ನೋಡ್ತಿರೋರು

ಬುಧವಾರ, ಆಗಸ್ಟ್ 18, 2010

ಚೀನಾದ ಪುರಾತನ ಬೌದ್ದ ದೇವಸ್ಥಾನ

ಬೆಂಗಳೂರಿನ ತೂಗು ಸೇತುವೆ ನೋಡಿರಬಹುದು, ಹಾಗೇ ಚೀನಾದಲ್ಲಿ ತೂಗು ದೇವಸ್ಥಾನ ನೋಡಿ ಇಲ್ಲಿದೆ. ಬೌದ್ಧರಿಗೊಂದು ಯಾತ್ರಾಸ್ಥಳ, ಇದು ಮೌಂಟ್ ಹೆಂಗ್ ಸ್ಥಳದ ಹತ್ತಿರ ಇದ್ದು, ಶಾಂಕ್ಸಿ ನಗರದಲ್ಲಿ ಕಂಡುಬರುತ್ತದೆ. ಡಾಟಾಂಗ್ ನಗರದಿಂದ ೬೫ ಕಿ.ಮೀ. ದೂರ. ಇದೊಂದು ಮುಖ್ಯ ಪ್ರವಾಸಿ ತಾಣ ಹಾಗೂ ಹಳೆಯ ದೇವಸ್ಥಾನ. ಇದು ಸುಮಾರು ೧೫೦೦ ವರ್ಷಗಳ ಹಿಂದೆ ನಿರ್ಮಿಸಿದ್ದಂತೆ. 






























ಸೋಮವಾರ, ಆಗಸ್ಟ್ 16, 2010

ಬದಲಾಗಬೇಕು......,, ಇನ್ನು ಬದಲಾಗಲೇಬೇಕು

ಬದಲಾಗಬೇಕು.......
ಇನ್ನು ಬದಲಾಗಬೇಕು......,,
ಇನ್ನು ಬದಲಾಗಲೇಬೇಕು.........

ಉಳಿಗಾಲವಿಲ್ಲ, ಬದಲಾಗದಿದ್ದೊಡೆ,
ಉಳಿಯಲೇಬೇಕು, ಬರಗಾಲವಿದ್ದೊಡೆ,
ಬಂದಿಹುದು ಬರಗಾಲ ನಾಯಕನಿಲ್ಲದೆ,
ಬಂದಿಹುದು ಬರಗಾಲ ಹಿಡಿತವಿಲ್ಲದೆ,
ಬಂದಿಹುದು ಬರಗಾಲ ನೀತಿನಿಯಮಾವಳಿಯ ಪಾಲಿಸದೆ,
ಬಂದಿಹುದು ಬರಗಾಲ ನ್ಯಾಯ ನೀತಿಗೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಅಧಿಕಾರ ಗದ್ದುಗೆ,
ಗದ್ದುಗೆ ಬೇಕು...... ಮೂರು ವರ್ಷಗಳಿಗೆ,
ಗದ್ದುಗೆ ಬೇಕು.... ಇನ್ನಷ್ಟು ಅಕ್ರಮಗಳಿಗೆ,
ಗದ್ದುಗೆ ಬೇಕು, ಗಣಿ ಹಗರಣಗಳಿಗೆ,
ಗದ್ದುಗೆ ಬೇಕು, ಅಭಿವೃದ್ಧಿಯ ಮಂತ್ರಕೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಗೋಹತ್ಯೆ ತಡೆದೊಡೆ,
ಗೋಹತ್ಯೆ ತಡೆಯೋಕೆ....... ಕ್ಯೆಕತ್ತಿರಿಸುವುದಕೆ,
ಗೋಹತ್ಯೆ ತಡೆಯೋಕೆ........ ಕ್ಯೆಎತ್ತೋಕೆ,
ಗೋಹತ್ಯೆಯೊಂದೇ ಇರೋದು ತಡೆಯೋಕೆ,
ಪ್ರಾಣಿ ಹಿಂಸೆ ನಿಲ್ಲಿಸಲಿ ಸಾಧ್ಯವಿದ್ದೊಡೆ,


ಬದಲಾಗಬೇಕು ಮಂತ್ರಿ ಕುತಂತ್ರಿಗಳೆಲ್ಲ,
ಬರಗಾಲಕ್ಕಲ್ಲ, ಗದ್ದುಗೆಯ ಹಂಬಲಕ್ಕಲ್ಲ,
ಗೋಹತ್ಯೆಗೊಂದೆ ಬೇಕಿಲ್ಲ,
ಜನರ ನಾಡಿಮಿಡಿತವ ಅರಿಯಲು,
ಎಲ್ಲರ ಬೇಕು-ಬೇಡಗಳ ತಿಳಿಯಲು..
ಬದಲಾಗಬೇಕು ಮುಖ್ಯಮಂತ್ರಿಗಳೇ
ಯಕ್ಷಿತ್: ನೀವು ಹೇಳಿದ ಮಾತಿಗೆ......
ಆಗದಿದ್ದರೆ ಬದಲಾಗಲೇಬೇಕು ..........ಮುಖ್ಯಮಂತ್ರಿ,

ಶುಕ್ರವಾರ, ಆಗಸ್ಟ್ 6, 2010

ಗುರುತಿನ ಚೀಟಿ ಪ್ರಾಧಿಕಾರ UIDAI


ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಜೂನ್ ೨೫ರ ೨೦೦೯ ರಂದು ಲೋಕಸಭೆಯಲ್ಲಿ ಅಸ್ತಿತ್ವಕ್ಕೆ ಬಂದ ಗುರುತಿನ ಚೀಟಿ ವಿತರಣಾ ಯೋಜನೆ, ಮುಂದಿನ ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಗುರುತಿನ ಚೀಟಿಯನ್ನು ನೀಡುವ ಯೋಜನೆ ಹಮ್ಮಿಕೊಂಡಿತು. ಈ ಯೋಜನೆಗೆ ಇನ್ಫೋಸಿಸ್ ಸಂಸ್ಥೆಯ ಪ್ರಧಾನರಾದ ನಂದನ್ ನಿಲಕೇಣಿಯವರನ್ನು ಯೋಜನೆಯ ಮುಖ್ಯಸ್ಥರನ್ನಾಗಿ ಗುರುತಿಸಿ ಪ್ರತಿ ನಾಗರೀಕನಿಗೂ ಗುರುತಿನ ಚೀಟಿಯನ್ನು ಕ್ರಮಬದ್ಧವಾಗಿ ನೀಡುವ ಜವಾಬ್ದಾರಿಯನ್ನು ನೀಡಿತು. ಸರ್ಕಾರ ಯೋಜನೆಗೆ ಅಂಗೀಕಾರ ನೀಡಿದ್ದು, ಶಿಸ್ತು ಮತ್ತು ಬದ್ದತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಬ್ಯೆಯೋಮೆಟ್ರಿಕ್ ಆಧಾರದಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಉತ್ಸುಕವಾಗಿದೆ.

ಗುರುವಾರ, ಆಗಸ್ಟ್ 5, 2010

ರಕ್ತದಾನ - ಮಹಾದಾನ

ಪ್ರತಿ ವರ್ಷದ ಜೂನ್ ೧೪ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುತ್ತಾರೆ. ನಿಮ್ಮ ಸುತ್ತ-ಮುತ್ತಲಲ್ಲೇ ಎಷ್ಟೊ ಜನಕ್ಕೆ ರಕ್ತದ ಅವಶ್ಯಕತೆ ಇರುತ್ತದೆ, ಹಾದಿ ಬೀದಿಯಲ್ಲಿ ದಿನಕ್ಕೊಬ್ಬರಾದರೂ ರಸ್ತೆ ಅಫಘಾತ, ಮತ್ಯಾವುದೋ ತೊಂದರೆಯಿಂದ ಬಳಲುತ್ತಾ ಇರುವವರಿಗೆ ರಕ್ತದ ಅವಶ್ಯಕತೆ ಇರುತ್ತದೆ,  ರಕ್ತದ ಅವಶ್ಯಕತೆ ಇರುವವರಿಗೆ ನಮ್ಮಿಂದ -ನಿಮ್ಮಿಂದ ಸಹಾಯವಾದರೆ ಅದಕ್ಕೆ ಸಿಗುವ ತುಂಬು ಹೃದಯದ ಅಭಿನಂದನೆಯೇ ವರ್ಣಾತೀತ.



ಬುಧವಾರ, ಆಗಸ್ಟ್ 4, 2010

ದೇವರು, ಧರ್ಮ ಮತ್ತವನ ಜಾತಿ. - ಸರಣಿ ೨

ಕ್ರಿ.ಪೂ. ೧೦೦೦
ದೇವರು ಹುಟ್ಟಿದ್ದು ಹೇಗೆ ?

ಹಳೆಶಿಲಾಯುಗದ ಕಾಲದಲ್ಲಿ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದದ್ದು, ಪಠ್ಯಪುಸ್ತಕಗಳಲ್ಲಿ ಓದಿಯೇ ಇರುತ್ತೀರಿ. ಅದು ಅವನ ಅಂದಿನ ಅವಶ್ಯಕತೆ. ಆದರೆ ಮನುಷ್ಯನಿಗೆ ತನ್ನ ಸುತ್ತಮುತ್ತಲಿನ ನಿಸರ್ಗದ ವ್ಯೆಪರೀತ್ಯಗಳು, ಒಮ್ಮೊಮ್ಮೆ ವಿಚಿತ್ರವಾಗಿ ಉಂಟಾಗುವ ಗುಡುಗು, ಮಿಂಚು, ಭೂಕಂಪ ಅವನನ್ನು ಗೊಂದಲಕ್ಕೀಡು ಮಾಡುತ್ತಿತ್ತೇನೋ ? ಈ ವಿಚಿತ್ರಗಳ ಅನುಭವದಿಂದ ಮನುಷ್ಯ ತನ್ನನ್ನು ಮೀರಿ ಮತ್ತೊಬ್ಬ ಶಕ್ತಿವಂತನಿರಬಹುದು. ಆ ವ್ಯಕ್ತಿ ಇವೆಲ್ಲವನ್ನು ಮಾಡುತ್ತಿರಬಹುದೇನೋ ಎಂಬ ಭ್ರಾಂತಿಗೆ ಬಂದ ? ನಿಸರ್ಗದ ದೃಷ್ಠಿಯಲ್ಲಿ ಮನುಷ್ಯ ಕಂಡ ಪ್ರತಿ ಬದಲಾವಣೆಗಳನ್ನು ನಂತರದ ದಿನಗಳಲ್ಲಿ ದೇವರು ಎಂಬ ಹೆಸರಿನಲ್ಲಿ ಕರೆದಿರಬಹುದು.

ಇಂಥ ದೇವರುಗಳನ್ನು ಕಾಲಕ್ರಮೇಣ ಪ್ರತಿ ಪಂಗಡದಲ್ಲೂ ಅವರ ಕಲ್ಪನೆಯ ಅನುಸಾರ ಮೂರ್ತರೂಪ ಕೊಟ್ಟು, ಆ ಗುಂಪಿನ ನಾಯಕ ತನಗೆ ಏನು ತೋಚುತ್ತಿತ್ತೋ ಹಾಗೆ ಪೂಜೆಯನ್ನೋ ಅಥವಾ ಮತ್ತಿನ್ಯಾವುದೋ ರೀತಿ ಮನವಿಯನ್ನೋ ಮಾಡುತ್ತಿದ್ದುದು ಇನ್ನಿತರ ಸದಸ್ಯರುಗಳಿಗೆ ಅದೇ ಸರಿ ಮತ್ತು ನಾಯಕನ ಮಾತಿನಂತೆ ಮತ್ತವನು ಮಾಡುತ್ತಿದ್ದ ಪೂಜೆಯೆಂಬ ಹೆಸರಿನ ಪ್ರಕಾರವೇ ದೇವರನ್ನು ಒಲಿಸುವುದು ಎಂಬ ಭಾವನೆ ಬಂದಿರಬಹುದು. ಹೀಗೆ ನಡೆಸುವ ಪೂಜೆ-ಪುನಸ್ಕಾರಗಳ ನಂತರ ಅವರ ಕಷ್ಟಗಳು ಆಕಸ್ಮಿಕವಾಗಿ ನಿವಾರಣೆಯಾದಾಗ ದೇವರು ನಮ್ಮ ಇಷ್ಟಾರ್ಥವನ್ನು ಸಿದ್ಧಿಸುವ ವ್ಯಕ್ತಿ ಮತ್ತು ನಾವು ಆ ಕಾಣದ ವ್ಯಕ್ತಿಗೆ ಯಾವತ್ತೂ ಅಭಾರಿಯಾಗಿರಬೇಕೆನ್ನಿಸಿತೇನೋ ?,

 .  ಪ್ರಕೃತಿಯಲ್ಲಿನ ಪ್ರತಿ ಕ್ಷಣದ ಬದಲಾವಣೆಗಳು ಕೆಲವು ಕಾಲದ ನಂತರ ನಿಲ್ಲುತ್ತವೆ, ಮತ್ತೆ ಮತ್ತೆ ಪುನರಾವರ್ತನೆಗಳಾಗುತ್ತವೆ. ಇಂಥ ಪುನಾರವರ್ತನೆಗಳು ಭೂಮಿಯ ಮೇಲ್ಮ್ಯೆ ಲಕ್ಷಣ, ಭೌಗೋಳಿಕ ವ್ಯತ್ಯಾಸ, ವಾತಾವರಣದ ಏರು ಪೇರುಗಳಿಂದ ಸಾಧ್ಯ. ಕನಿಷ್ಠ ವಿಚಾರಗಳನ್ನು ಯೋಚಿಸಲು ಇಷ್ಟಪಡದ ಜನ ತಮ್ಮ ಗುಂಪಿನ ನಾಯಕನ ಅಣತಿಯಂತೆ ತಮ್ಮದೇ ಆದ ವಿಧಾನಗಳನ್ನು, ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಕಾಲಕ್ರಮೇಣ ಮಾಡಿಕೊಂಡದ್ದು ಇರಬಹುದು. ಆಗಿನ ಶಿಲಾಯುಗದ ಜನರ ಅನೇಕ ಗುಂಪುಗಳು ಇಂಥದೇ ಪರಿಸ್ಥಿತಿಯನ್ನು ಎದುರಿಸಿ ಅವರದೇ ಆದ ನೀತಿ ಕಟ್ಟುಪಾಡುಗಳನ್ನು ಆಚರಣೆಗೆ ತಂದಿದ್ದಿರಬಹುದು.

ಮನಶಾಸ್ತ್ರಜ್ಣರು ಹೇಳುವಂತೆ ಎಲ್ಲ ಮನುಷ್ಯರು ಕಾಲಕ್ಕೆ ತಕ್ಕಂತೆ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅವು ಕಾಲದಿಂದ ಕಾಲಕ್ಕೆ ಬದಲಾದರೂ, ಅವುಗಳಲ್ಲಿನ ಬದಲಾವಣೆಗಳು ಮುಂದಿನ ತಲೆಮಾರಿನಿಂದ ಆಗಿರುತ್ತವೆ. ದೇವರು ಎಂಬ ಭಾವ ಮನುಷ್ಯನ ಕೆಲವು ವಿಚಿತ್ರ ಯೋಚನೆಗಳಿಗೆ ಅನುಕೂಲವು ಹಾಗೂ ಅನಾನುಕೂಲವು ಆಗಿದ್ದಿರಬಹುದು. ಅವನ ಅನುಕೂಲಗಳನ್ನು ದೇವರ ಕೃಪೆಯೆಂದು, ಅವನ ಅನಾನುಕೂಲವನ್ನು ಶಾಪವೆಂದು ಭ್ರಮಿಸಿ, ಅದರಂತೆ ನಡೆದುಬಂದಿರಬಹುದು.

ಪ್ರದೇಶದಿಂದ ಪ್ರದೇಶಕ್ಕೆ ಮಾರ್ಪಾಡುಗಳಾದಾಗ ಮೊದಲಿಗೆ ದೇವರ ಪರಿಕಲ್ಪನೆಯನ್ನು ಪ್ರತಿಗುಂಪುಗಳು ನಂಬಿದ್ದ ರೀತಿಯೇ ಶ್ರೇಷ್ಠ ಎಂಬುವ, ಹಾಗೂ ಅದರಂತೆ ನಡೆದುಕೊಳ್ಳುವ ಹಂಬಲ ಹೆಚ್ಚಾದದ್ದಿರಬಹುದು. ನಲವತ್ತು ಜನರಿರುವ ಒಂದು ಗುಂಪಿನ ನಾಯಕ ತನ್ನ ಮನಸ್ಸಿಚ್ಚೆಯಂತೆ ಯಾವುದನ್ನು ಆಚರಿಸುವನೋ ಅದೇ ಆ ಗುಂಪಿನ ಸದಸ್ಯರ ಆಚರಣೆಗಳಾಗಿರಬಹುದು. ನಂತರದ ದಿನಗಳಲ್ಲಿ ಅವನ ಗುಂಪಿನ ಮಕ್ಕಳು ಮೊಮ್ಮಕ್ಕಳು, ಮರಿ ಮಕ್ಕಳು ಆ ಕ್ರಮವನ್ನೇ ಆಚರಿಸುತ್ತಾ ಅದೇ ನಮ್ಮ ಕುಲದೇವರು ಮತ್ತು ಆ ಜಗವೇ ನಮ್ಮ ಜಾತಿ ಎಂಬ ಅಭಿಮತಕ್ಕೆ ಬಂದಿದ್ದಿರಬಹುದು. ಕಲ್ಲಿನಿಂದ ಕಲ್ಲನ್ನು ಹೊಡೆದಾಗ ಉಂಟಾಗುತ್ತಿದ್ದ ಬೆಳಕು ಬೆಂಕಿಯಾಗಿ, ನಂತರದ ದಿನಗಳಲ್ಲಿ ಮನುಷ್ಯನಿಗೆ ಅದರ ಬಳಕೆಯು ತಾನು ತಿನ್ನಿವ ಆಹಾರಕ್ಕೆ ಅಗತ್ಯವಾಗಿ, ಆಹಾರಗಳನ್ನು ಬೇಯಿಸಿ ತಿಂದರೆ ರುಚಿ ಹೆಚ್ಚೆಂಬುದನ್ನು ತಿಳಿದು, ಬೇಯಿಸಿ ತಿನ್ನುವ ಆಹಾರ ಶುದ್ಧ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂಬ ಚಿಂತನೆ, ದೇವರ ಹುಟ್ಟಿಗೂ ತಳುಕು ಹಾಕಿ ನೋಡಬಹುದು.

ಮುಂದುವರೆಯುವುದು.................

ಮಂಗಳವಾರ, ಆಗಸ್ಟ್ 3, 2010

ಯುವ ಜನರೇ ಆತ್ಮಹತ್ಯೆಗೆ ಮುನ್ನ ಯೋಚಿಸಿ ?

ಬದುಕಿನ ಕಟ್ಟಕಡೆಯ ಸಂಧರ್ಭವಾದರು, ಯಾರಿಗೂ ತಿಳಿಯದ ನಿಗೂಢ, ಇಂದಿನ ಯುವ ಜನರ ಮನದಲ್ಲಿ ಸಾವು ಎಂಬುದು ಆಟಿಕೆಯ ವಸ್ತುವೇ ? ಸಾವನ್ನು ಅಷ್ಟು ಸುಲಭವಾಗಿ ಆಸ್ವಾದಿಸುವುದಾದರೆ ಎಷ್ಟೋ ಸಮಸ್ಯೆಗಳಿಗೆ ಜೀವವೇ ಇರುತ್ತಿರಲಿಲ್ಲ. ಇಂದಿನ ಧಾವಂತದದ ಯುಗದಲ್ಲಿ ಎಲ್ಲೆಲ್ಲೂ ಪ್ಯೆಪೋಟಿ, ಎಲ್ಲರನ್ನು ಹಿಂದುಕ್ಕುವಂತ ನಾಗಾಲೋಟದ ಮನಸ್ಸಿಗೆ ಅಷ್ಟು ಸುಲಭವಾಗಿ ಸಾವು ಬಂತಂದರೆ ಅಥವಾ ಸಾವಿನ ನಿರ್ಣಯವನ್ನು ಕ್ಯೆಗೆತ್ತುಕೊಂಡರೆ ಅದಕ್ಕಿಂತಲೂ ಹೇಡಿತನ ಮತ್ತೊಂದಿಲ್ಲ.

ಅಸಲಿಗೆ ನಮ್ಮ ಯುವ ಜನರಲ್ಲಿ ಸಮಸ್ಯೆಗಳ ಪರಿಹಾರವನ್ನು ಹುಡುಕಿಕೊಳ್ಳುವ ತಾಳ್ಮೆಯೇ ಇಲ್ಲದಾಗಿದೆಯೇ ? ಅಥವಾ ಪ್ಯೆಪೋಟಿ ಜಗತ್ತಿಗೆ ಅವರನ್ನು ಒಡ್ಡಿಕೊಳ್ಳುವ ಛಲವೇ ಮರೆತು ಹೋಗಿದೆಯೇ ? ಸಮಸ್ಯೆ ಕೌಟುಂಬಿಕದ್ದೆ ಇರಲಿ, ಅಥವಾ ನೌಕರಿಯದೆ ಇರಲಿ, ಪ್ರತಿ ಸಮಸ್ಯೆಗಳು ಸೃಷ್ಟಿಗಳಿಗೂ ಕಾರಣ ಪರಿಹಾರವಿಲ್ಲದೆ ಇಲ್ಲ. ಈಗ್ಗೆ ಕೆಲವು ವರುಷಗಳಿಂದ ಸ್ವಾಭಾವಿಕ ಸಾವಿನ ಸಂಖ್ಯೆ ಇಳಿಮುಖವಾದರು, ಅಸ್ವಾಭಾವಿಕವಾಗಿ ಸಾವನ್ನು ಬರಮಾಡಿಕೊಳ್ಳುವ ಯುವ ಜನರಲ್ಲಿ ಮಾನಸಿಕ ಸ್ಥ್ಯೇರ್ಯ, ಸಮಸ್ಯೆಗಳ ಸ್ವರೂಪದಲ್ಲಿರುವ ಗೋಜಲುಗಳು, ಅರ್ಥಮಾಡಿಕೊಳ್ಳುವದರಲ್ಲಿ ಸಂಯಮವೇ ಕಳೆದು ಹೋಗಿದೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಯಾರನ್ನೋ ಹೊಣೆಯನ್ನಾಗಿ ಮಾಡುವ, ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿರುವ, ಮತ್ತು ಅದರ ಕೂತೂಹಲಕ್ಕೆ ಪ್ರಯತ್ನಿಸುವ ಮಿತ್ರರೇ, ಒಮ್ಮೆ ನಿಮ್ಮ ಸಮಸ್ಯೆಯಾ ಬಗ್ಗೆ ಚಿಂತನೆ ನಡೆಸಿ, ಸಾಧ್ಯವಾದರೆ ನಿಮ್ಮ ಆಪ್ತರೊಡನೆ ಒಮ್ಮೆ ಚರ್ಚಿಸಿ,

ನನ್ನ ಮಿತ್ರನೊಬ್ಬ ಕಳೆದ ವರುಷಗಳ ಹಿಂದೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾದ, ಅವನ ಸಮಸ್ಯೆ ಕೇವಲ ದುಡ್ಡಿಗೆ ಸಂಭಂದಿಸಿದ್ದು, ತಂಗಿಯ ಮದುವೆಗೆ ಸಾಲ ಮಾಡಿದ್ದ ಜವಾಬ್ದಾರಿಯುತ ವ್ಯಕ್ತಿ, ಸಾಲ ತೀರಿಸಲಾಗದೆ ಸಾವನ್ನು ಬರಮಾಡಿಕೊಂಡಿದ್ದ. ಒಂದಿಬ್ಬರು ಗೆಳೆಯರಲ್ಲಿ ಸಣ್ಣ ಪುಟ್ಟ ಸಾಲ ಇತ್ತಾದರೂ ಅದ್ಯಾವುದು ಅವನ ಸಾವಿನಿಂದ ಪರಿಹಾರವಾಗುವ ಸಮಸ್ಯೆಯಲ್ಲ. ತನ್ನ ೧೮ನೇ ವಯಸ್ಸಿಗೆ ಸಾಲ ಮಾಡಿ ಆಟೋ ಖರೀದಿಸಿದ ಹುಡುಗ, ಸಮಯದ ಪರಿವೆಯೇಯಿಲ್ಲದೆ ದುಡಿದು ಎರಡು ವರುಷಗಳಲ್ಲೇ ಸಾಲ ತೀರಿಸಿದವನು, ತನ್ನ ತಂಗಿಯ ಮದುವೆಗೆ ಮಾಡಿದ ಸಾಲ ತೀರಿಸದೆ ಹೋದಾನೆ, ಅದು ಕೇವಲ ಒಂದೂವರೆ ಲಕ್ಷ. ಆತನ ಪರಿಸ್ಥಿತಿಗೆ ಅದು ದೊಡ್ಡದೇ ಇರಬಹುದು, ಸಾವಿನಿಂದ ಅದು ಪರಿಹಾರವಾಗಲಿಲ್ಲ. ಈಗ ಅವನ ಸಾಲವೂ ಬೆಳೆದಿದೆ. ಅವನ ತಾಯಿಗೆ ವಯಸ್ಸಾಗಿದ್ದರೂ ದುಡಿದು ಸಾಲ ತೀರಿಸುವ ಹಂಬಲ. ಆದರೆ ಆರೋಗ್ಯ ಕ್ಯೆಕೊಟ್ಟಿದೆಯಾದರೂ, ಒಬ್ಬರಲ್ಲಿ ಅವಲಂಬನೆಯಾಗದ ತುಡಿತ. ಆಕೆಯೇ ಮಗನಂತೆ ಸಾವಿಗೆ ಶರಣಾಗಿದ್ದಾರೆ ?

ನನ್ನ ಮತ್ತೊಬ್ಬ ಗೆಳೆಯ ಶೇಖರ್ ಈ ದಿನ ಅವನು ಇಲ್ಲವಾದರೂ ಅವನ ಮಾನಸಿಕ ಸ್ಥ್ಯೇರ್ಯ, ಬದುಕಿನ ಹಂಬಲ ಎಂಥವರಿಗೂ ಉತ್ಸಾಹ ತರಿಸುವಂತದ್ದು. ಪದವಿಯ ಕೊನೆಯ ವರ್ಷದಲ್ಲಿ ನಮ್ಮೆಲ್ಲರ ಜೊತೆಗೆ ಪ್ರವಾಸಕ್ಕೆ ಹೊರಟ ಶೇಖರನಿಗೆ ಅದೇ ತನ್ನ ಜೀವನದ ಕಡೆಯ ಉಲ್ಲಾಸದ ಕ್ಷಣ ಎಂದು ಯಾರೂ ಎಣಿಸಿರಲಿಲ್ಲ. ಆಂಧ್ರಪ್ರದೇಶದ ಹ್ಯೆದರಾಬಾದಿಗೆ ಪ್ರವಾಸ ಹೊರಟ ನಾವೆಲ್ಲರೂ ಅನಂತಪುರದ ಸ್ಟೇಶನ್ ಬರುವ ಹೊತ್ತಿಗೆ ಟ್ರೇನ್ ಸಿಗ್ನಲ್ಗಾಗಿ ಅನಂತಪುರದಲ್ಲಿನ ಸಣ್ಣ ಸ್ಟೇಶನ್ ಬಳಿ ನಿಲ್ಲುತ್ತಿತ್ತು. ಬಾಗಿಲ ಬಳಿ ನಿಂತಿದ್ದ ಶೇಖರ್ ಒಮ್ಮೆಗೆ ಕಾಲುಜಾರಿತಷ್ಟೇ........... ಕೆಲವೇ ನಿಮಿಷಗಳಲ್ಲಿ ಟ್ರೇನಿನ ಅಡಿಯಲ್ಲಿ ಸಿಕ್ಕ ಅವನ ಎರಡು ಕ್ಯೆಗಳು ಮತ್ತು ಒಂದು ಕಾಲು ಅವನ ಪರಿವೆಯೇ ಇಲ್ಲದೆ ಜಜ್ಜಿ ಹೋಗಿತ್ತು, ಅದೃಷ್ಟವಶಾತ್ ಅವನ ತಲೆ ಟ್ರೇನಿನ ಕಂಬಿ ಮತ್ತು ಗೋಡೆಯ ಮಧ್ಯದಲ್ಲಿತ್ತು. ತಕ್ಷಣ ಟ್ರೇನಿನ ಚ್ಯೇನೆಳೆದು ಅವನನ್ನು ಉಳಿಸುವುದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದೆವು. ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲೇ ಕೆಲವು ದಿನಗಳು ಇದ್ದ. ನಂತರ ಪರಿಸ್ಥಿತಿ ಕ್ಯೆಮೀರಿದಾಗ ಬೆಂಗಳೂರಿನ ಸಂಜಯ್ ಗಾಂಧೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಹಲವು ಕಡೆ ಓಡಾಡಿದ್ದಾಯಿತು, ಡಾಕ್ಟರ್ಗಳ ಕಠಿಣ ಪರಿಶರಮದಲ್ಲೂ ಅವನ ಕಾಲು ಕ್ಯೆಗಳು ಮೊದಲಿನಂತೆ ಸಾಧ್ಯವಾಗದೆ ಅವನ ಎರಡು ಕ್ಯೆ ಹಾಗು ಒಂದು ಕಾಲನ್ನು ತೆಗೆಯಲೇ ಬೇಕಾದ ಪರಿಸ್ಥಿತಿಯಿತ್ತು. ಕೆಲವು ದಿನಗಳ ನಂತರ ಜ್ಞಾನ ಬಂದವನಿಗೆ ತನ್ನ ಕಾಲು ಕ್ಯೆಗಳಿಗೆ ಬ್ಯಾಂಡೇಜ್ ಸುತ್ತಿರುವಷ್ಟೇ ತಿಳಿಯುತ್ತಿತ್ತು. ಅವನ ಈ ಪರಿಸ್ಥಿತಿಯನ್ನು ಅವನಿಗೆ ಹೇಗೆ ಹೇಳುವುದು ಅನ್ನುವುದೇ ಅವನ ಕುಟುಂಬಕ್ಕೆ ಹಾಗು ನಮಗೆ ಅರ್ಥವಾಗಲಿಲ್ಲ. ಸುಮಾರು ಎರಡು ತಿಂಗಳು ಅವನಿಗೆ ವಿಷಯ ತಿಳಿಸುವ ಗೋಜಿಗೆ ಹೋಗಿರಲಿಲ್ಲ, ಅವನು ಏನನ್ನು ಕೇಳುತ್ತಿರಲಿಲ್ಲ, ಒಮ್ಮೆ ಹೀಗೆ ಮಾತಿನ ಭರದಲ್ಲಿ ಗೆಳೆಯನೊಬ್ಬ ಕ್ಯೆ ಕಾಲುಗಳನ್ನು ತೆಗೆಯುವ ವಿಷಯ ಮಾತನಾಡುತ್ತಿದ್ದಾಗ " ನನ್ನ ಪರಿಸ್ಥಿತಿಯು ಹಂಗೆ ಅಲ್ವಾ ಶಿವ " ಅಂದಾಗ ಮಾತ್ರ ದುಖದ ಕಟ್ಟೆ ಎಲ್ಲರನ್ನು ದೂಡಿ ಮುಂದೆ ಬಂದಿತ್ತು. ಹೆಚ್ಚು ಕಡಿಮೆ ಎಂಟು ತಿಂಗಳುಗಳೇ ಉರುಳಿದವು.

ನಂತರದ ಕೆಲವು ತಿಂಗಳಲ್ಲಿ ಅವನ ವ್ಯಕ್ತಿತ್ವದಲ್ಲಾದ ಬದಲಾವಣೆಗಳು ನಿಜಕ್ಕೂ ಊಹಿಸಲು ಸಾಧ್ಯವಿಲ್ಲ. ತನ್ನ ಎರಡು ಭುಜದ ಕೆಳಗೂ ಕೋಲುಗಳನ್ನು ಸಿಕ್ಕಿಸಿ, ಅವನು ನಡೆಯುತ್ತಿದ್ದರೆ ನಾವು ಅವನೊಂದಿಗೆ ಓಡುತ್ತಿದ್ದೆವು, ಬೀಳುತ್ತಾನೆ ಎಂಬ ಭಯದಿಂದಲ್ಲ, ಅವನ ನಡಿಗೆಯ ವೇಗ ಅಂತದ್ದು. ಎಂದಿಗೂ ಎಲ್ಲರೊಂದಿಗೆ ನಗುನಗುತ್ತಲೇ ಮತಾನಾದುತ್ತಿದ್ದ ಗೆಳೆಯನಿಗೆ ತನ್ನ ಎರಡು ಕ್ಯೆ ಮತ್ತು ಕಾಲಿಲ್ಲವೆಂಬ ವಿಚಾರ ಮರೆತು ಹೋದನೇನೋ ಎನ್ನುವಷ್ಟು, ಉತ್ಸಾಹ ಭರಿತನಾಗಿದ್ದ. ಒಂದು ವರ್ಷದಲ್ಲಿ ಅವನ ಲವಲವಿಕೆ, ವಿಚಾರಗಳು ಎಲ್ಲವೂ ಭಿನ್ನವಾಗಿದ್ದವು. ತನ್ನ ಈ ಸಮಸ್ಯೆಯಿಂದ ೪ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ  ನನಗಿನ್ನೂ ನೀನು ಬೇಡ ಎಂದರು, ಅವನು ಯೋಚಿಸುತ್ತಿದ್ದ ರೀತಿ, ಸತ್ಯದೆದಗಿನ ಮಾತು ನಮ್ಮೆಲ್ಲರನ್ನೂ ಬಹಳ ಕಾಡುತ್ತಿತ್ತು.

ಇಂಥ ಉದಾಹರಣೆಗಳು ನಮ್ಮ ನಿಮ್ಮ ನಿತ್ಯ ಬದುಕಿನಲ್ಲಿ ಸಾವಿರಾರು ಬಂದು ಹೋಗುತ್ತವೆ, ಅವಕ್ಕೆ ಸಾವೊಂದೇ ಪರಿಹಾರವಾದರೆ, ನನ್ನ ಗೆಳೆಯನ ತಾಯಿ ಹಾಗು ಶೇಖರ್ ಎಂದೋ ಆತ್ಮಹತ್ಯೆಗೆ ಮುಂದಾಗುತ್ತಿದ್ದರು. ಸ್ನೇಹಿತರೆ ಇದಕ್ಕಿಂತಲೂ ಕ್ರೂರವೆ ನಿಮಗೊದಗಿರುವ ಸಮಸ್ಯೆ ?

ಸಾವನ್ನು ಕರೆಯುವ ಮುನ್ನು ಯೋಚಿಸಿ ನೋಡಿ. ನಿಮ್ಮ ಭವಿಷ್ಯ ನಿಮ್ಮ ಕ್ಯೆಯಲ್ಲೇ ಹೊರತು, ನಿಮ್ಮ ಪೋಷಕರದೋ ? ಸ್ನೇಹಿತರದೋ ಅಲ್ಲ ? ನಿಮ್ಮ ಜೀವನದ ಪ್ರತಿ ತಿರುವುಗಳಿಗೆ ನೀವೇ ಜವಾಬ್ದಾರರು.