ನೋಡ್ತಿರೋರು

ಬುಧವಾರ, ಜುಲೈ 2, 2014

ಬಂದೇ ಬರುತಾವ ಕಾಲ


ಮೊಬ್ಯೆಲಿಗೊಂದು ಸಂದೇಶ... ನೀನು ಇಂದಿಗೂ ಅಂದಿನಷ್ಟೇ, ಪ್ರೀತಿಸುತ್ತೀಯಾ...? ಹಾಗಿದ್ದರೆ, ನನಗೊಂದು ಕರೆ ಮಾಡುವ ಸೌಜನ್ಯವಿದೆಯಾ...?, ಈ ಸಂದೇಶ ಯಾರದು ಅನ್ನೋ ಕುತೂಹಲ ಅವನಲ್ಲಿ... ಇರಬಹುದು ಅವಳೇ ಅಥವಾ ಇನ್ಯಾರದೋ ಸಂದೇಶ ತಪ್ಪಿ ಬಂತೇ...? ಗೊತ್ತಿಲ್ಲ.. ಆದರೂ ಕುತೂಹಲಕ್ಕೆ ಮನಸೋತ ಅವನ ಮನಸು, ನೀವ್ಯಾರು ಎಂಬ ಸಂದೇಶ ಕಳುಹಿಸದೇ ಇರಲಿಲ್ಲ...ಆ ಕಡೆಯಿಂದ ಉತ್ತರವೂ ಇರಲಿಲ್ಲ. ಬಹುಶಃ ಈ ಪ್ರಶ್ನೆ ಎದುರಾದದ್ದು ಉತ್ತರಕ್ಕೋ ಅಥವಾ ಅವಿತು ಕುಳಿತಿದ್ದ ಕಠೋರ ದ್ರೋಹಕ್ಕೋ ಎಂಬ ಸಂದಿಗ್ಧವಿರಬಹುದು.

ಎಷ್ಟು ಹೊತ್ತಾದರೂ ಬರದ ಸಂದೇಶ ಅಭಿರಾಂನ ಮನಸ್ಸಿಗಾಗಲಿ, ಮಾಡುತ್ತಿದ್ದ ಕೆಲಸಕ್ಕಾಗಲಿ ಸಂಬಂಧವೇ ಇರಲಿಲ್ಲ. ಇದ್ದ ಪ್ರಾಜೆಕ್ಟಿನ ಅಷ್ಟು ಕೆಲಸ ಅವತ್ತಿನ ಮಟ್ಟಿಗೆ ಬರಾಕತ್ತಾಗಿ ನಿಂತಿತ್ತು. ಚಡಪಡಿಕೆಯಲಿ ಮತ್ತೊಮ್ಮೆ ಆ ನಂಬರಿಗೆ ಪೋನ್ ಮಾಡುವ ಬಯಕೆ.. ಬೇಕಾದವರಾಗಿದ್ದರೆ ಅವರೇ ಮಾಡಬಹುದೆಂಬ ಅಹಂ. ಸಂಜೆ ಆಫೀಸು ಮುಗಿದರೂ ಮನೆಗೆ ಹೋಗುವ ಚಿಂತೆಯಿಲ್ಲದೆ ದೂರದ ಬೆಟ್ಟದೊಂದಿಗೆ ಮಾತನಾಡುವ ಬಯಕೆ. ಬ್ಯೆಕು ಅವನ ಮಾತು ಕೇಳಲೇ ಇಲ್ಲ. ಅದು ತನ್ನ ನಿಶ್ಚಲ ಮನಸ್ಸಿನಲ್ಲೇ ಹೊರಟಿತು ಮನೆಯ ಕಡೆಗೆ. ಎಲ್ಲವೂ ದಾಟಿ ಮನೆಯ ಮುಂದೆ ಗಾಡಿ ನಿಂತಾಗಲೇ ಗೊತ್ತಾದದ್ದು. ಓಹ್!! ಮನೆಗೆ ಬಂದ್ನಾ. ಇರಲಿ ಸ್ವಲ್ಪ ಫ್ರೆಶ್ ಆಗಿ ನಂತರ ಹೊರಗೆ ಹೋದರಾಯಿತು, ಎಂದು ಮನದಲ್ಲೇ ಲೆಕ್ಕಾಚಾರ ಹಾಕಿ ಬಾಗಿಲ ಬಳಿ ಬಂದಾಗಲೇ ಮಗಳು ಅಭಿಗ್ನಾ, ಅಪ್ಪಾ !! ಎಂದಾಗ ವಾಸ್ತವಕ್ಕೆ ಬರಲೇ ಬೇಕಾಯಿತು. ಮಗುವಿನ ಮುಖ ನಿಂಗೆ ಈಗೆಲ್ಲಾ ಇವು ಬೇಕಾ ? ಎಂಬ ಪ್ರಶ್ನಾರ್ಥಕ ಭಾವದಂತಿತ್ತು.

ಗುರುವಾರ, ಜೂನ್ 19, 2014

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು! ಓದಿ ಆನಂದಿಸಿ!

 
 ತ್ರಿವೇಣಿಯವರ ಕಾದಂಬರಿಗಳು
ಉಷಾ ನವರತ್ನರಾಮ್ ಕಾದಂಬರಿಗಳು

ಸೋಮವಾರ, ಜೂನ್ 2, 2014

ರಂಗೋಲಿ....... ಚಿತ್ತ ಚಿತ್ತಾರಗಳ ನಡುವೆ - ಸಂಚಿಕೆ ೨


ಬಹಳ ದಿನಗಳಾಗಿತ್ತು.. ತಲೆಗೆ ಹಾಗೂ ಬರವಣಿಗೆಗೆ ಕೆಲಸ ಕೊಟ್ಟು :-) . ನೆನಪುಗಳು ಅಳಿಸಿಹೋಗುವ ಮೊದಲು ಬರೆದುಬಿಡೋಣ.., ಸುನಂದಳ ಬದುಕು ನೆನಪಲ್ಲೇ ಕಳೆದುಹೋಗಬಾರದೆಂಬ ಧಾವಂತ  ರಂಗೋಲಿ ಚಿತ್ತ ಚಿತ್ತಾರಗಳ ನಡುವೆಯ ಸರಣಿಯನ್ನು ಮುಂದುವೆರಿಸುತ್ತಿದ್ದೇನೆ..

 ಹಿಂದಿನ ಸರಣಿ

 
ಮುಂದಿನ ಕೆಲವೇ ದಿನಗಳಲ್ಲಿ ನನ್ನ ಮಾನಸಿಕ ಆರೋಗ್ಯ ದ್ಯೆಹಿಕ ಆರೋಗ್ಯ ಎಲ್ಲವೂ ಕ್ಷೀಣಿಸುತ್ತು.... ನಿರ್ದಯಿಗಳ ಮುಂದೆ ನಾನು ಅದಿನ್ನೆಂತಹ ಬೇಡಿಕೆಯಿಟ್ಟರೂ... ಅವರ ಬೇಡಿಕೆಗಳ ಮುಂದೆ ನನ್ನದೆಲ್ಲವೂ ಗೌಣವಾಗಿತ್ತು. ಸ್ವಲ್ಪ ದಿನಗಳ ನಂತರ ನನಗೂ ಇವೆಲ್ಲ ರೂಢಿಯಾಗಿ ಹೋಗಿತ್ತು. ಅದೇ ಸಮಯಕ್ಕೆ ಸೌಭಾಗ್ಯಮ್ಮನಿಗೆ ಆರೋಗ್ಯ ಕ್ಯೆಕೊಟ್ಟಿತ್ತು. ಏಳುವುದಕ್ಕೂ ಆಗದ ಸಂಧರ್ಬದಲ್ಲೂ ಆಕೆಯ ವ್ಯವಹಾರ ನಡೆಯುತ್ತಲೇ ಇತ್ತು. ಒಂದು ದಿನ ಬಹುಶಃ ಆಗಸ್ಟಿನಲ್ಲಿರಬಹುದು... ಆಕೆಯ ದೇಹದ ಬಲಭಾಗ ಪೂರ್ತಿ ಪಾಶ್ವವಾಯು ಉಂಟಾಗಿ ಮಲಗಿದ ಜಾಗದಿಂದೇಳಲು ಆಗದೆ, ಆಕೆಯ ಎಲ್ಲ ಕೆಲ್ಸಗಳು ಅಲ್ಲೇ ನಡೆಯುತ್ತಿತ್ತು. ಆ ಸಮಯಕ್ಕೆ ಇವಳೊಂದಿಗಿನ ವ್ಯವಹಾರಿಗಳಾಗಲಿ, ಇವಳೇ ಸಾಕು ಬೆಳೆಸಿದ ಜನರಾಗಲಿ ಯಾರೊಬ್ಬರೂ ಇವಳ ಸಹಾಯಕ್ಕೆ ಬರಲಿಲ್ಲ. ಕ್ರಮೇಣ ವ್ಯವಹಾರವೂ ನಿಂತಿತು.

ಬುಧವಾರ, ಫೆಬ್ರವರಿ 2, 2011

ಮುಖ್ಯಮಂತ್ರಿಯೂ ಮತ್ತು ನಲ್ವತ್ತು ಜನ.................


ಭಾಗ ೧
ಭಾರತದ ಇತಿಹಾಸದಲ್ಲೇ ಕಾಣದಷ್ಟು ಕರಾಳ ದಿನ ೨೨ನೇ ಜನವರಿ ೨೦೧೧, ಆಡಳಿತ ಪಕ್ಷವೇ ಬಂದ್ ಕರೆ ನೀಡಿದ್ದು, ದೇಶದಲ್ಲಿ ಇದೇ ಮೊದಲು, ಒಂದೊಮ್ಮೆ ತುರ್ತು ಪರಿಸ್ಥಿತಿ ಎದುರಿಸಿದ್ದ ಭಾರತ ಸರ್ಕಾರ, ಕೆಲವೇ ದಿನಗಳಲ್ಲೇ ತನ್ನ ಸರಿ ದಾರಿಯನ್ನು ಕಂಡುಕೊಂಡು ಮುಂದೆ ಇಂತಹ ಪರಿಸ್ಥಿತಿ ಬಂದೊದಗದಂತೆ ನೋಡಿಕೊಳ್ಳುತ್ತಲೇ ಬಂದಿದೆ. ಇಂತಹ ಭವ್ಯ ಭಾರತದ ಸುದೀರ್ಘ ೬೦ ವರ್ಷಗಳ ಇತಿಹಾಸದಲ್ಲಿ ಇಂದು ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಬಂದ್ ಆಗುವುದಕ್ಕೆ ಕಾರಣವಾದರೂ ಏನು ? ಒಬ್ಬ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಹೊತ್ತ ವ್ಯಕ್ತಿಗೆ ಮತ್ತೊಬ್ಬ ಮಹೋನ್ನತ ಜವಾಬ್ದಾರಿ ಹೊತ್ತ ವ್ಯಕ್ತಿಯು ರಾಜ್ಯಕ್ಕೆ ಮಾಡಿದ ಮೋಸವನ್ನು ಸಾಬೀತುಪಡಿಸಲು ಅವಕಾಶ ನೀಡಿದ್ದು, ಅದು ತಪ್ಪೇ ? ಹಾಗಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ತಪ್ಪೇ ಮಾಡಲಾರನೇ ? ಕೇವಲ ಜನ ಸಾಮಾನ್ಯರು ಮಾತ್ರ ತಪ್ಪು ಮಾಡುವರೇ ? ಅವರಿಗೆ ಮಾತ್ರ ಶಿಕ್ಷೆಯೇ ?

ಆದದ್ದೇನು ………?

ಕರ್ನಾಟಕದ ಇಂದಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಅಖಂಡ ರಾಜಕೀಯ ಇತಿಹಾಸದಲ್ಲಿ ಸುಮಾರು ವರ್ಷ ವಿರೋಧ ಪಕ್ಷದಲ್ಲೇ ಉತ್ತಮ ಕೆಲಸಮಾಡಿ ಜನಮನ್ನಣೆ ಪಡೆದವರು, ಅಲ್ಲಿ ಯಡಿಯೂರಪ್ಪನವರ ಕೆಲಸಕ್ಕಿಂತ ಕರ್ನಾಟಕದ ಜನತೆಗೆ ಒಂದೇ ಪಕ್ಷ ಅಥವಾ ಆಡಳಿತದ ಚುಕ್ಕಾಣಿ ಹಿಡಿದು ಅಭಿವೃದ್ದಿಯ ಮಂತ್ರವನ್ನಷ್ಟೆ ಜಪಿಸಿ, ಜನರ ಆಕಾಂಕ್ಷೆಗಳಿಗೆ ಮನ್ನಣೆ ನೀಡದೇ ಇದ್ದದ್ದು, ಮತ್ತು ಬಿಜೆಪಿಯ ಮೇಲೆ ಹುಟ್ಟಿದ ಅನುಕಂಪ ೨೦೦೭-೨೦೦೮ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ದೊರೆತ ಮೊದಲ ಸಲದ ಆಡಳಿತ ಅವಕಾಶದಲ್ಲಿ ಮೊದಲು ನೂರಷ್ಟು ಗೊಂದಲಗಳು, ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪನ ಪಟಾಲಂಗಳು ತಮ್ಮ ತಮ್ಮ ನಾಯಕರಿಗೆ ಮುಖ್ಯಮಂತ್ರಿಯ ಪಟ್ಟವನ್ನು ಅಲಂಕರಿಸಲು ಸಾಕಷ್ಟು ಶ್ರಮವನ್ನು ನಡೆಸಿದರು. ಬಿಜೆಪಿ ಹ್ಯೆಕಮಾಂಡಿನ ಕೃಪಾಕಟಾಕ್ಷದಿಂದ ಯಡಿಯೂರಪ್ಪನವರಿಗೆ ಆ ಪದವಿ ಒಲಿದದ್ದು ಈಗ ಇತಿಹಾಸ.
ಜನರ ಬೆಂಬಲ, ಮತ್ತು ಹೊಸದನ್ನು ನಿರೀಕ್ಷಿಸುತ್ತಿದ್ದ ಕರ್ನಾಟಕಕ್ಕೆ ಯಡಿಯೂರಪ್ಪನವರ ಮೇಲೆ ಅಪರಿಮಿತ ವಿಶ್ವಾಸ ಮತ್ತು ಅನುಕಂಪದ ಬೆಂಬಲವಿತ್ತು. ಜನ ಯಡಿಯೂರಪ್ಪ ಮುಖ್ಯಮಂತ್ರಿಯವರೆಂದು ಘೋಷಿಸಿದ ಮೇಲೆ ಜನರ ನಂಬಿಕೆಯೂ ಹೆಚ್ಚಿತ್ತು. ಆದರೆ ಆದದ್ದೇನು ? ಬಿಜೆಪಿಯ ಶಾಸಕರಲ್ಲೇ ಆದ ಒಳಜಗಳ, ತಮ್ಮತಮ್ಮಲ್ಲೇ ಒಬ್ಬೊಬ್ಬರ ಬಗ್ಗೆ ಕತ್ತಿ ಮಸೆಯುತ್ತಾ, ಪ್ರತಿ ಕ್ಷಣದಲ್ಲೂ ಸ್ವಹಿತಾಸಕ್ತಿಯ ಬಗ್ಗೆಯೇ ಯೋಚಿಸುತ, ರೆಡ್ಡಿ-ಯಡ್ಡಿ ಜಗಳವಂತಲೇ ಬಿಂಬಿಸುತ, ಖಾಸಗಿ ಟಿವಿ ಚಾನೆಲ್ಗಳಲ್ಲಿ ಭರಪೂರ ರಸದೌತಣವನ್ನೇ ಉಣಬಡಿಸಿ ಕಡೆಗೆ ಹ್ಯೆಕಮಾಂಡ್ ಮಧ್ಯಸ್ತಿಕೆಯಲ್ಲಿ ಆ ಕ್ಷಣದ ಸುಖಾಂತ್ಯವನ್ನು ಕಂಡಂತಾಗಿತ್ತು.
ಅಲ್ಲಿಯವರೆಗೂ ಬಿಜೆಪಿಯ ಪ್ರತಿ ಸಚಿವರು ನಾವು ಒಗ್ಗಟ್ಟಾಗಿದ್ದೇವೆ. ಎಂತಲೇ ಪ್ರಚಾರಪಡಿಸುವಲ್ಲೇ ಹ್ಯೆರಾಣಾಗಿದ್ದರು. ಹಾಗೂ ಹೀಗೂ ಕುಂಟು ಕುದುರೆ ನಡೆಯುತ್ತಿತ್ತು. ಮತ್ತೊಂದು ಒಂಬತ್ತು ತಿಂಗಳಷ್ಟೆ, ರೇಣುಕಾಚಾರ್ಯ ಹಿಂಬಾಗಿಲಿಂದ ಸಚಿವರಾಗಿದ್ದರೂ, ಮತ್ತೇನೋ ಮರೆತಂತೆ ಕೆಲವು ಸಚಿವರ ಒಟ್ಟುಗೂಡಿಸಿ, ಯಡಿಯೂರಪ್ಪನವರು ನನ್ನ ತಂದೆ ಸಮಾನ ಎನ್ನುತ್ತಲೇ ಕೇರಳ, ಗೋವಾ, ಚೆನ್ನ್ಯೆ ರೆಸಾರ್ಟುಗಳಲ್ಲಿ ವಾಸ್ತವ್ಯ ಹೂಡುತ್ತಾ ಇಡೀ ಸರ್ಕಾರವೇ ಬೀಳುಸುವ ಯತ್ನದಲ್ಲಿ ಫಲಪ್ರದವಾಗುವಂತೆ ಕಂಡು ಬಂದರೂ ಕಡೆಯ ಘಳಿಗೆಯಲ್ಲಿ ತನ್ನ ಬೆಂಬಲಿಗ ಸಚಿವರಿಗೆ ಮುಂದೆ ಹೋಗುವಂತೆ ಪ್ರೋತ್ಸಾಹಿಸಿ ಹಿಂದುಳಿದದ್ದು ಸಮಾನ ಮನಸ್ಕ ಸಚಿವರಿಗಂತೂ ಭಾರಿ ಭ್ರಮರನಿರಸವಾಯಿತು. ಮತ್ತೆ ಯಡಿಯೂರಪ್ಪನವ ಬೆಂಬಲಕ್ಕೆ ನಿಂತದ್ದು, ಸಮಾನ ಮನಸ್ಕ ಸಚಿವರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಅದುವರೆಗೂ ಎಲ್ಲವೂ ಸರಿಯಿದೆ ಎಂಬ ಭಾವನೆಯಿಂದಲೇ, ತನ್ನ ಸ್ವಹಿತಾಸಕ್ತಿಯ ಬಗ್ಗೆ ಯೋಚಿಸಿ ನಾಗರಬಾವಿಯ ಜಮೀನೊಂದನ್ನು ಡಿನೋಟಿಫ್ಯೆ ಮಾಡಿದ್ದೇ ಬಂತು, ವಿರೋಧ ಪಕ್ಷಗಳು ಅದಕ್ಕಾಗಿಯೇ ಕಾಯುತ್ತಿರುವಂತೆ, ಒಕ್ಕಲೊರಗಿನಲ್ಲಿ ರಾಜೀನಾಮೆ ನೀಡಬೇಕು, ಇಲ್ಲದಿದ್ದಿರೆ ನಾವು ಹೋರಾಟವನ್ನು ಬಿಡೆವು, ಎಂದು ರಾಜ್ಯಪಾಲರ ಬಳಿ ಮನವಿಯನ್ನು ಮೇಲಿಂದ ಮೇಲೆ ನೀಡುತ್ತಾ, ಮುಖ್ಯಮಂತ್ರಿಯ ಅಷ್ಟು ಬೇನಾಮಿ ಆಸ್ತಿ ವಿವರ, ನಕಲಿ ಕಂಪೆನಿಯ ಹೆಸರಿನಲ್ಲಿ ಮಾಡಿಕೊಂಡ ಸ್ಯೆಟುಗಳು, ಮಗ ವಿಜಯೆಂದ್ರ, ಮತ್ತೊಬ್ಬ ಸಂಸದ ಮಗ ರಾಘವೇಂದ್ರ, ಹಾಗೂ ಯಡಿಯೂರಪ್ಪನ ಅಳಿಯ ಅವರ ಬಂಧು ಬಾಂಧವರ ಅಷ್ಟು ಚರ-ಸ್ಥಿರ ಆಸ್ತಿಗಳ ಪಟ್ಟಿಯನ್ನೇ ವಕೀಲರ ಗುಂಪೊಂದು ರಾಜ್ಯಪಾಲರ ಮುಂದೆ ಈ ವಿವರಗಳನ್ನು ನೀಡಿ ಕ್ರಮ ಕ್ಯೆಗೊಳ್ಳಲೇಬೇಕು ಎಂಬ ಒತ್ತಾಯಿಸಿದರು, ಅಲ್ಲಿಯವರೆಗೂ ಅಳುತ್ತಾ, ಕರ್ನಾಟಕದ ಜನತೆಯಲ್ಲಿ ಕರುಣೆಯನ್ನು ಗಿಟ್ಟಿಸಿಕೊಂಡ ಮೆಚ್ಚಿನ ಮುಖ್ಯಮಂತ್ರಿ ಇಡೀ ಕರ್ನಾಟಕದ ಜನರ ಪಾಲಿಗೆ ಭಸ್ಮಾಸುರನಂತೆಯೇ ಕಂಡಿದ್ದು ಮಾತ್ರ ಶೋಚನೀಯ. ಕರ್ನಾಟಕದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಎಂದಿಗೂ ಮುಖ್ಯಮಂತ್ರಿಯ ಮೇಲೆ ನೇರ ಹೊಣೆಗೇಡಿತನದ ಆರೋಪ ಬಂದಿರಲಿಲ್ಲ. (ಬಹುಶಃ ಅಲ್ಲಿಯವರೆಗೂ ವಿಷಯವನ್ನು ಮುಂದುವರೆಸಲೂ ಬಿಡಲಿಲ್ಲವೇನೋ ?)

ಮುಂದೆ ಹೇಗೋ ? ಮಾಧ್ಯಮಗಳ, ಪರಿಣಿತರ ಅಭಿಪ್ರಾಯದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯಪಾಲರ ನಡುವಿನ ಸಂಘರ್ಷ, ಮಂತ್ರಿಮಂಡಲದಲ್ಲಿನ ಭಿನ್ನತೆ, ಜೊತೆಗೊಂದಿಷ್ಟು ಹುಂಬತನ ಇವೆಲ್ಲ ಕರ್ನಾಟಕದ ಜನತೆಗೆ ಬೇಕಿತ್ತೆ ? ಇಂತಹ ನಾಯಕ, ಎನ್ನುವ ಮಟ್ಟಿಗೆ ಜನ ಬೇಸತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಪವಾಡ ಸದೃಶ್ಯವಾಗಿ ಈ ಎಲ್ಲಾ ಆರೋಪಗಳಿಂದ ಪಾರಾಗುವ ಸಾಧ್ಯತೆಗಳು ಇಲ್ಲ. ಹಾಗಂತ ರಾಜೀನಾಮೆಯ ಯೋಚನೆಯೂ ಸದ್ಯಕ್ಕಿಲ್ಲ. ತಮ್ಮ ಮೇಲಿನ ಆರೋಪಗಳು ನಿರಾಧಾರವಷ್ಟೆ, ಎಂದು ಹೇಳುತಾ, ಕಾಂಗ್ರೆಸ್ಸ್ ಮತ್ತು ಜನತಾದಳದವರು ಮಾಡಿರಬಹುದಾದ ಹಗರಣಗಳನ್ನು ಹುಡುಕುತ ಕೂತಿದ್ದಾರೆ. ಈ ರಾಜಕೀಯ ದೊಂಬರಾಟದಲ್ಲಿ ಯಾರು ಯಾರಿಗಿಂತ ಹೆಚ್ಚು ಮತ್ತು ಕಡಿಮೆ ಎಂಬುದು ಜನತೆಗೂ ತಿಳಿಯುತ್ತಿಲ್ಲ.

ಬುಧವಾರ, ಜನವರಿ 26, 2011

ಮಂಗಳವಾರ, ಜನವರಿ 11, 2011

ಎಷ್ಟೊತ್ತು ನಿನ್ನ ಅಲಂಕಾರ ?



ಮೊನ್ನೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನಕ್ಕೆ ನಾನು ನನ್ನ ಹೆಂಡತಿ ಹೋಗುವ ತಯಾರಿ ನಡೆಯುತ್ತಿತ್ತು. ಸಂಜೆ ನಾಲ್ಕಕ್ಕೆ ಹೊರಡುವ ನನ್ನ ತರಾತುರಿಗೂ ಅವಳ ಅಲಂಕಾರ ಪರಾಕಾಷ್ಟೆಗೂ ಸಮಯ ಐದುವರೆಯಾಗಿತ್ತು. ಅಂತು ಹೊರಡುವ ಭಾಗ್ಯ ಜೊತೆಗೆ ದೊಡ್ಡ ಗಣಪನಿಗೆ ನಮ್ಮ ದರ್ಶನದ ಭಾಗ್ಯ ನೆನೆದು ಕಿರುನಗೆ ಬೀರುತ್ತಾ, ಬೆಂಗಳೂರಿಗೆ ಹೊಸಬಳಾದ ನನ್ನಾಕೆ ರಸ್ತೆಯಲ್ಲಿ ಸಿಗುವ ಅಷ್ಟು ಕಟ್ಟಡಗಳು, ಪಾರ್ಕುಗಳು, ಸಿನಿಮಾ ಥಿಯೇಟರ್ಗಳು, ಅಂಗಡಿ, ಶಾಪಿಂಗ್ ಮಾಲ್ ಎಲ್ಲವನ್ನು ಕುತೂಹಲದಿಂದ ನೋಡುತ್ತಾ, ಪ್ರತಿಯೊಂದಕ್ಕೂ ವಿವರಣೆ ಕೇಳುತ್ತಾ, ಮತ್ತದನ್ನು ತನ್ನ ಊರುಗಳಿಗೆ ಹೊಲಿಸುತಾ ಸಾಗಿತು, ಸಂಜೆ ಆರಕ್ಕೆ ತಲುಪಿದ್ದಾಯಿತು. 

ಅವಳ ಮನಸ್ಸಿನಲ್ಲಿ ಬೆಂಗಳೂರು ಏನು ಅಲ್ಲ, ನ್ಯೆಸರ್ಗಿಕ ಸೌಂದರ್ಯವಿಲ್ಲ, ಅಲ್ಲೆಲ್ಲೂ ಬೆಟ್ಟ ಗುಡ್ಡವಿಲ್ಲ, ನದಿ ತೊರೆಗಳಿಲ್ಲ, ನೇಗಿಲಿಲ್ಲ, ಉಳುವ ಯೋಗಿಯಿಲ್ಲ, ಹಸಿರು ಉಹೂ ಅದ ವಾಸನೆಯೇ ಇಲ್ಲ, ಪ್ರಾಣಿ ಪಕ್ಷಿಗಳಿಲ್ಲ, ಇದ್ದದ್ದು ಒಂದಷ್ಟು ಕಾಗೆಗಳಷ್ಟೇ, ಅದು ಎಲ್ಲೋ ದೂರಕ್ಕೆ ಅಕಸ್ಮಾತಾಗಿ ಬೆಳಯಲು ಬಿಟ್ಟಿದ್ದ ಮರಗಳಲ್ಲಿ, ಆಕಾಶದಲ್ಲಿ, ಮತ್ತೆಲ್ಲೋ ಹೊಟ್ಟೆಹೊರೆಯುವ ಕಾಯಕದಲ್ಲಿ, ಮಲ್ಲೇಶ್ವರಂ ದಾಟಿ ಆನಂದ್ ರಾವ್ ಸರ್ಕಲ್ಲಿಗೆ ಬರುವಾಗ ಇವಳನ್ನು  ಫ್ಲ್ಯೆಓವರ್ ಮೇಲೆ ಕರೆದುಕೊಂಡು ಹೋಗುವ ಮನಸ್ಸಾಗಿ ಕೃಷ್ಣ ಪ್ಲೋರ್ ಮಿಲ್ ಕಡೆಗೆ ಗಾಡಿ ತಿರುಗಿಸಿದ್ದಾಯಿತು, ನೋಡೇ ಈಗ ಪ್ಹ್ಲ್ಯೇಓವರ್ ಬರುತ್ತೆ ಅದು ಮುಗಿಯುವ ವೇಳೆಗೆ ಪಕ್ಕದಲ್ಲೇ ರೇಸ್ ಕೋರ್ಸ್ ಸಿಗುತ್ತೆ ಅಂದೇ, ಯಾಕೋ ಏನು ಮಾತಾಡಲಿಲ್ಲ, ನನ್ನ ಹೆಮ್ಮೆಯ ಬೆಂಗಳೂರು ನೋಡ್ತಿದ್ದಾಳೆ ಅನಿಸಿ, ಸುಮ್ಮನೆ ಗಾಡಿ ಚಲಾಯಿಸುತ್ತಿದ್ದೆ, ಪ್ಹ್ಲ್ಯೇ ಓವರ್ ಇಳಿಯುವಾಗ ಕಾಣುವ ರೇಸ್ ಕೋರ್ಸ್ ತೋರಿಸಲು ಗಾಡಿ ಬಾಡಿಗೆ ಹಾಕಿ ನಿಲ್ಲಿಸಿದೆ, ಇದೆ ಕಣೆ ರೇಸ್ ಕೋರ್ಸ್ ಅಂದೇ, ಥೂ!!! ಇದೆನಾ ನಿಮ್ಮ ಬೆಂಗಳೂರು ಒಂದು ಗಿಡ ಮರ ಇಲ್ವೆಲ್ಲಲ್ರಿ, ಬರ ಬಂದ ಬಯಲುಸೀಮೆಯಾಗಿದೆ ನಿಮ್ಮೂರು, :-) ನಾನು ಅವಳಿಗೆ ರೇಸ್ ಕೋರ್ಸ್ ಬಗ್ಗೆ ಹೇಳೋಕೆ ಹೊರಟೆ, ಸುಮ್ನಿರಿ ಸಾಕು ಕೆಲಸಕ್ಕೆ ಬರದ ಕುದುರೆ ಜೂಜಿಗೆ ಇಷ್ಟು ಜಾಗವಿದೆ, ಒಂದಷ್ಟು ಕೆರೆ ಹೊಲ ಇರೋಕೆ ಜಾಗ ಇಲ್ಲ ಅಂದದ್ದಾಯಿತು, 

ಥಟ್ಟನೆ ನೆನಪಾದವನಂತೆ ಯಾಕಿಲ್ಲ ಕೆರೆ ಇದೆ ಸ್ಯಾಂಕಿ, ಹಲಸೂರು, ಯಡಿಯೂರು, ನಾಗವಾರ, ಹೆಬ್ಬಾಳ, ಬೆಳ್ಳಂದೂರು, ಚಿಕ್ಕಜಾಲ, ಅಂತ ಒಂದೇ ಉಸಿರಿಗೆ ಹೇಳಿ ಬೆಂಗಳೂರಿನ ಮಾನವನ್ನು ಸ್ವಲ್ಪವಾದರೂ ಉಳಿಸುವ ಧ್ಯೆರ್ಯ ಮಾಡಿದೆ. ಹೌದಾ!! ಹಾಗಾದರೆ ಅಲ್ಲೆಲ್ಲ ನೀರು ಚೆನ್ನಾಗಿದ್ಯ ? ಮತ್ತೊಂದು ಪ್ರಶ್ನೆ. ಕುಡಿಯೋಹಂಗೆ ಇಲ್ಲವಾದರು ಬೋಟಿಂಗ್ ಹೋಗೋಕೆ ಅಡ್ಡಿಯಿಲ್ಲ, ಬಡಕೊಬೇಕು ನಿಮ್ಮಗಳ ಶೋಕಿಗೆ, ಕೆರೆನೀರು ಕುಡಿಯೋಹಂಗೆ ಇಲ್ಲದಿದ್ರೆ ದನ ಕರುಗಳೆಲ್ಲ ನೀರು ಕುಡಿಯೋಕೆ ಎಲ್ಲಿ ಹೋಗ್ತವೆ ? ಮತ್ತೊಂದು ಪ್ರಶ್ನೆ, ದನಕರುಗಳ ಇಲ್ಲಿ ಅವೆಲ್ಲ ಕಡಿಮೆ, ಇಲ್ವೇಯಿಲ್ಲ ಅನ್ಕೋ, ಈಗೆಲ್ಲ ನಮ್ಮ ಜನ ಪಾಕೆಟ್ ಹಾಲನ್ನೇ ಕುಡಿಯೋದು, ಮತ್ತೆ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಹಾಲುಗಳು ಸಪ್ಲ್ಯೇ ಆಗ್ತವೆ, ಯಾವ್ದಾದ್ರು ಒಂದಾನಾ ಶೋಕಿ ಇಲ್ಲದಂಗೆ ನೀವುಗಳು ಬದುಕಿದ್ದಿರಾ, ಹೊಲ, ರೇಸ್ ಕೋರ್ಸು ಅಂತೀರಿ, ಕೆರೆ, ಬೋಟಿಂಗಿಗೆ  ಅಂತೀರಿ, ಹಾಲು, ಪಾಕೆಟ್ಟು ಅಂತೀರಿ, ಹಾಗಾದ್ರೆ ನೀವು ನಿಮ್ಮತನ ಅಂತ ಉಳಿಸಿಕೊಂದಿರೋದಾದರು ಏನು. ನಮ್ಮಲ್ಲಿ ನೋಡಿ ಪ್ರತಿ ಊರಿಗೂ ಒಂದು ದೇವರು ಮತ್ತೊಂದು ದ್ಯೆವ ಅನ್ತಿರುತ್ತೆ, ಪ್ರತಿ ಊರಿಗೊಂದು ಉತ್ಸವ ನಡಿಯುತ್ತೆ, ನಮ್ಮನೆ ಹಸು ಕೊಟ್ಟ ಹಾಳೆ ನಮಗೆ ಶ್ರೇಷ್ಠ, ನಾವು ದಿನವು ಹಸಿರು ನೋಡ್ತೇವೆ, ಕೆರೆ ನಮಗೆ ಬಟ್ಟೆ ಒಗಿಲಿಕ್ಕೆ, ದನಗಳ ನೀರಿಗೆ, ಇನ್ಯಾವುದೇ ವಿಷಯಕ್ಕೂ ಸರಿ, ಈ ಪಾಟಿ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿ ಯಾರನ್ನ ಬದುಕಿಸ್ತೀರ, ನಿಮಗೆ ಕಷ್ಟ ಅಂದ್ರೆ ಏನು ಗೊತ್ತು, ಬೆವರು ಬಂದಿದ್ದು ಯಾವತ್ತಾದ್ರು ನೆನಪಿದ್ಯಾ, ನಡೆದುಕೊಂಡು ಒಂದು ಮ್ಯೆಲಿ ದೂರನಾದ್ರು  ಹೋಗಿದ್ದುಂಟಾ, ಪ್ರಶ್ನೆಗಳ ಸುರಿಮಳೆಯೇ ನನ್ನ ಮೇಲೆ ಅದ್ಯಾಕೆ ನಾನು ಅಲಂಕಾರ ಇಷ್ಟೊತ್ತ ಅಂದನೋ ? 

ಇಲ್ಲ ಕಣೆ ಇಲ್ಲಿಯಾ ಹವೆಗೆ ಬೆವರೋದಿಲ್ಲ, ಇದು ಸಮುದ್ರ ಮಟ್ಟದಿಂದ ತುಂಬಾ ಎತ್ತರ ಪ್ರದೇಶದಲ್ಲಿದೇ, ಇಲ್ಲಿಯ ಹವೆನಾ ಎಲ್ಲರು ಇಷ್ಟಪಡ್ತಾರೆ, ಪಕ್ಕದಲ್ಲೇ ಫ್ಲ್ಯೆಓವರ್ ಕೆಲಸದ ಲಾರಿಯೊಂದು ಮಣ್ಣಿನ ಧೂಳು ಎಗರಿಸುತ್ತ ಭರ್ರನೆ ಹೋಯ್ತು. ಥೂ ಇದನ್ನ ಯಾವನ್ ಒಳ್ಳೆ ಹವೆ ಅಂತಾರೆ ಸುಮ್ನೆ ಬೆಂಗಳೂರು ಅಂತ ಕೊಚ್ಕೊಳ್ಬೇಡಿ, ನಿಮ್ಮದು ಅಂತ ಒಂದೆ ಅಭಿಮಾನದ ವಿಷಯ ಇದ್ಯಾ.

ಅಬ್ಬಾ ದೊಡ್ಡ ಗಣಪನ ಗುಡಿಗೆ ಬಂದಾಯ್ತು, ಬರುವ ಮುಂಚೆನೇ ಸಹಸ್ರನಾಮಾರ್ಚನೇನು ಆಗಿತ್ತಲ್ಲ. ಗಾಡಿ ನಿಲ್ಲಿಸಿ ಮೆಟ್ಟಿಲು ಹತ್ತುತ್ತಿದ್ವಿ, ಅಲ್ಲಿ ಅದ್ಯಾರೋ ಕೆಲವು ಹುಡುಗರು ಸಿಗರೆಟ್ ಸೇದೋಕೆ ಅಂತ ಕಡ್ಡಿಗೆ ಹುಡುಕಾಡ್ತಿದ್ರು ಅನ್ಸುತ್ತೆ, ಸಾರ್ !!! ಮ್ಯಾಚ್ ಬಾಕ್ಸ್ ಇದ್ಯಾ ಅಂತ ನನ್ನನ್ನೇ ಕೇಳಬೇಕೆ, ಇಲ್ಲ ಅಂದೇ, ಅಷ್ಟರಲ್ಲಾಗಲೇ ನನ್ನವಳ ಕಣ್ಣು ನನ್ನ ಸರ್ವಾಂಗ ಜೋಬುಗಳ ಸ್ಕ್ಯಾನಿಂಗ್ ಯಂತ್ರವಾಗಿತ್ತು. ಯಾಕೆ ಹ್ಯಾಂಗ್ ನೋಡ್ತೀಯ, ಮ್ಯಾಚ್ ಬಾಕ್ಸ್ ಕೇಳಿದ್ದು ಅವರು ನನಗಲ್ಲ ನಡಿ, ಹೋಗೋಣ ಅಂತ ಹೇಳ್ತಾ ಗಣಪನ ಮುಂದೆ ನಿಂತಾಯ್ತು, ಅದೇನು ಭಕ್ತಿ ಬಂದಿತ್ತೋ ಒಂದೆರಡು ನಿಮಿಷದವರೆ ಅವಳು ಮೌನ, ನನಗೋ ಮನಸಲ್ಲೇ ಖುಷಿ ಅಬ್ಬಾ ಮಳೆ ಬಂದು ನಿಂತಗಾಯ್ತಲ್ಲ, ಬೆಂಗಳೂರು ಜನ್ಮ ಜಾಲಾಡಿದ್ದು ನಿಲ್ತಲ್ಲ ಅಂತ, ಪೂಜೆಗೆ ತಂದಿದ್ದ ಹಣ್ಣು ಕಾಯಿಗಳನ್ನು ಪುರೋಹಿತರಿಗೆ ಕೊಟ್ಟದ್ದಾಯಿತು, ಪುರೋಹಿತರು ಮಂತ್ರ ಹೇಳುತ್ತಾ ಜನ್ಮ ನಕ್ಷತ್ರ ಪ್ರವರ ಕೇಳಿದ್ರು, ಒಂದನ್ನು ಚಾಚು ತಪ್ಪದೆ ವರದಿ ಒಪ್ಪಿಸಿದ ನನ್ನ ಮಡದಿ ಪುರೋಹಿತರು ನೀಡಿದ ಕಾಯನ್ನು ನೋಡಿ ಏನ್ರಿ ಇದು ನಾವು ಕೊಟ್ಟದ್ದು ಒಂದು ಕಾಯಿ ಅವರು ಅರ್ಧ ಕೊಟ್ಟಿದ್ದಾರೆ ಅಂದದ್ದೇ, ನಾನು ಇನ್ನೆಲ್ಲಿಯ ಗ್ರಹಚಾರ ಅಂತ ತಿಳಿದು, ಇಲ್ವೆ ಇಲ್ಲೆಲ್ಲಾ ಅರ್ಧ ಕಾಯಿ ಕೊಡೋದು ಅಂದು ಆ ಕಡೆ ತಿರುಗಿ ಬಾಳೆಸಿಪ್ಪೆ ಬಿಸಾಕಿದೆ, ಇದೆಂಥ ಪೂಜೇರಿ, ಆ ಹುಡುಗ ಇನ್ನು ಎಳಸು ಅವನಿಗೆ ಮಂತ್ರಗಳ ಸ್ಪಷ್ಟ ಉಚ್ಚಾರವೇ ಇಲ್ಲ, ನಮ್ಮೂರಲ್ಲಿ ಗುರುಕುಲದಲ್ಲಿ ಕಲಿತ  ಏಳು ವರ್ಷದ ಮಗುವು ಸ್ಪಷ್ಟವಾಗಿ ಮಂತ್ರಗಳ ಉಚ್ಚಾರ ಮಾಡುತ್ತೆ, ದೇವರ ಪುಜೆನು ಇಲ್ಲ ಶೋಕಿಗಾಗಿ ಮಾಡ್ತಾರ ? ಹೇಳ್ರಿ. 

ನನಗೆ ಗೊತ್ತಿಲ್ವೆ ಮಹರಾಯ್ತಿ, ನಾನು ಯಾವ ಪೂಜೆ, ಮಂತ್ರವನ್ನು ಕಲಿತಿಲ್ಲ ಅಂದೆ, ನಿಮ್ಮತ್ರ ಹೇಳ್ತಿನಲ್ಲ ನಾನು ಹೋಗಿ, ಒಂದು ಸಂಧ್ಯಾವಂದನೆನು ಬರದವರಿಗೆ, ನೀವೆಲ್ಲ ಕಂಪ್ಯೂಟರ್ ಮುಂದೆ ಕುಳಿತು ಕುತ್ತೋಕೆ ಲಾಯಕ್ಕು, ನಿಮಗೆ ದಿನ ನಿತ್ಯದ ಬದುಕು ಹೇಗೆ ನೋಡ್ಬೇಕು, ಗೊತ್ತಿಲ್ಲ, ಬೆಳಿಗ್ಗೆಯಿಂದ ರಾತ್ರಿವರೆಗೆ ಲ್ಯಾಪ್ ಟಾಪ್ ಇಟ್ಕೊಂಡು ಕೂತುಬಿಟ್ರೆ, ಅಲ್ಲೊಂದಿಷ್ಟು ಬರೆದು ಓದಿ ಮಾಡಿ ಬಿಟ್ರೆ ಇನ್ನೇನು ಬೇಕೇ ಆಗಿಲ್ಲ, ಜೊತೆಗೆ ಈ ಮೊಬ್ಯೆಲ್ ಬೇರೆ, ಕೋತಿಗೆ ಬಾಳೆಹಣ್ಣು ಕೊಟ್ಟಂತೆ. ಮಹರಾಯ್ತಿ ನನ್ನ ಬಿತ್ತ್ಬಿದು ನಾನು ಅಲಂಕಾರ ಇಷ್ತೊತ್ತಾ ಅಂದದ್ದು ದೊಡ್ಡ ತಪ್ಪಾಯ್ತು ? :)

ಭಾನುವಾರ, ಅಕ್ಟೋಬರ್ 31, 2010

ಮ್ಯೆಸೂರು ಅರಮನೆ

ಮ್ಯೆಸೂರು ಅರಮನೆ ಒಂದು ಅಧ್ಬುತ ಕಥಾನಕ.........
ಕಣ್ಣ ಮುಂದೆಯೇ ಕಾಣುವ ಕೌತುಕ,
ಎಷ್ಟು ನೋಡಿದರೂ ತೀರದ ತವಕ,
ಅದೇ ಹೆಮ್ಮೆಯ ಕರ್ನಾಟಕ

ಇಲ್ಲಿ ಚಿಟುಕಿಸಿ ಮ್ಯೆಸೂರು ಅರಮನೆ

ಬುಧವಾರ, ಅಕ್ಟೋಬರ್ 6, 2010

ರಂಗೋಲಿ....... ಚಿತ್ತ-ಚಿತ್ತಾರಗಳ ನಡುವೆ - ಸಂಚಿಕೆ ೧


ತುಂಬಾ ದಿನಗಳಿಂದ ಬರೀಬೇಕು, ಬರೀಬೇಕು ಅಂತಾ ಕುಳಿತು ಪೆನ್ನು ಹಿಡಿದ್ರೆ ಹಾಳಾದ್ದು ಏನೇನೋ ಆಲೋಚನೆ ಕಣ್ ಮುಂದೆ ಬರೋದು, ಇವತ್ತು ಬರೀಲೇಬೇಕು, ಅಂತ ಬೆಳ್ಳಂಬೆಳ್ಳಗ್ಗೆ ಎದ್ದು, ಮೊದಲು ಪೋನ್ಗಳು ಸ್ವಿಚ್ ಆಫ್ ಮಾಡಿ ಕೂತೆ, ಮನೆ ಹೊರಗಡೆ ರಂಗೋಲಿ ರಂಗೋಲಿ............ ಅಂತ ಕೂಗ್ತಾಯಿರೋ ಸದ್ದು, ಚಿಕ್ಕಂದಿನಿಂದಲೂ ಈ ಸದ್ದು ಕೇಳಿದ್ದು ಮತ್ತೊಮ್ಮೆ, ನನ್ನ ಬಾಲ್ಯವನ್ನು ನೆನಪಿಸಿದ ಹಾಗೆ ಓಡೋಡಿ ಹೊರಗೆ ಬಂದೆ, ಮನೆಯ ಸುತ್ತಮುತ್ತಲಿನ ಕೆಲವರು ರಂಗೋಲಿ ವ್ಯಾಪಾರ ಮಾಡ್ತಿದ್ರು, ಸೇರಿಗೆ ೧೫ರೂಪಾಯಿ ಅಂತ ಆಕೆ, ಈ ಹೆಂಗಸರು ೧೦ರೂಪಾಯಿಗೆ ಒಂದು ಸೇರು ಕೊಡು ಅಂತ ವಾಗ್ವಾದ.

ನೆನಪಿದ್ದಂತೆ ಸೇರಿಗೆ ೧ರೂಪಾಯಿ ೧.೫೦ರೂಪಾಯಿತ್ತು. ನಿತ್ಯ ಜೀವನದ ದರ ಸಮರ, ಆರ್ಥಿಕ ಸಮತೋಲನ ಈ ರಂಗೋಲಿ ಹುಡುಗಿಯ ಮೇಲು ಬಿದ್ದಂಗಿದೆ ಅನ್ಕೊಂಡು, ಒಳಗೆ ಬರೋವಾಗ ಅಕಸ್ಮಾತ್ ಏನೋ ನೋಡಿದ ನೆನಪಾಗಿ ರಂಗೋಲಿ ಮಾರುವ ಹುಡುಗಿಯನ್ನೇ ದಿಟ್ಟಿಸಿ ನೋಡಿದೆ, ಎಲ್ಲೋ ನೋಡಿದ ನೆನಪು, ಗೊತ್ತಾಗ್ತಾಯಿಲ್ವೆಲ್ಲ, ಅಂತ ಅವಳ ಮುಖವನ್ನೇ ದಿಟ್ಟಿಸಿ ನೋಡ್ತಿದ್ದೆ. ಆಕೆ ಅಲ್ಲಿ ಚೌಕಾಸಿ ಮಾಡಿ ವ್ಯಾಪಾರ ಮುಗಿಸುವ ಧಾವಂತದಲ್ಲಿದ್ದಳು. ಈ ಹುಡುಗಿ ನನಗೆಲ್ಲೋ ಪರಿಚಯ ಇರಬಹುದಾ !!, ಇವಳನ್ನಾ ನೋಡಿದ್ದಿನಾ ಅಂತ ನನ್ನ ಸಮಸ್ತ ಗೆಳೆಯರ ಬಳಗವನ್ನೇ ಒಮ್ಮೆ ಮೆಲುಕು ಹಾಕಿದ್ದಾಯಿತು. ನೆನಪಾಗಲಿಲ್ಲ.

ಯೋಚನೆ ಬೆಳಿಗ್ಗೆಯ ನನ್ನ ಪ್ರಾತಕರ್ಮಗಳನ್ನು ಮರೆಸುವಂತಿತ್ತು. ಆಕೆ ನಮ್ಮ ಬೀದಿಯ ಕಡೆಯವರೆಗೂ ಹೋಗಿ ಒಂದ್ಯೆದು ನಿಮಿಷಕ್ಕೆ ವಾಪಸ್ ಬಂದು, ಅವಳನ್ನ ಕೇಳೇ ಬಿಡುವ ಅಂತ ನಿರ್ಧರಿಸಿ, ರೀ ಮೇಡಂ ಅಂದೆ, ಅರೆ!!! ಅರವಿಂದ ಅಲ್ವಾ ನೀವು ಅಂತಾ ಹುಡುಗಿ ನನ್ನ ಹತ್ರ ಬರ್ತಿದ್ಳು. ಈಗಂತೂ ನನ್ನ ನೆನಪಿನ ಶಕ್ತಿ ಕುಂದಿದೆ ಅನ್ನೋದು ಗ್ಯಾರೆಂಟಿ ಆಗೋಯ್ತು, ಏನಂತ ಹೇಳೋದು ಹು......... ಅಂದೆ. ನೀವಿಗ ಇಲ್ಲಿರೋದಾ ? ನಾನು ನಿಮ್ಮನ್ನ ಗುರುತು ಹಿಡಿತಿನಿ ಅಂತ ಅನ್ಕೊಂಡೆ ಇರಲಿಲ್ಲ ? ಅಪ್ಪ-ಅಮ್ಮ ಎಲ್ಲಾ ಹೇಗಿದ್ದಾರೆ ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಯಾವುದಕ್ಕೂ ಉತ್ತರಿಸಲಿ ಎಂಬ ಧಾವಂತ, ಜೊತೆಗೆ ಈಕೆ ಯಾರು ಎಂಬ ಮರೆವು ? ಎಲ್ಲಾ ಆರಾಮಾಗಿದ್ದಿವಿ, ಅಂತ ಹೇಳಿ ಜಾರಿಕೊಳ್ಳೋ ಪ್ರಯತ್ನ ಮಾಡಿದ್ರು, ಈಕೆ ಯಾರು ಎಂಬ ಸುಳಿವು ನೆನಪಾಗ್ಲಿಲ್ಲ.

ಧ್ಯೆರ್ಯಮಾಡಿ ಕೇಳೇ ಬಿಡೋಣ, ಅನ್ನಿಸಿ, ಕ್ಷಮಿಸಿ, ನಿಮ್ಮನ್ನ ನೋಡಿದ ನೆನಪು ಆದ್ರೆ ಯಾರು ಅಂತ ಗೊತ್ತಾಗ್ತಿಲ್ಲ, ಅಂದೆ ? ಒಂದು ಕ್ಷಣ ಅವಳು ಮುಗುಳು ನಗು ತಡೆಹಿಡಿದು, ನೆನಪಿಸ್ಕೊಳ್ಳೀ, ನೀವು ನನ್ನನ್ನ ಮರೆತಿರೋಲ್ಲ, ಆದ್ರೆ ನೀವು ಮರೀತಿರಾ ಅಂತ ಗೊತ್ತಿರಲಿಲ್ಲ. ಅಂದಾಗ ಬಟ್ಟೆಗೆ ಚಪ್ಪಲಿಸುತ್ತಿ ಹೊಡೆದಂತಾದ ಅನುಭವ, ಹೌದು ನಾನು ಸಾಮಾನ್ಯವಾಗಿ ಯಾರನ್ನು ಅಷ್ಟು ಮರೆತಿರೋಲ್ಲ, ಈಗ್ಯಾಕೆ ಹೀಗೆ ? ಅನ್ನಿಸಿ, ಇಲ್ಲಾರಿ ಗೊತ್ತಾಗಲಿಲ್ಲ,

ನಿಮಗೆ ಹುಳಿಸಾರು ಮಾಡಿಕೊಟ್ಟ ನಾನು ನನ್ನಮ್ಮ ಮರೆತೋಯ್ತಾ ಅಂದ್ಲು, ಹುಳಿಸಾರು ನನಗಿಷ್ಟ ಅಂತ ಈಕೆಗೆ ಹೇಗೆ ಗೊತ್ತಾಯ್ತು, ನಾನ್ಯಾವಾಗ ಈಕೆಯ ಮನೆಗೆ ಹೋಗಿದ್ದೆ ? ಇವರಮ್ಮ ನನಗೇಕೆ ಹುಳಿಸಾರು ಮಾಡಿಕೊಡಬೇಕು ? ಪ್ರಶ್ನೆಗಳಿಗೆಲ್ಲ ನನ್ನ ಮರೆವೇ ಉತ್ತರವೆಂಬಂತೇ ಪೆಚ್ಚಾಗಿ ನೋಡುತ್ತಿದ್ದೆ. ಇನ್ನು ಈ ಮರೆವು ಸುಬ್ಬನಿಗೆ ನೆನಪಿಸೋದು ಸಾಧ್ಯವಿಲ್ಲ ಅನ್ನಿಸಿ, ಆಕೆ ಅನಂತಪುರಕ್ಕೆ ನೀವು ಬಂದಿದ್ದು ನೆನಪಿಲ್ವಾ ಅಂದ್ಳು ? ತಕ್ಷಣ ನನ್ನ ಮೆದುಳಿನಲ್ಲಿ ಬಲ್ಬ್ ಹತ್ತಿ ಉರಿದಂತೆ ಹಾ........ ಬಂದಿದ್ದೇನೆ, ನನ್ನ ಗೆಳೆಯ ಶೇಖರ್ ಆಸ್ಪತ್ರೆಗೆ ಸೇರಿಸಿದಾಗ ಪಕ್ಕದ ಬೆಡ್ನಲ್ಲಿ ಮಲಗಿದ್ದ ಇವರಪ್ಪ ನೆನಪಾಯಿತು, ಹೋ ಸುನಂದ ತಾನೆ ನೀವು ಅಂದೆ! ಹು ಸದ್ಯ ನೆನಪಾಯಿತಲ್ಲಾ, ಅಂತ ಅವಳ ಮೂದಲಿಕೆ, ಹೇಗಿದ್ದೀರಾ,ನಿಮ್ಮ ಅಪ್ಪ-ಅಮ್ಮ ಹೇಗಿದ್ದಾರೆ ? ಅಪ್ಪನ ಆರೋಗ್ಯ ಸರಿ ಹೋಯ್ತಾ ? ಅಮ್ಮ ಈಗ ಎಲ್ಲಿ ? ಎಂಬ ಒಂದಷ್ಟು ಪ್ರಶ್ನೆಗಳು ನನ್ನಿಂದ. ಆಕೆಯನ್ನು ಮನೆಗೆ ಬರ ಹೇಳಿ ಅಮ್ಮನಿಗೆ ಆಕೆಯ ಪರಿಚಯ ಮಾಡಿಕೊಟ್ಟು ನನ್ನ ಹಳೆ ಪ್ರಶ್ನೆಗಳನ್ನೇ ಮತ್ತೊಮ್ಮೆ ಕೇಳಿದೆ.

ಅಪ್ಪ ತೀರಿ ಹೋದ್ರು, ಅಮ್ಮ ನಾನು ಈಗ ರಂಗೋಲಿ ವ್ಯಾಪಾರ ಮಾಡ್ಕೊಂಡು ಬೆಂಗಳೂರಿಗೆ ಬಂದು ೨ ವರ್ಷವಾಯ್ತು. ಯಾವತ್ತೋ ಒಂದಿನ ನೀವೆಲ್ಲಾ ಸಿಗಬಹುದು ಬೆಂಗಳೂರಿನಲ್ಲಿ ಅನ್ಕೊಂಡಿದ್ದೆ, ನನಗಂತೂ ಬಹಳ ಖುಷಿಯಾಯ್ತು, ಅನ್ನೋ ಅವಳ ಮಾತಿನಲ್ಲಿ ಹಿಂದೆ ನೋಡಿದ್ದ ಮತ್ತೆನೋ ಮುಚ್ಚಿಡ್ತಿದ್ದಾಳೆ, ಅನ್ನಿಸ್ತು, ಆಕೆ ಮೊದಲಿನಂತೆ ಸಹಜ ನಗು, ಗೆಲುವು ಇಲ್ಲ, ಯಾಕೆ ಸುನಂದ ಮೊದಲಿನಂತೆ ನೀವು ಈಗಿಲ್ಲ, ಏನೋ ಯೋಚಿಸ್ತಿರೋ ಹಾಗಿದೆ, ಹಾಗೇನು ಇಲ್ಲ, ನೀವೆಲ್ಲಾ ಅವತ್ತು ನಮ್ಮ ಮನೆಗೆ ಬಂದಾಗ ನನಗೇನೋ ಬಹಳ ಖುಷಿಯಾಗಿತ್ತು, ಆದ್ರೆ ಅವತ್ತಿನ ದಿನದ ನಂತರ ನಡೆದ ಘಟನೆಗಳು ತುಂಬಾ ನೋವುಂಟು ಮಾಡಿತ್ತು, ತುಂಬಾ ನೊಂದಿದ್ದಾಳೆ ಅನ್ನಿಸಿ, ಏನಾಯ್ತು ಸುನಂದ, ನನ್ನತ್ರನೂ ಹೇಳಾಬಾರ್ದಾ ಸಾಧ್ಯವಾದ್ರೆ ಪರಿಹಾರ ಮಾಡೋಣ ಹೇಳಿ, ಹಾಗೆಲ್ಲ ನೋವನ್ನ ಮನಸ್ಸಿನಲ್ಲೇ ಹಿಡಿದಿಡಬಾರದು. ನಾನು ನಿಮ್ಮನ್ನ ಅಕಾಲಿಕವಾಗಿ ಮರೆತಿದ್ದೆ ಹೌದು, ಆದ್ರೆ ನಿಮಗೆ ಸಹಕರಿಸುತ್ತೇನೆ ಎಂಬ ವಾಗ್ದಾನ ನೀಡಿದ್ದಾಯಿತು,

ಅರವಿಂದ್, ನೀವೆಲ್ಲ ಬಹುಶಃ ೧೯೯೯ ರ ಏಪ್ರಿಲ್ ತಿಂಗಳಲ್ಲಿ ಅನಂತಪುರದಲ್ಲಿದ್ದರೆಂಬ ನೆನಪು. ಹ್ಯೆದರಾಬಾದಿಗೆ ಹೊರಡ್ತಿದ್ರಿ ಅಲ್ವಾ. ನಿಮ್ಮ ಗೆಳೆಯ ಶೇಖರನನ್ನ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆತಂದ ವಾರಕ್ಕೆ ನಮ್ಮಪ್ಪನೂ ಮನೆಗೆ ವಾಪಸ್ ಬಂದ್ರು, ನನಗಾಗ ಗಂಡು ನೋಡೋಕೆ ಶುರು ಮಾಡಿದ್ರು, ನಾನು ಪಿಯುಸಿ ತನಕ ಓದಿದ್ದೆನಾದ್ದರಿಂದ, ಓದಿದ ಹುಡುಗನನ್ನೇ ಮದುವೆಯಾಗಬೇಕು, ಅನ್ನೋ ಆಸೆ, ಜೊತೆಗೆ ಆ ಹುಡುಗ ಸೆಟಲ್ ಆಗಿದ್ರೆ, ನನ್ನ ತಂದೆ ತಾಯಿಯನ್ನು ನನ್ನೊಂದಿಗೆ ಇರಿಸಿಕೊಳ್ಳುವ ಆಲೋಚನೆ, ಅಮ್ಮನಿಗೆ ಓದಿದ ಹುಡುಗನಾದ್ರೆ ಮಾತ್ರ ಮದುವೆಯಾಗೋದು, ಅವನು ನಮ್ಮೂರಿನವನೇ ಆಗಬೇಕೆಂದೇನಿಲ್ಲ. ಎಂಬ ಒಂದಿಷ್ಟು ಶರತ್ತುಗಳನ್ನು ಹೇಳಿದೆ. ಅಮ್ಮ ತಮ್ಮ ಪರಿಚಯವಿದ್ದ ಬಂಧುಗಳಿಗೆ ಸ್ನೇಹಿತರಿಗೆ ನನಗೆ ಮದುವೆಗೆ ವರ ನೋಡ್ತಿರೋ ವಿಷ್ಯ ಹೇಳ್ತಿದ್ರು. ಹಾಗೆ ನನ್ನ ಪರಿಚಿತರಿಂದ ಅದೇ ಊರಿನಿಂದ ಕೆಲವು ಹುಡುಗರೂ ಮನೆಗೆ ಬಂದುಹೋದರು. ಆದರೆ ನಂಗೆ ಇಷ್ಟ ಆಗೋಂತಾ ಕ್ವಾಲಿಟಿಸ್ ಅವರಲ್ಲಿ ಇರಲಿಲ್ಲ. ಈ ಮಧ್ಯೆ ನಮ್ಮ ಊರಿಗೆ ಹೊಸದಾಗಿ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಶುರುವಾಯಿತು. ಹಟಹಿಡಿದು ಕಂಪ್ಯೂಟರ್ ಕಲಿತರೆ ಏನಾದ್ರೂ ಮುಂದೆ ಉಪಯೋಗ ಬರಬಹುದೆಂದು ದಿನವೂ ಅಮ್ಮ-ಅಪ್ಪನ ಮುಂದೆ ದುಂಬಾಲು ಬಿದ್ದೆ, ಅಂತೂ ಇಂತೂ ಕಂಪ್ಯೂಟರ್ ಕಲಿಯೋಕೆ ಒಪ್ಪಿಗೆ ಸಿಕ್ಕಿ, ಸಂಜೆ ತರಗತಿಗೆ ಸೇರಿದ್ದಾಯಿತು.

ಬಹುಶಃ ಇದು ನನ್ನ ಜೀವನದಲ್ಲಿ ನಾ ಮಾಡಿದ ದೊಡ್ಡ ತಪ್ಪು ಅನ್ಸುತ್ತೆ, ಕಂಪ್ಯೂಟರ್ ಕಲಿತ ಹಮ್ಮು ಜೊತೆಗೆ ಒಂದಿಷ್ಟು ತಲೆಗೆ ಹೋಗಿ, ಆದಷ್ಟು ಬೇಗ ಒಂದು ನೌಕರಿ ಹುಡುಕುವ ಆಲೋಚನೆ, ಈ ಮೂರ್ನ್ನಾಲ್ಕು ತಿಂಗಳಲ್ಲಿ ಬಹಳ ಜನ ಹುಡುಗರನ್ನ ನೋಡೋ ಕಾರ್ಯಕ್ರಮವಾದರೂ ನಾನು ಯಾರನ್ನು ಒಪ್ಪಿಕೊಳ್ಳಲೇ ಇಲ್ಲ, ಇದರ ನಡುವೆ ನಮ್ಮ ಇನ್ಸ್ಟಿಟ್ಯೂಟಿಗೆ ಹ್ಯೆದರಾಬಾದಿನಲ್ಲಿನ ಒಂದು ಕಂಪೆನಿಗೆ ಕಂಪ್ಯೂಟರ್ ಆಪರೇಟರ್ಗಳು ಬೇಕಾಗಿದ್ದಾರೆ, ಎಂದು ಸಂಬಳ ತಿಂಗಳಿಗೆ ೭ ಸಾವಿರ, ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆಯಿದೆ. ಎಂದು ಇನ್ಸಿಟ್ಯೂಟಿನ ಹೆಡ್ ಹೇಳಿದರು, ಅದಕ್ಕೆ ಮೊದಲು ಮುಂದಿನ ಶನಿವಾರ ನಿಮ್ಮೆಲ್ಲರನ್ನೂ ಇಲ್ಲೇ ಇಂಟರ್ವ್ಯೂ ತೆಗೆದುಕೊಳ್ಳುತ್ತಾರೆ, ಬೆಳಿಗ್ಗೆ ಸರಿಯಾಗಿ ೧೦ಕ್ಕೆ ಎಲ್ಲರೂ ಇಲ್ಲಿ ಬಂದಿರುವುದೆಂದು ಹೇಳಿದರು. ಅದರಂತೆ ೨೦ ಜನ ಇಂಟರ್ವ್ಯೂಗೆ ತಯಾರಾಗಿ ಬಂದೆವು, ಮೊದಲು ಅವರು ಎಲ್ಲರನ್ನೂ ಒಂದು ರೂಮಿನಲ್ಲಿ ಕುಳಿತುಕೊಳ್ಳಲಿಕ್ಕೆ ಹೇಳಿ, ದೂರದಿಂದಲೇ ಪ್ರತಿಯೊಬ್ಬರನ್ನು ಗಮನಿಸಿ, ನಾನು, ವಂದನಾ, ಸುಖನ್ಯ, ರಾಧಾ, ಗೀತಾ, ಮಮ್ತಾಜ್, ಮೆಹುರೂಬಾಳನ್ನು ಮತ್ತು ಆನಂದನನ್ನು ಕರೆದರು, ನಮಗೆ ಎಲ್ಲಿಲ್ಲದ ಅತ್ಯುತ್ಸಾಹ, ಅವರು ಕೇಳಿದ್ದು ಕೆಲವೇ ಪ್ರಶ್ನೆ ನಿಮ್ಮೂರು ಯಾವುದು ? ಮತ್ತು ನಿಮ್ಮ ಮನೆಯಲ್ಲಿ ಯಾರ್ಯಾರು ಇದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ? ಎಲ್ಲರೂ ಏನು ಓದಿದ್ದಾರೆ ? ಎಲ್ಲರೂ ನಮ್ಮ ಯೋಗ್ಯಾನುತಾಸಾರ ಹೇಳಿದೆವು, ನಂತರ ಅವರು ನೀವು ಸದ್ಯಕ್ಕೆ ಅಲ್ಲಿ ಆರು ತಿಂಗಳ ಕಾಲ ಟ್ರ್ಯೆನಿಂಗಿನಲ್ಲಿ ಇರುತ್ತೀರಿ. ಮತ್ತು ನಿಮಗೆ ಆ ಆರು ತಿಂಗಳ ಸಂಬಳವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಮತ್ತು ನಿಮ್ಮ ಖರ್ಚುಗಳನ್ನು ನಾವೇ ನೋಡಿಕೊಳ್ಳುತ್ತೇವೆ. ಇದೆಲ್ಲದಕ್ಕೆ ಒಪ್ಪಿಗೆಯಾದರೆ ಬುಧವಾರ ನೀವುಗಳೆಲ್ಲರೂ ನನ್ನೊಂದಿಗೆ ಹೊರಡಬೇಕು. ನಿಮ್ಮ ಅಭಿಪ್ರಾಯವನ್ನು ನನಗೆ ಸೋಮವಾರದೊಳಗೆ ತಿಳಿಸಬೇಕೆಂದು ಹೇಳಿದರು.

ನನಗಂತೂ ಅರವಿಂದ್ ಪ್ರಪಂಚವನ್ನೇ ಗೆದ್ದ ಅನುಭವ, ಅಪ್ಪ-ಅಮ್ಮನನ್ನು ಹೇಗಾದರೂ ಮಾಡಿ ಒಪ್ಪಿಸಿಬಿಡಬೇಕು, ಇನ್ಮುಂದೆ ನಮ್ಮ ಜೀವನ ಹಸನಾಗಿರುತ್ತದೆ. ನಾನು ಒಂದಷ್ಟು ವರ್ಷ ಕೆಲ್ಸ ಮಾಡಿ, ಒಳ್ಳೆಯ ಹುಡುಗನನ್ನು ಮದುವೆಯಾಗಬೇಕು........ ಇನ್ನು ಏನೇನೋ ಆಲೋಚನೆ, ಅಂತೂ ಅಪ್ಪ-ಅಮ್ಮನನ್ನು ಒಪ್ಪಿಸುವ ಶತಪ್ರಯತ್ನ ಸಫಲವಾಯಿತು.ಅಂದು ಬುಧವಾರ ನಾವೆಲ್ಲ ಅವರೇ ತಂದಿದ್ದ ಟಾಟ ಸುಮೋನಲ್ಲಿ ಹ್ಯೆದರಾಬಾದಿಗೆ ಹೊರಟದ್ದಾಯಿತು................

ಹ್ಯೆದರಾಬಾದಿನಂತಹ ದೊಡ್ಡ ಸಿಟಿಯನ್ನು ನನ್ನ ಜೀವಮಾನದಲ್ಲೂ ನೋಡದ ಅನುಭವ, ನನ್ನ ಕಲ್ಪನೆಗಳನ್ನು ಮೀರಿದ ಸ್ಥಳ, ಇಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನ ಸಾಗರ, ದೊಡ್ಡ ದೊಡ್ಡ ಬಿಲ್ಡಿಂಗಗಳು, ಅಬ್ಬಾ ನಿಜಕ್ಕೂ ನಾನು ಸಕ್ಕತ್ ಖುಷಿಯಿಂದಿದ್ದೆ. ಮೊದಲ ದಿನ ಸಂಜೆ ನಮ್ಮೆಲ್ಲರನ್ನು ಹ್ಯೆದರಾಬಾದಿನ ಚಾರ್ಮಿನಾರ್, ಪೇಟೆ ಬೀದಿಗಳಲ್ಲಿ ಸುತ್ತಾಡಿಸಿದರು. ಮತ್ತು ಎಲ್ಲೆಲ್ಲಿ ಜನಸಂದಣಿಯಿರುತ್ತದೆ. ಯಾವಾಗ ಜನ ಹೆಚ್ಚು ಈ ಸ್ಥಳಗಳಿಗೆ ಬರುತ್ತಾರೆ, ಅಲ್ಲಿಂದ ನಾವಿಳಿದುಕೊಂಡಿದ್ದ ಸ್ಥಳ ಎಷ್ಟು ದೂರ ಎಲ್ಲಾ ವಿಷಯವನ್ನು ತಿಳಿಸಿದರು. ರಾತ್ರಿ ಅಲ್ಲೇ ಒಂದು ಹೋಟೆಲಿನಲ್ಲಿ ಊಟಕ್ಕೂ ಕರೆದುಕೊಂಡು ಹೋದರು. ರಾತ್ರಿ ೧೦.೩೦ಕ್ಕೆ ಕೊಠಡಿಗೆ ಬಂದ ನಾವು ಮಲಗಿಕೊಳ್ಳುವ ತಯಾರಿಯಲ್ಲಿದ್ದೆವು.

ನಮ್ಮ ಜೊತೆ ಒಬ್ಬಳು ಹೆಂಗಸು ಬಂದು ಮಲಗಿದಳು, ಸುಮಾರು ೫೫ ರಿಂದ ೬೦ ವರ್ಷದ ಹೆಂಗಸು, ಹಣೆಗೆ ದೊಡ್ಡ ಕುಂಕುಮ, ನಿಡಿದಾದ ಸೀರೆ, ಹೆಸರು ಸೌಭಾಗ್ಯಮ್ಮ ಅಂತೆ ಮೂಲ ರಾಯಚೂರಿನವಳು ಎಂದಷ್ಟೆ ಗೊತ್ತಾಯಿತು. ಮೊದಲು ಎಲ್ಲರನ್ನು ತೆಲುಗು ಭಾಷೆಯಲ್ಲೇ ಪರಿಚಯ ಮಾಡಿಕೊಂಡಳು, ನಂತರ ನಾನು ಮೂಲತಃ ಕನ್ನಡದವಳು ಎಂದು ತಿಳಿದು ನನ್ನ ಜೊತೆಗೆ ಮಾತ್ರ ಕನ್ನಡದಲ್ಲಿ ಮಾತಾನಾಡಿಸಿದಳು. ನಾನು ಅವಳೊಂದಿಗೆ ಹೆಚ್ಚಿನ ಸಲುಗೆಯಿಂದ ಮಾತಾಡಿದಕ್ಕೋ ಏನೋ, ನನ್ನನ್ನೇ ಮೊದಲು ರೂಮಿನೊಳಗೆ ಬರೋಕೆ ಹೇಳಿ ಬಟ್ಟೆಗಳನ್ನೆಲ್ಲ ಬಿಚ್ಚುವಂತೆ ಹೇಳಿದಳು. ನಾನು ಆಗಂತೂ ಥರಗುಟ್ಟಿ ಹೋದೆ, ಯಾಕೆ ? ಬಟ್ಟೆ ಬಿಚ್ಚಬೇಕು, ನಾನು ಬಿಚ್ಚುವುದಿಲ್ಲ, ಎಂದು ಗಟ್ಟಿಯಾಗಿ ಹೇಳಿದಳು, ಅದುವರೆಗೂ ಶಾಂತ ರೀತಿಯಲ್ಲಿದ್ದ ಸೌಭಾಗ್ಯಮ್ಮ "ಮುಚ್ಚುಕೊಂಡು ಬಿಚ್ಚೆ ಲೌಡಿ, ನಿನಗಿಲ್ಲೇನು, ಹಾಯಾಗಿ ತಿಂದು ಕುಡಿದು ಮಜಾ ಮಾಡೋಕಾ ಕರ್ಕೊಂಡು ಬಂದಿರೋದು, ನಾನು ಹೇಳಿದಂತೆ ಕೇಳಿದರೆ ಇಲ್ಲಿ ಆರಾಮಾಗಿ ಇರ್ತೀಯಾ, ಇಲ್ಲಾಂದ್ರೆ ಸಾಯಿಸಿಬಿಡ್ತಿನಿ" ನಾಳೆಯಿಂದ ನೀವೆಲ್ಲಾ ಕೆಲಸ ಶುರು ಮಾಡಬೇಕು ಅಂದ್ಳು. ನಾನು ಮಾಡೊ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೂ, ನಿನ್ಮುಂದೆ ಬಟ್ಟೆ ಬಿಚ್ಚೋಕು ಸಂಬಂಧ ಏನು ? ನಾನು ಬಿಚ್ಚೊಲ್ಲ ಅಂತ ಹಟ ಹಿಡಿದೆ, ಕಪಾಳಕ್ಕೆ ಜೋರಾಗಿ ಹೊಡೆದು ಬಟ್ಟೆ ಬಿಚ್ಚೋಕೆ ಅವಳೇ ಪ್ರಯತ್ನಿಸಿದಳು, ಆಗಂತೂ ನನಗೆ ತುಂಬಾ ಸಂಕಟ ಜೊತೆಗೆ ಅಮ್ಮ-ಅಪ್ಪನ ನೆನಪು ಜಾಸ್ತಿಯಾಗಿ ಅಳೋಕೆ ಶುರುವಿಟ್ಟೆ. ನನ್ನ ಆರ್ಭಟವನ್ನ ಕೇಳಿ ಇನ್ನು ಸಿಟ್ಟಾದ ಆಕೆ ಮನಸ್ಸಿಗೆ ಬಂದಂತೆ ಬಡಿಯಲಾರಂಭಿಸಿದಳು. ಅವಳ ಏಟಿಗೆ ನಾನು ಸುಸ್ತಾಗಿ ಜ್ನಾನ ತಪ್ಪಿ ಬಿದ್ದಂತಾಗಿತ್ತು, ಮತ್ತೆ ನೀರು ಹಾಕಿ ಎಬ್ಬಿಸಿ, ಅಸಹ್ಯವಾಗಿ ನನ್ನನ್ನು ನೋಡಲಾರಂಭಿಸಿದಳು. ನನಗೆ ಕ್ಷಣ ಕ್ಷಣಕ್ಕೂ ಅಮ್ಮನದೇ ನೆನಪು. ನಾನು ಋತುಮತಿಯಾದಾಗಲೂ ಅಮ್ಮ ಹೀಗೆ ಮಾಡಿದವಳಲ್ಲ, ಅವಳೇ ನನ್ನ ಎಲ್ಲವನ್ನೂ ಕಲಿಸಿಕೊಟ್ಟಳಾದಳು, ಒಮ್ಮೆಯೂ ಹೀಗೆ ಅಸಹ್ಯವಾಗಿ ಹೇಳಿದವಳಲ್ಲ, ನನಗೆ ಸೌಭಾಗ್ಯಮ್ಮನ ಆರ್ಭಟವನ್ನು ತಡೆಯುವ ಶಕ್ತಿಯೇ ಇಲ್ಲದಾಯಿತು. ನಂತರ ಯಾರಿಗೋ ಪೋನು ಮಾಡಿ ನನ್ನ ದೇಹದ ವಿವರವನ್ನು ಹೇಳಿದಳು ಅನ್ಸುತ್ತೆ, ನಂತರ ನನ್ನ ಜೊತೆಗಿದ್ದ ಹುಡುಗೀರಿಗೂ ಇದೇ ಅನುಭವವಾಯ್ತು.

ಎಚ್ಚರವಾದಾಗ ನಾನು ಯಾವುದೋ ಹಾಸಿಗೆಯಲ್ಲಿ ಮಲಗಿದ್ದೆ, ಅದು ರಾತ್ರಿ ನಾನಿದ್ದ ರೂಮಲ್ಲ, ಗಾಬರಿಯಿಂದೆದ್ದು ಸುತ್ತಲೂ ನೋಡಿದೆ, ಮಬ್ಬುಗತ್ತಲು ಹೊರಗೆ ವಾಹನಗಳು ಓಡಾಡುವ ಸದ್ದಷ್ಟೆ ಕೇಳುತ್ತಿದೆ ಬಾಗಿಲನ್ನು ಜೋರಾಗಿ ಬಡಿದು ಬಡಿದು ಸುಸ್ತಾಯಿತು, ಕುಡಿಯಲೂ ನೀರು ಇಲ್ಲ, ಸಂಜೆಗೆ ಯಾರೋ ಬಾಗಿಲು ತೆಗೆಯುವ ಸದ್ದು, ನಾನು ತಕ್ಷಣ ಎದ್ದು ಬಾಗಿಲ ಬಳಿ ಓಡಿ ಹೋದೆ, ಸೌಭಾಗ್ಯಮ್ಮ, ನನ್ನನ್ನು ಕರ್ಕೊಂಡು ಬಂದ ಆ ವ್ಯಕ್ತಿ ಮತ್ತು ಒಂದಿಬ್ಬರು ಗಂಡಸರು ಒಳಗೆ ಬಂದರು, ನಾನು ಅವರನ್ನು ಬಿಡಿಸಿಕೊಂಡು ಓಡಿಹೋಗಲಿಕ್ಕೆ ಪ್ರಯತ್ನಿಸಿದೆ, ಆಗಲಿಲ್ಲ ಅರವಿಂದ್. ಅವರು ನನ್ನನ್ನ ಭದ್ರವಾಗಿ ಹಿಡಿದು "ಗಲಾಟೆ ಮಾಡಬೇಡ, ನೀನು ನಾವು ಹೇಳಿದಂತೆ ಕೇಳಿದರೆ ನಿನಗೆ ಕೇಳಿದಷ್ಟೂ ಹಣ ಮತ್ತು ನಿಮ್ಮ ಅಪ್ಪ-ಅಮ್ಮನಿಗೂ ಹಣ ಕಳಿಸುವ ವ್ಯವಸ್ಥೆ ಮಾಡುತ್ತೇವೆ. ಇಲ್ಲದಿದ್ದರೆ ನಿನ್ನನ್ನು ಇಲ್ಲೇ ಸಾಯಿಸಿ, ನಿಮ್ಮಮ್ಮ ಅಪ್ಪನಿಗೂ ಸಾಯಿಸುತ್ತೇವೆ ಅಂತ ಹೆದರಿಸಿದರು. ನಾನು ಅಮಾಯಕಳಾಗಿ ಮತ್ತದೇ ಪ್ರಶ್ನೆಕೇಳಿದೆ ನನಗೆ ಕಂಪ್ಯೂಟರ್ ಕೆಲ್ಸ ಕೊಡ್ಸಿ ಸಾಕು, ನಾನು ಇಲ್ಲೇ ಇರ್ತೇನೆ, ನೀವೆಲ್ಲ ನನಗೆ ಹೊಡೆಯಬೇಡಿ, ನನ್ನ ಅಪ್ಪ-ಅಮ್ಮನ ಹತ್ರ ಕಳಿಸ್ಕೊಡಿ ಒಂದ್ಸಲ, ನಾನು ಅವರತ್ರ ಮಾತಾಡಬೇಕು ಎಂದೆಲ್ಲಾ ಮನಸ್ಸಿಗೆ ತೋಚಿದ್ದೆಲ್ಲಾ ಗೋಗರೆದೆ. ಕಲ್ಲು ಹೃದಯದವರು ಕೇಳಬೇಕಲ್ಲ, ಎಲ್ಲದಕ್ಕೂ ಒಪ್ಪಲು ಮುಂಚೆ ನೀನು ನಾವು ಹೇಳಿದ ಕೆಲ್ಸ ಮಾಡಿದರೆ ಮಾತ್ರ ಎಂಬ ಶರತ್ತು ಅವರದು. ಪ್ರತಿ ರಾತ್ರಿ ಅವರು ಹೇಳುವ ವ್ಯಕ್ತಿಯ ಜೊತೆಗೆ ನಾನು ಸುಖವನ್ನು ಹಂಚಬೇಕಂತೆ...........

ಇದ್ಯಾವುದಕ್ಕೂ ನಾನು ಕಿವಿಗೊಡದೆ ವಾರಗಟ್ಟಲೆ ಅವರ ಪ್ರತಿದಿನ ಅವರು ಕೊಡುವ ಹಿಂಸೆಯನ್ನು ಸಹಿಸಿ ಸಾಕಾಯಿತು, ಊಟವಿಲ್ಲದೆ, ಸರಿಯಾದ ನಿದ್ದೆಯಿಲ್ಲದೆ ನಾನು ಡಿಹ್ಯೆಡ್ರೆಷನಿಗೆ ಹೋಗಿ ಆಸ್ಪತ್ರೆಗೆ ಸೇರಿಸುವ ಪರಿಸ್ಥಿತಿ ಬಂದಿತ್ತು. ಅಂತಾ ಸಮಯದಲ್ಲೂ ಅವರು ನನಗೆ ಯಾವುದೇ ಡಾಕ್ಟರನ್ನು ಭೇಟಿಮಾಡುವ ಅವಕಾಶವನ್ನೇ ಕೊಡಲಿಲ್ಲ. ಇನ್ನು ನನ್ನ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ತಿಳಿದ ಅವರೆಲ್ಲ ಒಬ್ಬ ಡಾಕ್ಟರನ್ನು ನಾನಿರುವ ಜಾಗಕ್ಕೆ ಕರೆದುಕೊಂಡು ಬಂದು, ನನ್ನ ಆರೋಗ್ಯ ಸುಧಾರಿಸುವ ಪ್ರಯತ್ನದಲ್ಲಿದ್ದರು. ನಾನು ಡಾಕ್ಟರ್ ನನ್ನ ಬಳಿ ಬಂದು ಚಿಕಿತ್ಸೆ ನೀಡುವುದಕ್ಕೂ ಒಪ್ಪದೆ ಒಂದೇ ಸಮನೆ ಕಿರಿಚಾಡತೊಡಗಿದೆ. ಚಟಾರ್................... ಎಂದು ಕಪಾಳಕ್ಕೆ ಒದೆ ಬಿತ್ತು, ಅಷ್ಟೆ ಗೊತ್ತಾದದ್ದು, ಹೊಡೆದದ್ದು ಯಾರೆಂದು ನೋಡುವುದರೊಳಗೆ ನನಗೆ ಜ್ಣಾನ ತಪ್ಪಿದಂತಾಗಿತ್ತು. ಆಮೇಲೆನಾಯಿತೋ ಗೊತ್ತಿಲ್ಲ. ಎಚ್ಚರವಾದಾಗ ನನಗೆ ಕ್ಯೆಕಾಲುಗಳನ್ನು ಕಟ್ಟಿ ಹಾಕಿದ್ದರು. ಮತ್ತು ಮೊದಲಿನ ಸುಸ್ತು ಸ್ವಲ್ಪ ಕಡಿಮೆಯಾಗಿತ್ತು. ಪಕ್ಕದಲ್ಲೇ ಸೌಭಾಗ್ಯಮ್ಮ ಕುಳಿತಿದ್ದಳು. ಅವಳ ನೋಡುತ್ತಿದ್ದಂತೆ ನನಗೆ ರೋಷ ಉಕ್ಕಿಬಂದರು, ಇನ್ನು ನನ್ನಿಂದೇನು ಹೋರಾಡಲು ಸಾಧ್ಯವಿಲ್ಲ ಎನಿಸಿ, ಸುಮ್ಮನೆ ಮಲಗಿದ್ದೆ.

ಸೌಭಾಗ್ಯಮ್ಮ ಒಮ್ಮೊಮ್ಮೆ ಬಹಳ ಸಾದ್ವಿಯಂತೆ ನನ್ನ ಬಳಿ ಬಂದು ನಿನ್ನ ಆರೋಗ್ಯ ಸುಧಾರಿಸಿಕೋ, ನೀನು ಹಟ ಹಿಡಿದರೆ ಆರೋಗ್ಯ ಸುಧಾರಿಸುವುದಾದರೂ ಹೇಗೆ ? ಮೊದಲು ಹುಷಾರಾಗು ಎಂದೆಲ್ಲ ಥೇಟ್ ನಮ್ಮಮ್ಮನಂತೆ ಹೇಳುವಾಗಲಂತೂ ಅಪ್ಪ-ಅಮ್ಮನ ನೆನಪು ತುಂಬಾ ಬರುತ್ತಿತ್ತು.

ಮುಂದುವರೆಯುವುದು............

ಬುಧವಾರ, ಆಗಸ್ಟ್ 18, 2010

ಚೀನಾದ ಪುರಾತನ ಬೌದ್ದ ದೇವಸ್ಥಾನ

ಬೆಂಗಳೂರಿನ ತೂಗು ಸೇತುವೆ ನೋಡಿರಬಹುದು, ಹಾಗೇ ಚೀನಾದಲ್ಲಿ ತೂಗು ದೇವಸ್ಥಾನ ನೋಡಿ ಇಲ್ಲಿದೆ. ಬೌದ್ಧರಿಗೊಂದು ಯಾತ್ರಾಸ್ಥಳ, ಇದು ಮೌಂಟ್ ಹೆಂಗ್ ಸ್ಥಳದ ಹತ್ತಿರ ಇದ್ದು, ಶಾಂಕ್ಸಿ ನಗರದಲ್ಲಿ ಕಂಡುಬರುತ್ತದೆ. ಡಾಟಾಂಗ್ ನಗರದಿಂದ ೬೫ ಕಿ.ಮೀ. ದೂರ. ಇದೊಂದು ಮುಖ್ಯ ಪ್ರವಾಸಿ ತಾಣ ಹಾಗೂ ಹಳೆಯ ದೇವಸ್ಥಾನ. ಇದು ಸುಮಾರು ೧೫೦೦ ವರ್ಷಗಳ ಹಿಂದೆ ನಿರ್ಮಿಸಿದ್ದಂತೆ. 






























ಸೋಮವಾರ, ಆಗಸ್ಟ್ 16, 2010

ಬದಲಾಗಬೇಕು......,, ಇನ್ನು ಬದಲಾಗಲೇಬೇಕು

ಬದಲಾಗಬೇಕು.......
ಇನ್ನು ಬದಲಾಗಬೇಕು......,,
ಇನ್ನು ಬದಲಾಗಲೇಬೇಕು.........

ಉಳಿಗಾಲವಿಲ್ಲ, ಬದಲಾಗದಿದ್ದೊಡೆ,
ಉಳಿಯಲೇಬೇಕು, ಬರಗಾಲವಿದ್ದೊಡೆ,
ಬಂದಿಹುದು ಬರಗಾಲ ನಾಯಕನಿಲ್ಲದೆ,
ಬಂದಿಹುದು ಬರಗಾಲ ಹಿಡಿತವಿಲ್ಲದೆ,
ಬಂದಿಹುದು ಬರಗಾಲ ನೀತಿನಿಯಮಾವಳಿಯ ಪಾಲಿಸದೆ,
ಬಂದಿಹುದು ಬರಗಾಲ ನ್ಯಾಯ ನೀತಿಗೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಅಧಿಕಾರ ಗದ್ದುಗೆ,
ಗದ್ದುಗೆ ಬೇಕು...... ಮೂರು ವರ್ಷಗಳಿಗೆ,
ಗದ್ದುಗೆ ಬೇಕು.... ಇನ್ನಷ್ಟು ಅಕ್ರಮಗಳಿಗೆ,
ಗದ್ದುಗೆ ಬೇಕು, ಗಣಿ ಹಗರಣಗಳಿಗೆ,
ಗದ್ದುಗೆ ಬೇಕು, ಅಭಿವೃದ್ಧಿಯ ಮಂತ್ರಕೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಗೋಹತ್ಯೆ ತಡೆದೊಡೆ,
ಗೋಹತ್ಯೆ ತಡೆಯೋಕೆ....... ಕ್ಯೆಕತ್ತಿರಿಸುವುದಕೆ,
ಗೋಹತ್ಯೆ ತಡೆಯೋಕೆ........ ಕ್ಯೆಎತ್ತೋಕೆ,
ಗೋಹತ್ಯೆಯೊಂದೇ ಇರೋದು ತಡೆಯೋಕೆ,
ಪ್ರಾಣಿ ಹಿಂಸೆ ನಿಲ್ಲಿಸಲಿ ಸಾಧ್ಯವಿದ್ದೊಡೆ,


ಬದಲಾಗಬೇಕು ಮಂತ್ರಿ ಕುತಂತ್ರಿಗಳೆಲ್ಲ,
ಬರಗಾಲಕ್ಕಲ್ಲ, ಗದ್ದುಗೆಯ ಹಂಬಲಕ್ಕಲ್ಲ,
ಗೋಹತ್ಯೆಗೊಂದೆ ಬೇಕಿಲ್ಲ,
ಜನರ ನಾಡಿಮಿಡಿತವ ಅರಿಯಲು,
ಎಲ್ಲರ ಬೇಕು-ಬೇಡಗಳ ತಿಳಿಯಲು..
ಬದಲಾಗಬೇಕು ಮುಖ್ಯಮಂತ್ರಿಗಳೇ
ಯಕ್ಷಿತ್: ನೀವು ಹೇಳಿದ ಮಾತಿಗೆ......
ಆಗದಿದ್ದರೆ ಬದಲಾಗಲೇಬೇಕು ..........ಮುಖ್ಯಮಂತ್ರಿ,

ಶುಕ್ರವಾರ, ಆಗಸ್ಟ್ 6, 2010

ಗುರುತಿನ ಚೀಟಿ ಪ್ರಾಧಿಕಾರ UIDAI


ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಜೂನ್ ೨೫ರ ೨೦೦೯ ರಂದು ಲೋಕಸಭೆಯಲ್ಲಿ ಅಸ್ತಿತ್ವಕ್ಕೆ ಬಂದ ಗುರುತಿನ ಚೀಟಿ ವಿತರಣಾ ಯೋಜನೆ, ಮುಂದಿನ ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಗುರುತಿನ ಚೀಟಿಯನ್ನು ನೀಡುವ ಯೋಜನೆ ಹಮ್ಮಿಕೊಂಡಿತು. ಈ ಯೋಜನೆಗೆ ಇನ್ಫೋಸಿಸ್ ಸಂಸ್ಥೆಯ ಪ್ರಧಾನರಾದ ನಂದನ್ ನಿಲಕೇಣಿಯವರನ್ನು ಯೋಜನೆಯ ಮುಖ್ಯಸ್ಥರನ್ನಾಗಿ ಗುರುತಿಸಿ ಪ್ರತಿ ನಾಗರೀಕನಿಗೂ ಗುರುತಿನ ಚೀಟಿಯನ್ನು ಕ್ರಮಬದ್ಧವಾಗಿ ನೀಡುವ ಜವಾಬ್ದಾರಿಯನ್ನು ನೀಡಿತು. ಸರ್ಕಾರ ಯೋಜನೆಗೆ ಅಂಗೀಕಾರ ನೀಡಿದ್ದು, ಶಿಸ್ತು ಮತ್ತು ಬದ್ದತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಬ್ಯೆಯೋಮೆಟ್ರಿಕ್ ಆಧಾರದಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಉತ್ಸುಕವಾಗಿದೆ.

ಗುರುವಾರ, ಆಗಸ್ಟ್ 5, 2010

ರಕ್ತದಾನ - ಮಹಾದಾನ

ಪ್ರತಿ ವರ್ಷದ ಜೂನ್ ೧೪ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುತ್ತಾರೆ. ನಿಮ್ಮ ಸುತ್ತ-ಮುತ್ತಲಲ್ಲೇ ಎಷ್ಟೊ ಜನಕ್ಕೆ ರಕ್ತದ ಅವಶ್ಯಕತೆ ಇರುತ್ತದೆ, ಹಾದಿ ಬೀದಿಯಲ್ಲಿ ದಿನಕ್ಕೊಬ್ಬರಾದರೂ ರಸ್ತೆ ಅಫಘಾತ, ಮತ್ಯಾವುದೋ ತೊಂದರೆಯಿಂದ ಬಳಲುತ್ತಾ ಇರುವವರಿಗೆ ರಕ್ತದ ಅವಶ್ಯಕತೆ ಇರುತ್ತದೆ,  ರಕ್ತದ ಅವಶ್ಯಕತೆ ಇರುವವರಿಗೆ ನಮ್ಮಿಂದ -ನಿಮ್ಮಿಂದ ಸಹಾಯವಾದರೆ ಅದಕ್ಕೆ ಸಿಗುವ ತುಂಬು ಹೃದಯದ ಅಭಿನಂದನೆಯೇ ವರ್ಣಾತೀತ.



ಬುಧವಾರ, ಆಗಸ್ಟ್ 4, 2010

ದೇವರು, ಧರ್ಮ ಮತ್ತವನ ಜಾತಿ. - ಸರಣಿ ೨

ಕ್ರಿ.ಪೂ. ೧೦೦೦
ದೇವರು ಹುಟ್ಟಿದ್ದು ಹೇಗೆ ?

ಹಳೆಶಿಲಾಯುಗದ ಕಾಲದಲ್ಲಿ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದದ್ದು, ಪಠ್ಯಪುಸ್ತಕಗಳಲ್ಲಿ ಓದಿಯೇ ಇರುತ್ತೀರಿ. ಅದು ಅವನ ಅಂದಿನ ಅವಶ್ಯಕತೆ. ಆದರೆ ಮನುಷ್ಯನಿಗೆ ತನ್ನ ಸುತ್ತಮುತ್ತಲಿನ ನಿಸರ್ಗದ ವ್ಯೆಪರೀತ್ಯಗಳು, ಒಮ್ಮೊಮ್ಮೆ ವಿಚಿತ್ರವಾಗಿ ಉಂಟಾಗುವ ಗುಡುಗು, ಮಿಂಚು, ಭೂಕಂಪ ಅವನನ್ನು ಗೊಂದಲಕ್ಕೀಡು ಮಾಡುತ್ತಿತ್ತೇನೋ ? ಈ ವಿಚಿತ್ರಗಳ ಅನುಭವದಿಂದ ಮನುಷ್ಯ ತನ್ನನ್ನು ಮೀರಿ ಮತ್ತೊಬ್ಬ ಶಕ್ತಿವಂತನಿರಬಹುದು. ಆ ವ್ಯಕ್ತಿ ಇವೆಲ್ಲವನ್ನು ಮಾಡುತ್ತಿರಬಹುದೇನೋ ಎಂಬ ಭ್ರಾಂತಿಗೆ ಬಂದ ? ನಿಸರ್ಗದ ದೃಷ್ಠಿಯಲ್ಲಿ ಮನುಷ್ಯ ಕಂಡ ಪ್ರತಿ ಬದಲಾವಣೆಗಳನ್ನು ನಂತರದ ದಿನಗಳಲ್ಲಿ ದೇವರು ಎಂಬ ಹೆಸರಿನಲ್ಲಿ ಕರೆದಿರಬಹುದು.

ಇಂಥ ದೇವರುಗಳನ್ನು ಕಾಲಕ್ರಮೇಣ ಪ್ರತಿ ಪಂಗಡದಲ್ಲೂ ಅವರ ಕಲ್ಪನೆಯ ಅನುಸಾರ ಮೂರ್ತರೂಪ ಕೊಟ್ಟು, ಆ ಗುಂಪಿನ ನಾಯಕ ತನಗೆ ಏನು ತೋಚುತ್ತಿತ್ತೋ ಹಾಗೆ ಪೂಜೆಯನ್ನೋ ಅಥವಾ ಮತ್ತಿನ್ಯಾವುದೋ ರೀತಿ ಮನವಿಯನ್ನೋ ಮಾಡುತ್ತಿದ್ದುದು ಇನ್ನಿತರ ಸದಸ್ಯರುಗಳಿಗೆ ಅದೇ ಸರಿ ಮತ್ತು ನಾಯಕನ ಮಾತಿನಂತೆ ಮತ್ತವನು ಮಾಡುತ್ತಿದ್ದ ಪೂಜೆಯೆಂಬ ಹೆಸರಿನ ಪ್ರಕಾರವೇ ದೇವರನ್ನು ಒಲಿಸುವುದು ಎಂಬ ಭಾವನೆ ಬಂದಿರಬಹುದು. ಹೀಗೆ ನಡೆಸುವ ಪೂಜೆ-ಪುನಸ್ಕಾರಗಳ ನಂತರ ಅವರ ಕಷ್ಟಗಳು ಆಕಸ್ಮಿಕವಾಗಿ ನಿವಾರಣೆಯಾದಾಗ ದೇವರು ನಮ್ಮ ಇಷ್ಟಾರ್ಥವನ್ನು ಸಿದ್ಧಿಸುವ ವ್ಯಕ್ತಿ ಮತ್ತು ನಾವು ಆ ಕಾಣದ ವ್ಯಕ್ತಿಗೆ ಯಾವತ್ತೂ ಅಭಾರಿಯಾಗಿರಬೇಕೆನ್ನಿಸಿತೇನೋ ?,

 .  ಪ್ರಕೃತಿಯಲ್ಲಿನ ಪ್ರತಿ ಕ್ಷಣದ ಬದಲಾವಣೆಗಳು ಕೆಲವು ಕಾಲದ ನಂತರ ನಿಲ್ಲುತ್ತವೆ, ಮತ್ತೆ ಮತ್ತೆ ಪುನರಾವರ್ತನೆಗಳಾಗುತ್ತವೆ. ಇಂಥ ಪುನಾರವರ್ತನೆಗಳು ಭೂಮಿಯ ಮೇಲ್ಮ್ಯೆ ಲಕ್ಷಣ, ಭೌಗೋಳಿಕ ವ್ಯತ್ಯಾಸ, ವಾತಾವರಣದ ಏರು ಪೇರುಗಳಿಂದ ಸಾಧ್ಯ. ಕನಿಷ್ಠ ವಿಚಾರಗಳನ್ನು ಯೋಚಿಸಲು ಇಷ್ಟಪಡದ ಜನ ತಮ್ಮ ಗುಂಪಿನ ನಾಯಕನ ಅಣತಿಯಂತೆ ತಮ್ಮದೇ ಆದ ವಿಧಾನಗಳನ್ನು, ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಕಾಲಕ್ರಮೇಣ ಮಾಡಿಕೊಂಡದ್ದು ಇರಬಹುದು. ಆಗಿನ ಶಿಲಾಯುಗದ ಜನರ ಅನೇಕ ಗುಂಪುಗಳು ಇಂಥದೇ ಪರಿಸ್ಥಿತಿಯನ್ನು ಎದುರಿಸಿ ಅವರದೇ ಆದ ನೀತಿ ಕಟ್ಟುಪಾಡುಗಳನ್ನು ಆಚರಣೆಗೆ ತಂದಿದ್ದಿರಬಹುದು.

ಮನಶಾಸ್ತ್ರಜ್ಣರು ಹೇಳುವಂತೆ ಎಲ್ಲ ಮನುಷ್ಯರು ಕಾಲಕ್ಕೆ ತಕ್ಕಂತೆ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅವು ಕಾಲದಿಂದ ಕಾಲಕ್ಕೆ ಬದಲಾದರೂ, ಅವುಗಳಲ್ಲಿನ ಬದಲಾವಣೆಗಳು ಮುಂದಿನ ತಲೆಮಾರಿನಿಂದ ಆಗಿರುತ್ತವೆ. ದೇವರು ಎಂಬ ಭಾವ ಮನುಷ್ಯನ ಕೆಲವು ವಿಚಿತ್ರ ಯೋಚನೆಗಳಿಗೆ ಅನುಕೂಲವು ಹಾಗೂ ಅನಾನುಕೂಲವು ಆಗಿದ್ದಿರಬಹುದು. ಅವನ ಅನುಕೂಲಗಳನ್ನು ದೇವರ ಕೃಪೆಯೆಂದು, ಅವನ ಅನಾನುಕೂಲವನ್ನು ಶಾಪವೆಂದು ಭ್ರಮಿಸಿ, ಅದರಂತೆ ನಡೆದುಬಂದಿರಬಹುದು.

ಪ್ರದೇಶದಿಂದ ಪ್ರದೇಶಕ್ಕೆ ಮಾರ್ಪಾಡುಗಳಾದಾಗ ಮೊದಲಿಗೆ ದೇವರ ಪರಿಕಲ್ಪನೆಯನ್ನು ಪ್ರತಿಗುಂಪುಗಳು ನಂಬಿದ್ದ ರೀತಿಯೇ ಶ್ರೇಷ್ಠ ಎಂಬುವ, ಹಾಗೂ ಅದರಂತೆ ನಡೆದುಕೊಳ್ಳುವ ಹಂಬಲ ಹೆಚ್ಚಾದದ್ದಿರಬಹುದು. ನಲವತ್ತು ಜನರಿರುವ ಒಂದು ಗುಂಪಿನ ನಾಯಕ ತನ್ನ ಮನಸ್ಸಿಚ್ಚೆಯಂತೆ ಯಾವುದನ್ನು ಆಚರಿಸುವನೋ ಅದೇ ಆ ಗುಂಪಿನ ಸದಸ್ಯರ ಆಚರಣೆಗಳಾಗಿರಬಹುದು. ನಂತರದ ದಿನಗಳಲ್ಲಿ ಅವನ ಗುಂಪಿನ ಮಕ್ಕಳು ಮೊಮ್ಮಕ್ಕಳು, ಮರಿ ಮಕ್ಕಳು ಆ ಕ್ರಮವನ್ನೇ ಆಚರಿಸುತ್ತಾ ಅದೇ ನಮ್ಮ ಕುಲದೇವರು ಮತ್ತು ಆ ಜಗವೇ ನಮ್ಮ ಜಾತಿ ಎಂಬ ಅಭಿಮತಕ್ಕೆ ಬಂದಿದ್ದಿರಬಹುದು. ಕಲ್ಲಿನಿಂದ ಕಲ್ಲನ್ನು ಹೊಡೆದಾಗ ಉಂಟಾಗುತ್ತಿದ್ದ ಬೆಳಕು ಬೆಂಕಿಯಾಗಿ, ನಂತರದ ದಿನಗಳಲ್ಲಿ ಮನುಷ್ಯನಿಗೆ ಅದರ ಬಳಕೆಯು ತಾನು ತಿನ್ನಿವ ಆಹಾರಕ್ಕೆ ಅಗತ್ಯವಾಗಿ, ಆಹಾರಗಳನ್ನು ಬೇಯಿಸಿ ತಿಂದರೆ ರುಚಿ ಹೆಚ್ಚೆಂಬುದನ್ನು ತಿಳಿದು, ಬೇಯಿಸಿ ತಿನ್ನುವ ಆಹಾರ ಶುದ್ಧ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂಬ ಚಿಂತನೆ, ದೇವರ ಹುಟ್ಟಿಗೂ ತಳುಕು ಹಾಕಿ ನೋಡಬಹುದು.

ಮುಂದುವರೆಯುವುದು.................

ಮಂಗಳವಾರ, ಆಗಸ್ಟ್ 3, 2010

ಯುವ ಜನರೇ ಆತ್ಮಹತ್ಯೆಗೆ ಮುನ್ನ ಯೋಚಿಸಿ ?

ಬದುಕಿನ ಕಟ್ಟಕಡೆಯ ಸಂಧರ್ಭವಾದರು, ಯಾರಿಗೂ ತಿಳಿಯದ ನಿಗೂಢ, ಇಂದಿನ ಯುವ ಜನರ ಮನದಲ್ಲಿ ಸಾವು ಎಂಬುದು ಆಟಿಕೆಯ ವಸ್ತುವೇ ? ಸಾವನ್ನು ಅಷ್ಟು ಸುಲಭವಾಗಿ ಆಸ್ವಾದಿಸುವುದಾದರೆ ಎಷ್ಟೋ ಸಮಸ್ಯೆಗಳಿಗೆ ಜೀವವೇ ಇರುತ್ತಿರಲಿಲ್ಲ. ಇಂದಿನ ಧಾವಂತದದ ಯುಗದಲ್ಲಿ ಎಲ್ಲೆಲ್ಲೂ ಪ್ಯೆಪೋಟಿ, ಎಲ್ಲರನ್ನು ಹಿಂದುಕ್ಕುವಂತ ನಾಗಾಲೋಟದ ಮನಸ್ಸಿಗೆ ಅಷ್ಟು ಸುಲಭವಾಗಿ ಸಾವು ಬಂತಂದರೆ ಅಥವಾ ಸಾವಿನ ನಿರ್ಣಯವನ್ನು ಕ್ಯೆಗೆತ್ತುಕೊಂಡರೆ ಅದಕ್ಕಿಂತಲೂ ಹೇಡಿತನ ಮತ್ತೊಂದಿಲ್ಲ.

ಅಸಲಿಗೆ ನಮ್ಮ ಯುವ ಜನರಲ್ಲಿ ಸಮಸ್ಯೆಗಳ ಪರಿಹಾರವನ್ನು ಹುಡುಕಿಕೊಳ್ಳುವ ತಾಳ್ಮೆಯೇ ಇಲ್ಲದಾಗಿದೆಯೇ ? ಅಥವಾ ಪ್ಯೆಪೋಟಿ ಜಗತ್ತಿಗೆ ಅವರನ್ನು ಒಡ್ಡಿಕೊಳ್ಳುವ ಛಲವೇ ಮರೆತು ಹೋಗಿದೆಯೇ ? ಸಮಸ್ಯೆ ಕೌಟುಂಬಿಕದ್ದೆ ಇರಲಿ, ಅಥವಾ ನೌಕರಿಯದೆ ಇರಲಿ, ಪ್ರತಿ ಸಮಸ್ಯೆಗಳು ಸೃಷ್ಟಿಗಳಿಗೂ ಕಾರಣ ಪರಿಹಾರವಿಲ್ಲದೆ ಇಲ್ಲ. ಈಗ್ಗೆ ಕೆಲವು ವರುಷಗಳಿಂದ ಸ್ವಾಭಾವಿಕ ಸಾವಿನ ಸಂಖ್ಯೆ ಇಳಿಮುಖವಾದರು, ಅಸ್ವಾಭಾವಿಕವಾಗಿ ಸಾವನ್ನು ಬರಮಾಡಿಕೊಳ್ಳುವ ಯುವ ಜನರಲ್ಲಿ ಮಾನಸಿಕ ಸ್ಥ್ಯೇರ್ಯ, ಸಮಸ್ಯೆಗಳ ಸ್ವರೂಪದಲ್ಲಿರುವ ಗೋಜಲುಗಳು, ಅರ್ಥಮಾಡಿಕೊಳ್ಳುವದರಲ್ಲಿ ಸಂಯಮವೇ ಕಳೆದು ಹೋಗಿದೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಯಾರನ್ನೋ ಹೊಣೆಯನ್ನಾಗಿ ಮಾಡುವ, ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿರುವ, ಮತ್ತು ಅದರ ಕೂತೂಹಲಕ್ಕೆ ಪ್ರಯತ್ನಿಸುವ ಮಿತ್ರರೇ, ಒಮ್ಮೆ ನಿಮ್ಮ ಸಮಸ್ಯೆಯಾ ಬಗ್ಗೆ ಚಿಂತನೆ ನಡೆಸಿ, ಸಾಧ್ಯವಾದರೆ ನಿಮ್ಮ ಆಪ್ತರೊಡನೆ ಒಮ್ಮೆ ಚರ್ಚಿಸಿ,

ನನ್ನ ಮಿತ್ರನೊಬ್ಬ ಕಳೆದ ವರುಷಗಳ ಹಿಂದೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾದ, ಅವನ ಸಮಸ್ಯೆ ಕೇವಲ ದುಡ್ಡಿಗೆ ಸಂಭಂದಿಸಿದ್ದು, ತಂಗಿಯ ಮದುವೆಗೆ ಸಾಲ ಮಾಡಿದ್ದ ಜವಾಬ್ದಾರಿಯುತ ವ್ಯಕ್ತಿ, ಸಾಲ ತೀರಿಸಲಾಗದೆ ಸಾವನ್ನು ಬರಮಾಡಿಕೊಂಡಿದ್ದ. ಒಂದಿಬ್ಬರು ಗೆಳೆಯರಲ್ಲಿ ಸಣ್ಣ ಪುಟ್ಟ ಸಾಲ ಇತ್ತಾದರೂ ಅದ್ಯಾವುದು ಅವನ ಸಾವಿನಿಂದ ಪರಿಹಾರವಾಗುವ ಸಮಸ್ಯೆಯಲ್ಲ. ತನ್ನ ೧೮ನೇ ವಯಸ್ಸಿಗೆ ಸಾಲ ಮಾಡಿ ಆಟೋ ಖರೀದಿಸಿದ ಹುಡುಗ, ಸಮಯದ ಪರಿವೆಯೇಯಿಲ್ಲದೆ ದುಡಿದು ಎರಡು ವರುಷಗಳಲ್ಲೇ ಸಾಲ ತೀರಿಸಿದವನು, ತನ್ನ ತಂಗಿಯ ಮದುವೆಗೆ ಮಾಡಿದ ಸಾಲ ತೀರಿಸದೆ ಹೋದಾನೆ, ಅದು ಕೇವಲ ಒಂದೂವರೆ ಲಕ್ಷ. ಆತನ ಪರಿಸ್ಥಿತಿಗೆ ಅದು ದೊಡ್ಡದೇ ಇರಬಹುದು, ಸಾವಿನಿಂದ ಅದು ಪರಿಹಾರವಾಗಲಿಲ್ಲ. ಈಗ ಅವನ ಸಾಲವೂ ಬೆಳೆದಿದೆ. ಅವನ ತಾಯಿಗೆ ವಯಸ್ಸಾಗಿದ್ದರೂ ದುಡಿದು ಸಾಲ ತೀರಿಸುವ ಹಂಬಲ. ಆದರೆ ಆರೋಗ್ಯ ಕ್ಯೆಕೊಟ್ಟಿದೆಯಾದರೂ, ಒಬ್ಬರಲ್ಲಿ ಅವಲಂಬನೆಯಾಗದ ತುಡಿತ. ಆಕೆಯೇ ಮಗನಂತೆ ಸಾವಿಗೆ ಶರಣಾಗಿದ್ದಾರೆ ?

ನನ್ನ ಮತ್ತೊಬ್ಬ ಗೆಳೆಯ ಶೇಖರ್ ಈ ದಿನ ಅವನು ಇಲ್ಲವಾದರೂ ಅವನ ಮಾನಸಿಕ ಸ್ಥ್ಯೇರ್ಯ, ಬದುಕಿನ ಹಂಬಲ ಎಂಥವರಿಗೂ ಉತ್ಸಾಹ ತರಿಸುವಂತದ್ದು. ಪದವಿಯ ಕೊನೆಯ ವರ್ಷದಲ್ಲಿ ನಮ್ಮೆಲ್ಲರ ಜೊತೆಗೆ ಪ್ರವಾಸಕ್ಕೆ ಹೊರಟ ಶೇಖರನಿಗೆ ಅದೇ ತನ್ನ ಜೀವನದ ಕಡೆಯ ಉಲ್ಲಾಸದ ಕ್ಷಣ ಎಂದು ಯಾರೂ ಎಣಿಸಿರಲಿಲ್ಲ. ಆಂಧ್ರಪ್ರದೇಶದ ಹ್ಯೆದರಾಬಾದಿಗೆ ಪ್ರವಾಸ ಹೊರಟ ನಾವೆಲ್ಲರೂ ಅನಂತಪುರದ ಸ್ಟೇಶನ್ ಬರುವ ಹೊತ್ತಿಗೆ ಟ್ರೇನ್ ಸಿಗ್ನಲ್ಗಾಗಿ ಅನಂತಪುರದಲ್ಲಿನ ಸಣ್ಣ ಸ್ಟೇಶನ್ ಬಳಿ ನಿಲ್ಲುತ್ತಿತ್ತು. ಬಾಗಿಲ ಬಳಿ ನಿಂತಿದ್ದ ಶೇಖರ್ ಒಮ್ಮೆಗೆ ಕಾಲುಜಾರಿತಷ್ಟೇ........... ಕೆಲವೇ ನಿಮಿಷಗಳಲ್ಲಿ ಟ್ರೇನಿನ ಅಡಿಯಲ್ಲಿ ಸಿಕ್ಕ ಅವನ ಎರಡು ಕ್ಯೆಗಳು ಮತ್ತು ಒಂದು ಕಾಲು ಅವನ ಪರಿವೆಯೇ ಇಲ್ಲದೆ ಜಜ್ಜಿ ಹೋಗಿತ್ತು, ಅದೃಷ್ಟವಶಾತ್ ಅವನ ತಲೆ ಟ್ರೇನಿನ ಕಂಬಿ ಮತ್ತು ಗೋಡೆಯ ಮಧ್ಯದಲ್ಲಿತ್ತು. ತಕ್ಷಣ ಟ್ರೇನಿನ ಚ್ಯೇನೆಳೆದು ಅವನನ್ನು ಉಳಿಸುವುದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದೆವು. ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲೇ ಕೆಲವು ದಿನಗಳು ಇದ್ದ. ನಂತರ ಪರಿಸ್ಥಿತಿ ಕ್ಯೆಮೀರಿದಾಗ ಬೆಂಗಳೂರಿನ ಸಂಜಯ್ ಗಾಂಧೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಹಲವು ಕಡೆ ಓಡಾಡಿದ್ದಾಯಿತು, ಡಾಕ್ಟರ್ಗಳ ಕಠಿಣ ಪರಿಶರಮದಲ್ಲೂ ಅವನ ಕಾಲು ಕ್ಯೆಗಳು ಮೊದಲಿನಂತೆ ಸಾಧ್ಯವಾಗದೆ ಅವನ ಎರಡು ಕ್ಯೆ ಹಾಗು ಒಂದು ಕಾಲನ್ನು ತೆಗೆಯಲೇ ಬೇಕಾದ ಪರಿಸ್ಥಿತಿಯಿತ್ತು. ಕೆಲವು ದಿನಗಳ ನಂತರ ಜ್ಞಾನ ಬಂದವನಿಗೆ ತನ್ನ ಕಾಲು ಕ್ಯೆಗಳಿಗೆ ಬ್ಯಾಂಡೇಜ್ ಸುತ್ತಿರುವಷ್ಟೇ ತಿಳಿಯುತ್ತಿತ್ತು. ಅವನ ಈ ಪರಿಸ್ಥಿತಿಯನ್ನು ಅವನಿಗೆ ಹೇಗೆ ಹೇಳುವುದು ಅನ್ನುವುದೇ ಅವನ ಕುಟುಂಬಕ್ಕೆ ಹಾಗು ನಮಗೆ ಅರ್ಥವಾಗಲಿಲ್ಲ. ಸುಮಾರು ಎರಡು ತಿಂಗಳು ಅವನಿಗೆ ವಿಷಯ ತಿಳಿಸುವ ಗೋಜಿಗೆ ಹೋಗಿರಲಿಲ್ಲ, ಅವನು ಏನನ್ನು ಕೇಳುತ್ತಿರಲಿಲ್ಲ, ಒಮ್ಮೆ ಹೀಗೆ ಮಾತಿನ ಭರದಲ್ಲಿ ಗೆಳೆಯನೊಬ್ಬ ಕ್ಯೆ ಕಾಲುಗಳನ್ನು ತೆಗೆಯುವ ವಿಷಯ ಮಾತನಾಡುತ್ತಿದ್ದಾಗ " ನನ್ನ ಪರಿಸ್ಥಿತಿಯು ಹಂಗೆ ಅಲ್ವಾ ಶಿವ " ಅಂದಾಗ ಮಾತ್ರ ದುಖದ ಕಟ್ಟೆ ಎಲ್ಲರನ್ನು ದೂಡಿ ಮುಂದೆ ಬಂದಿತ್ತು. ಹೆಚ್ಚು ಕಡಿಮೆ ಎಂಟು ತಿಂಗಳುಗಳೇ ಉರುಳಿದವು.

ನಂತರದ ಕೆಲವು ತಿಂಗಳಲ್ಲಿ ಅವನ ವ್ಯಕ್ತಿತ್ವದಲ್ಲಾದ ಬದಲಾವಣೆಗಳು ನಿಜಕ್ಕೂ ಊಹಿಸಲು ಸಾಧ್ಯವಿಲ್ಲ. ತನ್ನ ಎರಡು ಭುಜದ ಕೆಳಗೂ ಕೋಲುಗಳನ್ನು ಸಿಕ್ಕಿಸಿ, ಅವನು ನಡೆಯುತ್ತಿದ್ದರೆ ನಾವು ಅವನೊಂದಿಗೆ ಓಡುತ್ತಿದ್ದೆವು, ಬೀಳುತ್ತಾನೆ ಎಂಬ ಭಯದಿಂದಲ್ಲ, ಅವನ ನಡಿಗೆಯ ವೇಗ ಅಂತದ್ದು. ಎಂದಿಗೂ ಎಲ್ಲರೊಂದಿಗೆ ನಗುನಗುತ್ತಲೇ ಮತಾನಾದುತ್ತಿದ್ದ ಗೆಳೆಯನಿಗೆ ತನ್ನ ಎರಡು ಕ್ಯೆ ಮತ್ತು ಕಾಲಿಲ್ಲವೆಂಬ ವಿಚಾರ ಮರೆತು ಹೋದನೇನೋ ಎನ್ನುವಷ್ಟು, ಉತ್ಸಾಹ ಭರಿತನಾಗಿದ್ದ. ಒಂದು ವರ್ಷದಲ್ಲಿ ಅವನ ಲವಲವಿಕೆ, ವಿಚಾರಗಳು ಎಲ್ಲವೂ ಭಿನ್ನವಾಗಿದ್ದವು. ತನ್ನ ಈ ಸಮಸ್ಯೆಯಿಂದ ೪ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ  ನನಗಿನ್ನೂ ನೀನು ಬೇಡ ಎಂದರು, ಅವನು ಯೋಚಿಸುತ್ತಿದ್ದ ರೀತಿ, ಸತ್ಯದೆದಗಿನ ಮಾತು ನಮ್ಮೆಲ್ಲರನ್ನೂ ಬಹಳ ಕಾಡುತ್ತಿತ್ತು.

ಇಂಥ ಉದಾಹರಣೆಗಳು ನಮ್ಮ ನಿಮ್ಮ ನಿತ್ಯ ಬದುಕಿನಲ್ಲಿ ಸಾವಿರಾರು ಬಂದು ಹೋಗುತ್ತವೆ, ಅವಕ್ಕೆ ಸಾವೊಂದೇ ಪರಿಹಾರವಾದರೆ, ನನ್ನ ಗೆಳೆಯನ ತಾಯಿ ಹಾಗು ಶೇಖರ್ ಎಂದೋ ಆತ್ಮಹತ್ಯೆಗೆ ಮುಂದಾಗುತ್ತಿದ್ದರು. ಸ್ನೇಹಿತರೆ ಇದಕ್ಕಿಂತಲೂ ಕ್ರೂರವೆ ನಿಮಗೊದಗಿರುವ ಸಮಸ್ಯೆ ?

ಸಾವನ್ನು ಕರೆಯುವ ಮುನ್ನು ಯೋಚಿಸಿ ನೋಡಿ. ನಿಮ್ಮ ಭವಿಷ್ಯ ನಿಮ್ಮ ಕ್ಯೆಯಲ್ಲೇ ಹೊರತು, ನಿಮ್ಮ ಪೋಷಕರದೋ ? ಸ್ನೇಹಿತರದೋ ಅಲ್ಲ ? ನಿಮ್ಮ ಜೀವನದ ಪ್ರತಿ ತಿರುವುಗಳಿಗೆ ನೀವೇ ಜವಾಬ್ದಾರರು.

ಗುರುವಾರ, ಜುಲೈ 15, 2010

ದೇವರು, ಧರ್ಮ ಮತ್ತವನ ಜಾತಿ. - ಸರಣಿ ೧

ದೇವರು ಎಂಬ ಪದ ಸಾರ್ವಜನಿಕವಾಗಿ ಒಮ್ಮೆ ಚರ್ಚೆಗೆ ಬಂದರೆ ಅಲ್ಲಿ ತನ್ನ ಪರಮ ಪ್ರಿಯ ದೇವರೇ ಶ್ರೇಷ್ಠ. ಮತ್ತೆಲ್ಲವೂ ನಿಕೃಷ್ಟ, ಎಂಬಂತೆ ವಾದ ಮಂಡಿಸುವ ಭಕ್ತ ಸಮೂಹ ಎಲ್ಲಿಲ್ಲ ಹೇಳಿ. ಅದರಲ್ಲೂ ವಾದಿಸುವವ ತಾನು ಪೂಜಿಸುವ ದೇವರು ಹೇಗೆಲ್ಲ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸಲಿಕ್ಕೆ, ಆ ದೇವರ ಕುರಿತಾದ ಕಥೆಗಳು, ಉಪಮೆಗಳು, ಮತ್ತು ಆಧಾರಗಳು, ಮತ್ಯಾವುದೋ ಮಹಿಮೆ, ಅವತಾರಗಳ ಪಟ್ಟಿಯನ್ನೇ ಕೊಟ್ಟುಬಿಡುತ್ತಾನೆ. ನಿಜಕ್ಕೂ ದೇವರೇ ಕೇಳಿಸಿಕೊಂಡರು (ಇದ್ದಲ್ಲಿ) ಈ ಪರಿಯ ವಿಚಾರಗಳು ಅವನಿಗೂ ತಿಳಿದಿರುತ್ತದೋ ಇಲ್ಲವೋ, ಆದರೆ ಹಟಕ್ಕೆ ಬೀಳುವ ಭಕ್ತ ಅದನ್ನು ಹೇಗಾದರೂ ಸರಿಯೇ ಪ್ರಾಬಲ್ಯಕ್ಕೆ ಕಟ್ಟು ಬೀಳುವ ಹಾಗೆ ವಾದಿಸುತ್ತಾನೆ.

ಅಸಲಿಗೆ ದೇವರಿಗೂ ಧರ್ಮಕ್ಕೂ ವಾದಿಸುವ ವ್ಯಕ್ತಿಗೆ ಅಸಲಿಗೆ ಪ್ರತ್ಯಕ್ಷ ದೇವರೇ ಎದುರಿಗೆ ಬಂದರೂ ನಂಬುವುದಿಲ್ಲ, ಇಂತಹ ಪರಿಸ್ಥಿತಿಯಲ್ಲೂ ದೇವರೆಂಬ ದೇವರೇ ಏನು ಮಾಡಲಾಗದಿರುವಾಗ, ಇಲ್ಲ ಸಲ್ಲದ ವಾದ ವಿವಾದಗಳಲ್ಲಿ ತಲೆತೂರಿಸಿ ತನ್ನ ವಾದಶಕ್ತಿಯಿಂದಲೇ ಮತ್ತೊಬ್ಬನನ್ನು ಮರುಳು ಮಾಡುತ್ತೇನೆಂದು ನಿಂತವನಿಗೆ ಮತ್ತೆಲ್ಲವೂ ಗೌಣ್ಯ.

ಎಲ್ಲರೂ ದೇವರು!!!!!!!!!!! ದೇವರು!!!!!!!!!! ಎನ್ನುವ ಈ ದೇವರು ನಿಜಕ್ಕೂ ಯಾರು ? ಮತ್ತು ಯಾವುದು ?

ದೇವರು ಯಾರು ? ಎಂದರೆ (ಧರ್ಮಗಳ ಬಗ್ಗೆ ಮುಂದೆ ದಿನ ಚರ್ಚೆ ಮಾಡೋಣ) ಹಿಂದೂ ಎಂಬ ಹಣೆಪಟ್ಟಿಯಲ್ಲಿ ಬೆಳೆದವನು ಅಟ್ಟಿ ಲಕ್ಕಮ್ಮನಿಂದ ಹಿಡಿದು ಬ್ರಹ್ಮ, ವಿಷ್ಣು, ಮಹೇಶ್ವರಾದಿಗಳವರೆಗೂ ದೊಡ್ಡ ಪಟ್ಟಿಯನ್ನು ಕೊಡುತ್ತಾನೆ. ಇನ್ನು ಮುಸ್ಲಿಂ ಹಣೆಪಟ್ಟಿಯಡಿ ದೇವರುಗಳ ಸಂಖ್ಯೆ ಚಿಕ್ಕದಾದರೂ ಆತ ಯಾವುದನ್ನೂ ಬಿಡದೆ ತಿಳಿಸುತ್ತಾನೆ. ಇನ್ನು ಕ್ರ್ಯೆಸ್ತ, ಜ್ಯೆನ, ಬೌದ್ದ, ಇನ್ನಿತರ ಹಣೆಪಟ್ಟಿಯಡಿ ಬರುವ ಪ್ರಪಂಚದ ದೇವರುಗಳು ತಮ್ಮವೇ ದೇವರುಗಳ ಪ್ರವರ ನೀಡಿ, ಏನನ್ನೋ ಸಾಧಿಸಿಬಿಟ್ಟನೆಂಬಂತೆ ಒಮ್ಮೆ ಬೀಗುತ್ತಾರೆ.

ದೇವರು ಪರಿಕಲ್ಪನೆಯಲ್ಲಿ ಒಂಥರಾ ರಿಮೋಟ್ ಇದ್ದ ಹಾಗೆ, ಅವನ ಟಿವಿಯಲ್ಲಿ ಬರೋಬ್ಬರಿ ೬೦೦ ಕೋಟಿ ಹೆಚ್ಚು ಚಾನೆಲ್ಗಳು ಅಡಕ. ಹಾಗಿರುವ ದೇವರಿಗೆ ಭಕ್ತನ ಪ್ರತಿ ಹೆಜ್ಜೆಯೂ ಆಲೋಚನೆಗಳು ಮತ್ತವನ ನಡುವಳಿಕೆಗಳು, ಒಳ್ಳೆಯದು ಕೆಟ್ಟದ್ದು ಎಲ್ಲವೂ ತಿಳಿದಿರುವ ದೇವರಿಗೆ, ಈ ಉಪಮೆಗಳು ಯಾವತ್ತೂ ದೇವರ ಅಸ್ತಿತ್ವದಲ್ಲಿದ್ದಾನೆಂಬ ನಂಬಿಕೆಗಷ್ಟೆ ಅರ್ಹ. ನಿಜಕ್ಕೂ ದೇವರು ಎಂಬುದು ಇಂದಿನ ಬಹುಜನರ ಪ್ರಶ್ನಾರ್ಥಕ ಚಿಹ್ನೆ, ಇದರ ಉತ್ತರ ಬಿಡಿಸಲು ಹೋದ ಪ್ರತಿಯೋರ್ವನು ನಿರಾಶೆಯಿಂದ ಪ್ರಯತ್ನ ಬಿಟ್ಟಿರುತ್ತಾನೆ. ಹಾಗಂತ ಎಲ್ಲೂ ದೇವರಿಲ್ಲ ಎಂಬ ಮಾತಿಗೆ ಅವನ ವಿರೋಧ ಇದ್ದೇ ಇರುತ್ತದೆ.

ಮಂಗಳವಾರ, ಜೂನ್ 22, 2010

ಶುಕ್ರವಾರ, ಜೂನ್ 4, 2010

ಗೋವಿನ ಹಾಡು -ಧರಣಿ ಮಂಡಲ ಮಧ್ಯದೊಳಗೆ

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಲಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲ್ನುದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗುರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು.

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಷದಿ ಗುಡುಗುತ ಹುಲಿ
ಭೋರಿಡುತ ಚಂಗನೆ ಜಿಗಿದು
ನೆಗೆಯಲು ಚೆದರಿ ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನ ಹುಲಿರಾಯನು

ಮೇಲೆ ಬಿದ್ದು ನಿನ್ನಲೀಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಕ್ರೂರವ್ಯಾಘ್ರನು ಕೂಗಲು,

ಒಂದು ಬಿನ್ನಹ ಹುಲಿಯೇ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂಡ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅರ ಮೊಲೆಯನು ಕುಡಿಯಲಮ್ಮ
ಅರ ಬಳಿಯಲಿ ಮಲಗಲಮ್ಮ
ಅರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೋಡ ಹುಟ್ಟಗಳಿರ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡ ವ್ಯಾಗ್ರನೆ ನಿನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮತ ಕೇಳಿ
ಕಣ್ಣನಿರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತನು
ಮುನ್ನ ತದಿಂತೆಂಡಿತು

ಎನ್ನ ವಂಶದ ಗೋವ್ಗಲೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.

ವಸಂತ್ ಶೆಟ್ಟಿ ಹಾಗೂ ಅನಿಲ್ ರಮೇಶರ ಸಹಕಾರದಲ್ಲಿ :-)


ಅರವಿಂದ್

ಸೋಮವಾರ, ಮಾರ್ಚ್ 29, 2010

ಭಾವಗೀತೆ - ಜಿ. ಎಸ್. ಶಿವರುದ್ರಪ್ಪ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲುಮಣ್ಣುಗಳ ಗುಡಿಯೊಳಗೆ,
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೇ,

ಎಲ್ಲಿದೆ ಬಂಧನ, ಎಲ್ಲಿದೆ ನಂದನ
ಎಲ್ಲಾ ಇವೆ ಈ ನಮ್ಮೊಳಗೇ,
ಒಳಗಿನ ತಿಳಿಯನು ಕಲಕದೆ
ಇದ್ದರೆ ಅಮೃತದ ಸವಿಯು ನಾಲಿಗೆಗೆ,

ಹತ್ತಿರವಿದ್ದರೂ ದೂರ ನಿಲ್ಲುವೆವು,
ನಮ್ಮ ಅಹಮ್ಮಿನ ಕೋಟೆಯಲಿ,
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲಿ
- ಜಿ. ಎಸ್. ಶಿವರುದ್ರಪ್ಪ

ಶನಿವಾರ, ಮಾರ್ಚ್ 27, 2010

ಕನ್ನಡ ಭಾವಗೀತೆಗಳು

ಭಾವಗೀತೆಗಳು
ಕನ್ನಡ ಭಾವಗೀತೆಗಳನ್ನು ಇಳಿಸಿಕೊಳ್ಳಿ.

ಭಾವಗೀತೆಗಳು
ಭಾವಗೀತೆಗಳು
ಭಾವಗೀತೆಗಳು ೩

ಮಂಗಳವಾರ, ಜನವರಿ 12, 2010

ಬುಧವಾರ, ಜನವರಿ 6, 2010

ಗುರುವಾರ, ಡಿಸೆಂಬರ್ 24, 2009

ಕನಸು ನನಸಾದಾಗ..............

ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ ಬಿದ್ದಿಲ್ಲ ) :) ನನದು ಒಂದು ಕಲರ್ ಪುಲ್ ಕನಸ ಕೇಳಿ .........,


ನೆನ್ನೆ ರಾತ್ರಿ ಮಲಗುವಾಗಲೇ ತಡವಾಯ್ತು ಬಹುಶಃ ಎರಡು ಮೂರು ಘಂಟೆ ಇರಬಹುದು. ಸ್ವಲ್ಪ ಹೊತ್ತಿನಲ್ಲೇ ವಾಸ್ತವದಲ್ಲಿ ನನಗೆ ಪರಿಚಯವಿಲ್ಲದವರೊಬ್ಬರು, ಆದರೆ ತುಂಬಾ ಪರಿಚಿತರಂತೆ ಮಾತನಾಡುತಿದ್ದಾರೆ. ಎಷ್ಟು ಹೊತ್ತಾದರೂ ಅವರ ಮುಖವೇ ಕನಸಿನಲ್ಲಿ ಮೂಡುತ್ತಿಲ್ಲ . ಆದರೆ ಆ ಧ್ವನಿ ನನಗೆ ತುಂಬಾ ಪರಿಚಿತವೇನೋ ಎಂಬಂತೆ, ಎಚ್ಚರವಾದರೂ ಅವರೊಂದಿಗೆ ಮಾತಾನುದುತ್ತಿರುವಂತೆ ಭಾಸ. ಅಷ್ಟರೊಳಗೆ ಬೆಳಗಿನ ಜಾವವಾದ್ದರಿಂದ ನಾನು ನನ್ನ ನಿತ್ಯ ಕೆಲಸಗಳಲ್ಲಿ ತೊಡಗಿಕೊಂಡೆ, ಇಂದು ಮಧ್ಯಾನ್ಹ ೧೨ಕ್ಕೆ ನನ್ನ ಕಚೇರಿಯಲ್ಲಿ ಅಕೌಂಟ್ ಅಸಿಸ್ಟಂಟ್ ಹುದ್ದೆಗೆ ಸಂದರ್ಶನವಿತ್ತು. ಅಷ್ಟರೊಳಗೆ ನಾನು ಆ ಕನಸನ್ನು ಮರೆತುಹೋಗಿದ್ದೆ. ಸಂದರ್ಶನಕ್ಕೆ ಬಂದ ೫ ಜನರಲ್ಲಿ ೨ ಹುಡುಗಿಯರು ಮತ್ತೆಲ್ಲ ಹುಡುಗರು. ಆಗತಾನೆ ಪದವಿ ಮುಗಿಸಿ ಬಂದಿದ್ದ ಹೊಸಬರು. ಒಬ್ಬೊಬ್ಬರಾಗಿ ಸಂದರ್ಶನಕ್ಕೆ ಹಾಜರಾಗುತ್ತಿದ್ದರು. ಇನ್ನೇನು ಎಲ್ಲರ ಸಂದರ್ಶನ ಮುಗಿಸುವ ಹೊತ್ತಿಗೆ ಮತ್ತೊಂದು ಹುಡುಗಿಯು ಸಂದರ್ಶನಕ್ಕೆ ಬಂದಿದ್ದಾಳೆ ಎಂದು ನನ್ನ ಕಚೇರಿಯ ಸ್ವಾಗತಕಾರಿಣಿ ಪೋನ್ ಮೂಲಕ ಮೀಟಿಂಗ್ ರೂಮಲ್ಲಿದ್ದ ನನಗೆ ತಿಳಿಸಿದಳು, ಆಗಲೇ ಘಂಟೆ ೧.೩೦ ಆಗಿತ್ತು. ಸರಿ ಆಕೆಯನ್ನು ಸಂದರ್ಶನಕ್ಕೆ ಬರಲು ಹೇಳಿ, ಈಗಾಗಲೇ ಸಂದರ್ಶಿಸಿದವರಲ್ಲಿ ಯಾರು ಉತ್ತಮರೆಂದು ಮನಸ್ಸಿನಲ್ಲೆ ಲೆಕ್ಕಾಚಾರ ಹಾಕುತ್ತಿದ್ದೆ. ಒಳಗೆ ಬರಬಹುದ ?????????? ಎಂದು ಕೇಳಿದ ಧ್ವನಿಗೆ ಆಶ್ಚರ್ಯಚಕಿತನಾದೆ, ಏಕೆಂದರೆ ಇದೆ ಧ್ವನಿಯನ್ನು ತಾನೇ ಕನಸಿನಲ್ಲಿ ಕೇಳಿದ್ದು. ಒಂದು ಕ್ಷಣ ಮೂಕ ವಿಸ್ಮಿತನಂತಾಗಿ, ಕಮಿನ್ ಎಂದು ಹೇಳಿದೆ. "ನ್ಯೆಸ್ " ಟೆಲ್ ಮಿ ಅಬೌಟ್ ಯುವರ್ ಸೇಲ್ಪ್ಹ್ ? ಅಂತಷ್ಟೇ ಉಗುಳು ನುಂಗಿಕೊಂಡು ಹೇಳಿದ್ದು. ಆ ಹುಡುಗಿಯ ಹೆಸರು ಮಾನಸ, ಊರು ಶಿವಮೊಗ್ಗದ ಹತ್ತಿರ ಶಿರಾಳಕೊಪ್ಪ, ಆ ಕಡೆಯಿಂದ ಉಳಿಯಿತು ಆ ಧ್ವನಿ. ಆಕೆ ಏನೇನೋ ಹೇಳತೊಡಗಿದಳು, ಒಂದು ಯಾವುದು ಕೇಳಿಸಿದಂತಾಯಿತು. ಒಂದೈದು ನಿಮಿಷ ಕಾಟಾಚಾರಕ್ಕೆ ಮಾತಾಡಿ ಆಕೆಯನ್ನು ಹೊರಡುವಂತೆ ಹೇಳಿ ಹೊರಬಂದೆ.


ಊಟ ಮುಗಿಸಿ, ನನ್ನ ಬಾಕಿ ಕೆಲಸದಲ್ಲಿ ತಲ್ಲಿನನಾಗಲು ಪ್ರಯತ್ನಿಸಿದನಾದರು, ಯಾಕೋ ಸಾಧ್ಯವಾಗಲಿಲ್ಲ. ಪ್ರತಿ ಐದು ನಿಮಿಷಕೊಮ್ಮೆ ಆಕೆಯ ಪರಿಚಯ ಪತ್ರವನ್ನು ಓದತೊಡಗಿದೆ. ಹು... ಹು. ಇಲ್ಲ ...... ಯಾವುದೇ ಕಾರಣಕ್ಕೂ ಇನ್ನು ಬೇರೆ ಸಂದರ್ಶನವನ್ನು ಮಾಡಬಾರದು. ಈಕೆಯನ್ನೇ ಆರಿಸುವ ಎಂದು ಒಳಮನಸು ಹೇಳಿತಾದರು, ಮತ್ತೊಮ್ಮೆ ಅವಳೇನು ಅಂಥ ಸುಂದರಿಯಲ್ಲ, ಆದರು ಮಾತು, ಸಂಯಮ, ಪ್ರಜ್ಞೆ ಎಲ್ಲವು ಸರಿ, ಮೇಲಾಗಿ ಮೊದಲೆರಡು ಸಂದರ್ಶನ ಮಾಡಿದ ಹುಡುಗ ಹುಡುಗಿಗಿಂತ ಕೆಲಸಕ್ಕೆ ಬೇಕಾದ ವಿಚಾರಗಳನ್ನು ಈಕೆ ತಿಳಿದುಕೊಂಡಿಲ್ಲ ಎನಿಸುತ್ತಿತ್ತು. ಯಾವ ನಿರ್ಧಾರವನ್ನು ತೆಗೆದುಕೊಳ್ಳದೆ ನನ್ನ ಹಿರಿಯ ಅಧಿಕಾರಿಗಳಿಗೆ ನಾಳೆ ಶಾರ್ಟ್ ಲಿಸ್ಟ್ ಕಳಿಸುತ್ತೇನೆ, ಎಂದು ಮಿಂಚಂಚೆ ಕಳುಹಿಸಿದೆ.

ಮಿಂಚಂಚೆಗೆ ಪ್ರತ್ಯುತ್ತರ ಬಂತು ಇಂದೇ ನಿರ್ಧಾರ ತೆಗೆದುಕೊಳ್ಳಬೇಕು, ನಾಳೆ ನಾನು ಬೆಳಿಗ್ಗೆ ಇರುವುದಿಲ್ಲ ಇಂತಿ ಎಂ ಡಿ. ನನ್ನ ಲೆಕ್ಕಾಚಾರ ತಲೆಕೆಳಗಾಗುವ ಸರದಿ ಈಗ (ನಾಳೆ ಬೆಳಿಗ್ಗೆ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಮೀಟಿಂಗ್ ಇತ್ತು. ಅಷ್ಟರೊಳಗೆ ನಾನು ಆರಿಸಿದವರ ಪರಿಚಯ ಪತ್ರವನ್ನು ನಮ್ಮ ಎಂ ಡಿಗೆ ನೀಡುವ ಎಂದೆಣಿಸಿದ್ದೆ) . ಜಗದೀಶ್ ೫/೧೦, ನವೀನ ಕುಮಾರ್ ೬/೧೦, ಸಂಜನ ೬/೧೦, ನಟರಾಜ್ ೩/೧೦, ಮಾನಸ ೯/೧೦ ಬರೆದಾಗಿತ್ತು :)

ಎಲ್ಲವನ್ನು ಕೂಲಂಕುಷವಾಗಿ ನೋಡಿದ ಎಂ. ಡಿ. ಹಾಸ್ಯ ಮಿಶ್ರಿತವಾಗಿ ಏನರವಿಂದ್ ೯/೧೦ ಈಕೆ, ಅಷ್ಟು ಚೆಂದನಾ ? ? ಅಂತ ಕಣ್ಣು ಹೊಡೆದು ಕೇಳಿದಾಗ, ಆತಂಕದಲಿದ್ದ ನಾನು ಹು...... ಸರ್,,,,,,,, ಅಯ್ಯೋ ಇಲ್ಲಾ ಸರ್........... ಅಂತ ಏನೇನೋ ಒದರಲಾರಂಭಿಸಿದೆ. ಆದರೆ ಅವರು ಅದನ್ನು ಗಮನಿಸಲಿಲ್ಲ ಅನ್ಸುತ್ತೆ. ಸರಿ ಹಾಗಾದರೆ ಆಕೆಯನ್ನು ನಾಳೆ ಮತ್ತೊಂದು ಸುತ್ತಿನ ಸಂದರ್ಶನಕ್ಕೆ ಸಮಯವನ್ನು ನೀನೆ ಗೊತ್ತು ಮಾಡು, ಸಂಜೆ ೩ರ ನಂತರವಾದರೆ ಮೋಹನ್(ಮತ್ತೊಬ್ಬ ಎಂ. ಡಿ.) ಸಹ ಇರ್ತಾರೆ, ಎಂದರು. ತಲೆಯಲ್ಲಾಡಿಸಿ ಹೊರಬಂದೆ, ಮನಸಿನಲ್ಲಿ ಏನೋ ಸಂತೋಷ, ನನ್ನ ಕುರ್ಚಿಯ ಹೋಗಿ ಮೊದಲು ಫೋನ್ ರಿಸಿವರ್ ಕ್ಯೆಗೆತ್ತುಕೊಂಡು ಮೊದಲಿನಿಂದಲೂ ಆ ಮೊಬ್ಯೆಲ್ ಸಂಖ್ಯೆ ಗೊತ್ತೇನೋ ಎಂಬಂತೆ ಪಟಪಟನೆ ಸಂಖ್ಯೆ ಒತ್ತಿದೆ...... ೯೯೪೫೦........(ಆಕೆಯ ಧ್ವನಿಗೆ ಕಾತರನಾಗಿದ್ದೆ) ಆ ಕಡೆಯಿಂದ ಹಲೋ ......... ಎಂದಿತೊಂದು ಧ್ವನಿ (ಅವಳಲ್ಲ), :( ಸಾವರಿಸಿಕೊಂಡು "ಆಮ್ ಸ್ಪೀಕಿಂಗ್ ತು ಮಿಸ್. ಮಾನಸ ?, ಇಲ್ಲ (ಕನ್ನಡಲ್ಲೇ) ಅವಳಿಲ್ಲ ಯಾರು ಮಾತಾಡೋದು ಎಂದಿತು ಆ ವ್ಯಕ್ತಿ, ನಾನು ಇಂತ ಕಂಪೆನಿಯಿಂದ, ಈ ವಿಚಾರವಾಗಿ ಪೋನ್ ಮಾಡ್ತಿದ್ದೀನಿ, ನಿಮ್ಮ ಹುಡುಗಿಗೆ ನಮ್ಮ ಆಫೀಸಿಗೆ ಸಂದರ್ಶನಕ್ಕೆ ಬಂದಿದ್ದರು, ಅವರಿಗೆ ನಾಳೆ ನಮ್ಮ ಆಫೀಸಿಗೆ ಬಂದು ನನ್ನನ್ನು ಕಾಣಲು ಹೇಳಿ ಎಂದೆ (ಸಂಜೆ ೩ ಘಂಟೆಗೆ, ಹೇಳಲು ಮರೆಯಲಿಲ್ಲವಾದರು). ಮತ್ತು ಯಾವುದೇ ವಿಚಾರಕ್ಕೂ ನನ್ನ ಮೊಬ್ಯೆಲ್ ಸಂಖ್ಯೆಯನ್ನು ಕೊಟ್ಟಿರಿ ಎಂದು ಆ ವ್ಯಕ್ತಿಗೆ ನನ್ನ ನಂಬರನ್ನು ನೀಡಿದೆ, ಅಲ್ಲಿಯವರೆಗೆ ಕಾಯುವ ತಾಳ್ಮೆ ನನ್ನಲ್ಲಿರಲಿಲ್ಲ. ಪೋನ್ ಇಟ್ಟೆ.


ಯಾಕೋ ಕೆಲಸ ಮಾಡುವ ಮನಸಿಲ್ಲ, ಮನದಲ್ಲೇ ---- ಛೆ ಇವಳಾದರು ಫೋನ್ ಎತ್ತಿದ್ದರೆ........... ನನ್ನ ಮೊಬ್ಯೆಲ್ ನಂಬರನ್ನ ಆ ವ್ಯಕ್ತಿ ಸರಿಯಾಗಿ ಬರೆದುಕೊಂಡಿಲ್ಲದಿದ್ದರೆ, ಬಹುಷಃ ಸರಿಯಾಗಿ ಬರೆದುಕೊಂಡಿದ್ದರು, ಆಕೆ ಫೋನ್ ಮಾಡದಿದ್ದರೆ, ಛೆ!!!! ಏನೆಲ್ಲಾ ಯೋಚನೆ..... ಚಡಪಡಿಸುತ್ತಿದೆ ಮನಸು........................ ಇನ್ನು ನಾಳೆ ಅವಳು ಸಂದರ್ಶನಕ್ಕೆ ಬರ್ತಾಳೆ ಮೂರು ಘಂಟೆಗೆ .............. ಕಾಯುವ ಸರದಿ ನನದು. :(

ಬುಧವಾರ, ಡಿಸೆಂಬರ್ 16, 2009

ಪ್ರೀತಿಗೊಂದು ಬ್ಯ್ಯೆಯಾಗ್ರಫಿ

ಎಂಥ ಸುಂದರ ಕಲ್ಪನೆ, ಎಂಥ ನವಿರಾದ ವಿಚಾರಗಳು, ಪ್ರೀತಿ ಬಗ್ಗೆ ಮಾತಾಡ್ತಾ ಹೋದ್ರೆ ಅದಕ್ಕೊಂದು ಆದಿ ಅಂತ್ಯನೇ ಇಲ್ಲದ, ಸುವರ್ಣಾತೀತ, ಸುಕೋಮಲ ಮನಸುಗಳ ದಿವ್ಯ ವಿಚಾರ. ಅದೊಂದು ಸಮುದ್ರ ಭೋಗರತದ ಆರ್ತನಾದದಲ್ಲೂ ದಿವಿನಾದ ಏಕಾಂತವ ಕಾಣುವ ಕವನಗಳ ಸಂಕೋಲೆ, ಮಾತುಗಳು ಸಾವಿರ ಕಡಲ ಅಲೆಗಳಾಗಿ ತಾ ಮುಂದು ನಾ ಮುಂದು ಅಂದರೂ, ಎಲ್ಲೋ ಕಾಣದ ನೀರವ ಮೌನ, ಮನಸುಗಳ ಸಂಘರ್ಷದ ಆರ್ತನಾದದಲ್ಲೂ ಅದೊಂದು ದಿವ್ಯ ಬೆಳಗು.

ಮೊದಲ ಬಾರಿಗೆ ಎಲ್ಲೋ ಎಡತಾಕಿಕೊಂಡು ಎದೆಯ ಭಾವನೆಗಳಿಗೆ ಲಗ್ಗೆ ಇಡುವ ಈ ಪ್ರೀತಿಗೆ ಎಂಥ ವ್ಯಕ್ತಿ ಸೂಕ್ತ ಎಂಬ ನಿರ್ಧರಿಸುವ ಧೃಡ ನಿರ್ಧಾರವೇ ಇರುವುದಿಲ್ಲ, ಎಲ್ಲೋ ಕಾಲೇಜಿನಲ್ಲಿ, ಯಾವುದೋ ಕಚೇರಿಯ ಸಹೋದ್ಯಮಿ, ಬಸ್ ಸ್ಟಾಂಡಿನ ಬೆಳಗಿನ ಧಾವಂತದಲ್ಲಿ, ಆಕಸ್ಮಿಕ ಪ್ರಯಾಣದಲ್ಲಿ, ಅಂತರ್ಜಾಲದ ಹರಟೆಯಲ್ಲಿ, ಆಕಸ್ಮಿಕವಾಗಿ ಬಂದು ಬೀಳುವ ಯಾವುದೋ ಮೊಬ್ಯೆಲ್ ಸಂಖ್ಯೆಯ ಕಿರುಸಂದೇಶದಲ್ಲಿ ಇಂಥ ಅದೆಷ್ಟೋ ಅಲ್ಲಿ-ಇಲ್ಲಿಗಳಲ್ಲಿ ಒಂದು ಬಾರಿ ಮಿಂಚಿನಂತೆ ಬಂದು ಹೋಗುವ ಈ ಭಾವನೆ, ಜೀವವನ್ನೇ ಹಿಡಿದು ನುಂಗುವ ಮಟ್ಟಕ್ಕೆ ಹೋದರೂ ಆಶ್ಚರ್ಯವಿಲ್ಲ, ಹಾಗಾದರೆ ಮುಂದೆ ಹೇಳುತ ಹೊರಡುವ ಈ ವಿಧವಿಧದ ಪರಿಚಯಗಳಲ್ಲಿ ಎಂಥ ಅನುಬಂಧ ಇದೆ ಅಲ್ವಾ ತಿಳಿಯೋಣ!!!!

ಈ ಹುಡುಗ ಆಗ ತಾನೇ ಪಿಯುಸಿ ಎರಡನೇ ವರ್ಷದಲ್ಲಿ ಕಾಲಿರಿಸಿದವ, ತನ್ನ ಮುಂದಿನ ಭವಿಷ್ಯತ್ತಿನ ದಾರಿಯನ್ನು ಸುಗಮಗೊಳಿಸುವುದಕ್ಕಾಗಿ ಓದೊಂದೆ ಸರಿ ಎಂಬ ಮನೋಭಾವದವ. ತಂದೆ ತಾಯಿಗಳ ಅಚ್ಚುಮೆಚ್ಚಿನ ಒಬ್ಬನೇ ಮಗ. ಹೆಸರು ಬಾಬು ಪೂರ್ತಿ ಹೆಸರು ಆನಂದ ಬಾಬು. ಹುಟ್ಟಿದಾರಾಭ್ಯ ಕಷ್ಟ ಕೋಟಲೆಗಳನ್ನೇ ಮೃಷ್ಟಾನ್ನವಾಗಿ ಮ್ಯೆವೇಳಿಸಿಕೊಂಡವ. ಓದು ಅಷ್ಟಕ್ಕಷ್ಟೆಯಾದ್ರೂ, ಬುದ್ದಿವಂತ. ಇಂತಹ ಒಬ್ಬ ಸಾಮಾನ್ಯ ಹುಡುಗ ಎಂಥಂಥ ಸಂಧರ್ಬಗಳನ್ನು ಎದುರಿಸುವ...

ಆನಂದಬಾಬು ಅಂಥ ಸುಂದರಾಂಗನಲ್ಲದಿದ್ದರೂ ಪದ್ಮಿನಿಯನ್ನು ನೋಡಿದ ಕೆಲವು ದಿನಗಳಿಂದ ಅವಳ ಯೋಚನೆಯಲ್ಲೇ ತನ್ನ ಸಮಯವನ್ನು ಕಳೆಯುತಾ ಹೋಗುವುದರಲ್ಲಿ ಅವನಿಗೆಂಥದೋ ಅಭ್ಯಾಸ. ಪದ್ಮಿನಿಯೇನು ಅಂಥಾ ಚಂದುಳ್ಳಿ ಚೆಲುವೆಯಲ್ಲದಿದ್ದರೂ ತನ್ನ ಸಾಮಾನ್ಯ ಅಂದಕ್ಕೆ ಮೆರುಗು ನೀಡುವ ಅವಳ ಕಣ್ಣುಗಳು ಎಂಥವನನ್ನೂ ಒಂದು ಕ್ಷಣ ಹಿಡಿದಿಡುವ ತಾಕತ್ತು. ಇಂಥ ಸಾಮಾನ್ಯರ ಬಗ್ಗೆ ನಡೆಯುವ ಪ್ರೇಮ ಪ್ರಲಾಪ ಎಂಥದ್ದೂ ಅದರ ಅಂತ್ಯ .................. ???????





ಮುಂದುವರೆಯುವುದು............

ಮಂಗಳವಾರ, ಡಿಸೆಂಬರ್ 8, 2009

24 ಗಂಟೆ ಕನ್ನಡ ಹಾಡುಗಳು



ಮತ್ತೊಂದು ನಿರಂತರ ೨೪ ಘಂಟೆಗಳ ರೇಡಿಯೋ ವಾಹಿನಿ


ಅರವಿಂದ್

ಶನಿವಾರ, ನವೆಂಬರ್ 7, 2009

ಚಂದಿರ(ಕಾಂತೆ)

ಚಂದಿರನ ಕಾಂತಿಯನು,

ಚಿರನಗೆಯು ಕದಿಯುವುದೆ ?

ಚಂದ್ರಿಕೆಯ ಚಂಚಲತೆಗೆ,

ಚಿಂತೆಯ ಮಾತೇಕೆ ?


ಚಂದಿರ ನೀ ಎಂದಿಗೂ

ಸುಂದರ.........

ಹಾಗೆ ಚಂದ್ರಿಕೆಯೂ

ಅತಿ ಮಧುರ........

ಗುರುವಾರ, ಅಕ್ಟೋಬರ್ 1, 2009

ಬಬ್ರುವಾಹನ

ಬಬ್ರುವಾಹನ ಚಿತ್ರದ "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ....." ವಿಡಿಯೋ ತುಣುಕು. :)


ಮಂಗಳವಾರ, ಸೆಪ್ಟೆಂಬರ್ 8, 2009

ಹನಿಗವನ

ಅವಳ ಮೇಲೊಂದು ಪ್ರೇಮಕವನ
ಬರೆಯುವ ಹೊತ್ತಿಗೆ
ಮುಗಿಸಿದ್ದು ಖಂಡಕಾವ್ಯ.

ಅವಳ ಮೇಲನ ಪ್ರೀತಿಯ
ಅಪ್ಪಿಕೊಳ್ಳುವದರೊಳಗೆ
ಆಕೆ ಆರಿಸಿಯಾಗಿತ್ತು
ಮತ್ತೊಬ್ಬ ಇನಿಯ.

ಮಳೆಯ ಅಬ್ಬರಕ್ಕೆ
ಕೊಡೆಯಾಗಿದ್ದೆ ನಾ ಮೇಲಿನಿಂದ
ಜಾರಿ ಹೋಗಿದ್ದಳಾಗಲೇ
ಬಿಡಿಸಲಾಗದ ತೋಳ ತೆಕ್ಕೆಯಿಂದ.

ಚಿನ್ನದಂತಹ ಹುಡುಗ
ಎಂದು ಆಗಾಗ ಹೇಳುವಾಗಲೇ, ನಾ
ತಿಳಿದುಕೊಳ್ಳಬೇಕಿತ್ತು ನಾ ಅಲ್ಲ
ಬೇಕಿರುವುದು ಅವಳಿಗೆ ಚಿನ್ನ.

ಮುಂಗಾರುಮಳೆಯಂತಿದ್ದ
ಪ್ರೀತಿಯ ಓಘ.
ಬರುಬರುತ್ತಾ ಆದದ್ದು ಮಾತ್ರ
ಸ್ಯೆಕ್ಲೋನ್ ವೇಗ.

ಮಂಗಳವಾರ, ಆಗಸ್ಟ್ 18, 2009

ಪ್ರೀತಿ "ಹಾಲುಬಾಯಿ-ಹಾಗಲಕಾಯಿ".....????


ನೀನೊಮ್ಮೆ ಹಾಲುಬಾಯಿ, ಮಗದೊಮ್ಮೆ ಹಾಗಲಕಾಯಿ,

ಸಿಹಿಹೂರಣ ನಡೆದು ನೀ ನನ್ನೊಡನೆ ಬರುವಾಗ,
ಸಿಗದಾಯಿತೆ ಕಾರಣ ನೀ ದೂರ ಸರಿದಾಗ,

ಸಿಂಗಾರರದ ಸೊಬಗು ನೀ ನನ್ನೊಡಲಲಿರಲು
ಬೆಂಗಾಡಿನ ಬದುಕು ನೀ ನನ್ನಗಲಲು,

ಪ್ರೀತಿ ನೀನೊಮ್ಮೆ ಹಾಲುಬಾಯಿ, ಮಗದೊಮ್ಮೆ ಹಾಗಲಕಾಯಿ.

ಶುಕ್ರವಾರ, ಆಗಸ್ಟ್ 14, 2009

ಗೆಳೆಯನ ಮಾರಾಟ

ಮ್ಯೆಸೂರು, ಬೆಂಗಳೂರು, ಕೊಚ್ಚಿನ್ನು,
ತ್ರಿವೆಂಡ್ರಂ, ತಿರುಚನಾಪಳ್ಳಿ, ಮಡಿಕೇರಿ,
ಮಂಗಳೂರು, ಹುಣಸೂರು, ಚಾಮರಾಜನಗರ,
ಎಲ್ಲೆಲ್ಲಿ ಹುಡುಕಿದ್ದು, ಬಿಕರಿಗೆ ಕೊಳ್ಳುವವರ,
ಸಿಗಲಿಲ್ಲ ಯಾರೂ ಕೊಳ್ಳಲು ಈ ವರ,

ಸೇಲ್ ಆಗೋದೆ ಇಲ್ಲಾ ಈ ಗಾಡಿ,
ಅಂತ ಹೇಳ್ತಾಯಿದ್ರು ಅವರ ಡ್ಯಾಡಿ,
ಕೊಟ್ಟಿದ್ದು ಎಷ್ಟೊ ಡಿಸ್ಕೌಂಟ್ ಆಫರ್ಸ್,
ಬರಲಿಲ್ಲ ಯಾರೂ ಮೆಚ್ಚುಕೊಂಡು ಈ ಫೇಸ್,

ಚಿಂತೆಶುರುವಾಯಿತು ಅವರ ಮಮ್ಮಿ ಡ್ಯಾಡಿಗೆ,
ಯೋಚನೆಯಿಟ್ಟಿತು, ತಂಗಿ ಭಾವನಿಗೆ,
ಹೇಗೆ ಮಾಡೋದು ಬಿಕರಿ,
ಕೇಳಲು ಹೊರಟರು ಯಾರಿಗಾದ್ರೂ ಬೇಕಾ..............ರೀ.

ಬಂದಿತೊಂದು ಚೆಂದದ ಹುಡುಗಿ,
ವ್ಯೆದ್ಯಕೀಯದ ಹಿನ್ನಲೆಯ ಬೆಡಗಿ,
ಒಳ್ಳೆ ಜೋಡಿ, ಹುಡುಕಿದರೂ ನೋಡೀ,
ಕೊಟ್ಟಿದ್ದು ಎರಡು ಲಕ್ಷದ ಸೋಡಿ,

ಮಾರಾಟವಾಯ್ತು ಆ ವೇಸ್ಟ್ ಬಾಡಿ,
ಮದುವೆಗೆ ಬರೋದು ಮರೀಬ್ಯಾಡಿ.


(ನನ್ನ ಗೆಳೆಯನ ಮೂರು ವರ್ಷಗಳ ಹುಡುಗಿ ಹುಡುಕಾಟ ಕಡೆಗೂ ನಿಂತಿದೆ, ಆ ಖುಷಿಯಲ್ಲಿ ಅವನು ಶಿಖರ ಮುಟ್ಟಿದ್ದಾನೆ, ಪಾಪ :)
ಮುಂದೇನೋ........???? )

ಶುಕ್ರವಾರ, ಜೂನ್ 26, 2009

ಮನದ ಕದತೆರೆದಾಗ

ನಂಬಿ ನೀ ಬಂದಿಹೆಯಲ್ಲ
ಮನದ ಕಾರ್ಮೋಡದ ಬಾಗಿಲ ಸರಿಸಲು,
ಬಿಡದೀ ಮನವ ನೀ ಎಲ್ಲ
ಆವರಿಸಿರುವೆ
ಜಗದ ಕಣ್ಣೊಟಕೆ ಸತಿ-ಪತಿಯರಾಗಲು
ಬಂಧನವೊಂದು ಕುರುಹು!

ಬಿಟ್ಟು ಬಂದಿಹೆ ಗೊತ್ತು
ತಂದೆ ತಾಯಿಯರ ಕ್ಯೆತುತ್ತು
ಸೋದರ ಸೋದರಿಯರ
ಒಲವಿನ ತಾಕತ್ತು
ಚಿಂತೆ ಬೇಡ ಹೃದಯೇಶ್ವರಿ
ನೀ ಎನ್ನ ಮನದ ರಾಜೇಶ್ವರಿ!

ಯಜಮಾನನಾಗುವುದಕ್ಕಿಂತ ನಿನಗೆ
ಗೆಳೆಯನಾಗುವೆ ಜೊತೆವರೆಗೆ
ಹೆಜ್ಜೆ ಹೆಜ್ಜೆಗಳು ಜೊತೆಜೊತೆಗೆ
ನೋವಿನ ಮಜ್ಜೆಗೂ
ಸಾವಿನ ಸಜ್ಜೆಗೂ
ಜೊತೆಯಾಗಿ ಸಾಗೋಣ
ಇದು ನನ್ನ ಪ್ರಮಾಣ!

ನಿನಗೋಸ್ಕರ ನಾ ಏಳು ಸಮುದ್ರವ ದಾಟುವುದಿಲ್ಲ
ಚಂದ್ರಮನನ್ನು ತೆಕ್ಕೆಗೆ ತರುವುದಿಲ್ಲ
ಸುಖಾಸುಮ್ಮನೆ ಹೊಗಳುತಿಲ್ಲ
ಒಂದಿಷ್ಟು ನೆಮ್ಮದಿ, ಅರೆಪಾವು ಸೌಖ್ಯ
ಬರಿಸಲಾಗದ ಪ್ರೀತಿ, ಖಂಡಿತಾ ನಾ
ಕೊಡದೇ ಇರುವುದಿಲ್ಲ
ಕಾಯುತಿರುವೆ ತಿಳಿಸುವೆಯಾ !

ಪ್ರೀತಿಯೆಂದರೇನು? ಭಾಗ ೧


ಪ್ರೀತಿಯೆಂದರೆ ಹೀಗೆ ಅಂತಾ ಯಾರೂ ಹೇಳೋಕೆ ಆಗೋಲ್ಲಾರೀ, ಆದ್ರೂ ಒಬ್ಬೊಬ್ಬರು ಹೇಳೋ ವ್ಯಾಖ್ಯಾನಗಳು ಒಂದೊಂದು ರೀತಿ,

ಪ್ರೀತಿಯೆಂದರೆ ಏನೆಂದು ಹೇಳುವುದು.......................
ಅದೊಂದು ಚಡಪಡಿಕೆ, ಅದೊಂದು ಕೌತುಕತೆ, ಅದೊಂದು ವಿಷಾದತೆ, ಅದೊಂದು ಸ್ವಾಯತ್ತತೆ, ಅದೊಂದು ಸಮನ್ವಯತೆ, ಅದೊಂದು ಕಕ್ಕುಲತೆ, ಅದೊಂದು ವ್ಯಾಕುಲತೆ, ಅದೊಂದು ಸಾಮೀಪ್ಯತೆ, ಅದೊಂದು ಸಂಪನ್ನತೆ, ಅದೊಂದು ಪ್ರಸನ್ನತೆ, ಅದೊಂದು ಸಮಾನತೆ,
ಅದೊಂದು ಚಿಂತೆ, ಅದೊಂದು ಸಂತೆ, ಅದೊಂದು ಗೊಂದಲತೆ, ಅದೊಂದು ಗೌಜುಗತೆ, ಎಲ್ಲಕ್ಕೂ ಮೀರಿದ ಎಲ್ಲವೂ ಮಿರಿ ಮಿರಿ ಮಿಂಚಿನಂತೆ ಮಾಡುವ ಮಾಯಾದೀಪ, ಯಾರ ಕ್ಯೆಗೂ ಸಿಕ್ಕದ ಒಂದು ಸುಭದ್ರ ಭಾವನೆ, ಹಾಗೇ ಒಂದಿಷ್ಟು ಆತಂಕ, ಎಲ್ಲೋ ಏನೋ ಹುಡುಕುತಿರುವವ ಧಾವಂತ, ಎಲ್ಲವೂ ಇದೆ ಈ ಎರಡಕ್ಷರದ ಪ್ರೀತಿಯಲ್ಲಿ.

ಹೇಳಲು ಪದಗಳಿಲ್ಲ,
ಹೇಳುತಿರಲು ನಿಲ್ಲೋಲ್ಲ,
ಹೇಳಿಕೆಗೆ ಮರಗೋಲ್ಲ,
ಹೇಳಿದರೂ ಕೇಳೋಲ್ಲ......................

ಕೇಳಿದರೂ ತಿಳಿಸೋಲ್ಲ,
ಕೇಳಿಸಿದರೂ ಹೇಳೊಲ್ಲ,
ಕೇಳಿಕೆಗೆ ಕಿವಿಗೊಡದೆ
ಪ್ರೀತಿ ಎಂದಷ್ಟೆ ಹೇಳಿ..............................

ಹೃದಯಕ್ಕೆ ಲಗ್ಗೆ ಇಡುವ ವಿಶಾಲ ಅರ್ಥದ ದಿವಿನಾದ ಪದ.
ಪ್ರೀತಿ. . . .


ನಮ್ಮ ಜೀವನದಲ್ಲಿ ಪ್ರೀತಿಗೆ ಯಾಕೆ ಎಷ್ಟು ಮಹತ್ವ ಕೊಡುತ್ತೇವೆ ಎಂದು ನನ್ನ ಅನುಭವವನ್ನು ಹಂಚಿಕೊಳ್ಳುತ್ತೆನೆ.

೧. ಚಿಕ್ಕಂದಿನಿಂದಲೂ ನಮ್ಮನ್ನು ಯಾರು ಸರಿಯಾಗಿ ಗುರುತಿಸದಿದ್ದರೆ,
೨. ಸಿಗಬೇಕಾದ ಪ್ರೀತಿ, ಮಮತೆ, ವಾತ್ಸಲ್ಯ ಸಿಗದಿದ್ದರೆ,
೩. ನಮ್ಮ ಅಂತರಂಗದ ಭಾವನೆಗಳನ್ನು ಇನ್ನೋಬ್ಬರಲ್ಲಿ ಹಂಚಿಕೊಳ್ಳಲು,
೪. ನಮ್ಮ ಪ್ರತಿ ಯೋಚನೆಗಳು, ಯೋಜನೆಗಳು ಅವಳನ್ನು ಸಂತೋಷಗೊಳಿಸಲು.
೫. ಆಕೆಯ ಬಗ್ಗೆ ನಮಗಿರುವ ಮೌನ ಪ್ರೀತಿ,
೬. ಅವಳ ಬಗ್ಗೆ ನಾವುಗಳು ಕಟ್ಟಿದ್ದ ಕನಸಿನ ಗೋಪುರಕ್ಕೆ ಧಕ್ಕೆ ಬಂದಾಗ.
೭. ಎಲ್ಲವೂ ಅವಳಿಗಾಗೆ ಅನ್ನುವ ಭಾವನೆ, ಜೊತೆಗಿನ ನಿಷ್ಕಲ್ಮಶ ಒಲವು.

ಪ್ರೀತಿಯೆಂದರೇನು ? ಭಾಗ ೨

ಪ್ರೀತಿಯೆಂದರೆ ಅದು ಸುಮ್ಮನೆ ಆಕರ್ಷಣೆಯಲ್ಲ, ಅದಕ್ಕೆ ಇಂತದೇ ಎಂಬ ಭಾವವಿಲ್ಲ, ನಾವು ಒಬ್ಬ ವ್ಯಕ್ತಿಯನ್ನು ಇಷ್ಟಪಡೋದು ಮೊದಲನೆಯದಾಗಿ ಆಕರ್ಷಣೆಯಿಂದಲ್ಲ, ಅವರ ಮಾತಿನಲ್ಲಿರುವ ಸತ್ಯದಿಂದ, ಮತ್ತು ಪ್ರಾಮಾಣಿಕತೆಯಿಂದ, ಇಲ್ಲಿ ಗಂಡ ಹೆಂಡತಿ, ಗೆಳೆಯ ಗೆಳತಿ, ತಂದೆ ತಾಯಿ, ಬಂಧು ಬಾಂಧವರನ್ನೂ ಮೀರಿ ಮತ್ತೊಂದು ಸೆಳೆತವಿದೆ, ಅದೇ ಸ್ನೇಹ ಅದರ ಮಟ್ಟಿಗೆ ಹೇಳುವುದಾದರೆ ನೀವು ನಿಮ್ಮ ಹುಟ್ಟಿನ ನಂತರ ತಂದೆ ತಾಯಿ, ಅಣ್ಣ-ತಂಗಿ, ಅಕ್ಕ-ತಮ್ಮ, ಬಂದು ಬಳಗದವರೆಲ್ಲರೂ ಆಯ್ಕೆಗಳೇ ಇಲ್ಲದೇ ನಿಮ್ಮವರು ಎಂದು ಹೇಳಬೇಕಾಗುತ್ತದೆ, ಆದ್ರೆ ಸ್ನೇಹಿತನ ಆಯ್ಕೆ ಮಾತ್ರ ನಿಮ್ಮ ಯೋಚನೆಗೆ, ನಿಮ್ಮ ಭಾವ ಸ್ಪಂದನೆಗೆ, ಮನಸಿನ ಉದ್ವೇಗಕ್ಕೆ ಜೊತೆಯಾಗಿ ಹೆಜ್ಜೆಯಾಗುವ ಒಂದು ಮನಸ್ಸು ಮಾತ್ರ.

ನಿಮ್ಮ ಆಯ್ಕೆಆ ಮನಸ್ಸಿಗೆ ಮಾತ್ರವೇ ಹೊರತು ಅದರ ಹಿಂದಿರುವ ಮತ್ಯಾವುದೋ ಮಾತುಗಳಿಗಲ್ಲ, ಉದಾ : ನೀವು ಆಸ್ಪತ್ರೆಯಲ್ಲಿ ಕೆಲಸ ಮಾಡ್ತೀದ್ದಿರಾದ್ದರಾ ಎಂದುಕೊಳ್ಳೋಣ. ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಡಾಕ್ಟರ್, ಹಾಗೂ ಟ್ರಿಟ್ಮೆಂಟ್ ಎಲ್ಲಾ ಇದೆಯನ್ನಿ, ಆದರೂ ಮತ್ತ್ಯಾವುದೋ ಹೆಚ್ಚಿನ ಚಿಕಿತ್ಸೆಗಾಗಿ ನೀವು ಬೇರೆ ಆಸ್ಪತ್ರೆಗೆ ಆ ರೋಗಿಯನ್ನು ಕಳುಹಿಸೋದಿಲ್ವೆ, ಹಾಗೆ ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳಿದ್ದರೂ ಹೃದಯಾಘಾತಕ್ಕೆ ಅಥವಾ ಮತ್ಯಾವುದೋ ಮಾರಣಾಂತಿಕ ಖಾಯಿಲೆಗೆ ಬೇರೆ ಆಸ್ಪತ್ರೆಗೆ ರೋಗಿಯನ್ನು ಸೇರಿಕೊಳ್ಳಲು ನೀವೆ ಹೇಳುತ್ತೀರಿ, ಹಾಗೆಯೇ ಡಾಕ್ಟರ್ಗಳ ವಿಷಯವಾಗಿ ಬಂದರೆ ಎಲ್ಲಾ ಡಾಕ್ಟರ್ಗಳು ಯಾಕೆ ನಾವು ಇಂಥದರಲ್ಲಿ ಪರಿಣಿತರು ಅಂತಾ ಹೇಳುತ್ತಾ ಬೋರ್ಡ್ ಹಾಕಿಕೊಳ್ಳುತ್ತಾರೆ ಹೇಳಿ, ಬರುವವರಿಗೆ ನಾವು ಇಂತದರಲ್ಲಿ ಪರಿಣಿತರಷ್ಟೆ, ಇನ್ನುಳಿದ ವಿಷಯಗಳ ಬಗ್ಗೆ ಅಲ್ಪವಾದ ಜ್ಣಾನವಿದೆ ಹಾಗೂ ಆ ಉಳಿದ ವಿಶೇಷ ಚಿಕಿತ್ಸೆಗಾಗಿ ಮತ್ತೊಬ್ಬ ಡಾಕ್ಟರರ ಅಗತ್ಯವಿದ್ದರೆ ಅವರ ವಿಳಾಸ ಕೊಡುತ್ತೇವೆಯೆಂದೋ ಅಥವಾ ನೀವೆ ಆ ಡಾಕ್ಟರರ ವಿಳಾಸವನ್ನು ಪತ್ತೆ ಹಚ್ಚಿ ಹೋಗುವುದಿಲ್ಲವೆ ಹಾಗೆ ? ಇದು ಕೂಡ

ಒಬ್ಬ ಪರ ಸ್ತೀ ಅಥವಾ ಪರಪುರಷರ ಸಂವಾದ ಬರೀ ಅನ್ಯೆತಿಕತೆಗೆ ಹೋಲಿಸುವುದಾದರೆ ಕೆಲವು ಇಲ್ಲಿ ಪ್ರಕಟಿಸಬಾರದ ಎಷ್ಟೋ ವಿಚಾರಗಳು ಬಗ್ಗೆ ನನಗೆ ಜಿಗುಪ್ಸೆ ಹುಟ್ಟುತ್ತದೆ, ಅಂತದ್ದನ್ನೇ ಸಮಾಜ ಸುಲಭವಾಗಿ ಒಪ್ಪಿ ಅದಕ್ಕೆ ತನ್ನದೇ ರೀತಿಯಲ್ಲಿ ಅರ್ಥಕೊಡುವಾಗ ಇನ್ನು ಒಂದು ನಿಷ್ಕಲ್ಮಶ ಸಂಬಂಧದಲ್ಲಿ ಅನ್ಯೆತಿಕತೆ ಡಂಬಾಚಾರಿಗಳ ಕುರುಡು ನಂಬಿಕೆಯಷ್ಟೆ.

ಎಷ್ಟೊ ಮದುವೆಯಾದ ಹುಡುಗರೂ ಹುಡುಗೀಯರೂ ಹೇಳುವುದ ನೀವು ಕೇಳಿರಬೇಕು, ನನ್ನ ಗಂಡ ನನಗೆ ಸರಿಯಾದ ಜೋಡಿಯಲ್ಲ ಅಥವಾ ನನ್ನ ಹೆಂಡತಿ ನನಗೆ ತಕ್ಕುದಾದವಳಲ್ಲ ಅಂತಾ ಹೇಳ್ತಿರ್ತಾರೆ, ಅಂದರೆ ಅದು ಹಣಕಾಸು, ಮರ್ಯಾದೆ, ಅಥವಾ ಅಂತಸ್ತಿಗೆ ಸರಿಸಮವಲ್ಲ ಅಂತ ಅಲ್ಲ ಮನಸ್ಸಿನ ಭಾವನೆಗಳ ಹೊರಹೊಮ್ಮುವಿಕೆಗೆ ಒಂದು ಚಡಪಡಿಕೆಗೆ ಸಿಗಬೇಕಾದ ವೇದಿಕೆ ಅವಳಲ್ಲ ಅಥವಾ ಅವನಲ್ಲ ಎಂಬುದಿಷ್ಟೆ. ನಿಮ್ಮ ಮನಸ್ಸಿನಲ್ಲಿ ಏಳುವ ರಾಗಲಹರಿಗೆ ಒಂದು ಆಯಾಮಬೇಕಷ್ಟೆ, ಅದಕ್ಕೆ ಪುರುಷ ಸ್ತ್ರೀ ಎಂಬ ಭೇಧವಿಲ್ಲ, ಅದಕ್ಕೆ ಹೆಚ್ಚಾಗಿ ವಯಸ್ಸಿನ ಮಿತಿಯಿಲ್ಲ, ಹಣ್ಣು ಹಣ್ಣು ಮುದುಕರಿಗೂ ಮುದುಕಿಯರಿಗೂ ನನಗೊಂದು ಸಂಗಾತಿಯ ಸಾಮೀಪ್ಯ ಬೇಕೆನ್ನುವುದು, ಅನ್ಯೆತಿಕತೆಯಲ್ಲ, ಅವರ ಮನಸ್ಸಿನ ಉದ್ವೇಗಕ್ಕೆ ಸಿಗಬೇಕಾದ ಒಂದು ವೇದಿಕೆ.

ಜೇಡರಬಲೆ

ಜೇನಾಗಿ ಹೋದೆಯಾ.....
ನನ್ನವಳೆ ಜೇನಾಗಿ ಹೋದೆಯಾ....
ಜಾನು ಎಂದು ಕರೆದಾಗ ನಾ
ನೀ ಜೇನಾಗಿ ಹೋದೆಯಾ...

ಹೋಗುವ ಮುಂಚೆ ಮರೆತೆ ನನ್ನನೇ
ನೂಕಿ ಹೋಗಿರುವೆ ಜೇಡರ ಬಲೆಯೊಳಗೆ
ಸೆಣಸಾಡುತಿರುವೆ ಇನ್ನೂ ಬರಲಾರದೆ ಹೊರಗೆ,
ಇರಲಾರದೆ ಒಳಗೆ,

ಜೇನಾಗಿ ಹೋದೆಯಾ.......
ಮನದಿನಿಯೆ ಜೇನಾಗಿ ಹೋದೆಯಾ.....
ಕಾದಿರುವುದು ಸಾಕಿನ್ನು ಒಳಗೆ,
ಇರಲಾರೆ ಇನ್ನೊಂದು ಗಳಿಗೆ,
ಹೋದೆ ನೀ ಮರೆತು ನನ್ನಯ ಬೇಗೆ,
ಹೇಳಲಿ ಹೇಳು ಈ ಸಂಕಟ ಯಾರು ಯಾರಿಗೆ ?

ಇರಲಾರದೆ ಒಂದಿಷ್ಟು ನಗೆ ನನ್ನವಳೆ
ಬಿಡಿಸು ಬಾ, ನಾನಿರುವೇ ಈಗಲೂ ನೀ ಹೆಣೆದ ಜೇಡರಬಲೆಯೊಳಗೆ

ಹುಡುಗಿ ಪ್ರೀತಿಸುತ್ತಾಳೆ.....

ಶ್ರೀಮಂತ ಸೊಕ್ಕಿರುವ ಪ್ರೀತಿಯನ್ನು
ಸಿರಿವಂತ ಗುಣವಿರುವ ಒತ್ತಾಸೆನನ್ನು
ಕಣ್ಣೀರನ್ನು ಪನ್ನೀರನ್ನಾಗಿಸುವ ಪರಿಕೀಯನಾದರೂ ಅವನು

ಹುಡುಗಿ ಪ್ರೀತಿಸುತ್ತಾಳೆ.....

ಹೊಂಡದಲೂ ಕೊಂಡಯ್ಯುವ ಸುಜುಕಿಯಷ್ಟು ಸರಾಗದ ಮನಸನ್ನು
ಸಾಪ್ಟವೇರನಾಗಿಲ್ಲದಿದ್ದರೇನು ಸಾಪ್ಟ್ ಆದ ಗುಣವನ್ನು
ಸುಖಾಸುಮ್ಮನೆ ಅಭಿನಂದಿಸುವವನನ್ನು

ಹುಡುಗಿ ಪ್ರೀತಿಸುತ್ತಾಳೆ.....

ಟಿವಿಯಿಲ್ಲದಿದ್ದರೂ ಪ್ರೀತಿಯ ಠೀವಿಯ ಅರಿತವನನ್ನು
ಫ್ರಿಜಿಲ್ಲದಿದ್ದರೂ ತಣ್ಣಗಿನ ನಗುವನ್ನು
ಮೊಬ್ಯೆಲಿನಲ್ಲದಿದ್ದರೂ ಮೊಂಬತ್ತಿಯಂತೆ ಬಾಳಾಗುವವನನ್ನು

ಹುಡುಗಿ ಪ್ರೀತಿಸುತ್ತಾಳೆ....

ಡೌರಿ(Dowry)ಯೇ ಪಡೆಯದ ಮದುಮಗನನ್ನು
ಪ್ರೀತಿಯ ಪರಾಕಾಷ್ಟೆಗೆ ಕೊಂಡೊಯ್ಯುವ ಮೃದುತನವನ್ನು
ಪೀಸಿಲ್ಲದೆ ನೇವರಿಸುವ ಅವಳಿರುವತೆಯನ್ನುಯಾವತ್ತಿನ ಹುಡುಗಿಯರೂ ಪ್ರೀತಿಸುವುದು ಹೀಗೆ
ಅರಿತವಿಲ್ಲ ಪ್ರೀತಿಯ ಇನ್ನೊಂದು ಬೇಗೆ

ಮತ್ತದೆ ಭಾವ ಅವಳ ನೆನಪಿನಂತೆ

ಅವಳೊಂದಿಗಿನ ಪ್ರೀತಿಯ ದಿನಗಳ ನೆನೆದೂ
ದಿನವೂ ನಾನು ಒದ್ದೆ ಒದ್ದೆ,
ಅವಳ ನೆನಪು ಒದೆಯುತ್ತಿದೆ
ಪುಟ್ಟ ಕಂದಮ್ಮನ ಒದೆತದಂತೆ,

ಪ್ರೀತಿ ಬದಲಾಗಿರಬಹುದು ಅವಳಲ್ಲಿ,
ಬದಲಾಗಿಲ್ಲ ಬದುಕು ಅವಳಿಲ್ಲದಿಲ್ಲಿ,
ಹರಿವ ನೀರೆಂದೇ, ನಾನು ಪ್ರೀತಿಸಿದ್ದು
ಅರಿಯಲೇ ಹೋದಳೆಲ್ಲ ಎಂದು ನಿಮಗೆ ನೆನಪಿಸಿದ್ದು,
ನನ್ನೀ ಹೃದಯದ ಕಡೆಯಿಂದ ಹರಿಯುತಿದೆ,
ಕೆಲವೊಮ್ಮೆ ಹೃದಯವೇ ಕ್ಯೆಕಿತ್ತು ಬರುವಂತೆ,
ಅವಳ ಪ್ರತಿ ಮಾತು ಕನವರಿಸುತಿಹೆ,
ಅವಳಿಲ್ಲದೇ ಹೋದಳೇ ಬಾಳಪಯಣದಲೆಂದು,

ಈ ಪ್ರೀತಿಗೆ ಷಡ್ವ್ಯೆರಿಗಳೆಂದರೆ ಕಡಿಮೆಯೇ,
ವಿರೋಧಕ್ಕೆ ನಿಂತವರೂ ಊರಿಗೆ ಊರೇ,
ಬೆಂಬಲವಿರಲಿಲ್ಲ ಈ ಮುಗ್ಧ ಪ್ರೀತಿಗೆ,
ಬೇಡದಾಗಿತ್ತು ನಾನೇ ಅವಳಿಗೆ,

ಮತ್ತದೇ ಭಾವ, ಅವಳ ನೆನಪು,
ಕಣ್ಣ ಹೊಳಪು, ಮನದ ಬಿಸುಪು,
ನೆನೆದಿದ್ದೇನೆ, ಒದ್ದೆ ಮುದ್ದೆಯಾಗಿದ್ದೇನೆ ಇನ್ನೂ..........................................

ಸರಣಿ ೧ - ಡಾ. ಎಚ್. ನರಸಿಂಹಯ್ಯ ಒಂದು ನೆನಪು

ಡಾ|| ಹೆಚ್‌. ನರಸಿಂಹಯ್ಯನವರು ೬ನೇ ಜೂನ್ ೧೯೨೦ರಂದು ಕೋಲಾರ ಜಿಲ್ಲೆಯ
ಗೌರೀಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ
ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಈಗ ಅವರಾರೂ ಇಲ್ಲ.

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ,
೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ. ಎಸ್‌ಸಿ.
(ಆನರ್ಸ್) ಮತ್ತು ಎಂ. ಎಸ್‌ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು.
ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.

೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ
ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆ ಮೇಲೆ ಹನ್ನೆರೆಡು ವರ್ಷಗಳು
ಪ್ರಿನ್ಸಿಪಲ್‌ರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ
ಉಪಕುಲಪತಿಗಳು. ಅವರ ಕಾಲದಲ್ಲಿ ಹಲವು ಮಹತ್ತರ ಕಾರ್ಯಗಳ ಸಾಧನೆ. ಈಗ ಎಚ್. ಎನ್.
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಪ್ ಕರ್ನಾಟಕದ ಅಧ್ಯಕ್ಷರು.

ವಿದ್ಯಾರ್ಥಿ ದೆಶೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು.
ಅಧ್ಯಾಪಕರಾದ ಮೇಲೂ ೧೯೪೬ರಿಂದ ಇಲ್ಲಿಯ ತನಕ ಕಾಲೇಜ್ ಹಾಸ್ಟಲೇ ಅವರ ಮನೆ. ಒಟ್ಟು ೫೭
ವರ್ಷಗಳ ವಿದ್ಯಾರ್ಥಿನಿಲಯದ ಜೀವನ ಒಂದು ವಿಶಿಷ್ಟ ಧಾಖಲೆ.

೧೯೪೨ ನೆಯ ಇಸಿವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್‌ಸಿ, ಆನರ್ಸ್
ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ 'ಕ್ವಿಟ್ ಇಂಡಿಯಾ'
ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ.
ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ.

ಅಮೆರಿಕಾದ ಓಹೈಒ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು
ವರ್ಷದಲ್ಲಿ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್
ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಮಟ್ಟದ ಪ್ರಥಮ ಶ್ರೇಣಿ. ಏಳು
ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois
University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್
ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ
ಮೀಸಲು. ಅವರ ಸರ್ವಸ್ವವನ್ನು ಈ ಸಂಸ್ಥೆಗಳಿಗೆ ಕೊಟ್ಟಿದ್ದಾರೆ. ಅಲ್ಲದೆ ಈ
ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ
ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ
ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ.

ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೌಢ್ಯದ
ವಿರುದ್ಧ ಸತತ ಹೋರಾಟ. ಮುವತ್ತು ವರ್ಷಗಳ ಹಿಂದೆ ಬೆಂಗಳೂರು ಸೈನ್ಸ್ ಪೋರಂ (Bangalore
Science forum) ಎಂಬ ವಿಜ್ಞಾನ ವೇದಿಕೆಯ ಸ್ಥಾಪಕ ಅಧ್ಯಕ್ಷರು. ಸಂಗೀತ, ನಾಟಕ, ನೃತ್ಯ
ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದಾರೆ. ಜಯನಗರದ ನ್ಯಾಷನಲ್
ಕಾಲೇಜಿನಲ್ಲಿರುವ ಬೆಂಗಳೂರು ಲಲಿತ ಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಅವರ ವಿಶಿಷ್ಟ ಸೇವೆಗಾಗಿ `ರಾಜ್ಯ ಪ್ರಶಸ್ತಿ` , ಭಾರತ ಸರ್ಕಾರದ `ಪದ್ಮ ಭೂಷಣ`,
ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ.
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ
ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ
ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ
ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು
`ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್‌ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್
ಆಫ್ ದಿ ಪ್ಯಾರಾ ನಾರ್ಮಲ್` (Committee for Scientific Investigation of the
claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ`. ಕರ್ನಾಟಕ ರಾಜ್ಯ ವಿಧಾನ
ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ
ಸದಸ್ಯರಾಗಿದ್ದರು.

ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು. ಮಾನಸಿಕ,
ದೈಹಿಕ ನೋವುಗಳ ಮಧ್ಯೆಯೂ ಅವರ ಹಾಸ್ಯ ಮನೋಭಾವವನ್ನು ಕಾಣಬಹುದು. ಸ್ನೇಹಮಯ
ಮಾನವತಾವಾದಿ, ವಿಚಾರವಾದಿ. ಒಳ್ಳೆಯ ಅಭ್ಯಾಸಗಳಿಂದ ಕೂಡಿದ ಸ್ವಚ್ಛ, ಸರಳ ಸಂಯಮದ ಜೀವನ.
ತೆರೆದ ಮನದಷ್ಟೇ ತೆರೆದ ಜೀವನ. ಅದಮ್ಯ ಆತ್ಮವಿಶ್ವಾಸ. ಜೀವನ ಪರ್ಯಂತ ಹೋರಾಟ.
ಕರ್ಮಯೋಗಿ. ಎಪ್ಪತ್ಮೂರರ ಹೊಸ್ತಿನಲ್ಲಿಯೂ ನಿರಂತರ ದುಡಿಮೆ. ರಾಷ್ಟ್ರೀಯವಾದಿ, ಸುಮಾರು
ಅರವತ್ತು ವರ್ಷಗಳಿಂದ ಖಾದಿದಾರಿ. ಪಟ್ಟು ಹಿಡಿದು ಕಾರ್ಯಸಾಧಿಸುವ ಮನೋಭಾವ, ದೃಡ
ಮನಸ್ಸು.

ಅನಾಥ ವಿದ್ಯಾರ್ಥಿಯಾಗಿ ಹಳ್ಳಿಯಿಂದ ಬಂದು ಯಾವ ಜಾತೀಯ, ರಾಜಕೀಯ ಬೆಂಬಲವಿಲ್ಲದೆ
ಉನ್ನತ ಸ್ಥಾನಗಳನ್ನು ಗಳಿಸಿ ಐವತ್ತೇಳು ವರ್ಷಗಳ ಹಿಂದೆ ಯಾವ ಶಾಲೆಯಲ್ಲಿ ಓದಿದರೋ,
ತದನಂತರ ಯಾವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರೋ ಅದೇ ಶಾಲಾ ಕಾಲೇಜುಗಳ ಆಡಳಿತ
ಮಂಡಳಿಯಾದ ಪ್ರತಿಷ್ಟಿತ ನ್ಯಾಷನಲ್ ಸೊಸೈಟಿಗೆ ಅಧ್ಯಕ್ಷರಾಗಿರುವುದು ಒಂದು ಅಪೂರ್ವ
ಸಾಧನೆ.

ಸರಣಿ ೨ - ಡಾ. ಎಚ್. ನರಸಿಂಹಯ್ಯ - ವಿಜ್ನಾನ ಮತ್ತು ಸಮಾಜದಲ್ಲಿನ ಪಾತ್ರ

ವಿಜ್ಞಾನದ ಯಾವುದೇ ವಿಭಾಗವೂ ಸಮಾಜದ ಒಳಿತಿಗಾಗಿ ಉಪಯೋಗಕ್ಕೆ ಬರಬಲ್ಲದು. ಅನೇಕ ಕ್ಷೇತ್ರಗಳಲ್ಲಿ ರಸಾಯನಶಾಸ್ತ್ರದ ಬಳಕೆ ಕಂಡು ಬರುತ್ತದೆ. ರಾಸಾಯನಿಕ ಕ್ರಿಯೆ ಇಲ್ಲದ ಕಾರ್‍ಯಗಳು ಅಪರೂಪ. ಜೀವನವೇ ಬಹುಪಾಲು ರಸಾಯನಶಾಸ್ತ್ರವಾಗಿ ಕಂಡುಬರುತ್ತದೆ. ವಿeನದ ಈ ವಿಭಾಗದ ಪ್ರಾಧಾನ್ಯ ತುಂಬಾ ಹೆಚ್ಚಾಗಿದ್ದು, ಆಳವಾದ ಸಂಶೋಧನೆಯ ಮೂಲಕ ಮನುಷ್ಯಕುಲದ ಸಂತೋಷಕ್ಕಾಗಿ ಇದರ ಉಪಯೋಗವಾಗಬೇಕು.

ಸಂಶೋಧನೆ ದಿನದಿನಕ್ಕೆ ಹೆಚ್ಚು ದುಬಾರಿಯಾಗುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ಇಷ್ಟೇ ಪ್ರಮುಖವಾದ ಅನೇಕ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಇರುತ್ತದೆ. ವಿಜ್ಞಾನದ ಸಂಶೋಧನೆಯಲ್ಲಿ, ಗುಣಮಟ್ಟದಲ್ಲಾಗಲಿ, ಸಾಮರ್‍ಥ್ಯದಿಂದಾಗಲಿ ಭಾರತದ ವಿಜ್ಞಾನಿಗಳು, ಜಗತ್ತಿನ ಯಾವುದೇ ವಿಜ್ಞಾನಿಗಳಿಗೂ ಕಡಿಮೆ ಅಲ್ಲ. ವಿಜ್ಞಾನದ ಯೋಜನೆಗಳಿಗೆ, ಕಾರ್‍ಯಕ್ರಮಗಳಿಗೆ, ಅಪಾರ ಹಣವನ್ನು ಮುಂದುವರೆದ ದೇಶಗಳು ತೊಡಗಿಸುವಂತೆ ನಮ್ಮಲ್ಲಿ ಸಾದ್ಯವಿಲ್ಲದೆ ಇರುವುದರಿಂದ ಹೊಸ ಸಂಶೋಧನೆಗಳಲ್ಲಿ ಆ ದೇಶಗಳೊಡನೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಪರದೇಶಗಳನ್ನು ಸುಮ್ಮನೆ ಅನುಸರಿಸುವುದಕ್ಕಿಂತ ನಮ್ಮ ಸಮಾಜಕ್ಕೆ ಪ್ರಸ್ತುತವಾದ ಸಮಸ್ಯೆಗಳ ಕಡೆ ಸಂಶೋಧನೆ ಹೆಚ್ಚಿನ ಗಮನ ಕೊಡಬೇಕು.

ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಮುಂದುವರೆಸಿಕೊಂಡು ಹೋಗುವುದರ ಜತೆಗೆ ಬೇರೆ ಕೆಲವು ಕರ್ತವ್ಯಗಳನ್ನು ನಿರ್ವಹಿಸುವುದು ಅವಶ್ಯಕ. ವಿಜ್ಞಾನಿಗಳು ಹೆಚ್ಚಿನ ಶಿಕ್ಷಣ ಪಡೆದ ಧೀಮಂತರಾಗುವುದರಿಂದ ಅವರು ತಮ್ಮ eನವನ್ನು ಸಾಮಾನ್ಯ ವ್ಯಕ್ತಿಗಳ ಮನೋಭಾವನ್ನು ತಿದ್ದುವ ಕಾರ್ಯದಲ್ಲಿ ಉಪಯೋಗಿಸಿ, ಸಮಾಜದ ಸುಧಾರಣೆಗೆ ಸಹಾಯಕರಾಗಬೇಕು. ವಿಜ್ಞಾನದ ಮತ್ತು ವೈeನಿಕ ಮಾರ್ಗಗಳು ಜನಪ್ರಿಯವಾಗುವಲ್ಲಿ ವಿeನಿಯ ಪ್ರಾಮುಖ್ಯ ಬಹಳ ಹಿರಿದಾದುದು. ವಿಜ್ಞಾನಕ್ಕೆ ಸಂಬಂದಿಸಿದಂತೆ ಮಾತೃಭಾಷೆಗಳಲ್ಲಿ, ಇಂಗ್ಲೀಷನಲ್ಲಿ ಜನಪ್ರಿಯ ಲೇಖನಗಳನ್ನು ಬರೆಯುವುದು ಮತ್ತು ಉಪನ್ಯಾಸ ಕೊಡುವುದು-ಈ ದಿಸೆಯಲ್ಲಿ ವಿಜ್ಞಾನಿಗಳು ಪ್ರಯತ್ನಿಸಬೇಕು. ವಿಜ್ಞಾನಿಯ ಮನೋಭಾವವು ಅವನು ದಂತಗೋಪುರದಲ್ಲಿರುವ ಅಪೂರ್ವಬುದ್ಧಿಶಾಲಿ ಎಂಬ ಭಾವನೆಯನ್ನು ಜನರಲ್ಲಿ ಉಂಟುಮಾಡುವ ರೀತಿಯಲ್ಲಿ ಇರಬಾರದು. ಸಾಮಾನ್ಯ ಜನತೆ ವಿಜ್ಞಾನಿಯನ್ನು ವಿಶೇಷ ಜಾತಿಗೆ ಸೇರಿದ ಪ್ರಾಣಿ ಎಂದು ಅಂದುಕೊಳ್ಳುವಂತಾಗಬಾರದು. ಒಟ್ಟು ಸಮಾಜದ ದುಡಿಮೆಯಲ್ಲಿ, ಶಿಕ್ಷಣವನ್ನು ಪಡೆದಿರುವ ವಿಜ್ಞಾನಿ ಸಾಮಾನ್ಯ ಜನರ ಯೋಚನಾ ಶಕ್ತಿಯನ್ನು ಬೆಳೆಯಿಸುವಲ್ಲಿ ಶ್ರಮಿಸುವುದು ಆತನ ಕರ್ತವ್ಯವೇ ಹೊರತು ಉಪಕಾರವೇನೂ ಅಲ್ಲ. ಇಂತಹ ಸನ್ನಿವೇಶಗಳು ನಡೆಯುವ ಸಂದರ್ಭದಲ್ಲಿ ಜನಪ್ರಿಯ ಉಪನ್ಯಾಸಗಳನ್ನು, ಉಪಯುಕ್ತ ವಿಜ್ಞಾನ ಪ್ರದರ್ಶನಗಳನ್ನು ಏರ್ಪಡಿಸಿದರೆ ವಿಜ್ಞಾನದಲ್ಲಿ ಆಸಕ್ತರಾಗಿರುವ ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಹಾಯಕವಾಗುತ್ತದೆ.

ನಮ್ಮ ದೇಶದಲ್ಲಿ ವಿಜ್ಞಾನಿಗಳು ಹಲವಾರು ಸಂದರ್ಭಗಳಲ್ಲಿ ಪರಸ್ಪರ ವಿರುದ್ಧವಾದ ಎರಡು ರೀತಿಯ ಮನೋಭಾವವನ್ನು ವ್ಯಕ್ತಪಡಿಸುವುದು ದುರದೃಷ್ಟ. ಪ್ರಯೋಗಶಾಲೆಗಳಲ್ಲಿ ಅವರು ಹೆಚ್ಚಿನ ವಿಚಾರಶಕ್ತಿಯನ್ನು, ವೈಜ್ಞಾನಿಕ ಮನೋಭಾವನ್ನು ವ್ಯಕ್ತಪಡಿಸುತ್ತಾರೆ. ಆದರೆ ಜೀವನದಲ್ಲಿ ಅವರ ಯೋಚನಾಶಕ್ತಿ ರಜೆ ತೆಗೆದುಕೊಂಡಿದೆಯೋ ಏಂಬಂತೆ ಅವೈಜ್ಞಾನಿಕವಾಗಿ ವರ್ತಿಸುತ್ತಾರೆ. ಒಂದೇ ಮನಸ್ಸು ತರ್ಕಬದ್ದವಾಗಿ, ಅತಾರ್ಕಿಕವಾಗಿ ಯೋಚಿಸುತ್ತದೆ. ಯೋಚನೆಯಲ್ಲಿ ಏಕಸೂತ್ರತೆಯೆ ಕಂಡುಬರುವುದಿಲ್ಲ. ಅವನ ಮೆದುಳಿನಲ್ಲಿ ಎರಡು ಸ್ವಿಚ್‌ಗಳು ಇದ್ದಂತೆ ತೋರುತ್ತದೆ. ಒಂದು ಸ್ವಿಚ್ ತರ್ಕಬದ್ದವಾಗಿ ಯೋಚಿಸುತ್ತಿದ್ದರೆ, ಎರಡೆನೆಯ ಸ್ವಿಚ್ ತರ್ಕವಿಲ್ಲದೆ ಯೋಚಿಸುತ್ತಿರುತ್ತದೆ. ಇದಕ್ಕಿಂತ ಮತ್ತಾವ ಪವಾಡ ಬೇಕು?

ಅಧ್ಯಾಪಕನು ತರಗತಿಯಲ್ಲಿ ಸಿದ್ಧಾಂತವನ್ನು ವೈಜ್ಞಾನಿಕವಾಗಿ ಪಾಠ ಹೇಳುತ್ತಾನೆ. ಆದರೆ ಇದೇ ವ್ಯಕ್ತಿ ಚರ್ಚಿನಲ್ಲಿ ಅಥವಾ ದೇವಸ್ಥಾನದಲ್ಲಿ ಯಾವುದೇ ಸಂಕೋಚವಿಲ್ಲದೆ ವಿಜ್ಞಾನಕ್ಕೆ ಅಸಂಗತವಾದ ವಿಕಾಸವಾದವನ್ನು ನಂಬಿಕೆಯ ಮೂಲಕ ಬೋಧಿಸುತ್ತಾನೆ. ಮನುಷ್ಯ ಯಶಸ್ವಿಯಾಗಿ ಚಂದ್ರನನ್ನು ತಲುಪಿ ಬಂದಿದ್ದಾನೆ. ಆದರೂ ಗ್ರಹಣದ ಬಗೆಗೆ ಎರಡು ಸಿದ್ಧಾಂತಗಳಿವೆ, ಒಂದು ತರಗತಿಯಲ್ಲಿ ಬೋಧನೆಗೆ, ಮತ್ತೊಂದು ಮನೆಯಲ್ಲಿ ಆಚರಣೆಗೆ. ಭೌತಶಾಸ್ತ್ರವನ್ನು ಪಾಠ ಹೇಳುತ್ತಾ, ಹಸ್ತ ಸಾಮುದ್ರಿಕವನ್ನು ನಂಬುವವರುಂಟು. ಹಾಗೆಯೇ ಹಲವಾರು ವಿಜ್ಞಾನಿಗಳು ಜ್ಯೋತಿಷ್ಯವನ್ನು ನಂಬುವುದು ಅಪರೂಪವೇನೂ ಅಲ್ಲ. ಒಬ್ಬ ವಿಜ್ಞಾನಿಯು ವಸ್ತುಸ್ಥಿರತೆಯ ವಿಶ್ವನಿಯಮವು ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ವಸ್ತು ಮತ್ತು ಚೈತನ್ಯಗಳ ಸ್ಥಿರತೆಯ ನಿಯಮವು ಪುಟ್ಟಪರ್ತಿ ಹಾಗೂ ವೈಟ್‌ಫೀಲ್ಡ್‌ಗಳಿಗೆ ಅನ್ವಯಿಸುವುದಿಲ್ಲವೆಂದು ಹೇಳಿದರೆ ಅದು ಶತಮೂರ್ಖತನ. ಎಚ್.ಎಂ.ಟಿ ಕೈಗಡಿಯಾರವೊಂದು ಶೂನ್ಯದಲ್ಲಿ ಸೃಷ್ಟಿಯಾಗುತ್ತದೆ ಎಂದು ನಂಬುವುದು ಮೂರ್ಖತನವಲ್ಲವೆ? ನೀರು, ಪೆಟ್ರೋಲ್ ಆಗಿ ಪರಿವರ್ತನೆ ಆಗಬಲ್ಲದು, ಕ್ಯಾನ್ಸರ್, ಡಯಾಬಿಟಿಸ್ ನಂತಹ ರೋಗಗಳು `ಬೂದಿ` ಹಚ್ಚುವುದರಿಂದ ವಾಸಿಯಾಗುತ್ತವೆ ಎಂದು ಹೇಳುವುದರಲ್ಲಿ ಏನಾದರೂ ಆರ್ಥವಿದೆಯೆ? ಆಶಿಕ್ಷಿತನೊಬ್ಬ ಹೀಗೆ ಹೇಳಿದರೆ ಅವನನ್ನು ಕ್ಷಮಿಸಬಹುದು. ಆದರೆ ವಿದ್ಯಾವಂತರು ಈ ರೀತಿಯ ಆಭಿಪ್ರಾಯಗಳನ್ನು ವ್ಯಕ್ತಪಡಿಸುವುದಲ್ಲದೆ, ಈ ರೀತಿಯ ಪವಾಡಗಳ ಬಗ್ಗೆ ತಮ್ಮ ಗಾಢವಾದ ನಂಬಿಕೆಗಳನ್ನು ವ್ಯಕ್ತಪಡಿಸುವುದು ಶೋಚನೀಯ. ಇದು ನಿಜವಾದರೆ ಜಗತ್ತಿನಲ್ಲಿ ವಿeನದಲ್ಲಿ ನಡೆದಿರುವ ಎಲ್ಲ ಶೋಧನೆಗಳು ಅರ್ಥರಹಿತವಾಗುತ್ತವೆ. ನಮ್ಮ ದೇಶದಲ್ಲಿ ಮೂಢನಂಬಿಕೆಗಳು ತುಂಬಿ ತುಳುಕುತ್ತಿದ್ದು ಜಗತ್ತಿನ ವಿಚಾರವಂತರ ನಡುವೆ ನಗೆಗೀಡಾಗುವಂತೆ ಮಾಡಿವೆ. ಮೂಢ ನಂಬಿಕೆಯನ್ನು ಪ್ರತಿಪಾದಿಸುವ ವಿದ್ಯಾವಂತನು, ಮೂಢನಂಬಿಕೆಯನ್ನು ಹೊಂದಿರುವ ಅವಿದ್ಯಾವಂತನಿಗಿಂತ ಹೆಚ್ಚು ಆಪಾಯಕಾರಿ ಎಂದು ಹೇಳುವ ಅವಶ್ಯಕತೆಯೇ ಇಲ್ಲ.

ಈ ರೀತಿಯ ವಿಚಿತ್ರ, ಪ್ರಕೃತಿಯನ್ನು ಮೀರಿದ ಶಕ್ತಿಯ ಬಗ್ಗೆ ನಂಬಿಕೆಯನ್ನು ಹೊಂದಿರುವವರು. ಮುಗ್ಧ ಜನ ಅಷ್ಟೇ ಅಲ್ಲ, ಜನಜನಿತರಾದ ಶಿಕ್ಷಣವೇತ್ತರೂ ಸೇರಿದ್ದಾರೆ. ಇಂತಹ ಸ್ಥಿತಿಯ ಬಗ್ಗೆ, ವಿಜ್ಞಾನಿಗಳ ಪ್ರತಿಕ್ರಿಯೆ ಯಾವ ಬಗೆಯದು? ಅವುಗಳನ್ನು ಗಮನಿಸದೆ ಇರುವುದು ಸರಿಯೆ? ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳು ಇಂತಹವರ ಬಗ್ಗೆ ಹೊಂದುವ ಉದಾಸೀನಭಾವ, ನಿಷ್ಕ್ರಿಯತೆ ಸಮಾಜಕ್ಕೆ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಈ ರೀತಿಯ ತಟಸ್ಥ ಮನೋಭಾವ ಅರ್ಥರಹಿತ, ಅವೈಜ್ಞಾನಿಕ ವಿಚಾರಗಳಿಗೆ ಪರೋಕ್ಷವಾಗಿ ಸಮರ್ಥನೆ ಕೊಟ್ಟಂತೆ ಆಗುತ್ತದೆ. ಮೌನವು ಸಮ್ಮತಿಯ ಲಕ್ಷಣ ಆಗಿ ಬಿಡಬಹುದು.

ಸತ್ಯಶೋಧನೆಯ ಹಂಬಲದಿಂದ, ಸಮಾಜದ ಸುಧಾರಣೆಯ ಉದ್ಧೇಶದಿಂದ ಈ ರೀತಿಯ ಅಸಾಮಾನ್ಯ ಪ್ರಕ್ರಿಯೆಗಳನ್ನು ಕುರಿತು ವೈಜ್ಞಾನಿಕವಾಗಿ ಪರಿಶೀಲನೆ ನಡೆದು ಸಮಾಜಕ್ಕೆ ಸತ್ಯ ಸಂಗತಿಯು ತಿಳಿಯುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ವಿಜ್ಞಾನ ಮತ್ತು ಮೂಢನಂಬಿಕೆಗಳು, ಎರಡನ್ನೂ ಒಟ್ಟಾಗಿ ಸಮಾಜದಲ್ಲಿ ಉಳಿಸಿಕೊಂಡತಾಗುತ್ತದೆ. ಪ್ರಯೋಗ ಶಾಲೆಯಲ್ಲಿ ನಡೆಯುವ ಸಾಂಪ್ರಾದಾಯಿಕ ಸಂಶೋಧನೆಯಷ್ಟೆ ಈ ರೀತಿಯ ವೈಜ್ಞಾನಿಕ ಪರಿಶೀಲನೆಯೂ ಜರೂರಿಂದ ನಡೆಯಬೇಕಾದ ಕೆಲಸ.

ಯಾವುದೇ ವ್ಯಕ್ತಿ ನೀರನ್ನು ಪೆಟ್ರೋಲ್‌ನ್ನಾಗಿ ಪರಿವರ್ತಿಸಲು ಸಾಧ್ಯವಿದ್ದರೆ, ಅವನ ಶಕ್ತಿಯನ್ನು ಇಂಧನ ಸಮಸ್ಯೆಯ ಪರಿಹಾರಕ್ಕೆ ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಅದು ಸುಳ್ಳು ಘೋಷಣೆಯಾಗಿದ್ದರೆ ಆ ವ್ಯಕ್ತಿಯು ಎಷ್ಟೇ ಪ್ರಬಾವಶಾಲಿಯಾಗಿದ್ದರೂ, ಮೋಸದ ಅಪಾದನೆಯ ಕಾರಣ ಶಿಕ್ಷೆಗೆ ಒಳಪಡಿಸಬೇಕು. ಆಹಾರ ವಸ್ತುಗಳ, ಔಷದಿಗಳ ಕಲಬೆರಕೆ, ಅಸಮರ್ಕವಾದ ತೂಕ ಅಳತೆಯ ಉಯೋಗ ಮುಂತಾದ ವಂಚನೆಯ ಗುಂಪಿಗೆ (ಇವು) ಸೇರುತ್ತವೆ.

ಆದರೆ ಸುಳ್ಳು ದೇವಮಾನವರು, ಮತ್ತಿತರರು ಶತಮಾನಗಳಿಂದ ಮುಗ್ಧ ಬಡ ಜನತೆಯನ್ನು ದೇವರು, ಧರ್ಮದ ಹೆಸರಿನಲ್ಲಿ ವಂಚಿಸುತ್ತಾ ಬಂದಿದ್ದಾರೆ. ಅವರುಗಳ ಶಿಕ್ಷೆಗೆ ಒಳಪಡುವುದಿರಲಿ, ಅಪಾರವಾದ ಸಂಪತನ್ನು ಗಳಿಸಿ ವಿಲಾಸೀ ಜೀವನವನ್ನು ನಡೆಸುತ್ತಿದ್ದಾರೆ. ವಿಜ್ಞಾನದ ಪ್ರಚಲಿತ ನಿಯಮಗಳನ್ನು ಮೀರುವ ಪವಾಡಗಳ ಬಗ್ಗೆ ವಿಜ್ಞಾನಿಗಳು ಪ್ರಬಲವಾಗಿ ವಿರೋಧಿಸಿ ಅವುಗಳ ಕೆಡುಕನ್ನು ತಪ್ಪಿಸಬೇಕು. ಯಾವುದೇ ಅವೈಜ್ಞಾನಿಕವಾದ ಹೇಳಿಕೆ ಪರೀಕ್ಷೆಗೆ ಗುರಿಪಡಿಸಬೇಕು. ಪ್ರತಿಯೊಂದು ಮೂಢನಂಬಿಕೆಯೂ ಪರಿಶೀಲನೆಗಳ ಮೂಲಕ ನಿರಾಕರಣವಾಗಬೇಕು. ಭಯ ಮತ್ತು ಅಜ್ಞಾನಗಳಿಂದ ರೂಪಿತವಾಗಿರು ಮೂಢನಂಬಿಕೆಗಳು, ಆತ್ಮವಿಶ್ವಾಸವನ್ನು ಖಂಡಿಸುತ್ತವೆ; ಸ್ವತಂತ್ರ ಆಲೋಚನೆಯನ್ನು ಮೊಟಕುಗೊಳಿಸುತ್ತವೆ. ಮಾಟ ಮಂತ್ರದಂತಹ ಪ್ರಗತಿವಿರೋಧಿ ಚಟುವಟಿಕೆಗಳು ನಮ್ಮ ಸಮಾಜಕ್ಕೆ ಹೆಚ್ಚಿನ ಆಘಾತವನ್ನುಂಟುಮಾಡಿವೆ.

ವಿಜ್ಞಾನಿಗಳು ಅತ್ಯಂತ ವಿನಮ್ರವಾಗಿ ತಮ್ಮ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ರಹಸ್ಯವಾಗಿಸುವುದು (Mystifying) ಹೆಚ್ಚಿನ ಗೊಂದಲ ಉಂಟುಮಾಡಬಹುದು. ಉನ್ನತ ಶಿಕ್ಷಣಾಲಯಗಳಲ್ಲಿ ವೈಜ್ಞಾನಿಕ ಪರಿಶೀಲನೆಯ ಯೋಜನೆಗಳು ಕಾರ್ಯಗತವಾಗಬೇಕು. ಪವಾಡಗಳು, ಮೂಢನಂಬಿಕೆಗಳು, ಮಂತ್ರವಾದ ಮುಂತಾದವುಗಳ ಬಗ್ಗೆ ವಿಜ್ಞಾನದ ಸಭೆಗಳಲ್ಲಿ, ಸಮ್ಮೇಳನಗಳಲ್ಲಿ, ಚರ್ಚಿಸಬೇಕು. ಸಮಾಜದ ಮೇಲೆ ಪ್ರಭಾವ ಬೀರುತ್ತಿರುವ ಸಮಸ್ಯೆಗಳಿಂದ ವಿಜ್ಞಾನಿಯು ಪ್ರತ್ಯೇಕವಾಗಿ ಇರುವುದು ಸಾಧ್ಯವಿಲ್ಲ. ವಿಜ್ಞಾನಿಯು ತನ್ನ ಶೋಧನೆಯ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು. ಸಂಶೋಧನೆಯು ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತವಾಗದೆ, ಜೀವನ ಮತ್ತು ಅಲ್ಲಿನ ಸಮಸ್ಯೆಗಳು ಅವನ ಸಂಶೋಧನಾ ಕ್ಷೇತ್ರವಾಗಬೇಕು. ಹಲವಾರು ಅತಾರ್ಕಿಕವಾದ ನಡವಳಿಕೆಗಳಿಂದ ಸಮಾಜವು ಅನ್ಯಾಯಕ್ಕೆ ಒಳಪಟ್ಟಿದ್ದು, ಉಸಿರು ಕಟ್ಟುವ ವಾತಾವರಣವಿದೆ. ಅದನ್ನು ಶುದ್ಧಗೊಳಿಸುವಲ್ಲಿ ವಿಜ್ಞಾನಿಗಳು ಇನ್ನೂ ಪ್ರಯತ್ನಿಸದೆ ಇರುವುದು ಸರಿಯಲ್ಲ. ಈ ಸಮಾವೇಶದಲ್ಲಿ ಪರಿಸರದ ಪರಿಶುದ್ಧತೆಯ ಬಗ್ಗೆ ಸಂಪ್ರಬಂಧವೊಂದಿದೆಯೆಂದು ತಿಳಿದು ಸಂತೋಷವಾಯಿತು. ಈ ಸಂಪ್ರಬಂಧದ ಉದ್ಧೇಶ ನೀರು ಮತ್ತು ಗಾಳಿಯಿಂದ ಉಂಟಾಗುವ ಮಾಲಿನ್ಯವನ್ನು ಕುರಿತದ್ದು, ಇವುಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎನ್ನುವುದು ನಿಜ. ಆದರೆ ಮಾನಸಿಕ ಬದುಕನ್ನು ಕಲುಷಿತಗೊಳಿಸಿರುವುದು ಹೆಚ್ಚು ಅಪಾಯಕಾರಿ. ಅದ್ದರಿಂದ ಮನುಷ್ಯನನ್ನು ಕಲುಷಿತಗೊಳಿಸಿರುವ ಎಲ್ಲ ಅಂಶಗಳ ಕಡೆಗೂ ಸೂಕ್ಷ್ಮವಾಗಿ ಗಮನಹರಿಸಿ, ಅವುಗಳನ್ನು ತ್ಯಜಿಸಿವುದು ಬಹಳ ಮುಖ್ಯ.

ವಿಜ್ಞಾನದ ಫಲಿತಗಳ ಬಗ್ಗೆ ಹೆಚ್ಚಿನ ಆದ್ಯತೆ ಕೊಡುವುದು, ವಿಜ್ಞಾನಿಗಳಲ್ಲಿ ಮತ್ತು ಸಮಾಜದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ನನ್ನ ಅಭಿಪ್ರಾಯದಲ್ಲಿ ವಿಜ್ಞಾನದ ಮೂಲ ಉದ್ಧೇಶಗಳು (Basic Postualtes) ಕೂಡ ಅಷ್ಟೇ ಮುಖ್ಯ. ವಿಜ್ಞಾನದ ಬೆಲೆಯು ಅಪರಿಮಿತ ವಿಷಯ ಸಂಗ್ರಹ, ಅಂಕಿ ಅಂಶಗಳಿಗಳಷ್ಟೇ ಸೀಮಿತವಾಗಿರದೇ, ವೈಜ್ಞಾನಿಕ ಮನೋಧರ್ಮದಲ್ಲಿ ನಿಂತಿದೆ. ವೈಜ್ಞಾನಿಕ ಮನೋಧರ್ಮ ಮತ್ತು ಪದ್ಧತಿಗಳ ಬಗ್ಗೆ ಪಾಠಗಳು, ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಬೇಕು. ಎಲ್ಲ ಅಧ್ಯಾಪಕರು, ಎಲ್ಲ ವಿಜ್ಞಾನದ ಅಧ್ಯಾಪಕರು ವೈಜ್ಞಾನಿಕ iನೋಧರ್ಮವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ನಮ್ಮ ದೇಶವು ನೂರಾರು ವರ್ಷಗಳಿಂದ ಎದುರಿಸುತ್ತಿರುವ ಜಟಿಲವಾದ ಸಮಸ್ಯೆಗಳನ್ನು ವೈಜ್ಞಾನಿಕ ಮಾರ್ಗದಿಂದ ಮಾತ್ರ ಪರಿಹರಿಸಲು ಸಾಧ್ಯ. ನಮ್ಮ ಸಮಾಜ ಎದುರಿಸುತ್ತಿರುವ ಜಾತಿಯಂತಹ ಸಾಮಾಜಿಕ ಪಿಡುಗುಗಳ ಪರಿಹಾರ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವಗಳಿಂದ ಮಾತ್ರ ಸಾಧ್ಯ. ಆಗಮಾತ್ರ ಮಾನವೀಯ ಮೌಲ್ಯ ಮತ್ತು ನೀತಿ ಅವಲಂಬಿತ ವಿಶ್ವಧರ್ಮ ರೂಪಿತವಾಗಬಹುದು. ಧರ್ಮವು ನೀತಿಸ್ವರೂಪವನ್ನು ಹೊಂದಿರುವಂತಹದು. ಈ ರೀತಿಯ ಧರ್ಮವು ರಾಷ್ಟ್ರೀಯತೆಗಳ ಮೂಲವಾದ ಬೇಲಿಯನ್ನು ದಾಟಿ ಸ್ಥಾಪಿತವಾಗಬೇಕಾದರೆ ವಿಶ್ವಮಾನ್ಯತೆಯನ್ನು ಹೊಂದಿರುವ ವಿಜ್ಞಾನದ ತತ್ವಗಳನ್ನು ಅನ್ವಯಿಸುವುದರಿಂದ ಮಾತ್ರ ಸಾಧ್ಯ.

ವಿಜ್ಞಾನ ಮತ್ತು ಅದರ ಬಳಕೆಯು, ವೈಜ್ಞಾನಿಕ ಮನೋಧರ್ಮವನ್ನು ಪಡೆದು ಕಾರ್ಯಪ್ರವೃತ್ತವಾದರೆ ಬಡತನದ ನಿರ್ಮೂಲನ, ಶೋಷಣೆಯ ನಾಶ ಸಾಧ್ಯ. ಅದು ಪ್ರಗತಿವಿರೋಧೀ ಸಿದ್ಧಾಂತಗಳನ್ನು, ಸ್ವಹಿತಾಸಕ್ತಿಯನ್ನು ದೂರಮಾಡ ಬಲ್ಲದು.

ವಿಜ್ಞಾನಿಗಳಾಗಿ ನಾವು ನಮ್ಮ ಆತ್ಮಸಾಕ್ಷಿಗೆ, ವಿಜ್ಞಾನಕ್ಕೆ ಹಾಗೂ ಅದರ ಮಾರ್ಗಗಳಿಗೆ ಪ್ರಾಮಾಣಿಕರಾಗಿರೋಣ. ಜೀವನೋಪಾಯ ಮಾರ್ಗವಾಗಿ ವಿಜ್ಞಾನ ಇರುವುದು ಬೇಡ. ನಮಗೆ ಅದರಲ್ಲಿ ಜೀವಂತ ನಂಬಿಕೆ ಇರಬೇಕು. ನಾವು ತರ್ಕಬದ್ಧವಾಗಿ ದೈರ್ಯದಿಂದ ವರ್ತಿಸಿದಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ.

ಸರಣಿ ೩ - ಡಾ. ನರಸಿಂಹಯ್ಯ - ಧರ್ಮ ಮತ್ತು ವ್ಯೆಚಾರಿಕ ಮನೋಭಾವ

ಶ್ರೀ ಸತ್ಯಸಾಯಿಬಾಬಾ ಅವರು ಹೊಂದಿರುವ ಪವಾಡ ಶಕ್ತಿಗಳನ್ನು ಕುರಿತು ದೇಶದಾದ್ಯಂತ ವಿಪುಲವಾದ ಚರ್ಚೆ ನಡೆಯುತ್ತಿತ್ತು. ಇದು ಆಗ ರಾಷ್ಟ್ರೀಯ ವಿವಾದದ ವಿಷಯವಾಗಿದೆ. ಅನೇಕ ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳು ಸಾಕಷ್ಟು ಪುಟಗಳನ್ನು ಈ ವಿಷಯದ ಚರ್ಚೆಗೆ ವಿನಿಯೋಗಿಸಿವೆ. ಹೆಚ್ಚು ಕಮ್ಮಿ ಇದು ಮನೆ ಮಾತಾಗಿತ್ತು.

ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ರಚಿತವಾದ ಪವಾಡಗಳು ಮತ್ತು ಮೂಢನಂಬಿಕೆಗಳು ಕುರಿತು ವೈಜ್ಞಾನಿಕವಾಗಿ ತನಿಖೆ ಮಾಡಲು ರಚಿತವಾದ ಸಮಿತಿಯ ಪ್ರಯತ್ನಗಳು ಈ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿರುವುದು ನಮಗೆ ತಿಳಿದಿರುವ ಸಂಗತಿ. ನಮ್ಮ ಸಮಾಜದಲ್ಲಿ ಬಹಳ ಪ್ರಮಾಣದಲ್ಲಿ ಮೂಢನಂಬಿಕೆಗಳು ಇವೆಯಲ್ಲವೆ, ಅವು ಸಮಾಜಕ್ಕೆ ಅನೇಕ ರೀತಿಯಲ್ಲಿ ಹಾನಿಯನ್ನು ಉಂಟು ಮಾಡಿವೆ. ಮತ್ತೆ ಕೆಲವು ವ್ಯಕ್ತಿಗಳು ತಮಗೆ ಸಾಮಾನ್ಯ ವ್ಯಕ್ತಿಗಳಿಂದ ಆಗದಂತಹ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಈ ಸಮಸ್ಯೆಗಳನ್ನು ವಿಶ್ವವಿದ್ಯಾಲಯವು ಪರಿಶೀಲಿಸುವುದು ಅವಶ್ಯಕ ಮತ್ತು ಉಚಿತ ಎನ್ನಿಸಿತು. ೧೯೭೬ರ ಮಾರ್ಚ್ ತಿಂಗಳಲ್ಲಿ ವಿಶ್ವವಿದ್ಯಾಲಯವು ತನ್ನ ಆಯವ್ಯಯವನ್ನು ರೂಪಿಸುವ ಸಂದರ್ಭದಲ್ಲಿ ಈ ಉದ್ದೇಶಕ್ಕಾಗಿ ಇಪ್ಪತೈದು ಸಾವಿರ ರೂಪಾಯಿಗಳನ್ನು ತೆಗೆದಿಡಲಾಯಿತು. ಏಪ್ರಿಲ್ ಮೊದಲ ವಾರದಲ್ಲಿ ಉಪ ಕುಲಪತಿಯವರ ಅಧ್ಯಕ್ಷತೆಯಲ್ಲಿ, ಬೇರೆ ಬೇರೆ ಕ್ಷೇತ್ರಕ್ಕೆ ಸೇರಿದ ಹನ್ನೊಂದು ಜನರ ಸಮಿತಿಯನ್ನು ರಚಿಸಲಾಯಿತು.

ನಮ್ಮ ತನಿಖೆಯ ಕ್ಷೇತ್ರ ತುಂಬಾ ವಿಶಾಲ ಮತ್ತು ಅಸ್ಪಷ್ಟವಾದ್ದರಿಂದ ಮೊದಲ ಹಂತದಲ್ಲಿ ಉಚಿತವಾದ, ಸ್ಪಷ್ಟವಾದ ಕೆಲವು ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ನಿಶ್ಚಯಕ್ಕೆ ಬಂದೆವು. ಶೂನ್ಯದಲ್ಲಿ ವಸ್ತುಗಳನ್ನು ಸೃಷ್ಟಿಸುವ ಅಸಹಜವಾದ ಸಂಗತಿಯ ಬಗ್ಗೆ ಸಹಜವಾಗಿಯೇ ಆಧ್ಯತೆ ಕೊಟ್ಟೆವು. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಾಲ್ಕು-ಐದು ವ್ಯಕ್ತಿಗಳು ನಮಗೆ ಹೊಳೆದರು. ಈ ಸಮತಿಯ ಉದ್ಧೇಶಗಳು ಪ್ರಕಟವಾದ ಕೂಡಲೇ ಶ್ರೀ ಶಿವಬಾಲಯೋಗಿಗಳು ತಮ್ಮ ಬೆಂಗಳೂರಿನ ಆಶ್ರಮಕ್ಕೆ ನನ್ನನ್ನು ಆಹ್ವಾನಿಸಿದರು. ನಾನು ಇಬ್ಬರು ಆಧ್ಯಾಪಕರ ಜೊತೆ ಆಶ್ರಮಕ್ಕೆ ಬೇಟಿ ಕೊಟ್ಟೆ. ಚರ್ಚೆಯ ಸಮಯದಲ್ಲಿ ಶೂನ್ಯದಲ್ಲಿ ಯಾವ ವಸ್ತುವನ್ನೂ ತಾವು ಸೃಷ್ಟಿಸುವುದಿಲ್ಲವೆಂದು ಸ್ವಾಮೀಜಿಯವರು ಸ್ಪಷ್ಟಪಡಿಸಿದರು. ಈ ರೀತಿಯ ಶಕ್ತಿಯನ್ನು ಪಡೆದಿದ್ದಾರೆ ಎಂದು ಹೆಸರು ಮಾಡಿದ್ದ ಕೊಡಗಿನ ಶ್ರೀ ಸ್ವಾಮಿ ಶಂಕರ ಮತ್ತು ಮೈಸೂರಿನ ಸಮೀಪದ ಶ್ರೀ ಸಚ್ಚಿದಾನಂದ ಗಣಪತಿ ಸ್ವಾಮಿ ಅವರು ತಾವು ಯಾವುದೇ ರೀತಿಯ ಪವಾಡಗಳನ್ನು ಮಾಡುವುದಿಲ್ಲವೆಂದು ಬಹಿರಂಗವಾಗಿ ತಿಳಿಸಲು ಪ್ರಾರಂಭಿಸಿದರು. ಇಷ್ಟರಲ್ಲಿಯೇ `ದೇವ ಬಾಲಕ` ಎಂದು ಹೆಸರಾದ ಶ್ರೀ ಬಾಳ ಶಿವಯೋಗಿ ಅವರು ಬೆಂಗಳೂರಿಗೆ ಬಂದಿದ್ದು, ಅವರಿಂದ ನನಗೆ ಆಹ್ವಾನ ಬಂದಿತು. ಚರ್ಚೆಯ ಸಂದರ್ಭದಲ್ಲಿ ನಾನು ಅವರ ಬೆರಳುಗಳ ಚಲನೆಯನ್ನು ಹಾಗೂ ಕಾವಿಯ ನಿಲುವಂಗಿ ಒಳಗೆ ಇದ್ದ ಮುಷ್ಟಿಯನ್ನು ಗಮನಿಸುತ್ತಿದ್ದೆ. ಚರ್ಚೆ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ವಾಮೀಜಿಯವರು ತಮ್ಮ ಕೈಯನ್ನು ತಕ್ಷಣ ಮುಂದೆ ಚಾಚಿ, ಮುಚ್ಚಿದ ಮುಷ್ಟಿಯನ್ನು ವೃತ್ತಾಕಾರವಾಗಿ ತಿರುಗಿಸಿ, ಒಂದು ಚಿಕ್ಕ ವಿಗ್ರಹವನ್ನು, ರುದ್ರಾಕ್ಷಿಯನ್ನು ನನಗೆ ಕೊಟ್ಟರು. ನಾನು ಅಂತಹುದನ್ನು ನಿರೀಕ್ಷಿಸುತ್ತಿದ್ದರಿಂದ, ನನಗೆ ಏನೂ ಆಶ್ಚರ್ಯವಾಗಲಿಲ್ಲ. ಅವರ 'ಪವಾಡ' ನನಗೆ ಸ್ಪಷ್ಟವಾಗಿಯೇ ಅರಿವಾಯಿತು. ಈ ಕಾರ್ಯದಲ್ಲಿ ಅವರು ಇನ್ನೂ ಅನನುಭವಿ. ಈ ' ಕಲೆ' ಯಲ್ಲಿ ಅವರು ಕಲಿಯಬೇಕಾದ್ದು ಇನ್ನೂ ಬಹಳ ಇದೆ. ಆದರೆ ಅವರು ಪ್ರಾಮಾಣಿಕ ವ್ಯಕ್ತಿ. ಯಾವುದೇ ವಸ್ತುವನ್ನು ಸೃಷ್ಟಿಸುವ ಅಥವಾ ಬದಲಾಯಿಸುವ ಶಕ್ತಿ ತಮಗೆ ಇಲ್ಲವೆಂದು ಅವರು ಒಪ್ಪಿಕೊಂಡರು. ಸತ್ಯಸಾಯಿಬಾಬಾರ ಪರಿಶೀಲನೆಯ ನಂತರ ವಾಸ್ತವ ಸಂಗತಿಗಳನ್ನು ತಿಳಿಸುತ್ತೇನೆ ಎಂದು ಅವರು ಅಭಿಪ್ರಾಯಪಟ್ಟರು.

ಸತ್ಯಸಾಯಿಬಾಬಾರನ್ನು ನೋಡುವ ಮುಂಚೆ ಪಾಂಡವಪುರದ ಎಂಟು ವರ್ಷದ ಬಾಲಕ, ಶ್ರೀ ಸಾಯಿಕೃಷ್ಣರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ನಿಶ್ಚಿಯಿಸಿದೆವು. ಶೂನ್ಯದಲ್ಲಿ ವಿಭೂತಿಯನ್ನು ಉಂಟಮಾಡುವುದರಲ್ಲಿ ಅವರು ಬಹಳ ಪ್ರಸಿದ್ಧರಾಗಿದ್ದರು. ಯಾವ ರೀತಿ ಪಾಂಡವಪುರ ಪವಾಡ ಬೆಳಕಿಗೆ ಬಂತು ಎಂಬುದನ್ನು ಇನ್ನೊಮ್ಮೆ ಬರೆಯುತ್ತೇನೆ.

ಈ ತನಿಖೆಯ ಫಲಿತಾಂಶ ವಿಶೇಷ ಪರಿಣಾಮವನ್ನುಂಟುಮಾಡಿತು. ಸಮಿತಿಯ ಅರ್ಹತೆ, ಸಾಮರ್ಥ್ಯಗಳ ಬಗೆಗೆ ಕೆಲವು ಅನುಮಾನಗಳನ್ನು ಹೊಂದಿದ್ದವರು ಸಹ ಈ ಪರಿಶೀಲನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪವಾಡದ ಕಟ್ಟುಕಥೆಗಳನ್ನು ಶೋಧಿಸಿದ್ದಕ್ಕಾಗಿ ಸಮಿತಿಯನ್ನು ಅಭಿನಂದಿಸಿ ನೂರಾರು ಪತಗಳು ಬಂದವು. ಪತ್ರಿಕೆಗಳು ಈ ಮುಖ್ಯ ವಿಷಯಕ್ಕೆ ಹೆಚ್ಚಿನ ಪ್ರಚಾರ ಕೊಟ್ಟವು. ಇಷ್ಟರಲ್ಲಿ ಶೂನ್ಯದಲ್ಲಿ ವಸ್ತುಗಳ ಸೃಷ್ಟಿಯ ಬಗ್ಗೆ ಪರಿಶೀಲಿಸಲು ಅವಕಾಶ ಮಾಡಿಕೊಡುವಂತೆ ಕೋರಿ ಶ್ರೀ ಸತ್ಯಸಾಯಿ ಬಾಬಾ ಅವರಿಗೆ ಮೂರು ಪತ್ರಗಳನ್ನು ಬರೆದಿದ್ದೆ. ಆದರೆ ಅವುಗಳಿಗೆ ಅವರಿಂದ ಯಾವ ಉತ್ತರವೂ ಬರಲಿಲ್ಲ.

ಈ ಮೂರು ಪತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಇದಕ್ಕೆ ಸಂಬಂಧಿಸಿದ ವಿವಾದ ದೇಶದ ಎಲ್ಲೆಡೆ ಪ್ರಚಾರಕ್ಕೆ ಬಂತು. ಇಷ್ಟರಲ್ಲಿಯೇ ಕೆಲವು ಸ್ವಾರಸ್ಯಕರ ಬೆಳವಣಿಗೆ ಕಂಡುಬಂತು. ಶ್ರೀ ಸತ್ಯಸಾಯಿಬಾಬಾರ 'ಮುಖವಾಣಿ' ಗಳು ಪಾಂಡವಪುರದ ರಹಸ್ಯ ಬಯಲಾದ ಕೂಡಲೇ, ಸಾಯಿಕೃಷ್ಣರಿಗೂ, ಸಾಯಿಬಾಬಾರಿಗೂ ಯಾವುದೇ ಸಂಬಂಧವಿಲ್ಲವೆಂದು ಘೋಷಿಸಿದರು. ಪಾಂಡವಪುರದ ಎಲ್ಲ ಚಟುವಟಿಕೆಗಳು ಸಾಯಿಬಾಬಾರ ಹೆಸರಿನಲ್ಲಿಯೇ ನಡೆಯುತ್ತಿತ್ತು ಎಂಬ ಅಂಶವನ್ನು ಓದುಗರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಸಾಯಿಬಾಬಾರ ಸ್ಫೂರ್ತಿಯಿಂದಲೇ ಈ 'ದೇವಬಾಲಕನು' ನು 'ಪವಾಡ' ಗಳನ್ನು ಮಾಡುತ್ತಿದ್ದನೆಂಬುದು ಜನಜನಿತ ಸಂಗತಿ. ಅಲ್ಲಿನ ಭಕ್ತರು ಸಾಯಿಬಾಬಾರನ್ನು 'ಮೈನ್‌ಸ್ವಿಚ್'ಗೂ ಬಾಲಕನನ್ನು 'ಬಲ್ಬಿಗೂ' ಹೋಲಿಸುತ್ತಿದ್ದರು. ಈ 'ದೇವಬಾಲಕ' ನು 'ಪ್ರೌಢದೇವ' ನಾಗಿ ಬೆಳವಣಿಗೆಯನ್ನು ಹೊಂದುವುದಕ್ಕೆ ಸಮಿತಿಯು ತಡೆಯನ್ನುಂಟುಮಾಡಿದ್ದು ಸಂತೋಷದ ಸಂಗತಿ. ಈ ಬಾಲಕನ 'ದೈವತ್ವ' ದ ಬೆಳವಣಿಗೆ ಯಾವ ಅಡಿಯೂ ಉಂಟಾಗದಿದ್ದರೆ ಬಹುಶಃ ಕಾಲಕ್ರಮೇಣ ಈ ಗುಂಪಿಗೆ ಸೇರಿದ 'ಐವತ್ತು ವರ್ಷದ ದೇವರಂತಹ' ವ್ಯಕ್ತಿಗಳನ್ನು ಮೀರಿಸುತ್ತಿದ್ದ ಎಂದು ತೋರುತ್ತದೆ.

ಈ ವಿವಾದ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ವೈಟ್‌ಫೀಲ್ಡ್‌ನ ಶ್ರೀ ಸತ್ಯಸಾಯಿ ಕಾಲೇಜಿನಲ್ಲಿ ಸಮಾರಂಭವೊಂದು ನಡೆಯಿತು. ಈ ಸಭೆಯ ಕಾರ್ಯಕಲಾಪವನ್ನು ನೋಡಿದಾಗ ಅದರ ಮುಖ್ಯ ಉದ್ಧೇಶ ವಿಶ್ವವಿದ್ಯಾಯಲಯದ ಸಮತಿಯನ್ನು ಆಕ್ಷೇಪಿಸುವುದೇ ಆಗಿತ್ತು ಎಂಬುದು ಸ್ಪಷ್ಟವಾಯಿತು. ಶ್ರೀ ಸತ್ಯಸಾಯಿಬಾಬಾರವರು ತಮ್ಮ ಉಪನ್ಯಾಸದಲ್ಲಿ ವಿಶ್ವವಿದ್ಯಾಲಯದ ಸಮಿತಿಯನ್ನು ಉಗ್ರವಾಗಿ ಖಂಡಿಸಿದರು. ತಮ್ಮ 'ಪವಿತ್ರ ದೇಹ' ದಿಂದ ವಿಷಕಾರಿದರು. ನನ್ನನ್ನು ಮತ್ತು ಸಮಿತಿಯ ಇತರ ಸದಸ್ಯರನ್ನು ನಾಯಿಗಳೆಂದು, ಇರುವೆಗಳೆಂದು ಕರೆದರು. ತಮ್ಮನ್ನು ನಕ್ಷತ್ರಕ್ಕೂ, ಆಗಾಧವಾದ ಸಮುದ್ರಕ್ಕೂ ಹೋಲಿಸಿಕೊಂಡರು. ಜಗತ್ತಿನ ಯಾವುದೇ ಶಕ್ತಿಯು ತಮ್ಮನ್ನು ಪರೀಕ್ಷಿಸಲು ಸಾಧ್ಯವಿಲ್ಲವೆಂದು ಘೋಷಿಸಿದರು.

ಈ ವಿವಾದದ ಪ್ರಾಮುಖ್ಯವನ್ನು ಅರಿತ ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳ ಪ್ರತಿನಿಧಿಗಳು ಪುಟ್ಟಪರ್ತಿಗೆ ಸಂದರ್ಶನವನ್ನು ಕೋರಿ ತೀರ್ಥಯಾತ್ರೆ ಕೈಗೊಂಡರು. ಇದಕ್ಕೆ ಮುಂಚೆ ಪ್ರಮುಖ ವ್ಯಕ್ತಿಗಳು ಅವರ 'ದರ್ಶನ' ಕ್ಕೆ ದಿನಗಟ್ಟಲೆ, ಗಂಟೆಗಟ್ಟಲೆ ಕಾಯಬೇಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿತ್ತು. ಪತ್ರಿಕಾ ಪ್ರನಿಧಿಗಳಿಗಾಗಿ ಸಾಯಿಬಾಬಾರವರು ಆತಂಕದಿಂದ, ಕಾತುರದಿಂದ ಕಾಯುವ ಸ್ಥಿತಿ ಬಂತು. ತಮ್ಮ ಸಮರ್ಥನೆಗಾಗಿ ದಿನಪತ್ರಿಕೆಗಳ, ವಾರಪತ್ರಿಕೆಗಳ ಕೆಲವು ವ್ಯಕ್ತಿಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ವ್ಯವಸ್ಥೆ ಮಾಡಿದರು. ಅವರ ಭಕ್ತರ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಲು ಆರಂಭವಾದವು. ಈ ಎಲ್ಲಾ ಲೇಖನಗಳು ಅವರ ದೈವೀಗುಣಗಳನ್ನು ಕೊಂಡಾಡಿದವು. ನೀರನ್ನು ಪೆಟ್ರೋಲನ್ನಾಗಿ ಪರಿವರ್ತಿಸುವುದು, ಗುಣವಾಗದ ರೋಗಗಳನ್ನು ಗುಣಪಡಿಸುವುದು, ಸತ್ತವರನ್ನು ಬದುಕಿಸುವುದು, ವಸ್ತುಗಳನ್ನು ಸೃಷ್ಟಿಸುವುದು, ಈ ರೀತಿಯ ಅನೇಕ ಪವಾಡಗಳ ಬಗ್ಗೆ ವಿಚಿತ್ರ ವಿವರಣೆ ಬಂದಿತು. ಈ ಎಲ್ಲ ಅಂಶಗಳಿಂದ ಶ್ರೀ ಸತ್ಯಸಾಯಿಬಾಬಾ ಅವರು ನಿರ್ಮಲ, ಪರಿಶುದ್ಧ ದೇವರಲ್ಲದೆ ಬೇರೆ ಯಾರೂ ಅಲ್ಲ ಎಂಬ ತೀರ್ಮಾನಕ್ಕೆ ಬಂದರು. ನಿಜವಾಗಿಯೂ ದೇವರಾಗಿದ್ದರೆ ಅವರು ಮಾತನಾಡುವ ತೆಲುಗನ್ನು ಅನುವಾದಿಸಲು ಬೇರೆಯವರ ಅವಶ್ಯಕತೆ ಯಾಕೆ? ಯಾವುದೇ ಬಾಷೆಯನ್ನು ಸುಲಭವಾಗಿ ಮಾತನಾಡಲು ತಮ್ಮ ದೈವೀ ಶಕ್ತಿಯನ್ನು ಅವರು ಉಪಯೋಗಿಸಿಕೊಳ್ಳಬಹುದಿತ್ತು. ದೇವರು ಎಲ್ಲವನ್ನೂ ಬಲ್ಲವನು. ಆದರೆ ಸಾಯಿಬಾಬಾ ಅವರ ವಿಜ್ಞಾನ ಮತ್ತಿತರ ವಿಷಯಗಳ ಜ್ಞಾನ ಒಬ್ಬ ಪ್ರೌಢಶಾಲೆಯ ವಿದ್ಯಾರ್ಥಿಗಿಂತ ಕಮ್ಮಿ ಎಂದು ಖಂಡಿತವಾಗಿ ಹೇಳಬಲ್ಲೆ. ಎಲ್ಲ ವ್ಯಕ್ತಿಗಳಂತೆ ಈ 'ದೇವರು' ಕೂಡ ಅನೇಕ ವಿಷಯಗಳಲ್ಲಿ ಅಸಮರ್ಥ. ಈ ದೇವರು ಬರಗಾಲದ ಪ್ರದೇಶದಲ್ಲಿ ಮಳೆ ಬರಿಸಿದ್ದನ್ನಾಗಲೀ ವಿಪತ್ತುಗಳನ್ನು ನಿವಾರಿಸಿದ್ದನ್ನಾಗಲೀ, ಬತ್ತ, ಗೋದಿಗಳನ್ನು ಸೃಷ್ಟಿಸಿ ಬಡವರಿಗೆ ಹಂಚಿ ಸಹಾಯ ಮಾಡಿದ್ದನ್ನಾಗಲೀ ಯಾವಗಲೂ ನೋಡಲಾಗಿಲ್ಲ. ಯಾರಿಗೆ ಗೊತ್ತು, ಅವರಿಗೂ ಕೂಡ ತಮ್ಮದೇ ಆದ ಕಷ್ಟಗಳಿರಬಹುದು.

ಪಾಂಡವಪುರದ ಪವಾಡ ಕಧೆ ಬೆಳಕಿಗೆ ಬಂದ ನಂತರ ಹಾಗೂ ಶ್ರೀ ಸತ್ಯಸಾಯಿಬಾಬಾ ಅವರಿಗೆ ಎಚ್. ಎನ್. ಬರೆದ ಮೂರು ಪತ್ರಗಳು ಪ್ರಕಟವಾದ ಮೇಲೆ ಸಾಯಿಬಾಬಾ ಭಯಭೀತರಾಗಿದ್ದರು. ಅವರು ಈ ಎರಡು ತಿಂಗಳಲ್ಲಿ ಮಾಡಿರುವ ಉಪನ್ಯಾಸಗಳನ್ನು ವಸ್ತುನಿಷ್ಠವಾಗಿ ನೋಡಿದರೆ ಅವರ ಗೊಂದಲ ಮನಸ್ಥಿತಿ ಕಂಡುಬರುತ್ತದೆ. ತಮ್ಮ ಸಮರ್ಥನೆಗೆ ಎಲ್ಲ ರೀತಿಯ ಪ್ರಚಾರವನ್ನು ವಿವಿಧ ರೀತಿಯಲ್ಲಿ ಕೈಗೊಂಡಿದ್ದಾರೆ. ಇವನ್ನೆಲ್ಲಾ ನೋಡಿದರೆ ಅವರು ತಮ್ಮ ಆಸ್ತಿತ್ವಕ್ಕಾಗಿಯೇ ಹೋರಾಟ ನಡೆಸುತ್ತಿರುವಂತೆ ಕಂಡು ಬರುತ್ತಿತ್ತು.

ಶೂನ್ಯದಲ್ಲಿ ವಸ್ತುಗಳ ಸೃಷ್ಟಿ ಸಾಧ್ಯವೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ಈ ರೀತಿಯ ಸೃಷ್ಟಿ ಮನುಷ್ಯನಿಗೆ ಮೀರಿದ್ದು ಆಗಿದ್ದು, ಎಲ್ಲ ವಿಜ್ಞಾನದ ನಿಯಮಗಳನ್ನು ಇದು ತಿರಸ್ಕರಿಸುತ್ತದೆ. ಈ ಅಸಾಮಾನ್ಯವಾದ ಪವಾಡದ ಮುಂದೆ ಇಂದಿನವರೆಗಿನ ಎಲ್ಲ ವಿಜ್ಞಾನದ ಶೋಧನೆಗಳು, ಸಾಧನೆಗಳು ಅಲ್ಪ ಪ್ರಮಾಣದಾಗುತ್ತದೆ. ಅದ್ದರಿಂದ ಪ್ರಾಯೋಗಿಕ ನೆಲೆಯಲ್ಲಿ ಇದು ಸಾಧ್ಯವೇ ಅಥವಾ ಅಲ್ಲವೇ ಎಂಬುದನ್ನು ನೋಡುವುದು ಮಾತ್ರ ನಮ್ಮ ಉದ್ಧೇಶ. ಶೂನ್ಯದಲ್ಲಿ ವಸ್ತುಗಳ ಸೃಷ್ಟಿ ಸಾಧ್ಯವಾದರೆ ಅದು ವಿಜ್ಞಾನದ ಪರಿಧಿಯಲ್ಲಿ ಕಂಡುಬರುವ ಪ್ರಯೋಗವೇ ಹೌದು. ಈ ಕಾರ್ಯದ ಬಗ್ಗೆ ನಾವು ವಿವರಣೆಯನ್ನು ಬಯಸುತ್ತಿಲ್ಲ. ಈ ಕಾರ್ಯ ನಿಜವಾದ ಪಕ್ಷದಲ್ಲಿ ಆ ವಿವರಣೆ ವಿಜ್ಞಾನದ ಕಕ್ಷೆಗೆ ಮೀರಿದ್ದು. ಪ್ರಯೋಗದ ಮೂಲಕ ಈ ಅಂಶವನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನಮ್ಮ ಉದ್ಧೇಶ. ಈ 'ಅನುಭವ' ಕ್ರಿಯೆಯ ರೀತಿಯನ್ನಾಗಲಿ, ವಿವರಣೆಯನ್ನಾಗಲೀ ನನ್ನಂತಹ ಐಹಿಕ ವ್ಯಕ್ತಿಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಇರಬಹುದು. ಇದು ಇಲ್ಲಿ ಮುಖ್ಯವಲ್ಲ. ಆದರೆ ಅವರು ತಮ್ಮ ಪ್ರಯೋಗವನ್ನು ಬಹಿರಂಗವಾಗಿ ಪ್ರಯೋಗಿಸುವುದು ಅವಶ್ಯಕ. ಅವರು ಸಂಬಂಧವಿಲ್ಲದ ವಾದಗಳನ್ನಾಗಲೀ, ಶಬ್ಧಗಳ ಸಂತೆಯನ್ನಾಗಲೀ ಪ್ರದರ್ಶಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಅಸಂಬದ್ಧ ತರ್ಕಗಳು ಸಮಸ್ಯೆಯನ್ನು ಗೊಂದಲಕ್ಕೆ ತಳ್ಳುತ್ತಿವೆಯಷ್ಟೆ. ಆದ್ದರಿಂದ ಅವರ ಶಿಷ್ಯರ ಪುಸ್ತಕಗಳಿಂದ ಅಧ್ಯಾಯ, ಅಧ್ಯಯಗಳನ್ನಲಾಗಲೀ, ಪಂಕ್ತಿಗಳನ್ನಾಗಲಿ ಉದ್ಧರಿಸುವುದು ಅನವಶ್ಯಕ. ತಮ್ಮ ಸ್ವಂತ ಅನುಭವಗಳನ್ನು ತಿಳಿಸುವುದರ ಮೂಲಕ ಸಮಸ್ಯೆಗೆ ಬಣ್ಣ ಕೊಡುವುದು ಬೇಡ. ಶ್ರೀ ಸತ್ಯಸಾಯಿಬಾಬಾ ಅವರು ನಮ್ಮ ಪ್ರಯೋಗಗಳಿಗೆ ಸಹಕರಿಸಿದರೆ ಸಾಕು. ಬೇರೆಯವರ ಪುರಾವೆಗಳಾಗಲೀ, ಸಮರ್ಥನೆಗಳಾಗಲೀ ಅನವಶ್ಯಕ.

ಈ ಪವಾಡದ ಬಗ್ಗೆ ನನ್ನಂತಹವರಿಗೆ ಅನೇಕ ಅನುಮಾನಗಳು ಕಾಡುತ್ತಿವೆ. ಮೊದಲನೆಯದಾಗಿ ಅವರು 'ಸೃಷ್ಟಿಸುವ' ಯಾವುದೇ ವಸ್ತುಗಳು ಅವರ ಮುಷ್ಟಿಗಾತ್ರಕ್ಕಿಂತ ಕಡಿಮೆ ಇರಲು ಕಾರಣವೇನು? ಎರಡನೆಯದಾಗಿ ಅವರು ಸೃಷ್ಟಿಸುವ ಕೈಗಡಿಯಾರ, ಉಂಗುರ ಅಥವಾ ಮತ್ತಾವುದೇ ವಸ್ತುವು ಮೊದಲು ಪ್ರಪಂಚದಲ್ಲಿ ಇರುವಂತಹುದೇ ಯಾಕೆ ಆಗಿರುತ್ತದೆ? ಇಲ್ಲಿ ಕಂಡು ಬರುವ ವಸ್ತುಗಳನ್ನೇ ಅವರು ಪ್ರದರ್ಶಿಸುತ್ತಾರೆ. ಆದ್ದರಿಂದ ಅವರು ದೊಡ್ಡ ಗಾತ್ರದ ಕುಂಬಳಕಾಯಿಯನ್ನಾಗಲೀ ಅಥವಾ ಮೂರು ಅಡಿಯ ಲೋಹದ ಮೂರ್ತಿಯನ್ನಾಗಲೀ ಯಾಕೆ ಸೃಷ್ಟಿಸಬಾರದೆಂದು ಎಚ್.ಎನ್ರವರ ಕೋರಿಕೆ. ಅವರು ತಮಗೆ ಇಷ್ಟ ಬಂದ ವಸ್ತುಗಳನ್ನು ಸೃ,ಷ್ಟಿಸದೆ, ನಾವು ಕೇಳಿದ ವಸ್ತುಗಳನ್ನು ಸೃಷ್ಟಿಸಬೇಕೆಂದು ಬಯಸುತ್ತೇನೆ. ಅನೇಕ ಸೂಕ್ಷ್ಮ ಭಾಗಗಳನ್ನು ಒಳಗೊಂಡಿರುವ ಗಡಿಯಾರವನ್ನು ಅವರು ಸೃಷ್ಟಿಸಲು ಸಾಧ್ಯವಿರಬೇಕಾದರೆ, ಅದಕ್ಕಿಂತ ಸರಳವಾದ ಕುಂಬಳಕಾಯಿ ಅಥವಾ ದೊಡ್ಡ ಲೋಹದ ಮೂರ್ತಿಯನ್ನು ಸೃಷ್ಟಿಸುವುದು ಅವರಿಗೆ ಸುಲಭವಾಗಬೇಕು. ತನ್ನದೇ ಆದ ಮೊಹರು ಇರುವ ವಸ್ತುಗಳನ್ನು ಸೃಷ್ಚಿಸುವುದರಿಂದ ಅದು ಮೂಲ ವಸ್ತುಗಳ ಸೃಷ್ಟಿಯಾಗಲಾರದು. ಈ ಉದ್ಧೇಶಕ್ಕಾಗಿ ಅವುಗಳನ್ನು ಮೊದಲೇ ಸುಲಭವಾಗಿ ತಯಾರಿಸಬಹುದು. ಇದರ ಜೊತೆಗೆ ಈ ಬಗೆಯ 'ಸೃಷ್ಟಿ'ಯು ಕೆಲವಾರು ನೈತಿಕ ಹಾಗೂ ಕಾನೂನಿ ಸಮಸ್ಯೆಗಳಿಗೆ ಒಳಪಡುತ್ತದೆ. ಹೆಚ್. ಎಂ. ಟಿ ವಾಚಿನ 'ಸೃಷ್ಟಿ' ನಿಜವಾದರೆ ಕಂಪೆನಿಯ ಪೇಟೆಂಟಿನ ಕಳುವಿನ ಪ್ರಶ್ನೆ ಬರುತ್ತದೆ. ಬೇರೆ ದೇಶಗಳಿಂದ ಅಮದಾದ 'ವಾಚ್‌ಗಳ ಸೃಷ್ಟಿ' ಕಂಡುಬಂದರೆ ಸುಂಕ ತಪ್ಪಿಸಿಕೊಂಡ ಅಪಾದನೆಯ ಜೊತೆಗೆ ಕಳ್ಳಸಾಗಾಣಿಕೆಯ ಅಪರಾಧಕ್ಕೆ ಅವಕಾಶವಾಗುತ್ತದೆ. ಚಿನ್ನದ ವಸ್ತುಗಳ 'ಸೃಷ್ಟಿಸಿ' ಅದನ್ನು ಘೋಷಿಸದಿದ್ದರೆ ಚಿನ್ನ ನಿಯಂತ್ರಣ ಕಾನೂನನ್ನು ಮೀರಿದಂತೆ ಆಗುತ್ತದೆ. ಸಾಯಿಬಾಬರವರ 'ಸೃಷ್ಟಿ' ನಿಜವಾದರೆ ಮೇಲಿನ ಮುಖ್ಯ ಅಪರಾಧಗಳಿಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.

ಸತ್ಯಸಾಯಿಬಾಬಾ ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಕಾರ್ಯಕ್ರಮಗಳುನ್ನು ವಿಶ್ಲೇಷಿಸಿದೆವಾದರೆ ಎಲ್ಲ ಮನುಷ್ಯರಂತೆ ದೇಹರಚನೆ, ದೈನಿಕ ಅಭ್ಯಾಸಗಳು, ಕಂಡುಬರುತ್ತವೆ. ಅವರಿಗೂ ಕೆಲವು ವಿಷಯಗಳಲ್ಲಿ ಆಸಕ್ತಿ, ಅನಾಸಕ್ತಿಗಳು, ಸಾಮರ್ಥ-ಅಸಾಮರ್ಥ್ಯ, ವ್ಯವಹಾರಗಳಲ್ಲಿ ಕಂಡುಬರುವ ಸೋಲು-ಗೆಲುವುಗಳು, ಕೋಪಕ್ಕೆ ಒಳಗಾಗಿ ಆಗಾಗ್ಗೆ ನಿಂದನೆಯ ಮಾತುಗಳನ್ನು ಉಪಯೋಗಿಸವುದು, ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವುದು, ನಿರಾಶೆ-ಆತಂಕಗಳಿಗೆ ಒಳಗಾಗುವುದು, ಜ್ಞಾನದ ಪರಿಮಿತಿ ಈ ಎಲ್ಲ ಅಂಶಗಳು ಅವರು ಎಲ್ಲರಂತೆ ಮನುಷ್ಯರು ಎಂಬುಂದನ್ನು ತಿಳಿಸುತ್ತದೆ. ಕೆಲವು ಅಂಶಗಳಲ್ಲಿ ಎಲ್ಲೋ ಸ್ವಲ್ಪ ವ್ಯತ್ಯಾಸವಿರಬಹುದು. ಸಾರ್ವಜನಿಕವಾಗಿ ಗಮನಿಸಬಹುದಾದ ಅವರ ಸ್ವಭಾವಗಳಲ್ಲಿ, ದೇವರ ಯಾವುದೇ ಹೆಜ್ಜೆ ಗುರುತಾಗಲೀ, ಪರಿಪೂರ್ಣತ್ವದ ಸೂಚನೆಯಾಗಲೀ ಕಂಡುಬರುವುದಿಲ್ಲ. ಯಾವುದೇ ವ್ಯಕ್ತಿಯು ದೈವೀ ಗುಣವನ್ನು ಅಥವಾ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದರೆ ಅವನ ಯಾವುದೇ ಚಿಕ್ಕ ಕಾರ್ಯದಲ್ಲಿಯೂ ಅದು ಗೋಚರವಾಗಬೇಕು. ದೈವಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವುದು ಜೀವನ ಮಾರ್ಗ ಆಗಬೇಕು.

ಈ ವಿಷಯದಲ್ಲಿ ನನಗೆ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿಯವರಂತಹ ಮಹಾನ್ ಆಧ್ಯಾತ್ಮವಾದಿಗಳ ನೆನಪು ಬರುತ್ತದೆ. ಅವರ ಜೀವನಗಳು ತೆರೆದಿಟ್ಟ ಪುಸ್ತಕಗಳು, ಅವರ ನೆಲೆ 'ತೆರೆದ ಮನಗಳು'. ಸ್ವಾಮಿ ವಿವೇಕಾನಂದರ ಕೊಠಡಿಗೆ ಯಾರೇ ಹೋಗಬಹುದಿತ್ತು, ಗಾಂಧೀಜಿಯವರ ಶಿಬಿರವು ಗಾಜಿನಂತೆ ಪಾರದರ್ಶಕವಾಗಿದ್ದು, ಸಾರ್ವಜನಿಕ ಪ್ರದೇಶದಂತೆ ಇತ್ತು. ಭಗವಾನ್ ಬುದ್ಧನ ವಾಸಸ್ಥಳಕ್ಕೆ ಆಕಾಶವೇ ಚಾವಣಿಯಾಗಿತ್ತು. ಅವರುಗಳ ಸರಳವಾದ, ಕಟ್ಟುನಿಟ್ಟಾದ ಬದುಕನ್ನು ಪಾಲಿಸಿದರು. ಯಾರೇ ಯಾವ ಪ್ರಶ್ನೆಯನ್ನೂ ಕೇಳಿದರೂ ಅವರು ಉತ್ತರಿಸಿದರು. ತಮ್ಮನ್ನು ಅಂಧವಾಗಿ ಅನುಕರಿಸಬೇಡಿರೆಂದು ಅವರುಗಳು ಎಲ್ಲರನ್ನೂ ಕೇಳಿಕೊಂಡರು. ಅವರ ಎಲ್ಲ ಹೇಳಿಕೆಗಳೂ ವೈಜ್ಞಾನಿಕ ದೃಷ್ಟಿಕೋಣವನ್ನು ಹೊಂದಿದ್ದವು. ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆಯನ್ನು 'ಸತ್ಯದ ಶೋಧನೆ' ಎಂದೇ ಕರೆದಿದ್ದಾರೆ. ತಿರುವಣ್ಣಾ ಮಲೈನ ರಮಣ ಮಹರ್ಷಿಗಳು ಕೂಡ ಶ್ರೇಷ್ಠ ವ್ಯಕ್ತಿಯಾಗಿದ್ದು, ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂತಿಮ ಸತ್ಯವನ್ನು ಕಂಡುಕೊಳ್ಳುವಲ್ಲಿ ಅವರೆಲ್ಲಾ ವಿನಯ ಮತ್ತು ವೈಚಾರಿಕತೆಯನ್ನು ವ್ಯಕ್ತಪಡಿಸಿದರು.

ಸತ್ಯಸಾಯಿಬಾಬಾ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದು ಅವರ ಕರ್ತವ್ಯ. ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳ ಬೇಕಾದ ಅವರು ತಮಗೆ ಇದೆಯೆಂದು ಹೇಳಿಕೊಳ್ಳುವ ಆಧ್ಯಾತ್ಮಿಕ ಶಕ್ತಿಗಳನ್ನು ಬಹಿರಂಗವಾಗಿ ತೋರ್ಪಡಿಸುವುದು ಅವಶ್ಯಕ. ಅವರ ಬಗ್ಗೆ ಪೂರ್ವಗ್ರಹಪೀಡಿತ ಅಥವಾ ಪೂರ್ವಗ್ರಹವಿಲ್ಲದೆ ಅನುಮಾನಪಡುತ್ತಿರುವ ಸಂಶಯ ಪರಿಹಾರವಾಗುತ್ತದೆ. ಇದು ಸಾರ್ವಜನಿಕರ ದೃಷ್ಟಿಯಿಂದ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ತಮ್ಮಲ್ಲಿ ನಂಬಿಕೆ ಇರುವವರಿಗಿಂತ ಹೆಚ್ಚಾಗಿ ಇಲ್ಲದೇ ಇರುವವರ ಕಡೆ ಹೆಚ್ಚು ಗಮನ ಹರಿಸಬೇಕಾದ್ದು ಅವರ ಕರ್ತವ್ಯ. ಪ್ರೀತಿ, ನಂಬಿಕೆ ಮತ್ತು ಪೂರ್ವಗ್ರಹಗಳಿಲ್ಲದೆ ತಮ್ಮೆಡೆಗೆ ಬರುವವರಿಗೆ ದರ್ಶನ ಕೊಡುತ್ತೇವೆ ಎಂದು ಅವರು ಹೇಳಿಕೊಳ್ಳುವುದರಲ್ಲಿ ಸಂತೋಷಪಡುತ್ತಾರೆ. ಹಿಂದೆ ಹಾಗೂ ಇತ್ತೀಚಿನ ಕೆಲವು ವಾರಗಳಲ್ಲಿ ಅವರನ್ನು ಕಂಡ ವ್ಯಕ್ತಿಗಳೆಲ್ಲ ಮೇಲಿನ ನಿಯಮಗಳಿಗೆ ಬದ್ಧರಾಗಿದ್ದವರೇ ಎಂದು ನಾನು ಕೇಳಬಯಸುತ್ತೇನೆ. ಅವರ ಭಕ್ತವೃಂದವನ್ನು ಮೇಲುನೋಟಕ್ಕೆ ಗಮನಿಸಿದರೂ ಅವರಲ್ಲಿ ಅನೀತಿವಂತರು, ಭಷ್ಟಾಚಾರಿಗಳು, ವರಮಾನ ತೆರಿಗೆ ತಪ್ಪಿಸಿಕೊಂಡವರೂ, ಸಮಾಜ ದ್ರೋಹಿಗಳು ಬೇಕಾದಷ್ಟು ಜನ ಸಿಗುತ್ತಾರೆ. ವಿಶ್ವವಿದ್ಯಾಲಯ ತನಿಖಾ ಸಮಿತಿಯವರು ಅವರ ಸಂದರ್ಶನಕ್ಕೆ ಅನರ್ಹರೆಂದು ತೋರುತ್ತದೆ. ಸಾಯಿಬಾಬಾ ಅವರ ದೃಷ್ಟಿಯಲ್ಲಿ ನಾವು ಅವರ ಸಹವಾಸಕ್ಕೆ ಯೋಗ್ಯರಲ್ಲಿ. ಅದು ನಿಜವಿದ್ದರೂ ಇರಬಹುದು.

'ನೀವು ದೇವರೇ' ಎಂಬ ಪ್ರಶ್ನೆಗೆ ಅವರು ' ದೇವರು ಎಲ್ಲರಲ್ಲಿಯೂ ಇದ್ದಾನೆ' ಎಂಬ ಉತ್ತರ ಕೊಟ್ಟರೆಂದು ಪತ್ರಿಕೆಗಳಲ್ಲಿ ವರದಿ ಆಗಿದೆ. ಇಪ್ಪತೈದು ವರ್ಷಗಳಿಂದ ಆಗ್ ಆಧ್ಯಾಪಕರಾಗಿದ್ದ ಎಚ್.ಎನ್. ಈ ಉತ್ತರ ಅಪ್ರಸ್ತತ ಎಂದು ವಿನಯಪೂರ್ವಕವಾಗಿ ತಿಳಿಸ ಬಯಸುತ್ತೇನೆ. ಇದು ಪ್ರಶ್ನೆಯನ್ನು ಮರೆಸುವ ಪ್ರಯತ್ನ. ತಮ್ಮನ್ನು ಆಕ್ಷೇಪಿಸುವವರು ತಾವು ಮಾಡಿರುವ ಮಾನವೀಯ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಮರೆಯುತ್ತಾರೆ ಎಂದು ಶ್ರೀ ಸತ್ಯಸಾಯಿಬಾಬಾರವರು ನೊಂದ ದ್ವನಿಯಲ್ಲಿ ಹೇಳುವುದುಂಟು. ನಾವು ಆ ಬಗ್ಗೆ ಇಲ್ಲಿ ಚರ್ಚಿಸುತ್ತಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ.

ನಾವು ತೆಗೆದುಕೊಂಡಿರುವ ಸಮಸ್ಯೆಯ ಅಂತರಾಳವು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದ್ದು, ಅನೇಕ ಮಹತ್ತರವಾದ ಪರಿಣಾಮಗಳಿಗೆ ಕಾರಣವಾಗಬಲ್ಲದು. ಈ ತನಿಖೆಯು ಯಾವುದೇ ವ್ಯಕ್ತಿಯನ್ನು ಮುಖಭಂಗ ಮಾಡುವ ಉದ್ಧೇಶದಿಂದ ಹೊರಟಿಲ್ಲ. ಆದರೆ ಪ್ರಗತಿ ವಿರೋಧಿಯಾದ ಆರಾಧನಾ ಪದ್ಧತಿಯ ಮನೋಭಾವನ್ನು ಪ್ರಶ್ನಿಸುತ್ತದೆ. ಇದರ ಗುರಿ ' ಸತ್ಯಾನ್ವೇಷಣೆ' ಯಾಗಿದೆ. ನಮ್ಮ ದೇಶವು ಸಾವಿರಾರು ದೇವರುಗಳು, ಬಾಬಾಗಳು ಮತ್ತು ' ಮಿನಿ' ಬಾಬಾಗಳ ಸಂತೆಯಾಗಿದೆ. ಪರಿಶೀಲನ ಮಾರ್ಗದಿಂದ, ಪ್ರಶ್ನಿಸುವ ರೀತಿಯಿಂದ ಅಸಲು ನಕಲುಗಳನ್ನು ಬೇರ್ಪಡಿಸುವ ಅವಶ್ಯಕತೆಯಿದೆ. ಈಗ ಪ್ರತಚಲಿತವಾಗಿರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ರಂಗಗಳನ್ನು ಪರಿಶುದ್ಧಗೊಳಿಸುವುದು ಅತ್ಯವಶ್ಯಕ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಅನೇಕ ಶತಮಾನಗಳಿಂದ ಈ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಶೋಷಣೆ ನಡೆದಿದೆ. ಬಡವರು ಹಾಗೂ ದಡ್ಡರೂ ನಿರಂತರವಾಗಿ ಮೋಸಕ್ಕೆ ಒಳಪಟ್ಟಿದ್ದಾರೆ. ಈ ಜ್ಞಾನ ಯುಗದಲ್ಲೂ ಕೆಲವು ವಿಜ್ಞಾನಿಗಳು ಇದಕ್ಕೆ ಅಪವಾದವಾಗಿಲ್ಲ.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ ಎಂಬುದು ನಿಜ. ವಿಜ್ಞಾನಿಯು ಪ್ರಯೋಗಶಾಲೆಯಲ್ಲಿ ಜೀವವನ್ನು ಸೃಷ್ಟಿಸುವ ಹಂತದಲ್ಲಿ ಇದ್ದಾನೆ. ಪ್ರಕೃತಿಯ ಅನೇಕ ರಹಸ್ಯಗಳನ್ನು ಮನುಷ್ಯನು ತನ್ನ ಪರಿಶೀಲನ ಮನೋಭಾವದಿಂದ, ಅವಿರತ ಶ್ರಮದಿಂದ ಬಿಡಿಸಿದ್ದಾನೆ. ನೆನ್ನೆಯ ದಿನ ಅತಿಮಾನುಷ ಎಂದು ಅಂದುಕೊಂಡ ಸಂಗತಿಯು ಈ ದಿನ ಸಂಪೂರ್ಣ ಸಹಜ ಸಂಗತಿಯಾಗಿದೆ. ಇದು ಸಾಧನೆಯ ಒಂದು ಮುಖ ಮಾತ್ರ.

ಈ ಪ್ರಗತಿಯ ಮತ್ತೊಂದು ಭಾಗದ ಚಿತ್ರ ಅತ್ಯಂತ ನಿರಾಶದಾಯಕ. ವಿಜ್ಞಾನಿ ಅಥವಾ ವಿಜ್ಞಾನದ ವಿದ್ಯಾರ್ಥಿ ಪ್ರಯೋಗ ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುವಾಗ ವಿಚಾರವಾದಿಯಾಗಿ ಕಂಡುಬರುತ್ತಾನೆ. ಆದರೆ ಇದೇ ವ್ಯಕ್ತಿ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಾಗ ಸಂಪೂರ್ಣವಾಗಿ ವೈಚಾರಿಕತೆಯನ್ನು ತ್ಯಜಿಸಿ ಬಿಡುತ್ತಾನೆ. ಅವನ ಯೋಚನಾಶಕ್ತಿ ರಜೆ ತೆಗೆದುಕೊಂಡು ಬಿಡುತ್ತದೆ. ಕೆಲವು ವಿಜ್ಞಾನಿಗಳು ಪವಾಡಗಳನ್ನು ಮಾಡುತ್ತೇವೆ ಎಂದು ಹೇಳುವ ವ್ಯಕ್ತಿಗಳನ್ನು ಅಂಧರಾಗಿ ಅನುಸರಿಸುವುದೂ ಉಂಟು. ವಿಜ್ಞಾನವು ಜೀವನ ನಂಬಿಕೆಯಾಗದೆ ಹೊಟ್ಟೆಪಾಡಿನ ಮಾರ್ಗವಾದಲ್ಲಿ, ಅಂತಹ ವ್ಯಕ್ತಿಗಳು ಹೇಗೆ ತಾನೇ ವೈಜ್ಞಾನಿಕ ಮನೋಭಾವವನ್ನು ವೈಚಾರಿಕತೆಯನ್ನು ಪ್ರಚಾರ ಮಾಡಲು ಸಾಧ್ಯ.

ನಮ್ಮ ದೇಶವು ಮೂಢನಂಬಿಕೆಗಳಿಂದ ತುಂಬಿ ತುಳುಕುತ್ತಿದೆ. ಶಿಕ್ಷಣ ಪಡೆಯುತ್ತಿರುವವರಿಗೆ ಸರಿಯಾದ ಶಿಕ್ಷಣ ದೊರೆಯಬೇಕಾಗಿರುವುದು ಈಗ ಅತ್ಯಂತ ಅವಶ್ಯಕ. ಮೂಢನಂಬಿಕೆಯು ಭಯ ಮತ್ತು ಅಜ್ಞಾನಗಳಿಂದ ಉಂಟಾಗುತ್ತದೆ. ಅವು ಆತ್ಮವಿಶ್ವಾಸವನ್ನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ನಾಶಪಡಿಸುತ್ತವೆ. ಅವು ಸ್ವತಂತ್ರ ಚಿಂತನೆಯನ್ನು, ನಿರ್ಭೀತ ಮನೋಭಾವವನ್ನು ಮೊಟಕುಗೊಳಿಸುತ್ತವೆ.

ವಿಜ್ಞಾನದ ಫಲಿತಾಂಶಗಳು ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ಆದರೆ ವಿಜ್ಞಾನದ ಚೈತನ್ಯವು (spirit) ಜನಪ್ರಿಯವಾಗಿಲ್ಲ. ವಿಜ್ಞಾನದ ನಿಜವಾದ ಪ್ರಾಮುಖ್ಯ ಈ ಅಂಶದಲ್ಲಿ ಅಡಗಿದೆ ಎಂಬುದು ನನ್ನ ಅಭಿಪ್ರಾಯ.

ನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು. ಈ ಮನೋಭಾವವನ್ನು ಬೆಳೆಸುವ ದಿಸೆಯಲ್ಲಿ ಎಲ್ಲ ಸಂಸ್ಥೆಗಳು ಮತ್ತು ವಿಶ್ವವಿಧ್ಯಾಲಯಗಳು ಕಾರ್ಯಪ್ರವೃತ್ತರಾಗಬೇಕು. ಪಂಡಿತ ಜವಹರಲಾಲ್ ನೆಹುರೂರವರು ಅಲಹಾಬಾದಿನ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉದ್ಧೇಶಗಳನ್ನು ಕುರಿತು ಹೇಳಿದ ಮಾತುಗಳನ್ನು ಬಹುಪಾಲು ವಿಶ್ವವಿದ್ಯಾಲಯಗಳು ಮರೆತು ಬಿಟ್ಟಿವೆ. ವಿಶ್ವವಿದ್ಯಾಲಯವು ಮಾನವತಾವಾದ, ಸಹನೆ, ವೈಚಾರಿಕತೆ, ನಿರ್ದಿಷ್ಟ ಗುರಿಗಾಗಿ ಹೋರಾಡುವ ಸಾಹಸ ಮತ್ತು ಸತ್ಯದ ಅನ್ವೇಷಣೆಯ ಸಂಕೇತ. ವಿಶ್ವವಿದ್ಯಾಲಯಗಳು ಉನ್ನತ ಧ್ಯೇಯಗಳನ್ನು ಹೊಂದಿ ಮನುಷ್ಯನ ಪ್ರಗತಿಯಲ್ಲಿ ಮುನ್ನುಗ್ಗಬೇಕು. ಅವು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜನಗಳಿಗೆ ಹಾಗೂ ದೇಶಕ್ಕೆ ಒಳ್ಳೆಯದನ್ನು ಮಾಡಿದಂತೆ ಆಗುತ್ತದೆ, ಎಂದು ನೆಹರೂರವರು ಅಭಿಪ್ರಾಯ ಪಟ್ಟಿದ್ದಾರೆ.

ನಮಗೆಲ್ಲ ತಿಳಿದಿರುವಂತೆ ಇತ್ತೀಚೆಗೆ ಸಂವಿಧಾನ ತಿದ್ದುಪಡಿ ಸಮಿತಿಯು ಪ್ರತಿಯೊಬ್ಬ ಪ್ರಜೆಯ ಮೂಲಭೂತವಾದ ಹತ್ತು ಕರ್ತವ್ಯಗಳನ್ನು ಸೂಚಿಸಿದೆ. ಅವುಗಳಲ್ಲಿ ಎಂಟನೆಯ ಕರ್ತವ್ಯವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು. ಮಾನವತಾವಾದ, ವೈಚಾರಿಕತೆ, ಪರೀಕ್ಷಾ ಮನೋಭಾವ ಹಾಗೂ ಸುಧಾರಕ ದೃಷ್ಟಿಯನ್ನು ತಿಳಿಸುತ್ತದೆ. ಈ ಕರ್ತವ್ಯವನ್ನು ಪ್ರತಿಯೊಬ್ಬನೂ ಗಂಭೀರವಾಗಿ ತೆಗೆದುಕೊಡು ಕಾರ್ಯರೂಪಕ್ಕೆ ತಂದರೆ ಬಹಳ ಒಳ್ಳೆಂi ಪರಿಣಾಮಗಳಾಗುತ್ತವೆ. ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ರೀತಿಯ ತನಿಖೆಗಳನ್ನು ಕೈಗೊಳ್ಳುವುದಕ್ಕೆ ಸಂವಿಧಾನದ ಒಪ್ಪಿಗೆ ಕೂಡ ದೊರೆತಿದೆ ಎಂಬುದು ಈ ಅಂಶದಿಂದ ತಿಳಿದು ಬರುತ್ತದೆ.

ಈಗ ಸತ್ಯಸಾಯಿಬಾಬಾ ಮತ್ತು ಅವರ ಬೆಂಬಲಿಗರು ಉನ್ಮಾದದ ಆವೇಶದ ಮಾತುಗಳ ಕಡೆ ಗಮನ ಹರಿಸೋಣ. ಬಹಳಷ್ಟು ಲೇಖನಗಳನ್ನು ಪ್ರಕಟಿಸುವುದರಿಂದ, ಸಂಶಯದ ಆವರಣದಲ್ಲಿ ಅನೇಕ ವಸ್ತುಗಳನ್ನು ಪ್ರದರ್ಶಿಸುವುದರಿಂದ, ಬೀದಿಯಲ್ಲಿ ನಿಂತು ಕೂಗುವುದರಿಂದ ಆ ಸತ್ಯಸಾಯಿಬಾಬಾರವರು ಶೂನ್ಯದಲ್ಲಿ ವಸ್ತುಗಳನ್ನು ಸೃಷ್ಟಿಸುತ್ತಾರೆ ಎಂಬುದು, ನಿಜವಾಗುವುದಿಲ್ಲ. ಇವೆಲ್ಲವೂ ಅವರ ದೈವೀಶಕ್ತಿಯನ್ನು ರುಜುವಾತು ಮಾಡುವುದಿಲ್ಲ. ಎಲ್ಲಿಯ ತನಕ ಈ ಸಂದಿಗ್ಧತೆ ಮುಂದುವರೆಯಬೇಕು? ಸಾವಿರಾರು ಜನರಿಗೆ ಇದರ ಬಗ್ಗೆ ನಿಜವಾದ ಸಂಶಯಗಳಿವೆ. ಇಷ್ಟು ಸಮಯವಾದರೂ ಈ ಒಗಟು ಪರಿಹಾರವಾಗದೇ ಇರುವುದು ಸರಿಯಲ್ಲ. ದೇಶದ ತುಂಬ ನಡೆಯುತ್ತಿರುವ ಚರ್ಚೆಯು ವ್ಯರ್ಥವಾಗುವುದು ಉಚಿತವಲ್ಲ. ಈ ಹೆಚ್ಚಿನ ವಿವಾದಿಂದ ಏನಾದರೂ ಗಟ್ಟಿಯಾದ ತೀರ್ಮಾನಕ್ಕೆ ಬರುವುದು ಅವಶ್ಯಕ. ಈ ಸಮಸ್ಯೆಯು ಸರಳ ಮತ್ತು ಸ್ಪಷ್ಟ. ಸಂಬಂಧವಿಲ್ಲದ ಸಂಗತಿಗಳನ್ನು ಇದರ ಜೊತೆಯಲ್ಲಿ ತಂದು ಗೊಂದಲ ಮಾಡುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ನುಣಿಚಿಕೊಳ್ಳವ ಪ್ರಯತ್ನವಾಗಲೀ, ಹಾರಿಕೆಯ ಉತ್ತರವಾಗಲೀ, ವ್ಯರ್ಥಮಾತುಗಳಾಗಲೀ ಅವಶ್ಯಕತೆ ಇಲ್ಲ. ಶ್ರೀ ಸತ್ಯಸಾಯಿಬಾಬಾರವರು ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ನಮ್ಮ ಸಮಿತಿಯು ಅವರನ್ನು ನೋಡುವ ಅವಕಾಶವನ್ನು ಕೊಟ್ಟು ನೈತಿಕ ಧೈರ್ಯವನ್ನು ವ್ಯಕ್ತಪಡಿಸಲಿ. ಅವರೊಡನೆ ಚರ್ಚಿಸಲು ಹಾಗೂ ಬಹಿರಂಗವಾಗಿ ಅವರ ಪವಾಡವನ್ನು ಪರೀಕ್ಷಿಸಲು ಅವಕಾಶವನ್ನು ಮಾಡಿಕೊಟ್ಟು ಅವರು ತಮ್ಮ ಮಾತಿನ ಸತ್ಯವನ್ನು ಸಾಬೀತುಪಡಿಸಲಿ.

ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಎಚ್. ಎನ್. ವಿಷಯವನ್ನು ಗ್ರಹಿಸುವಲ್ಲಿ ತೆರೆದ ಮನಸ್ಸನ್ನು ಹೊಂದಿದ್ದರು. ಹೊಸ ಅಂಶಗಳಿಂದ, ಅನುಭವಗಳಿಂದ ನನ್ನ ಅಭಿಪ್ರಾಯಗಳನ್ನು ಮತ್ತು ಪ್ರಾಯೋಗಿಕ ನೆಲೆಯಲ್ಲಿ ಕಂಡುಕೊಂಡಿರುವ ತೀರ್ಮಾನಗಳನ್ನು ಬದಲಾಯಿಸಿಕೊಳ್ಳಲು ಸಿದ್ಧನಿದ್ದೇನೆ ಎಂದಿದ್ದರು.