ನೋಡ್ತಿರೋರು

ಗುರುವಾರ, ಡಿಸೆಂಬರ್ 24, 2009

ಕನಸು ನನಸಾದಾಗ..............

ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ ಬಿದ್ದಿಲ್ಲ ) :) ನನದು ಒಂದು ಕಲರ್ ಪುಲ್ ಕನಸ ಕೇಳಿ .........,


ನೆನ್ನೆ ರಾತ್ರಿ ಮಲಗುವಾಗಲೇ ತಡವಾಯ್ತು ಬಹುಶಃ ಎರಡು ಮೂರು ಘಂಟೆ ಇರಬಹುದು. ಸ್ವಲ್ಪ ಹೊತ್ತಿನಲ್ಲೇ ವಾಸ್ತವದಲ್ಲಿ ನನಗೆ ಪರಿಚಯವಿಲ್ಲದವರೊಬ್ಬರು, ಆದರೆ ತುಂಬಾ ಪರಿಚಿತರಂತೆ ಮಾತನಾಡುತಿದ್ದಾರೆ. ಎಷ್ಟು ಹೊತ್ತಾದರೂ ಅವರ ಮುಖವೇ ಕನಸಿನಲ್ಲಿ ಮೂಡುತ್ತಿಲ್ಲ . ಆದರೆ ಆ ಧ್ವನಿ ನನಗೆ ತುಂಬಾ ಪರಿಚಿತವೇನೋ ಎಂಬಂತೆ, ಎಚ್ಚರವಾದರೂ ಅವರೊಂದಿಗೆ ಮಾತಾನುದುತ್ತಿರುವಂತೆ ಭಾಸ. ಅಷ್ಟರೊಳಗೆ ಬೆಳಗಿನ ಜಾವವಾದ್ದರಿಂದ ನಾನು ನನ್ನ ನಿತ್ಯ ಕೆಲಸಗಳಲ್ಲಿ ತೊಡಗಿಕೊಂಡೆ, ಇಂದು ಮಧ್ಯಾನ್ಹ ೧೨ಕ್ಕೆ ನನ್ನ ಕಚೇರಿಯಲ್ಲಿ ಅಕೌಂಟ್ ಅಸಿಸ್ಟಂಟ್ ಹುದ್ದೆಗೆ ಸಂದರ್ಶನವಿತ್ತು. ಅಷ್ಟರೊಳಗೆ ನಾನು ಆ ಕನಸನ್ನು ಮರೆತುಹೋಗಿದ್ದೆ. ಸಂದರ್ಶನಕ್ಕೆ ಬಂದ ೫ ಜನರಲ್ಲಿ ೨ ಹುಡುಗಿಯರು ಮತ್ತೆಲ್ಲ ಹುಡುಗರು. ಆಗತಾನೆ ಪದವಿ ಮುಗಿಸಿ ಬಂದಿದ್ದ ಹೊಸಬರು. ಒಬ್ಬೊಬ್ಬರಾಗಿ ಸಂದರ್ಶನಕ್ಕೆ ಹಾಜರಾಗುತ್ತಿದ್ದರು. ಇನ್ನೇನು ಎಲ್ಲರ ಸಂದರ್ಶನ ಮುಗಿಸುವ ಹೊತ್ತಿಗೆ ಮತ್ತೊಂದು ಹುಡುಗಿಯು ಸಂದರ್ಶನಕ್ಕೆ ಬಂದಿದ್ದಾಳೆ ಎಂದು ನನ್ನ ಕಚೇರಿಯ ಸ್ವಾಗತಕಾರಿಣಿ ಪೋನ್ ಮೂಲಕ ಮೀಟಿಂಗ್ ರೂಮಲ್ಲಿದ್ದ ನನಗೆ ತಿಳಿಸಿದಳು, ಆಗಲೇ ಘಂಟೆ ೧.೩೦ ಆಗಿತ್ತು. ಸರಿ ಆಕೆಯನ್ನು ಸಂದರ್ಶನಕ್ಕೆ ಬರಲು ಹೇಳಿ, ಈಗಾಗಲೇ ಸಂದರ್ಶಿಸಿದವರಲ್ಲಿ ಯಾರು ಉತ್ತಮರೆಂದು ಮನಸ್ಸಿನಲ್ಲೆ ಲೆಕ್ಕಾಚಾರ ಹಾಕುತ್ತಿದ್ದೆ. ಒಳಗೆ ಬರಬಹುದ ?????????? ಎಂದು ಕೇಳಿದ ಧ್ವನಿಗೆ ಆಶ್ಚರ್ಯಚಕಿತನಾದೆ, ಏಕೆಂದರೆ ಇದೆ ಧ್ವನಿಯನ್ನು ತಾನೇ ಕನಸಿನಲ್ಲಿ ಕೇಳಿದ್ದು. ಒಂದು ಕ್ಷಣ ಮೂಕ ವಿಸ್ಮಿತನಂತಾಗಿ, ಕಮಿನ್ ಎಂದು ಹೇಳಿದೆ. "ನ್ಯೆಸ್ " ಟೆಲ್ ಮಿ ಅಬೌಟ್ ಯುವರ್ ಸೇಲ್ಪ್ಹ್ ? ಅಂತಷ್ಟೇ ಉಗುಳು ನುಂಗಿಕೊಂಡು ಹೇಳಿದ್ದು. ಆ ಹುಡುಗಿಯ ಹೆಸರು ಮಾನಸ, ಊರು ಶಿವಮೊಗ್ಗದ ಹತ್ತಿರ ಶಿರಾಳಕೊಪ್ಪ, ಆ ಕಡೆಯಿಂದ ಉಳಿಯಿತು ಆ ಧ್ವನಿ. ಆಕೆ ಏನೇನೋ ಹೇಳತೊಡಗಿದಳು, ಒಂದು ಯಾವುದು ಕೇಳಿಸಿದಂತಾಯಿತು. ಒಂದೈದು ನಿಮಿಷ ಕಾಟಾಚಾರಕ್ಕೆ ಮಾತಾಡಿ ಆಕೆಯನ್ನು ಹೊರಡುವಂತೆ ಹೇಳಿ ಹೊರಬಂದೆ.


ಊಟ ಮುಗಿಸಿ, ನನ್ನ ಬಾಕಿ ಕೆಲಸದಲ್ಲಿ ತಲ್ಲಿನನಾಗಲು ಪ್ರಯತ್ನಿಸಿದನಾದರು, ಯಾಕೋ ಸಾಧ್ಯವಾಗಲಿಲ್ಲ. ಪ್ರತಿ ಐದು ನಿಮಿಷಕೊಮ್ಮೆ ಆಕೆಯ ಪರಿಚಯ ಪತ್ರವನ್ನು ಓದತೊಡಗಿದೆ. ಹು... ಹು. ಇಲ್ಲ ...... ಯಾವುದೇ ಕಾರಣಕ್ಕೂ ಇನ್ನು ಬೇರೆ ಸಂದರ್ಶನವನ್ನು ಮಾಡಬಾರದು. ಈಕೆಯನ್ನೇ ಆರಿಸುವ ಎಂದು ಒಳಮನಸು ಹೇಳಿತಾದರು, ಮತ್ತೊಮ್ಮೆ ಅವಳೇನು ಅಂಥ ಸುಂದರಿಯಲ್ಲ, ಆದರು ಮಾತು, ಸಂಯಮ, ಪ್ರಜ್ಞೆ ಎಲ್ಲವು ಸರಿ, ಮೇಲಾಗಿ ಮೊದಲೆರಡು ಸಂದರ್ಶನ ಮಾಡಿದ ಹುಡುಗ ಹುಡುಗಿಗಿಂತ ಕೆಲಸಕ್ಕೆ ಬೇಕಾದ ವಿಚಾರಗಳನ್ನು ಈಕೆ ತಿಳಿದುಕೊಂಡಿಲ್ಲ ಎನಿಸುತ್ತಿತ್ತು. ಯಾವ ನಿರ್ಧಾರವನ್ನು ತೆಗೆದುಕೊಳ್ಳದೆ ನನ್ನ ಹಿರಿಯ ಅಧಿಕಾರಿಗಳಿಗೆ ನಾಳೆ ಶಾರ್ಟ್ ಲಿಸ್ಟ್ ಕಳಿಸುತ್ತೇನೆ, ಎಂದು ಮಿಂಚಂಚೆ ಕಳುಹಿಸಿದೆ.

ಮಿಂಚಂಚೆಗೆ ಪ್ರತ್ಯುತ್ತರ ಬಂತು ಇಂದೇ ನಿರ್ಧಾರ ತೆಗೆದುಕೊಳ್ಳಬೇಕು, ನಾಳೆ ನಾನು ಬೆಳಿಗ್ಗೆ ಇರುವುದಿಲ್ಲ ಇಂತಿ ಎಂ ಡಿ. ನನ್ನ ಲೆಕ್ಕಾಚಾರ ತಲೆಕೆಳಗಾಗುವ ಸರದಿ ಈಗ (ನಾಳೆ ಬೆಳಿಗ್ಗೆ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಮೀಟಿಂಗ್ ಇತ್ತು. ಅಷ್ಟರೊಳಗೆ ನಾನು ಆರಿಸಿದವರ ಪರಿಚಯ ಪತ್ರವನ್ನು ನಮ್ಮ ಎಂ ಡಿಗೆ ನೀಡುವ ಎಂದೆಣಿಸಿದ್ದೆ) . ಜಗದೀಶ್ ೫/೧೦, ನವೀನ ಕುಮಾರ್ ೬/೧೦, ಸಂಜನ ೬/೧೦, ನಟರಾಜ್ ೩/೧೦, ಮಾನಸ ೯/೧೦ ಬರೆದಾಗಿತ್ತು :)

ಎಲ್ಲವನ್ನು ಕೂಲಂಕುಷವಾಗಿ ನೋಡಿದ ಎಂ. ಡಿ. ಹಾಸ್ಯ ಮಿಶ್ರಿತವಾಗಿ ಏನರವಿಂದ್ ೯/೧೦ ಈಕೆ, ಅಷ್ಟು ಚೆಂದನಾ ? ? ಅಂತ ಕಣ್ಣು ಹೊಡೆದು ಕೇಳಿದಾಗ, ಆತಂಕದಲಿದ್ದ ನಾನು ಹು...... ಸರ್,,,,,,,, ಅಯ್ಯೋ ಇಲ್ಲಾ ಸರ್........... ಅಂತ ಏನೇನೋ ಒದರಲಾರಂಭಿಸಿದೆ. ಆದರೆ ಅವರು ಅದನ್ನು ಗಮನಿಸಲಿಲ್ಲ ಅನ್ಸುತ್ತೆ. ಸರಿ ಹಾಗಾದರೆ ಆಕೆಯನ್ನು ನಾಳೆ ಮತ್ತೊಂದು ಸುತ್ತಿನ ಸಂದರ್ಶನಕ್ಕೆ ಸಮಯವನ್ನು ನೀನೆ ಗೊತ್ತು ಮಾಡು, ಸಂಜೆ ೩ರ ನಂತರವಾದರೆ ಮೋಹನ್(ಮತ್ತೊಬ್ಬ ಎಂ. ಡಿ.) ಸಹ ಇರ್ತಾರೆ, ಎಂದರು. ತಲೆಯಲ್ಲಾಡಿಸಿ ಹೊರಬಂದೆ, ಮನಸಿನಲ್ಲಿ ಏನೋ ಸಂತೋಷ, ನನ್ನ ಕುರ್ಚಿಯ ಹೋಗಿ ಮೊದಲು ಫೋನ್ ರಿಸಿವರ್ ಕ್ಯೆಗೆತ್ತುಕೊಂಡು ಮೊದಲಿನಿಂದಲೂ ಆ ಮೊಬ್ಯೆಲ್ ಸಂಖ್ಯೆ ಗೊತ್ತೇನೋ ಎಂಬಂತೆ ಪಟಪಟನೆ ಸಂಖ್ಯೆ ಒತ್ತಿದೆ...... ೯೯೪೫೦........(ಆಕೆಯ ಧ್ವನಿಗೆ ಕಾತರನಾಗಿದ್ದೆ) ಆ ಕಡೆಯಿಂದ ಹಲೋ ......... ಎಂದಿತೊಂದು ಧ್ವನಿ (ಅವಳಲ್ಲ), :( ಸಾವರಿಸಿಕೊಂಡು "ಆಮ್ ಸ್ಪೀಕಿಂಗ್ ತು ಮಿಸ್. ಮಾನಸ ?, ಇಲ್ಲ (ಕನ್ನಡಲ್ಲೇ) ಅವಳಿಲ್ಲ ಯಾರು ಮಾತಾಡೋದು ಎಂದಿತು ಆ ವ್ಯಕ್ತಿ, ನಾನು ಇಂತ ಕಂಪೆನಿಯಿಂದ, ಈ ವಿಚಾರವಾಗಿ ಪೋನ್ ಮಾಡ್ತಿದ್ದೀನಿ, ನಿಮ್ಮ ಹುಡುಗಿಗೆ ನಮ್ಮ ಆಫೀಸಿಗೆ ಸಂದರ್ಶನಕ್ಕೆ ಬಂದಿದ್ದರು, ಅವರಿಗೆ ನಾಳೆ ನಮ್ಮ ಆಫೀಸಿಗೆ ಬಂದು ನನ್ನನ್ನು ಕಾಣಲು ಹೇಳಿ ಎಂದೆ (ಸಂಜೆ ೩ ಘಂಟೆಗೆ, ಹೇಳಲು ಮರೆಯಲಿಲ್ಲವಾದರು). ಮತ್ತು ಯಾವುದೇ ವಿಚಾರಕ್ಕೂ ನನ್ನ ಮೊಬ್ಯೆಲ್ ಸಂಖ್ಯೆಯನ್ನು ಕೊಟ್ಟಿರಿ ಎಂದು ಆ ವ್ಯಕ್ತಿಗೆ ನನ್ನ ನಂಬರನ್ನು ನೀಡಿದೆ, ಅಲ್ಲಿಯವರೆಗೆ ಕಾಯುವ ತಾಳ್ಮೆ ನನ್ನಲ್ಲಿರಲಿಲ್ಲ. ಪೋನ್ ಇಟ್ಟೆ.


ಯಾಕೋ ಕೆಲಸ ಮಾಡುವ ಮನಸಿಲ್ಲ, ಮನದಲ್ಲೇ ---- ಛೆ ಇವಳಾದರು ಫೋನ್ ಎತ್ತಿದ್ದರೆ........... ನನ್ನ ಮೊಬ್ಯೆಲ್ ನಂಬರನ್ನ ಆ ವ್ಯಕ್ತಿ ಸರಿಯಾಗಿ ಬರೆದುಕೊಂಡಿಲ್ಲದಿದ್ದರೆ, ಬಹುಷಃ ಸರಿಯಾಗಿ ಬರೆದುಕೊಂಡಿದ್ದರು, ಆಕೆ ಫೋನ್ ಮಾಡದಿದ್ದರೆ, ಛೆ!!!! ಏನೆಲ್ಲಾ ಯೋಚನೆ..... ಚಡಪಡಿಸುತ್ತಿದೆ ಮನಸು........................ ಇನ್ನು ನಾಳೆ ಅವಳು ಸಂದರ್ಶನಕ್ಕೆ ಬರ್ತಾಳೆ ಮೂರು ಘಂಟೆಗೆ .............. ಕಾಯುವ ಸರದಿ ನನದು. :(

ಬುಧವಾರ, ಡಿಸೆಂಬರ್ 16, 2009

ಪ್ರೀತಿಗೊಂದು ಬ್ಯ್ಯೆಯಾಗ್ರಫಿ

ಎಂಥ ಸುಂದರ ಕಲ್ಪನೆ, ಎಂಥ ನವಿರಾದ ವಿಚಾರಗಳು, ಪ್ರೀತಿ ಬಗ್ಗೆ ಮಾತಾಡ್ತಾ ಹೋದ್ರೆ ಅದಕ್ಕೊಂದು ಆದಿ ಅಂತ್ಯನೇ ಇಲ್ಲದ, ಸುವರ್ಣಾತೀತ, ಸುಕೋಮಲ ಮನಸುಗಳ ದಿವ್ಯ ವಿಚಾರ. ಅದೊಂದು ಸಮುದ್ರ ಭೋಗರತದ ಆರ್ತನಾದದಲ್ಲೂ ದಿವಿನಾದ ಏಕಾಂತವ ಕಾಣುವ ಕವನಗಳ ಸಂಕೋಲೆ, ಮಾತುಗಳು ಸಾವಿರ ಕಡಲ ಅಲೆಗಳಾಗಿ ತಾ ಮುಂದು ನಾ ಮುಂದು ಅಂದರೂ, ಎಲ್ಲೋ ಕಾಣದ ನೀರವ ಮೌನ, ಮನಸುಗಳ ಸಂಘರ್ಷದ ಆರ್ತನಾದದಲ್ಲೂ ಅದೊಂದು ದಿವ್ಯ ಬೆಳಗು.

ಮೊದಲ ಬಾರಿಗೆ ಎಲ್ಲೋ ಎಡತಾಕಿಕೊಂಡು ಎದೆಯ ಭಾವನೆಗಳಿಗೆ ಲಗ್ಗೆ ಇಡುವ ಈ ಪ್ರೀತಿಗೆ ಎಂಥ ವ್ಯಕ್ತಿ ಸೂಕ್ತ ಎಂಬ ನಿರ್ಧರಿಸುವ ಧೃಡ ನಿರ್ಧಾರವೇ ಇರುವುದಿಲ್ಲ, ಎಲ್ಲೋ ಕಾಲೇಜಿನಲ್ಲಿ, ಯಾವುದೋ ಕಚೇರಿಯ ಸಹೋದ್ಯಮಿ, ಬಸ್ ಸ್ಟಾಂಡಿನ ಬೆಳಗಿನ ಧಾವಂತದಲ್ಲಿ, ಆಕಸ್ಮಿಕ ಪ್ರಯಾಣದಲ್ಲಿ, ಅಂತರ್ಜಾಲದ ಹರಟೆಯಲ್ಲಿ, ಆಕಸ್ಮಿಕವಾಗಿ ಬಂದು ಬೀಳುವ ಯಾವುದೋ ಮೊಬ್ಯೆಲ್ ಸಂಖ್ಯೆಯ ಕಿರುಸಂದೇಶದಲ್ಲಿ ಇಂಥ ಅದೆಷ್ಟೋ ಅಲ್ಲಿ-ಇಲ್ಲಿಗಳಲ್ಲಿ ಒಂದು ಬಾರಿ ಮಿಂಚಿನಂತೆ ಬಂದು ಹೋಗುವ ಈ ಭಾವನೆ, ಜೀವವನ್ನೇ ಹಿಡಿದು ನುಂಗುವ ಮಟ್ಟಕ್ಕೆ ಹೋದರೂ ಆಶ್ಚರ್ಯವಿಲ್ಲ, ಹಾಗಾದರೆ ಮುಂದೆ ಹೇಳುತ ಹೊರಡುವ ಈ ವಿಧವಿಧದ ಪರಿಚಯಗಳಲ್ಲಿ ಎಂಥ ಅನುಬಂಧ ಇದೆ ಅಲ್ವಾ ತಿಳಿಯೋಣ!!!!

ಈ ಹುಡುಗ ಆಗ ತಾನೇ ಪಿಯುಸಿ ಎರಡನೇ ವರ್ಷದಲ್ಲಿ ಕಾಲಿರಿಸಿದವ, ತನ್ನ ಮುಂದಿನ ಭವಿಷ್ಯತ್ತಿನ ದಾರಿಯನ್ನು ಸುಗಮಗೊಳಿಸುವುದಕ್ಕಾಗಿ ಓದೊಂದೆ ಸರಿ ಎಂಬ ಮನೋಭಾವದವ. ತಂದೆ ತಾಯಿಗಳ ಅಚ್ಚುಮೆಚ್ಚಿನ ಒಬ್ಬನೇ ಮಗ. ಹೆಸರು ಬಾಬು ಪೂರ್ತಿ ಹೆಸರು ಆನಂದ ಬಾಬು. ಹುಟ್ಟಿದಾರಾಭ್ಯ ಕಷ್ಟ ಕೋಟಲೆಗಳನ್ನೇ ಮೃಷ್ಟಾನ್ನವಾಗಿ ಮ್ಯೆವೇಳಿಸಿಕೊಂಡವ. ಓದು ಅಷ್ಟಕ್ಕಷ್ಟೆಯಾದ್ರೂ, ಬುದ್ದಿವಂತ. ಇಂತಹ ಒಬ್ಬ ಸಾಮಾನ್ಯ ಹುಡುಗ ಎಂಥಂಥ ಸಂಧರ್ಬಗಳನ್ನು ಎದುರಿಸುವ...

ಆನಂದಬಾಬು ಅಂಥ ಸುಂದರಾಂಗನಲ್ಲದಿದ್ದರೂ ಪದ್ಮಿನಿಯನ್ನು ನೋಡಿದ ಕೆಲವು ದಿನಗಳಿಂದ ಅವಳ ಯೋಚನೆಯಲ್ಲೇ ತನ್ನ ಸಮಯವನ್ನು ಕಳೆಯುತಾ ಹೋಗುವುದರಲ್ಲಿ ಅವನಿಗೆಂಥದೋ ಅಭ್ಯಾಸ. ಪದ್ಮಿನಿಯೇನು ಅಂಥಾ ಚಂದುಳ್ಳಿ ಚೆಲುವೆಯಲ್ಲದಿದ್ದರೂ ತನ್ನ ಸಾಮಾನ್ಯ ಅಂದಕ್ಕೆ ಮೆರುಗು ನೀಡುವ ಅವಳ ಕಣ್ಣುಗಳು ಎಂಥವನನ್ನೂ ಒಂದು ಕ್ಷಣ ಹಿಡಿದಿಡುವ ತಾಕತ್ತು. ಇಂಥ ಸಾಮಾನ್ಯರ ಬಗ್ಗೆ ನಡೆಯುವ ಪ್ರೇಮ ಪ್ರಲಾಪ ಎಂಥದ್ದೂ ಅದರ ಅಂತ್ಯ .................. ???????





ಮುಂದುವರೆಯುವುದು............

ಮಂಗಳವಾರ, ಡಿಸೆಂಬರ್ 8, 2009

24 ಗಂಟೆ ಕನ್ನಡ ಹಾಡುಗಳು



ಮತ್ತೊಂದು ನಿರಂತರ ೨೪ ಘಂಟೆಗಳ ರೇಡಿಯೋ ವಾಹಿನಿ


ಅರವಿಂದ್