ನೋಡ್ತಿರೋರು

ಬುಧವಾರ, ಫೆಬ್ರವರಿ 2, 2011

ಮುಖ್ಯಮಂತ್ರಿಯೂ ಮತ್ತು ನಲ್ವತ್ತು ಜನ.................


ಭಾಗ ೧
ಭಾರತದ ಇತಿಹಾಸದಲ್ಲೇ ಕಾಣದಷ್ಟು ಕರಾಳ ದಿನ ೨೨ನೇ ಜನವರಿ ೨೦೧೧, ಆಡಳಿತ ಪಕ್ಷವೇ ಬಂದ್ ಕರೆ ನೀಡಿದ್ದು, ದೇಶದಲ್ಲಿ ಇದೇ ಮೊದಲು, ಒಂದೊಮ್ಮೆ ತುರ್ತು ಪರಿಸ್ಥಿತಿ ಎದುರಿಸಿದ್ದ ಭಾರತ ಸರ್ಕಾರ, ಕೆಲವೇ ದಿನಗಳಲ್ಲೇ ತನ್ನ ಸರಿ ದಾರಿಯನ್ನು ಕಂಡುಕೊಂಡು ಮುಂದೆ ಇಂತಹ ಪರಿಸ್ಥಿತಿ ಬಂದೊದಗದಂತೆ ನೋಡಿಕೊಳ್ಳುತ್ತಲೇ ಬಂದಿದೆ. ಇಂತಹ ಭವ್ಯ ಭಾರತದ ಸುದೀರ್ಘ ೬೦ ವರ್ಷಗಳ ಇತಿಹಾಸದಲ್ಲಿ ಇಂದು ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಬಂದ್ ಆಗುವುದಕ್ಕೆ ಕಾರಣವಾದರೂ ಏನು ? ಒಬ್ಬ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಹೊತ್ತ ವ್ಯಕ್ತಿಗೆ ಮತ್ತೊಬ್ಬ ಮಹೋನ್ನತ ಜವಾಬ್ದಾರಿ ಹೊತ್ತ ವ್ಯಕ್ತಿಯು ರಾಜ್ಯಕ್ಕೆ ಮಾಡಿದ ಮೋಸವನ್ನು ಸಾಬೀತುಪಡಿಸಲು ಅವಕಾಶ ನೀಡಿದ್ದು, ಅದು ತಪ್ಪೇ ? ಹಾಗಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ತಪ್ಪೇ ಮಾಡಲಾರನೇ ? ಕೇವಲ ಜನ ಸಾಮಾನ್ಯರು ಮಾತ್ರ ತಪ್ಪು ಮಾಡುವರೇ ? ಅವರಿಗೆ ಮಾತ್ರ ಶಿಕ್ಷೆಯೇ ?

ಆದದ್ದೇನು ………?

ಕರ್ನಾಟಕದ ಇಂದಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಅಖಂಡ ರಾಜಕೀಯ ಇತಿಹಾಸದಲ್ಲಿ ಸುಮಾರು ವರ್ಷ ವಿರೋಧ ಪಕ್ಷದಲ್ಲೇ ಉತ್ತಮ ಕೆಲಸಮಾಡಿ ಜನಮನ್ನಣೆ ಪಡೆದವರು, ಅಲ್ಲಿ ಯಡಿಯೂರಪ್ಪನವರ ಕೆಲಸಕ್ಕಿಂತ ಕರ್ನಾಟಕದ ಜನತೆಗೆ ಒಂದೇ ಪಕ್ಷ ಅಥವಾ ಆಡಳಿತದ ಚುಕ್ಕಾಣಿ ಹಿಡಿದು ಅಭಿವೃದ್ದಿಯ ಮಂತ್ರವನ್ನಷ್ಟೆ ಜಪಿಸಿ, ಜನರ ಆಕಾಂಕ್ಷೆಗಳಿಗೆ ಮನ್ನಣೆ ನೀಡದೇ ಇದ್ದದ್ದು, ಮತ್ತು ಬಿಜೆಪಿಯ ಮೇಲೆ ಹುಟ್ಟಿದ ಅನುಕಂಪ ೨೦೦೭-೨೦೦೮ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ದೊರೆತ ಮೊದಲ ಸಲದ ಆಡಳಿತ ಅವಕಾಶದಲ್ಲಿ ಮೊದಲು ನೂರಷ್ಟು ಗೊಂದಲಗಳು, ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪನ ಪಟಾಲಂಗಳು ತಮ್ಮ ತಮ್ಮ ನಾಯಕರಿಗೆ ಮುಖ್ಯಮಂತ್ರಿಯ ಪಟ್ಟವನ್ನು ಅಲಂಕರಿಸಲು ಸಾಕಷ್ಟು ಶ್ರಮವನ್ನು ನಡೆಸಿದರು. ಬಿಜೆಪಿ ಹ್ಯೆಕಮಾಂಡಿನ ಕೃಪಾಕಟಾಕ್ಷದಿಂದ ಯಡಿಯೂರಪ್ಪನವರಿಗೆ ಆ ಪದವಿ ಒಲಿದದ್ದು ಈಗ ಇತಿಹಾಸ.
ಜನರ ಬೆಂಬಲ, ಮತ್ತು ಹೊಸದನ್ನು ನಿರೀಕ್ಷಿಸುತ್ತಿದ್ದ ಕರ್ನಾಟಕಕ್ಕೆ ಯಡಿಯೂರಪ್ಪನವರ ಮೇಲೆ ಅಪರಿಮಿತ ವಿಶ್ವಾಸ ಮತ್ತು ಅನುಕಂಪದ ಬೆಂಬಲವಿತ್ತು. ಜನ ಯಡಿಯೂರಪ್ಪ ಮುಖ್ಯಮಂತ್ರಿಯವರೆಂದು ಘೋಷಿಸಿದ ಮೇಲೆ ಜನರ ನಂಬಿಕೆಯೂ ಹೆಚ್ಚಿತ್ತು. ಆದರೆ ಆದದ್ದೇನು ? ಬಿಜೆಪಿಯ ಶಾಸಕರಲ್ಲೇ ಆದ ಒಳಜಗಳ, ತಮ್ಮತಮ್ಮಲ್ಲೇ ಒಬ್ಬೊಬ್ಬರ ಬಗ್ಗೆ ಕತ್ತಿ ಮಸೆಯುತ್ತಾ, ಪ್ರತಿ ಕ್ಷಣದಲ್ಲೂ ಸ್ವಹಿತಾಸಕ್ತಿಯ ಬಗ್ಗೆಯೇ ಯೋಚಿಸುತ, ರೆಡ್ಡಿ-ಯಡ್ಡಿ ಜಗಳವಂತಲೇ ಬಿಂಬಿಸುತ, ಖಾಸಗಿ ಟಿವಿ ಚಾನೆಲ್ಗಳಲ್ಲಿ ಭರಪೂರ ರಸದೌತಣವನ್ನೇ ಉಣಬಡಿಸಿ ಕಡೆಗೆ ಹ್ಯೆಕಮಾಂಡ್ ಮಧ್ಯಸ್ತಿಕೆಯಲ್ಲಿ ಆ ಕ್ಷಣದ ಸುಖಾಂತ್ಯವನ್ನು ಕಂಡಂತಾಗಿತ್ತು.
ಅಲ್ಲಿಯವರೆಗೂ ಬಿಜೆಪಿಯ ಪ್ರತಿ ಸಚಿವರು ನಾವು ಒಗ್ಗಟ್ಟಾಗಿದ್ದೇವೆ. ಎಂತಲೇ ಪ್ರಚಾರಪಡಿಸುವಲ್ಲೇ ಹ್ಯೆರಾಣಾಗಿದ್ದರು. ಹಾಗೂ ಹೀಗೂ ಕುಂಟು ಕುದುರೆ ನಡೆಯುತ್ತಿತ್ತು. ಮತ್ತೊಂದು ಒಂಬತ್ತು ತಿಂಗಳಷ್ಟೆ, ರೇಣುಕಾಚಾರ್ಯ ಹಿಂಬಾಗಿಲಿಂದ ಸಚಿವರಾಗಿದ್ದರೂ, ಮತ್ತೇನೋ ಮರೆತಂತೆ ಕೆಲವು ಸಚಿವರ ಒಟ್ಟುಗೂಡಿಸಿ, ಯಡಿಯೂರಪ್ಪನವರು ನನ್ನ ತಂದೆ ಸಮಾನ ಎನ್ನುತ್ತಲೇ ಕೇರಳ, ಗೋವಾ, ಚೆನ್ನ್ಯೆ ರೆಸಾರ್ಟುಗಳಲ್ಲಿ ವಾಸ್ತವ್ಯ ಹೂಡುತ್ತಾ ಇಡೀ ಸರ್ಕಾರವೇ ಬೀಳುಸುವ ಯತ್ನದಲ್ಲಿ ಫಲಪ್ರದವಾಗುವಂತೆ ಕಂಡು ಬಂದರೂ ಕಡೆಯ ಘಳಿಗೆಯಲ್ಲಿ ತನ್ನ ಬೆಂಬಲಿಗ ಸಚಿವರಿಗೆ ಮುಂದೆ ಹೋಗುವಂತೆ ಪ್ರೋತ್ಸಾಹಿಸಿ ಹಿಂದುಳಿದದ್ದು ಸಮಾನ ಮನಸ್ಕ ಸಚಿವರಿಗಂತೂ ಭಾರಿ ಭ್ರಮರನಿರಸವಾಯಿತು. ಮತ್ತೆ ಯಡಿಯೂರಪ್ಪನವ ಬೆಂಬಲಕ್ಕೆ ನಿಂತದ್ದು, ಸಮಾನ ಮನಸ್ಕ ಸಚಿವರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಅದುವರೆಗೂ ಎಲ್ಲವೂ ಸರಿಯಿದೆ ಎಂಬ ಭಾವನೆಯಿಂದಲೇ, ತನ್ನ ಸ್ವಹಿತಾಸಕ್ತಿಯ ಬಗ್ಗೆ ಯೋಚಿಸಿ ನಾಗರಬಾವಿಯ ಜಮೀನೊಂದನ್ನು ಡಿನೋಟಿಫ್ಯೆ ಮಾಡಿದ್ದೇ ಬಂತು, ವಿರೋಧ ಪಕ್ಷಗಳು ಅದಕ್ಕಾಗಿಯೇ ಕಾಯುತ್ತಿರುವಂತೆ, ಒಕ್ಕಲೊರಗಿನಲ್ಲಿ ರಾಜೀನಾಮೆ ನೀಡಬೇಕು, ಇಲ್ಲದಿದ್ದಿರೆ ನಾವು ಹೋರಾಟವನ್ನು ಬಿಡೆವು, ಎಂದು ರಾಜ್ಯಪಾಲರ ಬಳಿ ಮನವಿಯನ್ನು ಮೇಲಿಂದ ಮೇಲೆ ನೀಡುತ್ತಾ, ಮುಖ್ಯಮಂತ್ರಿಯ ಅಷ್ಟು ಬೇನಾಮಿ ಆಸ್ತಿ ವಿವರ, ನಕಲಿ ಕಂಪೆನಿಯ ಹೆಸರಿನಲ್ಲಿ ಮಾಡಿಕೊಂಡ ಸ್ಯೆಟುಗಳು, ಮಗ ವಿಜಯೆಂದ್ರ, ಮತ್ತೊಬ್ಬ ಸಂಸದ ಮಗ ರಾಘವೇಂದ್ರ, ಹಾಗೂ ಯಡಿಯೂರಪ್ಪನ ಅಳಿಯ ಅವರ ಬಂಧು ಬಾಂಧವರ ಅಷ್ಟು ಚರ-ಸ್ಥಿರ ಆಸ್ತಿಗಳ ಪಟ್ಟಿಯನ್ನೇ ವಕೀಲರ ಗುಂಪೊಂದು ರಾಜ್ಯಪಾಲರ ಮುಂದೆ ಈ ವಿವರಗಳನ್ನು ನೀಡಿ ಕ್ರಮ ಕ್ಯೆಗೊಳ್ಳಲೇಬೇಕು ಎಂಬ ಒತ್ತಾಯಿಸಿದರು, ಅಲ್ಲಿಯವರೆಗೂ ಅಳುತ್ತಾ, ಕರ್ನಾಟಕದ ಜನತೆಯಲ್ಲಿ ಕರುಣೆಯನ್ನು ಗಿಟ್ಟಿಸಿಕೊಂಡ ಮೆಚ್ಚಿನ ಮುಖ್ಯಮಂತ್ರಿ ಇಡೀ ಕರ್ನಾಟಕದ ಜನರ ಪಾಲಿಗೆ ಭಸ್ಮಾಸುರನಂತೆಯೇ ಕಂಡಿದ್ದು ಮಾತ್ರ ಶೋಚನೀಯ. ಕರ್ನಾಟಕದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಎಂದಿಗೂ ಮುಖ್ಯಮಂತ್ರಿಯ ಮೇಲೆ ನೇರ ಹೊಣೆಗೇಡಿತನದ ಆರೋಪ ಬಂದಿರಲಿಲ್ಲ. (ಬಹುಶಃ ಅಲ್ಲಿಯವರೆಗೂ ವಿಷಯವನ್ನು ಮುಂದುವರೆಸಲೂ ಬಿಡಲಿಲ್ಲವೇನೋ ?)

ಮುಂದೆ ಹೇಗೋ ? ಮಾಧ್ಯಮಗಳ, ಪರಿಣಿತರ ಅಭಿಪ್ರಾಯದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯಪಾಲರ ನಡುವಿನ ಸಂಘರ್ಷ, ಮಂತ್ರಿಮಂಡಲದಲ್ಲಿನ ಭಿನ್ನತೆ, ಜೊತೆಗೊಂದಿಷ್ಟು ಹುಂಬತನ ಇವೆಲ್ಲ ಕರ್ನಾಟಕದ ಜನತೆಗೆ ಬೇಕಿತ್ತೆ ? ಇಂತಹ ನಾಯಕ, ಎನ್ನುವ ಮಟ್ಟಿಗೆ ಜನ ಬೇಸತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಪವಾಡ ಸದೃಶ್ಯವಾಗಿ ಈ ಎಲ್ಲಾ ಆರೋಪಗಳಿಂದ ಪಾರಾಗುವ ಸಾಧ್ಯತೆಗಳು ಇಲ್ಲ. ಹಾಗಂತ ರಾಜೀನಾಮೆಯ ಯೋಚನೆಯೂ ಸದ್ಯಕ್ಕಿಲ್ಲ. ತಮ್ಮ ಮೇಲಿನ ಆರೋಪಗಳು ನಿರಾಧಾರವಷ್ಟೆ, ಎಂದು ಹೇಳುತಾ, ಕಾಂಗ್ರೆಸ್ಸ್ ಮತ್ತು ಜನತಾದಳದವರು ಮಾಡಿರಬಹುದಾದ ಹಗರಣಗಳನ್ನು ಹುಡುಕುತ ಕೂತಿದ್ದಾರೆ. ಈ ರಾಜಕೀಯ ದೊಂಬರಾಟದಲ್ಲಿ ಯಾರು ಯಾರಿಗಿಂತ ಹೆಚ್ಚು ಮತ್ತು ಕಡಿಮೆ ಎಂಬುದು ಜನತೆಗೂ ತಿಳಿಯುತ್ತಿಲ್ಲ.

1 ಕಾಮೆಂಟ್‌:

Sahana Rao ಹೇಳಿದರು...

ಚನ್ನಾಗಿ ಬರೆದಿದ್ದೀರ..

ಇದು ನನ್ನ ಅಭಿಪ್ರಾಯ...
ಯಡಿಯೂರಪ್ಪ ಮಂದ ಬುದ್ಧಿಯ ಜೀವಿ ಅನ್ನೋದನ್ನ ತೋರಿಸಿಬಿಟ್ಟರು.. ಹೇಸಿಗೆ ಆಗುತ್ತೆ ಇಂಥ ಪುಕ್ಕಲನ್ನ ನಮ್ಮ ಜನ ನಾಯಕ ಅಂತ ಹೇಳ್ಕೊಂಡು ಇರೋಕ್ಕೆ.. ನಮಗೆ ವಾಜಪೇಯಿ ಅಂತ ದೂರ ದೃಷ್ಟಿ ಇದ್ದ, ತೀಕ್ಷ್ಣ ಬುದ್ಧಿ, ಅಸಾದ್ಯ ವಾಗ್ಮಿ ತಂದ ಪಕ್ಷ ಎಂಬುವುದೇ ತಲೆಗೆ ಬರೋದು. ಈ ಯ(ಡಿಯೂರ)ಪ್ಪ ಬಂದು ಅಸಹ್ಯ ಆಗಿಬಿಟ್ಟಿದೆ.. ರಾಜಕೀಯವು ಬೇಡ, ಯಾವ ಪಕ್ಷವು ಬೇಡ ಅನ್ನುವ ಮಟ್ಟಿಗೆ..

ಸಾಮಾನ್ಯ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ..

ಎಲ್ಲರೂ ಕಳ್ಳರೇ, ಕಡಿಮೆ ಕಳ್ಳ ಯಾರು ಎಂದು ಹುಡುಕಬೇಕಷ್ಟೆ.. ಕುರುದರಲ್ಲಿ ಒಕ್ಕಣ್ಣನೆ ರಾಜ ಎನ್ನುವ ಹಾಗೆ..



ಸಹನೆ..