ನೋಡ್ತಿರೋರು

ಶುಕ್ರವಾರ, ಜೂನ್ 26, 2009

ಮನದ ಕದತೆರೆದಾಗ

ನಂಬಿ ನೀ ಬಂದಿಹೆಯಲ್ಲ
ಮನದ ಕಾರ್ಮೋಡದ ಬಾಗಿಲ ಸರಿಸಲು,
ಬಿಡದೀ ಮನವ ನೀ ಎಲ್ಲ
ಆವರಿಸಿರುವೆ
ಜಗದ ಕಣ್ಣೊಟಕೆ ಸತಿ-ಪತಿಯರಾಗಲು
ಬಂಧನವೊಂದು ಕುರುಹು!

ಬಿಟ್ಟು ಬಂದಿಹೆ ಗೊತ್ತು
ತಂದೆ ತಾಯಿಯರ ಕ್ಯೆತುತ್ತು
ಸೋದರ ಸೋದರಿಯರ
ಒಲವಿನ ತಾಕತ್ತು
ಚಿಂತೆ ಬೇಡ ಹೃದಯೇಶ್ವರಿ
ನೀ ಎನ್ನ ಮನದ ರಾಜೇಶ್ವರಿ!

ಯಜಮಾನನಾಗುವುದಕ್ಕಿಂತ ನಿನಗೆ
ಗೆಳೆಯನಾಗುವೆ ಜೊತೆವರೆಗೆ
ಹೆಜ್ಜೆ ಹೆಜ್ಜೆಗಳು ಜೊತೆಜೊತೆಗೆ
ನೋವಿನ ಮಜ್ಜೆಗೂ
ಸಾವಿನ ಸಜ್ಜೆಗೂ
ಜೊತೆಯಾಗಿ ಸಾಗೋಣ
ಇದು ನನ್ನ ಪ್ರಮಾಣ!

ನಿನಗೋಸ್ಕರ ನಾ ಏಳು ಸಮುದ್ರವ ದಾಟುವುದಿಲ್ಲ
ಚಂದ್ರಮನನ್ನು ತೆಕ್ಕೆಗೆ ತರುವುದಿಲ್ಲ
ಸುಖಾಸುಮ್ಮನೆ ಹೊಗಳುತಿಲ್ಲ
ಒಂದಿಷ್ಟು ನೆಮ್ಮದಿ, ಅರೆಪಾವು ಸೌಖ್ಯ
ಬರಿಸಲಾಗದ ಪ್ರೀತಿ, ಖಂಡಿತಾ ನಾ
ಕೊಡದೇ ಇರುವುದಿಲ್ಲ
ಕಾಯುತಿರುವೆ ತಿಳಿಸುವೆಯಾ !

ಕಾಮೆಂಟ್‌ಗಳಿಲ್ಲ: