾಗೂ ಮರಣೋತ್ತರ ಈ ಬಿರುದು ನಗದಿನ ಜೊತೆಗೆ ಪಾರಿತೋಷಕವನ್ನು ಒಳಗೊಂಡಿರುತ್ತದೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
