ನೋಡ್ತಿರೋರು

ಬುಧವಾರ, ಆಗಸ್ಟ್ 4, 2010

ದೇವರು, ಧರ್ಮ ಮತ್ತವನ ಜಾತಿ. - ಸರಣಿ ೨

ಕ್ರಿ.ಪೂ. ೧೦೦೦
ದೇವರು ಹುಟ್ಟಿದ್ದು ಹೇಗೆ ?

ಹಳೆಶಿಲಾಯುಗದ ಕಾಲದಲ್ಲಿ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದದ್ದು, ಪಠ್ಯಪುಸ್ತಕಗಳಲ್ಲಿ ಓದಿಯೇ ಇರುತ್ತೀರಿ. ಅದು ಅವನ ಅಂದಿನ ಅವಶ್ಯಕತೆ. ಆದರೆ ಮನುಷ್ಯನಿಗೆ ತನ್ನ ಸುತ್ತಮುತ್ತಲಿನ ನಿಸರ್ಗದ ವ್ಯೆಪರೀತ್ಯಗಳು, ಒಮ್ಮೊಮ್ಮೆ ವಿಚಿತ್ರವಾಗಿ ಉಂಟಾಗುವ ಗುಡುಗು, ಮಿಂಚು, ಭೂಕಂಪ ಅವನನ್ನು ಗೊಂದಲಕ್ಕೀಡು ಮಾಡುತ್ತಿತ್ತೇನೋ ? ಈ ವಿಚಿತ್ರಗಳ ಅನುಭವದಿಂದ ಮನುಷ್ಯ ತನ್ನನ್ನು ಮೀರಿ ಮತ್ತೊಬ್ಬ ಶಕ್ತಿವಂತನಿರಬಹುದು. ಆ ವ್ಯಕ್ತಿ ಇವೆಲ್ಲವನ್ನು ಮಾಡುತ್ತಿರಬಹುದೇನೋ ಎಂಬ ಭ್ರಾಂತಿಗೆ ಬಂದ ? ನಿಸರ್ಗದ ದೃಷ್ಠಿಯಲ್ಲಿ ಮನುಷ್ಯ ಕಂಡ ಪ್ರತಿ ಬದಲಾವಣೆಗಳನ್ನು ನಂತರದ ದಿನಗಳಲ್ಲಿ ದೇವರು ಎಂಬ ಹೆಸರಿನಲ್ಲಿ ಕರೆದಿರಬಹುದು.

ಇಂಥ ದೇವರುಗಳನ್ನು ಕಾಲಕ್ರಮೇಣ ಪ್ರತಿ ಪಂಗಡದಲ್ಲೂ ಅವರ ಕಲ್ಪನೆಯ ಅನುಸಾರ ಮೂರ್ತರೂಪ ಕೊಟ್ಟು, ಆ ಗುಂಪಿನ ನಾಯಕ ತನಗೆ ಏನು ತೋಚುತ್ತಿತ್ತೋ ಹಾಗೆ ಪೂಜೆಯನ್ನೋ ಅಥವಾ ಮತ್ತಿನ್ಯಾವುದೋ ರೀತಿ ಮನವಿಯನ್ನೋ ಮಾಡುತ್ತಿದ್ದುದು ಇನ್ನಿತರ ಸದಸ್ಯರುಗಳಿಗೆ ಅದೇ ಸರಿ ಮತ್ತು ನಾಯಕನ ಮಾತಿನಂತೆ ಮತ್ತವನು ಮಾಡುತ್ತಿದ್ದ ಪೂಜೆಯೆಂಬ ಹೆಸರಿನ ಪ್ರಕಾರವೇ ದೇವರನ್ನು ಒಲಿಸುವುದು ಎಂಬ ಭಾವನೆ ಬಂದಿರಬಹುದು. ಹೀಗೆ ನಡೆಸುವ ಪೂಜೆ-ಪುನಸ್ಕಾರಗಳ ನಂತರ ಅವರ ಕಷ್ಟಗಳು ಆಕಸ್ಮಿಕವಾಗಿ ನಿವಾರಣೆಯಾದಾಗ ದೇವರು ನಮ್ಮ ಇಷ್ಟಾರ್ಥವನ್ನು ಸಿದ್ಧಿಸುವ ವ್ಯಕ್ತಿ ಮತ್ತು ನಾವು ಆ ಕಾಣದ ವ್ಯಕ್ತಿಗೆ ಯಾವತ್ತೂ ಅಭಾರಿಯಾಗಿರಬೇಕೆನ್ನಿಸಿತೇನೋ ?,

 .  ಪ್ರಕೃತಿಯಲ್ಲಿನ ಪ್ರತಿ ಕ್ಷಣದ ಬದಲಾವಣೆಗಳು ಕೆಲವು ಕಾಲದ ನಂತರ ನಿಲ್ಲುತ್ತವೆ, ಮತ್ತೆ ಮತ್ತೆ ಪುನರಾವರ್ತನೆಗಳಾಗುತ್ತವೆ. ಇಂಥ ಪುನಾರವರ್ತನೆಗಳು ಭೂಮಿಯ ಮೇಲ್ಮ್ಯೆ ಲಕ್ಷಣ, ಭೌಗೋಳಿಕ ವ್ಯತ್ಯಾಸ, ವಾತಾವರಣದ ಏರು ಪೇರುಗಳಿಂದ ಸಾಧ್ಯ. ಕನಿಷ್ಠ ವಿಚಾರಗಳನ್ನು ಯೋಚಿಸಲು ಇಷ್ಟಪಡದ ಜನ ತಮ್ಮ ಗುಂಪಿನ ನಾಯಕನ ಅಣತಿಯಂತೆ ತಮ್ಮದೇ ಆದ ವಿಧಾನಗಳನ್ನು, ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಕಾಲಕ್ರಮೇಣ ಮಾಡಿಕೊಂಡದ್ದು ಇರಬಹುದು. ಆಗಿನ ಶಿಲಾಯುಗದ ಜನರ ಅನೇಕ ಗುಂಪುಗಳು ಇಂಥದೇ ಪರಿಸ್ಥಿತಿಯನ್ನು ಎದುರಿಸಿ ಅವರದೇ ಆದ ನೀತಿ ಕಟ್ಟುಪಾಡುಗಳನ್ನು ಆಚರಣೆಗೆ ತಂದಿದ್ದಿರಬಹುದು.

ಮನಶಾಸ್ತ್ರಜ್ಣರು ಹೇಳುವಂತೆ ಎಲ್ಲ ಮನುಷ್ಯರು ಕಾಲಕ್ಕೆ ತಕ್ಕಂತೆ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅವು ಕಾಲದಿಂದ ಕಾಲಕ್ಕೆ ಬದಲಾದರೂ, ಅವುಗಳಲ್ಲಿನ ಬದಲಾವಣೆಗಳು ಮುಂದಿನ ತಲೆಮಾರಿನಿಂದ ಆಗಿರುತ್ತವೆ. ದೇವರು ಎಂಬ ಭಾವ ಮನುಷ್ಯನ ಕೆಲವು ವಿಚಿತ್ರ ಯೋಚನೆಗಳಿಗೆ ಅನುಕೂಲವು ಹಾಗೂ ಅನಾನುಕೂಲವು ಆಗಿದ್ದಿರಬಹುದು. ಅವನ ಅನುಕೂಲಗಳನ್ನು ದೇವರ ಕೃಪೆಯೆಂದು, ಅವನ ಅನಾನುಕೂಲವನ್ನು ಶಾಪವೆಂದು ಭ್ರಮಿಸಿ, ಅದರಂತೆ ನಡೆದುಬಂದಿರಬಹುದು.

ಪ್ರದೇಶದಿಂದ ಪ್ರದೇಶಕ್ಕೆ ಮಾರ್ಪಾಡುಗಳಾದಾಗ ಮೊದಲಿಗೆ ದೇವರ ಪರಿಕಲ್ಪನೆಯನ್ನು ಪ್ರತಿಗುಂಪುಗಳು ನಂಬಿದ್ದ ರೀತಿಯೇ ಶ್ರೇಷ್ಠ ಎಂಬುವ, ಹಾಗೂ ಅದರಂತೆ ನಡೆದುಕೊಳ್ಳುವ ಹಂಬಲ ಹೆಚ್ಚಾದದ್ದಿರಬಹುದು. ನಲವತ್ತು ಜನರಿರುವ ಒಂದು ಗುಂಪಿನ ನಾಯಕ ತನ್ನ ಮನಸ್ಸಿಚ್ಚೆಯಂತೆ ಯಾವುದನ್ನು ಆಚರಿಸುವನೋ ಅದೇ ಆ ಗುಂಪಿನ ಸದಸ್ಯರ ಆಚರಣೆಗಳಾಗಿರಬಹುದು. ನಂತರದ ದಿನಗಳಲ್ಲಿ ಅವನ ಗುಂಪಿನ ಮಕ್ಕಳು ಮೊಮ್ಮಕ್ಕಳು, ಮರಿ ಮಕ್ಕಳು ಆ ಕ್ರಮವನ್ನೇ ಆಚರಿಸುತ್ತಾ ಅದೇ ನಮ್ಮ ಕುಲದೇವರು ಮತ್ತು ಆ ಜಗವೇ ನಮ್ಮ ಜಾತಿ ಎಂಬ ಅಭಿಮತಕ್ಕೆ ಬಂದಿದ್ದಿರಬಹುದು. ಕಲ್ಲಿನಿಂದ ಕಲ್ಲನ್ನು ಹೊಡೆದಾಗ ಉಂಟಾಗುತ್ತಿದ್ದ ಬೆಳಕು ಬೆಂಕಿಯಾಗಿ, ನಂತರದ ದಿನಗಳಲ್ಲಿ ಮನುಷ್ಯನಿಗೆ ಅದರ ಬಳಕೆಯು ತಾನು ತಿನ್ನಿವ ಆಹಾರಕ್ಕೆ ಅಗತ್ಯವಾಗಿ, ಆಹಾರಗಳನ್ನು ಬೇಯಿಸಿ ತಿಂದರೆ ರುಚಿ ಹೆಚ್ಚೆಂಬುದನ್ನು ತಿಳಿದು, ಬೇಯಿಸಿ ತಿನ್ನುವ ಆಹಾರ ಶುದ್ಧ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂಬ ಚಿಂತನೆ, ದೇವರ ಹುಟ್ಟಿಗೂ ತಳುಕು ಹಾಕಿ ನೋಡಬಹುದು.

ಮುಂದುವರೆಯುವುದು.................

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಒಳ್ಳೆಯ ಹಾಗು ಡಿಫರೆ೦ಟ್ ಲೇಖನ. ಎಲ್ಲರೂ ತಾವು ತಮ್ಮ ಸುತ್ತಮುತ್ತ ನಡೆಯುವುದರ ಬಗ್ಗೆ ಟೈಮ್ ಪಾಸ್ ಗೆ ಬರೀತಾ ಇದ್ರೆ ನೀವು ಮಾತ್ರ ತು೦ಬಾ ಸೀರಿಯಸ್ ಆಗಿದ್ದೀರಿ. ಕೂಲ್. ಇ೦ತಹ ಲೇಖನ ಇನ್ನೂ ಬರ್ತಾ ಇರ್ಲಿ.