ನೋಡ್ತಿರೋರು

ಬುಧವಾರ, ಜುಲೈ 2, 2014

ಬಂದೇ ಬರುತಾವ ಕಾಲ


ಮೊಬ್ಯೆಲಿಗೊಂದು ಸಂದೇಶ... ನೀನು ಇಂದಿಗೂ ಅಂದಿನಷ್ಟೇ, ಪ್ರೀತಿಸುತ್ತೀಯಾ...? ಹಾಗಿದ್ದರೆ, ನನಗೊಂದು ಕರೆ ಮಾಡುವ ಸೌಜನ್ಯವಿದೆಯಾ...?, ಈ ಸಂದೇಶ ಯಾರದು ಅನ್ನೋ ಕುತೂಹಲ ಅವನಲ್ಲಿ... ಇರಬಹುದು ಅವಳೇ ಅಥವಾ ಇನ್ಯಾರದೋ ಸಂದೇಶ ತಪ್ಪಿ ಬಂತೇ...? ಗೊತ್ತಿಲ್ಲ.. ಆದರೂ ಕುತೂಹಲಕ್ಕೆ ಮನಸೋತ ಅವನ ಮನಸು, ನೀವ್ಯಾರು ಎಂಬ ಸಂದೇಶ ಕಳುಹಿಸದೇ ಇರಲಿಲ್ಲ...ಆ ಕಡೆಯಿಂದ ಉತ್ತರವೂ ಇರಲಿಲ್ಲ. ಬಹುಶಃ ಈ ಪ್ರಶ್ನೆ ಎದುರಾದದ್ದು ಉತ್ತರಕ್ಕೋ ಅಥವಾ ಅವಿತು ಕುಳಿತಿದ್ದ ಕಠೋರ ದ್ರೋಹಕ್ಕೋ ಎಂಬ ಸಂದಿಗ್ಧವಿರಬಹುದು.

ಎಷ್ಟು ಹೊತ್ತಾದರೂ ಬರದ ಸಂದೇಶ ಅಭಿರಾಂನ ಮನಸ್ಸಿಗಾಗಲಿ, ಮಾಡುತ್ತಿದ್ದ ಕೆಲಸಕ್ಕಾಗಲಿ ಸಂಬಂಧವೇ ಇರಲಿಲ್ಲ. ಇದ್ದ ಪ್ರಾಜೆಕ್ಟಿನ ಅಷ್ಟು ಕೆಲಸ ಅವತ್ತಿನ ಮಟ್ಟಿಗೆ ಬರಾಕತ್ತಾಗಿ ನಿಂತಿತ್ತು. ಚಡಪಡಿಕೆಯಲಿ ಮತ್ತೊಮ್ಮೆ ಆ ನಂಬರಿಗೆ ಪೋನ್ ಮಾಡುವ ಬಯಕೆ.. ಬೇಕಾದವರಾಗಿದ್ದರೆ ಅವರೇ ಮಾಡಬಹುದೆಂಬ ಅಹಂ. ಸಂಜೆ ಆಫೀಸು ಮುಗಿದರೂ ಮನೆಗೆ ಹೋಗುವ ಚಿಂತೆಯಿಲ್ಲದೆ ದೂರದ ಬೆಟ್ಟದೊಂದಿಗೆ ಮಾತನಾಡುವ ಬಯಕೆ. ಬ್ಯೆಕು ಅವನ ಮಾತು ಕೇಳಲೇ ಇಲ್ಲ. ಅದು ತನ್ನ ನಿಶ್ಚಲ ಮನಸ್ಸಿನಲ್ಲೇ ಹೊರಟಿತು ಮನೆಯ ಕಡೆಗೆ. ಎಲ್ಲವೂ ದಾಟಿ ಮನೆಯ ಮುಂದೆ ಗಾಡಿ ನಿಂತಾಗಲೇ ಗೊತ್ತಾದದ್ದು. ಓಹ್!! ಮನೆಗೆ ಬಂದ್ನಾ. ಇರಲಿ ಸ್ವಲ್ಪ ಫ್ರೆಶ್ ಆಗಿ ನಂತರ ಹೊರಗೆ ಹೋದರಾಯಿತು, ಎಂದು ಮನದಲ್ಲೇ ಲೆಕ್ಕಾಚಾರ ಹಾಕಿ ಬಾಗಿಲ ಬಳಿ ಬಂದಾಗಲೇ ಮಗಳು ಅಭಿಗ್ನಾ, ಅಪ್ಪಾ !! ಎಂದಾಗ ವಾಸ್ತವಕ್ಕೆ ಬರಲೇ ಬೇಕಾಯಿತು. ಮಗುವಿನ ಮುಖ ನಿಂಗೆ ಈಗೆಲ್ಲಾ ಇವು ಬೇಕಾ ? ಎಂಬ ಪ್ರಶ್ನಾರ್ಥಕ ಭಾವದಂತಿತ್ತು.

ಗುರುವಾರ, ಜೂನ್ 19, 2014

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು! ಓದಿ ಆನಂದಿಸಿ!

 
 ತ್ರಿವೇಣಿಯವರ ಕಾದಂಬರಿಗಳು
ಉಷಾ ನವರತ್ನರಾಮ್ ಕಾದಂಬರಿಗಳು

ಸೋಮವಾರ, ಜೂನ್ 2, 2014

ರಂಗೋಲಿ....... ಚಿತ್ತ ಚಿತ್ತಾರಗಳ ನಡುವೆ - ಸಂಚಿಕೆ ೨


ಬಹಳ ದಿನಗಳಾಗಿತ್ತು.. ತಲೆಗೆ ಹಾಗೂ ಬರವಣಿಗೆಗೆ ಕೆಲಸ ಕೊಟ್ಟು :-) . ನೆನಪುಗಳು ಅಳಿಸಿಹೋಗುವ ಮೊದಲು ಬರೆದುಬಿಡೋಣ.., ಸುನಂದಳ ಬದುಕು ನೆನಪಲ್ಲೇ ಕಳೆದುಹೋಗಬಾರದೆಂಬ ಧಾವಂತ  ರಂಗೋಲಿ ಚಿತ್ತ ಚಿತ್ತಾರಗಳ ನಡುವೆಯ ಸರಣಿಯನ್ನು ಮುಂದುವೆರಿಸುತ್ತಿದ್ದೇನೆ..

 ಹಿಂದಿನ ಸರಣಿ

 
ಮುಂದಿನ ಕೆಲವೇ ದಿನಗಳಲ್ಲಿ ನನ್ನ ಮಾನಸಿಕ ಆರೋಗ್ಯ ದ್ಯೆಹಿಕ ಆರೋಗ್ಯ ಎಲ್ಲವೂ ಕ್ಷೀಣಿಸುತ್ತು.... ನಿರ್ದಯಿಗಳ ಮುಂದೆ ನಾನು ಅದಿನ್ನೆಂತಹ ಬೇಡಿಕೆಯಿಟ್ಟರೂ... ಅವರ ಬೇಡಿಕೆಗಳ ಮುಂದೆ ನನ್ನದೆಲ್ಲವೂ ಗೌಣವಾಗಿತ್ತು. ಸ್ವಲ್ಪ ದಿನಗಳ ನಂತರ ನನಗೂ ಇವೆಲ್ಲ ರೂಢಿಯಾಗಿ ಹೋಗಿತ್ತು. ಅದೇ ಸಮಯಕ್ಕೆ ಸೌಭಾಗ್ಯಮ್ಮನಿಗೆ ಆರೋಗ್ಯ ಕ್ಯೆಕೊಟ್ಟಿತ್ತು. ಏಳುವುದಕ್ಕೂ ಆಗದ ಸಂಧರ್ಬದಲ್ಲೂ ಆಕೆಯ ವ್ಯವಹಾರ ನಡೆಯುತ್ತಲೇ ಇತ್ತು. ಒಂದು ದಿನ ಬಹುಶಃ ಆಗಸ್ಟಿನಲ್ಲಿರಬಹುದು... ಆಕೆಯ ದೇಹದ ಬಲಭಾಗ ಪೂರ್ತಿ ಪಾಶ್ವವಾಯು ಉಂಟಾಗಿ ಮಲಗಿದ ಜಾಗದಿಂದೇಳಲು ಆಗದೆ, ಆಕೆಯ ಎಲ್ಲ ಕೆಲ್ಸಗಳು ಅಲ್ಲೇ ನಡೆಯುತ್ತಿತ್ತು. ಆ ಸಮಯಕ್ಕೆ ಇವಳೊಂದಿಗಿನ ವ್ಯವಹಾರಿಗಳಾಗಲಿ, ಇವಳೇ ಸಾಕು ಬೆಳೆಸಿದ ಜನರಾಗಲಿ ಯಾರೊಬ್ಬರೂ ಇವಳ ಸಹಾಯಕ್ಕೆ ಬರಲಿಲ್ಲ. ಕ್ರಮೇಣ ವ್ಯವಹಾರವೂ ನಿಂತಿತು.