ನೋಡ್ತಿರೋರು

ಸೋಮವಾರ, ಆಗಸ್ಟ್ 16, 2010

ಬದಲಾಗಬೇಕು......,, ಇನ್ನು ಬದಲಾಗಲೇಬೇಕು

ಬದಲಾಗಬೇಕು.......
ಇನ್ನು ಬದಲಾಗಬೇಕು......,,
ಇನ್ನು ಬದಲಾಗಲೇಬೇಕು.........

ಉಳಿಗಾಲವಿಲ್ಲ, ಬದಲಾಗದಿದ್ದೊಡೆ,
ಉಳಿಯಲೇಬೇಕು, ಬರಗಾಲವಿದ್ದೊಡೆ,
ಬಂದಿಹುದು ಬರಗಾಲ ನಾಯಕನಿಲ್ಲದೆ,
ಬಂದಿಹುದು ಬರಗಾಲ ಹಿಡಿತವಿಲ್ಲದೆ,
ಬಂದಿಹುದು ಬರಗಾಲ ನೀತಿನಿಯಮಾವಳಿಯ ಪಾಲಿಸದೆ,
ಬಂದಿಹುದು ಬರಗಾಲ ನ್ಯಾಯ ನೀತಿಗೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಅಧಿಕಾರ ಗದ್ದುಗೆ,
ಗದ್ದುಗೆ ಬೇಕು...... ಮೂರು ವರ್ಷಗಳಿಗೆ,
ಗದ್ದುಗೆ ಬೇಕು.... ಇನ್ನಷ್ಟು ಅಕ್ರಮಗಳಿಗೆ,
ಗದ್ದುಗೆ ಬೇಕು, ಗಣಿ ಹಗರಣಗಳಿಗೆ,
ಗದ್ದುಗೆ ಬೇಕು, ಅಭಿವೃದ್ಧಿಯ ಮಂತ್ರಕೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಗೋಹತ್ಯೆ ತಡೆದೊಡೆ,
ಗೋಹತ್ಯೆ ತಡೆಯೋಕೆ....... ಕ್ಯೆಕತ್ತಿರಿಸುವುದಕೆ,
ಗೋಹತ್ಯೆ ತಡೆಯೋಕೆ........ ಕ್ಯೆಎತ್ತೋಕೆ,
ಗೋಹತ್ಯೆಯೊಂದೇ ಇರೋದು ತಡೆಯೋಕೆ,
ಪ್ರಾಣಿ ಹಿಂಸೆ ನಿಲ್ಲಿಸಲಿ ಸಾಧ್ಯವಿದ್ದೊಡೆ,


ಬದಲಾಗಬೇಕು ಮಂತ್ರಿ ಕುತಂತ್ರಿಗಳೆಲ್ಲ,
ಬರಗಾಲಕ್ಕಲ್ಲ, ಗದ್ದುಗೆಯ ಹಂಬಲಕ್ಕಲ್ಲ,
ಗೋಹತ್ಯೆಗೊಂದೆ ಬೇಕಿಲ್ಲ,
ಜನರ ನಾಡಿಮಿಡಿತವ ಅರಿಯಲು,
ಎಲ್ಲರ ಬೇಕು-ಬೇಡಗಳ ತಿಳಿಯಲು..
ಬದಲಾಗಬೇಕು ಮುಖ್ಯಮಂತ್ರಿಗಳೇ
ಯಕ್ಷಿತ್: ನೀವು ಹೇಳಿದ ಮಾತಿಗೆ......
ಆಗದಿದ್ದರೆ ಬದಲಾಗಲೇಬೇಕು ..........ಮುಖ್ಯಮಂತ್ರಿ,

ಕಾಮೆಂಟ್‌ಗಳಿಲ್ಲ: