ನೋಡ್ತಿರೋರು

ಮಂಗಳವಾರ, ಆಗಸ್ಟ್ 3, 2010

ಯುವ ಜನರೇ ಆತ್ಮಹತ್ಯೆಗೆ ಮುನ್ನ ಯೋಚಿಸಿ ?

ಬದುಕಿನ ಕಟ್ಟಕಡೆಯ ಸಂಧರ್ಭವಾದರು, ಯಾರಿಗೂ ತಿಳಿಯದ ನಿಗೂಢ, ಇಂದಿನ ಯುವ ಜನರ ಮನದಲ್ಲಿ ಸಾವು ಎಂಬುದು ಆಟಿಕೆಯ ವಸ್ತುವೇ ? ಸಾವನ್ನು ಅಷ್ಟು ಸುಲಭವಾಗಿ ಆಸ್ವಾದಿಸುವುದಾದರೆ ಎಷ್ಟೋ ಸಮಸ್ಯೆಗಳಿಗೆ ಜೀವವೇ ಇರುತ್ತಿರಲಿಲ್ಲ. ಇಂದಿನ ಧಾವಂತದದ ಯುಗದಲ್ಲಿ ಎಲ್ಲೆಲ್ಲೂ ಪ್ಯೆಪೋಟಿ, ಎಲ್ಲರನ್ನು ಹಿಂದುಕ್ಕುವಂತ ನಾಗಾಲೋಟದ ಮನಸ್ಸಿಗೆ ಅಷ್ಟು ಸುಲಭವಾಗಿ ಸಾವು ಬಂತಂದರೆ ಅಥವಾ ಸಾವಿನ ನಿರ್ಣಯವನ್ನು ಕ್ಯೆಗೆತ್ತುಕೊಂಡರೆ ಅದಕ್ಕಿಂತಲೂ ಹೇಡಿತನ ಮತ್ತೊಂದಿಲ್ಲ.

ಅಸಲಿಗೆ ನಮ್ಮ ಯುವ ಜನರಲ್ಲಿ ಸಮಸ್ಯೆಗಳ ಪರಿಹಾರವನ್ನು ಹುಡುಕಿಕೊಳ್ಳುವ ತಾಳ್ಮೆಯೇ ಇಲ್ಲದಾಗಿದೆಯೇ ? ಅಥವಾ ಪ್ಯೆಪೋಟಿ ಜಗತ್ತಿಗೆ ಅವರನ್ನು ಒಡ್ಡಿಕೊಳ್ಳುವ ಛಲವೇ ಮರೆತು ಹೋಗಿದೆಯೇ ? ಸಮಸ್ಯೆ ಕೌಟುಂಬಿಕದ್ದೆ ಇರಲಿ, ಅಥವಾ ನೌಕರಿಯದೆ ಇರಲಿ, ಪ್ರತಿ ಸಮಸ್ಯೆಗಳು ಸೃಷ್ಟಿಗಳಿಗೂ ಕಾರಣ ಪರಿಹಾರವಿಲ್ಲದೆ ಇಲ್ಲ. ಈಗ್ಗೆ ಕೆಲವು ವರುಷಗಳಿಂದ ಸ್ವಾಭಾವಿಕ ಸಾವಿನ ಸಂಖ್ಯೆ ಇಳಿಮುಖವಾದರು, ಅಸ್ವಾಭಾವಿಕವಾಗಿ ಸಾವನ್ನು ಬರಮಾಡಿಕೊಳ್ಳುವ ಯುವ ಜನರಲ್ಲಿ ಮಾನಸಿಕ ಸ್ಥ್ಯೇರ್ಯ, ಸಮಸ್ಯೆಗಳ ಸ್ವರೂಪದಲ್ಲಿರುವ ಗೋಜಲುಗಳು, ಅರ್ಥಮಾಡಿಕೊಳ್ಳುವದರಲ್ಲಿ ಸಂಯಮವೇ ಕಳೆದು ಹೋಗಿದೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಯಾರನ್ನೋ ಹೊಣೆಯನ್ನಾಗಿ ಮಾಡುವ, ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿರುವ, ಮತ್ತು ಅದರ ಕೂತೂಹಲಕ್ಕೆ ಪ್ರಯತ್ನಿಸುವ ಮಿತ್ರರೇ, ಒಮ್ಮೆ ನಿಮ್ಮ ಸಮಸ್ಯೆಯಾ ಬಗ್ಗೆ ಚಿಂತನೆ ನಡೆಸಿ, ಸಾಧ್ಯವಾದರೆ ನಿಮ್ಮ ಆಪ್ತರೊಡನೆ ಒಮ್ಮೆ ಚರ್ಚಿಸಿ,

ನನ್ನ ಮಿತ್ರನೊಬ್ಬ ಕಳೆದ ವರುಷಗಳ ಹಿಂದೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾದ, ಅವನ ಸಮಸ್ಯೆ ಕೇವಲ ದುಡ್ಡಿಗೆ ಸಂಭಂದಿಸಿದ್ದು, ತಂಗಿಯ ಮದುವೆಗೆ ಸಾಲ ಮಾಡಿದ್ದ ಜವಾಬ್ದಾರಿಯುತ ವ್ಯಕ್ತಿ, ಸಾಲ ತೀರಿಸಲಾಗದೆ ಸಾವನ್ನು ಬರಮಾಡಿಕೊಂಡಿದ್ದ. ಒಂದಿಬ್ಬರು ಗೆಳೆಯರಲ್ಲಿ ಸಣ್ಣ ಪುಟ್ಟ ಸಾಲ ಇತ್ತಾದರೂ ಅದ್ಯಾವುದು ಅವನ ಸಾವಿನಿಂದ ಪರಿಹಾರವಾಗುವ ಸಮಸ್ಯೆಯಲ್ಲ. ತನ್ನ ೧೮ನೇ ವಯಸ್ಸಿಗೆ ಸಾಲ ಮಾಡಿ ಆಟೋ ಖರೀದಿಸಿದ ಹುಡುಗ, ಸಮಯದ ಪರಿವೆಯೇಯಿಲ್ಲದೆ ದುಡಿದು ಎರಡು ವರುಷಗಳಲ್ಲೇ ಸಾಲ ತೀರಿಸಿದವನು, ತನ್ನ ತಂಗಿಯ ಮದುವೆಗೆ ಮಾಡಿದ ಸಾಲ ತೀರಿಸದೆ ಹೋದಾನೆ, ಅದು ಕೇವಲ ಒಂದೂವರೆ ಲಕ್ಷ. ಆತನ ಪರಿಸ್ಥಿತಿಗೆ ಅದು ದೊಡ್ಡದೇ ಇರಬಹುದು, ಸಾವಿನಿಂದ ಅದು ಪರಿಹಾರವಾಗಲಿಲ್ಲ. ಈಗ ಅವನ ಸಾಲವೂ ಬೆಳೆದಿದೆ. ಅವನ ತಾಯಿಗೆ ವಯಸ್ಸಾಗಿದ್ದರೂ ದುಡಿದು ಸಾಲ ತೀರಿಸುವ ಹಂಬಲ. ಆದರೆ ಆರೋಗ್ಯ ಕ್ಯೆಕೊಟ್ಟಿದೆಯಾದರೂ, ಒಬ್ಬರಲ್ಲಿ ಅವಲಂಬನೆಯಾಗದ ತುಡಿತ. ಆಕೆಯೇ ಮಗನಂತೆ ಸಾವಿಗೆ ಶರಣಾಗಿದ್ದಾರೆ ?

ನನ್ನ ಮತ್ತೊಬ್ಬ ಗೆಳೆಯ ಶೇಖರ್ ಈ ದಿನ ಅವನು ಇಲ್ಲವಾದರೂ ಅವನ ಮಾನಸಿಕ ಸ್ಥ್ಯೇರ್ಯ, ಬದುಕಿನ ಹಂಬಲ ಎಂಥವರಿಗೂ ಉತ್ಸಾಹ ತರಿಸುವಂತದ್ದು. ಪದವಿಯ ಕೊನೆಯ ವರ್ಷದಲ್ಲಿ ನಮ್ಮೆಲ್ಲರ ಜೊತೆಗೆ ಪ್ರವಾಸಕ್ಕೆ ಹೊರಟ ಶೇಖರನಿಗೆ ಅದೇ ತನ್ನ ಜೀವನದ ಕಡೆಯ ಉಲ್ಲಾಸದ ಕ್ಷಣ ಎಂದು ಯಾರೂ ಎಣಿಸಿರಲಿಲ್ಲ. ಆಂಧ್ರಪ್ರದೇಶದ ಹ್ಯೆದರಾಬಾದಿಗೆ ಪ್ರವಾಸ ಹೊರಟ ನಾವೆಲ್ಲರೂ ಅನಂತಪುರದ ಸ್ಟೇಶನ್ ಬರುವ ಹೊತ್ತಿಗೆ ಟ್ರೇನ್ ಸಿಗ್ನಲ್ಗಾಗಿ ಅನಂತಪುರದಲ್ಲಿನ ಸಣ್ಣ ಸ್ಟೇಶನ್ ಬಳಿ ನಿಲ್ಲುತ್ತಿತ್ತು. ಬಾಗಿಲ ಬಳಿ ನಿಂತಿದ್ದ ಶೇಖರ್ ಒಮ್ಮೆಗೆ ಕಾಲುಜಾರಿತಷ್ಟೇ........... ಕೆಲವೇ ನಿಮಿಷಗಳಲ್ಲಿ ಟ್ರೇನಿನ ಅಡಿಯಲ್ಲಿ ಸಿಕ್ಕ ಅವನ ಎರಡು ಕ್ಯೆಗಳು ಮತ್ತು ಒಂದು ಕಾಲು ಅವನ ಪರಿವೆಯೇ ಇಲ್ಲದೆ ಜಜ್ಜಿ ಹೋಗಿತ್ತು, ಅದೃಷ್ಟವಶಾತ್ ಅವನ ತಲೆ ಟ್ರೇನಿನ ಕಂಬಿ ಮತ್ತು ಗೋಡೆಯ ಮಧ್ಯದಲ್ಲಿತ್ತು. ತಕ್ಷಣ ಟ್ರೇನಿನ ಚ್ಯೇನೆಳೆದು ಅವನನ್ನು ಉಳಿಸುವುದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದೆವು. ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲೇ ಕೆಲವು ದಿನಗಳು ಇದ್ದ. ನಂತರ ಪರಿಸ್ಥಿತಿ ಕ್ಯೆಮೀರಿದಾಗ ಬೆಂಗಳೂರಿನ ಸಂಜಯ್ ಗಾಂಧೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಹಲವು ಕಡೆ ಓಡಾಡಿದ್ದಾಯಿತು, ಡಾಕ್ಟರ್ಗಳ ಕಠಿಣ ಪರಿಶರಮದಲ್ಲೂ ಅವನ ಕಾಲು ಕ್ಯೆಗಳು ಮೊದಲಿನಂತೆ ಸಾಧ್ಯವಾಗದೆ ಅವನ ಎರಡು ಕ್ಯೆ ಹಾಗು ಒಂದು ಕಾಲನ್ನು ತೆಗೆಯಲೇ ಬೇಕಾದ ಪರಿಸ್ಥಿತಿಯಿತ್ತು. ಕೆಲವು ದಿನಗಳ ನಂತರ ಜ್ಞಾನ ಬಂದವನಿಗೆ ತನ್ನ ಕಾಲು ಕ್ಯೆಗಳಿಗೆ ಬ್ಯಾಂಡೇಜ್ ಸುತ್ತಿರುವಷ್ಟೇ ತಿಳಿಯುತ್ತಿತ್ತು. ಅವನ ಈ ಪರಿಸ್ಥಿತಿಯನ್ನು ಅವನಿಗೆ ಹೇಗೆ ಹೇಳುವುದು ಅನ್ನುವುದೇ ಅವನ ಕುಟುಂಬಕ್ಕೆ ಹಾಗು ನಮಗೆ ಅರ್ಥವಾಗಲಿಲ್ಲ. ಸುಮಾರು ಎರಡು ತಿಂಗಳು ಅವನಿಗೆ ವಿಷಯ ತಿಳಿಸುವ ಗೋಜಿಗೆ ಹೋಗಿರಲಿಲ್ಲ, ಅವನು ಏನನ್ನು ಕೇಳುತ್ತಿರಲಿಲ್ಲ, ಒಮ್ಮೆ ಹೀಗೆ ಮಾತಿನ ಭರದಲ್ಲಿ ಗೆಳೆಯನೊಬ್ಬ ಕ್ಯೆ ಕಾಲುಗಳನ್ನು ತೆಗೆಯುವ ವಿಷಯ ಮಾತನಾಡುತ್ತಿದ್ದಾಗ " ನನ್ನ ಪರಿಸ್ಥಿತಿಯು ಹಂಗೆ ಅಲ್ವಾ ಶಿವ " ಅಂದಾಗ ಮಾತ್ರ ದುಖದ ಕಟ್ಟೆ ಎಲ್ಲರನ್ನು ದೂಡಿ ಮುಂದೆ ಬಂದಿತ್ತು. ಹೆಚ್ಚು ಕಡಿಮೆ ಎಂಟು ತಿಂಗಳುಗಳೇ ಉರುಳಿದವು.

ನಂತರದ ಕೆಲವು ತಿಂಗಳಲ್ಲಿ ಅವನ ವ್ಯಕ್ತಿತ್ವದಲ್ಲಾದ ಬದಲಾವಣೆಗಳು ನಿಜಕ್ಕೂ ಊಹಿಸಲು ಸಾಧ್ಯವಿಲ್ಲ. ತನ್ನ ಎರಡು ಭುಜದ ಕೆಳಗೂ ಕೋಲುಗಳನ್ನು ಸಿಕ್ಕಿಸಿ, ಅವನು ನಡೆಯುತ್ತಿದ್ದರೆ ನಾವು ಅವನೊಂದಿಗೆ ಓಡುತ್ತಿದ್ದೆವು, ಬೀಳುತ್ತಾನೆ ಎಂಬ ಭಯದಿಂದಲ್ಲ, ಅವನ ನಡಿಗೆಯ ವೇಗ ಅಂತದ್ದು. ಎಂದಿಗೂ ಎಲ್ಲರೊಂದಿಗೆ ನಗುನಗುತ್ತಲೇ ಮತಾನಾದುತ್ತಿದ್ದ ಗೆಳೆಯನಿಗೆ ತನ್ನ ಎರಡು ಕ್ಯೆ ಮತ್ತು ಕಾಲಿಲ್ಲವೆಂಬ ವಿಚಾರ ಮರೆತು ಹೋದನೇನೋ ಎನ್ನುವಷ್ಟು, ಉತ್ಸಾಹ ಭರಿತನಾಗಿದ್ದ. ಒಂದು ವರ್ಷದಲ್ಲಿ ಅವನ ಲವಲವಿಕೆ, ವಿಚಾರಗಳು ಎಲ್ಲವೂ ಭಿನ್ನವಾಗಿದ್ದವು. ತನ್ನ ಈ ಸಮಸ್ಯೆಯಿಂದ ೪ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ  ನನಗಿನ್ನೂ ನೀನು ಬೇಡ ಎಂದರು, ಅವನು ಯೋಚಿಸುತ್ತಿದ್ದ ರೀತಿ, ಸತ್ಯದೆದಗಿನ ಮಾತು ನಮ್ಮೆಲ್ಲರನ್ನೂ ಬಹಳ ಕಾಡುತ್ತಿತ್ತು.

ಇಂಥ ಉದಾಹರಣೆಗಳು ನಮ್ಮ ನಿಮ್ಮ ನಿತ್ಯ ಬದುಕಿನಲ್ಲಿ ಸಾವಿರಾರು ಬಂದು ಹೋಗುತ್ತವೆ, ಅವಕ್ಕೆ ಸಾವೊಂದೇ ಪರಿಹಾರವಾದರೆ, ನನ್ನ ಗೆಳೆಯನ ತಾಯಿ ಹಾಗು ಶೇಖರ್ ಎಂದೋ ಆತ್ಮಹತ್ಯೆಗೆ ಮುಂದಾಗುತ್ತಿದ್ದರು. ಸ್ನೇಹಿತರೆ ಇದಕ್ಕಿಂತಲೂ ಕ್ರೂರವೆ ನಿಮಗೊದಗಿರುವ ಸಮಸ್ಯೆ ?

ಸಾವನ್ನು ಕರೆಯುವ ಮುನ್ನು ಯೋಚಿಸಿ ನೋಡಿ. ನಿಮ್ಮ ಭವಿಷ್ಯ ನಿಮ್ಮ ಕ್ಯೆಯಲ್ಲೇ ಹೊರತು, ನಿಮ್ಮ ಪೋಷಕರದೋ ? ಸ್ನೇಹಿತರದೋ ಅಲ್ಲ ? ನಿಮ್ಮ ಜೀವನದ ಪ್ರತಿ ತಿರುವುಗಳಿಗೆ ನೀವೇ ಜವಾಬ್ದಾರರು.

3 ಕಾಮೆಂಟ್‌ಗಳು:

ಗಿರೀಶ ರಾಜನಾಳ ಹೇಳಿದರು...

ತುಮ್ಬಾ ಚೆನ್ನಾಗಿ ಬರೆದಿದ್ದಿಯಾ ಅರವಿನ್ದ. ಈಜಬೇಕು ಇದ್ದು ಜಯಿಸಬೇಕು .. ನಿಮ್ಮ ಗೆಳೆಯನ ಸಂಗತಿ ತಿಳಿದು ನೋವಾಯಿತು... ಅವನ ಬದುಕು ಎಲ್ಲರಿಗೊನ್ದು ಆದರ್ಶ..
ಓದಿದ ಮೇಲೆ ಎನೂ ಹೆಳಲಾಗುತ್ತಿಲ್ಲ...

KALADAKANNADI ಹೇಳಿದರು...

ಹೌದು, ಯೋಚಿಸಲೇಬೇಕು. ಯುವಜನಾ೦ಗ ಮು೦ದಿನ ಭಾರತದ ಸ೦ಪತ್ತು. ಆ ಮಾನವ ಸ೦ಪನ್ಮೂಲ ಸುಖಾಸುಮ್ಮನೆ ವ್ಯರ್ಥವಾಗುತ್ತಿರುವುದು ಮನಸ್ಸಿಗೆ ಬೇಸರವನ್ನು ತರಿಸುತ್ತದೆ. ಸಣ್ಣ ಸಣ್ನ ಕಾರಣಗಳಿಗಾಗಿ ಆತ್ಮಹತ್ಯೆಯ೦ಥಾ ಯೋಚನೆಗಳನ್ನು ಏಕೆ ಮಾಡ್ತಾರೋ? ಯುವಜನರ ಕಣ್ತೆರೆಸುವ ಲೇಖನ. ಎಚ್ಚರಿಕೆಮಿಶ್ರಿತ ಸ೦ದೇಶಸಹಿತ ಲೇಖನ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

KALADAKANNADI ಹೇಳಿದರು...

ಹೌದು, ಯೋಚಿಸಲೇಬೇಕು. ಯುವಜನಾ೦ಗ ಮು೦ದಿನ ಭಾರತದ ಸ೦ಪತ್ತು. ಆ ಮಾನವ ಸ೦ಪನ್ಮೂಲ ಸುಖಾಸುಮ್ಮನೆ ವ್ಯರ್ಥವಾಗುತ್ತಿರುವುದು ಮನಸ್ಸಿಗೆ ಬೇಸರವನ್ನು ತರಿಸುತ್ತದೆ. ಸಣ್ಣ ಸಣ್ನ ಕಾರಣಗಳಿಗಾಗಿ ಆತ್ಮಹತ್ಯೆಯ೦ಥಾ ಯೋಚನೆಗಳನ್ನು ಏಕೆ ಮಾಡ್ತಾರೋ? ಯುವಜನರ ಕಣ್ತೆರೆಸುವ ಲೇಖನ. ಎಚ್ಚರಿಕೆಮಿಶ್ರಿತ ಸ೦ದೇಶಸಹಿತ ಲೇಖನ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.